CM ಅಮರೀಂದರ್ ಜತೆ ಸಮಸ್ಯೆ ಇದ್ದರೆ ಕ್ಯಾಬಿನೆಟ್ ತೊರೆಯಿರಿ: ಸಿಧುಗೆ ಧರ್ಮಸೂತ್
Team Udayavani, May 20, 2019, 4:21 PM IST
ಹೊಸದಿಲ್ಲಿ : ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರೊಂದಿಗೆ ಏನಾದರೂ ಸಮಸ್ಯೆ ಇದ್ದರೆ ನೀವು ಅವರ ಸಚಿವ ಸಂಪುಟವನ್ನು ತೊರೆಯುವುದೇ ಲೇಸು ಎಂದು ಸಚಿವ ನವಜೋತ್ ಸಿಂಗ್ ಸಿಧು ಅವರಿಗೆ ಪಂಜಾಬ್ ಕ್ಯಾಬಿನೆಟ್ ಸಚಿವ ಸಾಧು ಸಿಂಗ್ ಧರ್ಮಸೂತ್ ಹೇಳಿದ್ದಾರೆ.
ಸಿಧು ಅವರು ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಗೆ ಬಂದಿದ್ದಾರೆ. ಇನ್ನು ಕಾಂಗ್ರೆಸ್ ತೊರೆದು ಅವರು ಹೋಗುವುದಾದರೂ ಎಲ್ಲಿಗೆಎಂದು ಧರ್ಮಸೂತ್ ಪ್ರಶ್ನಿಸಿದರು.
ಸಿಧು ವಿರುದ್ಧ ಹೈಕಮಾಂಡ್ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿರುವ ಧರ್ಮಸೂತ್ ಅವರು, ನಾನು ಈ ಆಗ್ರಹವನ್ನು ಪಕ್ಷದ ಸಭೆಯಲ್ಲೂ ಎತ್ತುತ್ತೇನೆ ಎಂದು ಹೇಳಿದರು.
ನಿನ್ನೆ ಭಾನುವಾರ ಪಂಜಾಬ್ ಸಿಎಂ ಅವರು “ಸಿಧು ಅವರು ಕಾಂಗ್ರೆಸ್ ವಿರುದ್ಧ ಅಕಾಲಿಕ ಮತ್ತು ಅಪ್ರಬುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದರಿಂದ ಪಕ್ಷಕ್ಕೂ ಸ್ವತಃ ಅವರಿಗೂ ಹಾನಿ ಆಗುತ್ತದೆ ಎಂದು ಸಿಎಂ ಅಮರೀಂದರ್ ಸಿಂಗ್ ಹೇಳಿದ್ದರು.
ಕೆಲವು ದಿನಗಳ ಹಿಂದಷ್ಟೇ ನವಜೋತ್ ಸಿಂಗ್ ಸಿಧು ಅವರು ತನ್ನ ಪತ್ನಿ ನವಜೋತ್ ಕೌರ್ ಅವರಿಗೆ ಚಂಡೀಗಢದಿಂದ ಟಿಕೆಟ್ ಕೊಡದಿರುವುದಕ್ಕೆ ಪಂಬಾಜ್ ಸಿಎಂ ಅವರೇ ಕಾರಣ ಎಂದು ಬಹಿರಂಗವಾಗಿ ಹೇಳಿದ್ದರು.
ಇದಕ್ಕೆ ಉತ್ತರವಾಗಿ ಸಿಎಂ ಸಿಂಗ್ ಅವರು “ಕೌರ್ ಅವರಿಗೆ ಕಾಂಗ್ರೆಸ್ ಪಕ್ಷ ಅಮೃತಸರ ಅಥವಾ ಭಟಿಂಡಾದಿಂದ ಸ್ಪರ್ಧಿಸಲು ಟಿಕೆಟ್ ಕೊಟ್ಟಿತ್ತು; ಆದರೆ ಆಕೆ ಅದನ್ನು ತಿರಸ್ಕರಿಸಿದರು’ ಎಂದು ಹೇಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಗೆಲುವು ಸಾಧಿಸಿ ಮೋದಿ ಕೈ ಬಲಪಡಿಸುವೆ: ಗಾಯತ್ರಿ ಸಿದ್ದೇಶ್ವರ
Tragedy: ಬಿಸಿಲಿನ ತಾಪ… ಕುಸಿದು ಬಿದ್ದು ಬಿಎಂಟಿಸಿ ಕಂಡಕ್ಟರ್ ಮಲ್ಲಯ್ಯ ಮೃತ್ಯು
ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನ… ಅತ್ಯಾಚಾರ ಆರೋಪಿ ಕಾಲಿಗೆ ಗುಂಡೇಟು
Bihar: 2025ರ ಚುನಾವಣೆಗೂ ಮುನ್ನ ಬಿಜೆಪಿಯಿಂದ 10 ಲಕ್ಷ ಸರ್ಕಾರಿ ಉದ್ಯೋಗದ ಭರವಸೆ
Nijjar Case: ಭಯೋತ್ಪಾದಕ ನಿಜ್ಜರ್ ಹತ್ಯೆ ಪ್ರಕರಣ: ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ