ನ್ಯಾಯವಾದಿ ಸಂಜೀವ ಪುನಾಳೆಕರ ಬಿಡುಗಡೆಗೆ ಒತ್ತಾಯಿಸಿ ಪ್ರತಿಭಟನೆ
•ಸಿಬಿಐ ಅನೇಕ ಅಮಾಯಕ ಹಿಂದೂಗಳನ್ನು ಶಂಕಿತರೆಂದು ಬಂಧಿಸಿರುವ ಕ್ರಮ ಅವೈಜ್ಞಾನಿಕ
Team Udayavani, May 28, 2019, 12:29 PM IST
ಸಾಗರ: ಹಿಂದೂ ಜನಜಾಗೃತಿ ಸಮಿತಿ ಪ್ರಖರ ಹಿಂದೂವಾದಿ ಸಂಜೀವ ಪುನಾಳೆಕರ ಅವರ ಬಂಧನ ಖಂಡಿಸಿ ಎಸಿ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ಸಾಗರ: ರಾಷ್ಟ್ರಪ್ರೇಮಿ ಹಾಗೂ ಪ್ರಖರ ಹಿಂದೂವಾದಿ ಸಂಜೀವ ಪುನಾಳೆಕರ ಅವರ ಬಂಧನ ಖಂಡಿಸಿ ಕೂಡಲೇ ಪುನಾಳೆಕರ ಅವರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ನಗರದ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಸೋಮವಾರ ಉಪವಿಭಾಗಾಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಮುಂಬೈನ ರಾಷ್ಟ್ರಪ್ರೇಮಿ, ಪ್ರಖರ ಹಿಂದುತ್ವನಿಷ್ಟ ಹಾಗೂ ಹಿಂದೂ ವಿಜ್ಞ ಪರಿಷತ್ತಿನ ರಾಷ್ಟ್ರೀಯ ಕಾರ್ಯದರ್ಶಿ ಪುನಾಳೆಕರ ಹಾಗೂ ಮಾಹಿತಿಹಕ್ಕು ಕಾರ್ಯಕರ್ತ ವಿಕ್ರಮ ಭಾವೆ ಅವರನ್ನು ಕೇಂದ್ರೀಯ ತನಿಖಾ ಸಂಸ್ಥೆ ಮೇ 25ರಂದು ದಾಬೋಲ್ಕರ್ ಹತ್ಯೆ ಪ್ರಕರಣದಲ್ಲಿ ಬಂಧಿಸಿದೆ. ಡಾ| ನರೇಂದ್ರ ದಾಬೋಲ್ಕರ್ ಇವರ ಹತ್ಯೆಯ ತನಿಖೆಯು ಕೇಂದ್ರೀಯ ತನಿಖಾ ತಂಡವು ನಡೆಸುತ್ತಿದೆ.
ಈ ಪ್ರಕರಣದಲ್ಲಿ ಕಳೆದ ಮೂರು ವರ್ಷಗಳಲ್ಲಿ ಸಿಬಿಐ ಅನೇಕ ಅಮಾಯಕ ಹಿಂದೂಗಳನ್ನು ಶಂಕಿತರೆಂದು ಬಂಧಿಸಿರುವ ಕ್ರಮ ಅವೈಜ್ಞಾನಿಕವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪ್ರಕರಣದಲ್ಲಿ ನ್ಯಾಯವಾದಿ ಪುನಾಳೆಕರ ಇವರನ್ನು 10 ತಿಂಗಳ ಹಿಂದಿನ ಓರ್ವ ಶಂಕಿತ ಆರೋಪಿ ನೀಡಿದ ಹೇಳಿಕೆಯ ಮೇಲೆ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಸಿಬಿಐನ ಈ ಕ್ರಮ ಅತ್ಯಂತ ತಪ್ಪು ನಿರ್ಧಾರ. ಈ ಎಲ್ಲ ಪ್ರಕರಣಗಳಲ್ಲಿ ಸಿಬಿಐ ನಡೆ ಸಂದೇಹಾಸ್ಪದ ಹಾಗೂ ಹಿಂದುತ್ವವಾದಿಗಳ ಮೇಲೆ ಒತ್ತಡ ತರುವ ಪ್ರಯತ್ನವಾಗಿದೆ. ಹಿಂದುತ್ವವಾದಿ ಎಂದು ಹೇಳಿಕೊಳ್ಳುವ ಸರ್ಕಾರ ಅಧಿಕಾರದಲ್ಲಿರುವಾಗಲೇ ಇಂತಹ ಘಟನೆಗಳು ನಡೆಯುತ್ತಿರುವುದು ಹಿಂದೂಗಳಿಗೆ ಆಘಾತವನ್ನು ತಂದೊಡ್ಡಿದೆ ಎಂದು ತಿಳಿಸಲಾಗಿದೆ.
ಡಾ| ದಾಬೋಲಕರ, ಡಾ| ಗೋವಿಂದ ಪಾನಸಾರೆ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಗಳ ತನಿಖೆ ನಡೆಸುವ ಸಿಬಿಐ ಅಧಿಕಾರಿ ನಂದಕುಮಾರ ನಾಯರ್ ಅವರ ಕುಕೃತ್ಯಗಳ ಬಗ್ಗೆ ಕೇರಳ ಉಚ್ಛನ್ಯಾಯಾಲಯವು ಈ ಅಕಾರಿ ಸಿಬಿಐಗೆ ಕಳಂಕವಾಗಿದ್ದಾರೆ ಎಂದು ಮಾತುಗಳಲ್ಲಿ ಚಾಟಿ ಬೀಸಿತ್ತು ಎಂಬುದನ್ನು ನ್ಯಾಯವಾದಿ ಪುನಾಳೆಕರ ಬಯಲಿಗೆ ಎಳೆದು ಇಂತಹ ಕಳಂಕಿತ ಅಧಿಕಾರಿಗಳು ಹಿಂದುತ್ವವಾದಿಗಳನ್ನು ಯಾವ ರೀತಿ ಸಿಲುಕಿಸುತ್ತಿದ್ದಾರೆ ಎಂಬ ಸಂಚನ್ನು ಬಯಲಿಗೆ ಎಳೆದಿತ್ತು ಎಂದು ಮನವಿಯಲ್ಲಿ ಹೇಳಲಾಗಿದೆ.
ವಿಕ್ರಮ ಭಾವೆಯವರು ಮಾಲೇಗಾಂವ್ ಸೋಟದ ಹಿಂದಿರುವ ಅದೃಶ್ಯ ಕೈ ಎಂಬ ಪುಸ್ತಕ ಬರೆದು ಮಾಲೇಗಾಂವ್ ಸೋಟದ ನಿಜವಾದ ಸ್ವರೂಪವನ್ನು ಬಯಲಿಗೆ ಎಳೆದಿದ್ದರು. ಅನೇಕ ಸ್ಥಳೀಯ ಸಹಕಾರ ಸಂಸ್ಥೆಗಳಲ್ಲಿ ಭ್ರಷ್ಟಾಚಾರಗಳನ್ನು ಮಾಹಿತಿ ಹಕ್ಕು ಅಧಿಕಾರದ ಮೂಲಕ ಬಯಲಿಗೆ ಎಳೆದಿದ್ದರು. ಇದೆಲ್ಲವನ್ನೂ ಸಹಿಸಿಕೊಳ್ಳಲು ಆಗದೆ ಪುನಾಳೆಕರ ಮತ್ತು ವಿಕ್ರಮ ಭಾವೆ ಅವರ ಧ್ವನಿ ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ತಕ್ಷಣ ಇಬ್ಬರನ್ನೂ ಬಿಡುಗಡೆ ಮಾಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಸಮಿತಿಯ ಶಾಂತಾ, ಆಶಾ, ಶೈಲಾ, ಪ್ರಮುಖರಾದ ಸುದರ್ಶನ್ ಕೆ.ಎಚ್., ಕೆ.ವಿ. ಪ್ರವೀಣಕುಮಾರ್, ರಾಜು ಬಿ. ಮಡಿವಾಳ, ಶ್ರೀಧರ ಸಾಗರ, ಕುಮಾರ್, ರಾಜು ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಮರ್ಥ ರಾಷ್ಟ್ರ – ಸಮಗ್ರ ಅಭಿವೃದ್ಧಿಗಾಗಿ ಮತ್ತೂಮ್ಮೆ ಸಂಸತ್ಗೆ ಕಳುಹಿಸಿ: B.Y. ರಾಘವೇಂದ್ರ
ಈ ಬಾರಿ ಚುನಾವಣೆಯಲ್ಲಿ ಸಂವಿಧಾನದ ಅಳಿವು ಉಳಿವಿನ ಪ್ರೆಶ್ನೆಯಾಗಿದೆ: ಟಿ.ಬಿ.ಜಯಚಂದ್ರ
Thirthahalli: ಶಿಕ್ಷಕರ ಚುನಾವಣೆಯಲ್ಲಿ ಶಿಕ್ಷಕರೇ ಸ್ಪರ್ಧೆ ಮಾಡಬೇಕು: ಅರುಣ್ ಹೊಸಕೊಪ್ಪ
Lok Sabha Polls: ಕಾಗೆ ಮಾತು ಕಾಂಗ್ರೆಸ್ನ ಮನಸ್ಥಿತಿ: ಬಿ.ವೈ.ರಾಘವೇಂದ್ರ
Shimoga; ಕಾಡಾನೆ ದಾಳಿಗೆ ವ್ಯಕ್ತಿ ಬಲಿ
MUST WATCH
ಹೊಸ ಸೇರ್ಪಡೆ
Desi Swara:ಸಿಟಿ ಆಫ್ ವಿಂಡ್ಸ್ ಕ್ಯಾಸ್ಪಿಯನ್: ಸಮುದ್ರ ಕಿನಾರೆಯ ಪ್ರವಾಸಿ ತಾಣ ಬಾಕು ನಗರ
Desi Swara: ಹೆಮ್ಮೆಯ ದುಬೈ ಕನ್ನಡ ಸಂಘ- ಶಾರ್ಜಾ ಮಳೆ ಸಂತ್ರಸ್ಥರಿಗೆ ಸಹಾಯ ಹಸ್ತ
Mussoorie: ಭೀಕರ ರಸ್ತೆ ಅಪಘಾತ… 5 ವಿದ್ಯಾರ್ಥಿಗಳ ದುರಂತ ಅಂತ್ಯ, ಓರ್ವಳ ಸ್ಥಿತಿ ಗಂಭೀರ
Mangaluru; ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಪೋಟ ಬೆದರಿಕೆ; ಪೊಲೀಸ್ ಭದ್ರತೆ
Pen drive case; ಪ್ರಜ್ವಲ್ ರೇವಣ್ಣ ಹಾಸನ ನಿವಾಸದಲ್ಲಿ ಎಸ್ಐಟಿ ಪರಿಶೀಲನೆ