ಕುರಿಗಾಹಿಗಳ ನಿದ್ದೆಗೆಡಿಸಿದ ಅಪರಿಚಿತ ಪ್ರಾಣಿ

ಪ್ರಾಣಿ ಪತ್ತೆ ಹಚ್ಚಲು ಕುರಿಗಾಹಿಗಳ ಆಗ್ರಹ •ಕಾರ್ಯ ಪ್ರವೃತ್ತವಾಗಬೇಕಿದೆ ಅರಣ್ಯ ಇಲಾಖಾಧಿಕಾರಿಗಳು

Team Udayavani, Aug 5, 2019, 1:05 PM IST

Udayavani Kannada Newspaper

ಉಮೇಶ ಬಳಬಟ್ಟಿ
ಇಂಡಿ:
ಕಳೆದ ನಾಲ್ಕು ದಿನಗಳ ಹಿಂದೆ ತಾಲೂಕಿನ ಇಂಗಳಗಿ ಗ್ರಾಮದ ಮಾನೇವಸ್ತಿಯಲ್ಲಿ ಅನಾಮಧೇಯ ಪ್ರಾಣಿಯೊಂದು ಕುರಿಗಳನ್ನು ಕತ್ತರಿಸಿ ಕುರಿಗಾಹಿಗಳು ನಿದ್ದೆಗೆಡಿಸಿತ್ತು. ಅದು ಮಾಸುವ ಮುನ್ನವೇ ಶನಿವಾರ ತಾಲೂಕಿನ ಆಳೂರ ಗ್ರಾಮದಲ್ಲಿಯೂ ಅದೇ ಪ್ರಕರಣ ಮರುಕಳಿಸಿದೆ.

ತಾಲೂಕಿನ ಇಂಗಳಗಿ, ಆಳೂರ, ಮಾವಿನಳ್ಳಿ, ಹಿರೇಬೇವನೂರ ಸೇರಿದಂತೆ ಇನ್ನಿತರ ಗ್ರಾಮದ ಕೆಲ ರೈತರ ತೋಟದಲ್ಲಿ ಶನಿವಾರ ಮಧ್ಯಾಹ್ನ ಸರಿಸುಮಾರು 20 ಕುರಿಗಳನ್ನು ಅನಾಮಧೇಯ ಪ್ರಾಣಿ ಕಚ್ಚಿ ಅರ್ಧಂಬರ್ಧ ತಿಂದು ಪರಾರಿಯಾಗಿದೆ.

ಕಳೆದ ಶನಿವಾರ ಇಂಗಳಗಿ ಗ್ರಾಮದ ಘೇನು ರಾಠೊಡ ಅವರ 3 ಕುರಿಗಳು, ಪಂಡೀತ ವಾಘಮೋರೆ ಅವರ ಒಂದು ಕುರಿ ಸೇರಿದಂತೆ ಪಕ್ಕದ ತೋಟದಲ್ಲಿರುವ ಮಳಸಿದ್ದ ನಾಗಣಸೂರ ಅವರ ನಾಲ್ಕು ಕುರಿಗಳು ಹಾಗೂ ಮಾಂತು ರಾಠೊಡ ಎಂಬುವವರ ನಾಲ್ಕು ಕುರಿಗಳು ಅನಾಮಧೇಯ ಪ್ರಾಣಿಗೆ ಬಲಿಯಾಗಿವೆ.

ಇನ್ನು ಈ ಶನಿವಾರ ತಾಲೂಕಿನ ಆಳೂರ ಗ್ರಾಮದ ಧರ್ಮರಾಜ ಮಾದರ ಅವರ 9 ಕುರಿ ಮತ್ತು ಅದೇ ಗ್ರಾಮದ ತುಕಾರಾಮಗೌಡ ಪಾಟೀಲ ಅವರ 6 ಕುರಿಗಳನ್ನು ಬಲಿ ತೆಗೆದುಕೊಂಡಿದೆ. ಈ ಪ್ರಾಣಿ ಯಾವುದೆಂದು ಗೊತ್ತಾಗುತ್ತಿಲ್ಲ. ಹಾಡು ಹಗಲೆ ತೋಟಕ್ಕೆ ನುಗ್ಗಿ ಕೇವಲ ಕುರಿಗಳನ್ನೇ ಗುರಿಯಾಗಿಸಿ ದಾಳಿ ನಡೆಸುತ್ತಿವೆ.

ಕನಿಷ್ಠ 6-7 ಸಾವಿರ ಬೆಲೆ ಬಾಳುವ ಕುರಿಗಳನ್ನು ಸಾಕಿದ ರೈತರಿಗೆ ಈಗ ಹಗಲು ರಾತ್ರಿ ಎನ್ನದೆ ಕುರಿಗಳನ್ನು ಕಾವಲು ಮಾಡಬೇಕಾಗಿ ಬಂದಿದೆ. ಈ ಅನಾಮಧೇಯ ಪ್ರಾಣಿಗಳನ್ನು ಪತ್ತೆ ಹಚ್ಚಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ರೈತರು ತಿಳಿಸಿದ್ದಾರೆ.

ಒಟ್ಟಿನಲ್ಲಿ ಆ ಪ್ರಾಣಿ ಯಾವುದೆಂದು ತಿಳಿದು ಅದನ್ನು ಕಾಡಿಗಟ್ಟುವ ಕೆಲಸ ಮಾಡಲು ಅರಣ್ಯ ಇಲಾಖೆ ಮುಂದಾಗಿ ಮುಂದಾಗುವ ಅನಾಹುತ ತಪ್ಪಿಸಬೇಕಿದೆ. ಇನ್ನು ಸತ್ತ ಕುರಿಗಳ ಮಾಲೀಕರಿಗೆ ಪಶು ಅಥವಾ ಅರಣ್ಯ ಇಲಾಖೆಯವರು ಪರಿಹಾರ ಒದಗಿಸುವ ಕಾರ್ಯ ಮಾಡಬೇಕಿದೆ.

ಈ ಪ್ರಾಣಿ ಯಾವುದೆಂದು ಗೊತ್ತಾಗಿಲ್ಲ. ಈ ಮೊದಲು ಇಂಗಳಗಿ ಗ್ರಾಮದಲ್ಲಿಯೂ ಕುರಿಗಳನ್ನು ಕೊಂದಿತ್ತು. ಈಗ ಆಳೂರ ಗ್ರಾಮದಲ್ಲಿ ಕುರಿಗಳನ್ನು ಕೊಂದಿದೆ. ಜಿಟಿ-ಜಿಟಿ ಮಳೆಯಾಗಿದ್ದರಿಂದ ಆ ಪ್ರಾಣಿಯ ಪಾದದ ಕುರಿತು ಗುರುತು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ರೈತರಿಗೆ ದೂರವಾಣಿ ನಂಬರ್‌ ನೀಡಿದ್ದೇವೆ. ಅನಾಮಧೇಯ ಪ್ರಾಣಿ ಕಂಡರೆ ಕರೆ ಮಾಡಲು ತಿಳಿಸಿದ್ದೇವೆ. ಅದನ್ನು ಹಿಡಿಯಲು ಒಂದು ತಂಡ ರಚನೆ ಮಾಡಿದ್ದೇವೆ. ಇಂತಹ ಪ್ರಕರಣ ಎಲ್ಲಿಯಾದರೂ ಕಂಡರೆ ಕೂಡಲೆ ನಮಗೆ ಕರೆ (9972612455) ಮಾಡಿ ಮಾಹಿತಿ ನೀಡಬೇಕು.
ರಶೀದ್‌ ಮಾಶಾಳ,
 ಉಪ ಅರಣ್ಯಾಧಿಕಾರಿ ಇಂಡಿ ವಲಯ

ರ್ಯಾಟಲ್ಡಾನ್‌ ಎನ್ನೋ ಸಾಕು ನಾಯಿ ಇರಬಹುದು ಎಂಬ ಶಂಕೆ ಇದೆ. ಆಳೂರ ಗ್ರಾಮದಲ್ಲಿ ಆ ನಾಯಿಯನ್ನು ರೈತರು ಹಿಡಿದಿದ್ದರು. ಆದರೆ ಅದೇ ನಾಯಿ ಕಚ್ಚಿ ಕೊಂದಿದೆ ಎಂದು ಯಾರೂ ನೋಡಿಲ್ಲ. ಹೀಗಾಗಿ ನಾವು ಇನ್ನೂ ಬೇರೆ ಪ್ರಾಣಿ ಇರಬಹುದೇನೋ ಎಂಬ ಅನುಮಾನದಲ್ಲಿದ್ದೇವೆ. ಅದನ್ನು ಪತ್ತೆ ಹಚ್ಚಲು ತಂಡ ರಚಿಸಿ ಕಾರ್ಯ ಪ್ರವೃತ್ತರಾಗಿದ್ದೇವೆ.
ಆರ್‌.ಆರ್‌. ಚವ್ಹಾಣ,
 ವಲಯ ಅರಣ್ಯ ಅಧಿಕಾರಿ

ನಮ್ಮ ಗ್ರಾಮದ ನಾಲ್ಕು ರೈತರ 25 ಕುರಿಗಳನ್ನು ಯವುದೋ ಅನಾಮಧೇಯ ಪ್ರಾಣಿ ಬಂದು ಕಚ್ಚಿ ಕೊಂದಿದೆ. ಅರಣ್ಯ ಇಲಾಖೆಯವರು ಬಂದು ಫೋಟೊ ತೆಗೆದುಕೊಂಡು ಹೋಗಿದ್ದಾರೆ. ಪಶು ವೈದ್ಯರ ದೃಢೀೕಕರಣ ನೀಡುವಂತೆ ಹೇಳಿದ್ದಾರೆ. ಮೂರು ದಿನ ಪಶು ಆಸ್ಪತ್ರೆಗೆ ಹೋದರೂ ವೈದ್ಯರೇ ಸಿಕ್ಕಿಲ್ಲ. ಹೀಗಾಗಿ ನಮಗೆ ಇನ್ನೂ ಪರಿಹಾರವೂ ಬಂದಿಲ್ಲ.
ಘೇನೂ ರಾಠೊಡ,
 ಕುರಿಗಾಹಿ, ಇಂಗಳಗಿ

ಟಾಪ್ ನ್ಯೂಸ್

Hubli; ಸಭೆ ಮೊಟಕುಗೊಳಿಸಿದ ಅಧಿಕಾರಿಗಳು; ಪ್ರತಿಭಟನೆ ನಡೆಸಿದ ಮಠಾಧೀಶರು

Hubli; ಸಭೆ ಮೊಟಕುಗೊಳಿಸಿದ ಅಧಿಕಾರಿಗಳು; ಪ್ರತಿಭಟನೆ ನಡೆಸಿದ ಮಠಾಧೀಶರು

Loksabha; ಪ್ರಚಾರಕ್ಕೆ ಸಿಗದ ಹಣಕಾಸು ನೆರವು..: ಟಿಕೆಟ್ ಮರಳಿಸಿದ ಕಾಂಗ್ರೆಸ್ ಅಭ್ಯರ್ಥಿ

Loksabha; ಪ್ರಚಾರಕ್ಕೆ ಸಿಗದ ಹಣಕಾಸು ನೆರವು..: ಟಿಕೆಟ್ ಮರಳಿಸಿದ ಕಾಂಗ್ರೆಸ್ ಅಭ್ಯರ್ಥಿ

Desi Swara: ಅಮ್ಮ ನಿನ್ನ ತೋಳಿನಲ್ಲಿ…..ಕಂದಾ ನಾನು

Desi Swara: ಅಮ್ಮ ನಿನ್ನ ತೋಳಿನಲ್ಲಿ…..ಕಂದಾ ನಾನು

Mussoorie: ಭೀಕರ ರಸ್ತೆ ಅಪಘಾತ… 5 ವಿದ್ಯಾರ್ಥಿಗಳ ದುರಂತ ಅಂತ್ಯ, ಓರ್ವಳ ಸ್ಥಿತಿ ಗಂಭೀರ

Mussoorie: ಭೀಕರ ರಸ್ತೆ ಅಪಘಾತ… 5 ವಿದ್ಯಾರ್ಥಿಗಳ ದುರಂತ ಅಂತ್ಯ, ಓರ್ವಳ ಸ್ಥಿತಿ ಗಂಭೀರ

mangalore international airport

Mangaluru; ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಪೋಟ ಬೆದರಿಕೆ; ಪೊಲೀಸ್ ಭದ್ರತೆ

Pen drive case; ಪ್ರಜ್ವಲ್ ರೇವಣ್ಣ ಹಾಸನ ನಿವಾಸದಲ್ಲಿ ಎಸ್ಐಟಿ ಪರಿಶೀಲನೆ

Pen drive case; ಪ್ರಜ್ವಲ್ ರೇವಣ್ಣ ಹಾಸನ ನಿವಾಸದಲ್ಲಿ ಎಸ್ಐಟಿ ಪರಿಶೀಲನೆ

Raichur; ಅಣ್ಣಾಮಲೈ ಸೆಲ್ಫಿಗಾಗಿ ನೂಕುನುಗ್ಗಲು: ವೇದಿಕೆಯಲ್ಲೇ ಲಾಠಿ ಬೀಸಿದ ಪೊಲೀಸರು

Raichur; ಅಣ್ಣಾಮಲೈ ಸೆಲ್ಫಿಗಾಗಿ ನೂಕುನುಗ್ಗಲು: ವೇದಿಕೆಯಲ್ಲೇ ಲಾಠಿ ಬೀಸಿದ ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubli; ಸಭೆ ಮೊಟಕುಗೊಳಿಸಿದ ಅಧಿಕಾರಿಗಳು; ಪ್ರತಿಭಟನೆ ನಡೆಸಿದ ಮಠಾಧೀಶರು

Hubli; ಸಭೆ ಮೊಟಕುಗೊಳಿಸಿದ ಅಧಿಕಾರಿಗಳು; ಪ್ರತಿಭಟನೆ ನಡೆಸಿದ ಮಠಾಧೀಶರು

mangalore international airport

Mangaluru; ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಪೋಟ ಬೆದರಿಕೆ; ಪೊಲೀಸ್ ಭದ್ರತೆ

Raichur; ಅಣ್ಣಾಮಲೈ ಸೆಲ್ಫಿಗಾಗಿ ನೂಕುನುಗ್ಗಲು: ವೇದಿಕೆಯಲ್ಲೇ ಲಾಠಿ ಬೀಸಿದ ಪೊಲೀಸರು

Raichur; ಅಣ್ಣಾಮಲೈ ಸೆಲ್ಫಿಗಾಗಿ ನೂಕುನುಗ್ಗಲು: ವೇದಿಕೆಯಲ್ಲೇ ಲಾಠಿ ಬೀಸಿದ ಪೊಲೀಸರು

Kalaburagi Lok Sabha Constituency: ಖರ್ಗೆಗೆ ಪ್ರತಿಷ್ಠೆಯ ಕಣ: ಜಾಧವ್‌ ಏಕಾಂಗಿ ಫೈಟ್‌‌

Kalaburagi Lok Sabha Constituency: ಖರ್ಗೆಗೆ ಪ್ರತಿಷ್ಠೆಯ ಕಣ: ಜಾಧವ್‌ ಏಕಾಂಗಿ ಫೈಟ್‌‌

Prajwal Revanna Case; ರೆಕಾರ್ಡ್ ಸ್ಪೀಡ್‌ನಲ್ಲಿ ತನಿಖೆ ನಡೆಸಲಿ: ಅಣ್ಣಾಮಲೈ

Prajwal Revanna Case; ರೆಕಾರ್ಡ್ ಸ್ಪೀಡ್‌ನಲ್ಲಿ ತನಿಖೆ ನಡೆಸಲಿ: ಅಣ್ಣಾಮಲೈ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

UV Fusion: ನಿಷ್ಕಲ್ಮಶ ಮನ ನಮ್ಮದಾಗಲಿ

Hubli; ಸಭೆ ಮೊಟಕುಗೊಳಿಸಿದ ಅಧಿಕಾರಿಗಳು; ಪ್ರತಿಭಟನೆ ನಡೆಸಿದ ಮಠಾಧೀಶರು

Hubli; ಸಭೆ ಮೊಟಕುಗೊಳಿಸಿದ ಅಧಿಕಾರಿಗಳು; ಪ್ರತಿಭಟನೆ ನಡೆಸಿದ ಮಠಾಧೀಶರು

2-uv-fusion

UV Fusion: ಆರಾಮಕ್ಕಿರಲಿ  ವಿರಾಮ…

Desi Swara: ಅಮೆರಿಕ-ಸೌರಮಾನ ಯುಗಾದಿ ಆಚರಣೆ

Desi Swara: ಅಮೆರಿಕ-ಸೌರಮಾನ ಯುಗಾದಿ ಆಚರಣೆ

Loksabha; ಪ್ರಚಾರಕ್ಕೆ ಸಿಗದ ಹಣಕಾಸು ನೆರವು..: ಟಿಕೆಟ್ ಮರಳಿಸಿದ ಕಾಂಗ್ರೆಸ್ ಅಭ್ಯರ್ಥಿ

Loksabha; ಪ್ರಚಾರಕ್ಕೆ ಸಿಗದ ಹಣಕಾಸು ನೆರವು..: ಟಿಕೆಟ್ ಮರಳಿಸಿದ ಕಾಂಗ್ರೆಸ್ ಅಭ್ಯರ್ಥಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.