“ಸೆಮಿಕಂಡಕ್ಟರ್ ಉದ್ಯಮದಲ್ಲಿ ವಿಕಾಸ’
ಮಣಿಪಾಲದಲ್ಲಿ ಐಇಇಇ ಡಿಸ್ಕವರ್ ಸಮ್ಮೇಳನ
Team Udayavani, Aug 13, 2019, 5:50 AM IST
ಉಡುಪಿ: ಸೆಮಿಕಂಡಕ್ಟರ್ ಕೈಗಾರಿಕೆಯಲ್ಲಿ ವಿಕಾಸವಾಗುತ್ತಿದೆ ಎಂದು ಬೆಂಗಳೂರು ಭಾರತೀಯ ವಿಜ್ಞಾನ ಮಂದಿರದ (ಐಐಎಸ್ಸಿ) ಪ್ರಾಧ್ಯಾಪಕ ಡಾ| ನವಕಾಂತ ಭಟ್ ಹೇಳಿದರು.
ಮಣಿಪಾಲ ಎಂಐಟಿ ಸಂಸ್ಥೆ ಐಇಇಇ ಮಂಗಳೂರು ಉಪವಿಭಾಗದ ಸಹಕಾರದಲ್ಲಿ ರವಿವಾರ ಎಂಐಟಿ ಸಭಾಂಗಣದಲ್ಲಿ ಆಯೋಜಿಸಿದ ಡಿಸ್ಟ್ರಿಬ್ಯೂ ಟೆಡ್ ಕಂಪ್ಯೂಟಿಂಗ್, ವಿಎಲ್ಎಸ್ಐ, ಎಲೆಕ್ಟ್ರಿಕಲ್ ಸರ್ಕ್ನೂಟ್ಸ್, ರೊಬೋಟಿಕ್ಸ್ ಕುರಿತಾದ ಐಇಇಇ ಡಿಸ್ಕವರ್ ಎರಡು ದಿನಗಳ ಸಮ್ಮೇಳನದ ಉದ್ಘಾಟನ ಸಮಾರಂಭದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಬಯೋಸೆನ್ಸರ್ ಅಪ್ಲಿಕೇಶನ್ಗಾಗಿ ಮಿನಿಯೇಚರೈಸೇಶನ್ ಮತ್ತು ಆರೋಗ್ಯ ನಿಗಾ ಕ್ಷೇತ್ರದ ತಂತ್ರಜ್ಞಾನದಲ್ಲಿ ಇದರ ಬಳಕೆಯ ಮಹತ್ವವನ್ನು ವಿವರಿಸಿದ ಅವರು, ಉನ್ನತ ಸ್ತರದ ಸಂಕೀರ್ಣ ಎಲೆಕ್ಟ್ರಾನಿಕ್ ಸೆನ್ಸರ್ ವ್ಯವಸ್ಥೆಯನ್ನು ಸಾಧಿಸುವ ಸವಾಲುಗಳು ಮುಂದಿನ ಕೆಲವು ದಶಕಗಳಲ್ಲಿ ಬರಲಿವೆ ಎಂದರು.
ಕೆನಡದ ಒಂಟಾರಿಯೋ ತಂತ್ರಜ್ಞಾನ ಸಂಸ್ಥೆ ಡಾ| ಶೆಲ್ಡನ್ ವಿಲಿಯಮ್ಸನ್ ಅವರು, ವಿದ್ಯುತ್ಛಕ್ತಿ ಸಂಗ್ರಹ ವ್ಯವಸ್ಥೆಯಲ್ಲಿ ಮತ್ತು ಸ್ಮಾರ್ಟ್ ಚಾರ್ಜಿಂಗ್ ಮೂಲ ಸೌಕರ್ಯಗಳಲ್ಲಿ ಮುಂದೆ ಬರುವ ಅವಕಾಶಗಳ ಬಗೆಗೆ ವಿವರಿಸಿದರು. ಆಸ್ಟ್ರೇಲಿಯ ಮೆಲ್ಬೋರ್ನ್ನ ಡೀಕಿನ್ ವಿ.ವಿ.ಯ ಡಾ| ಅರ್ಕಾಡಿ ಝಲ್ವಿಸ್ಕಿ ಮಾತನಾಡಿದರು.
ಮಾಹೆ ಕುಲಸಚಿವ (ಮೌಲ್ಯಮಾಪನ) ಡಾ| ವಿನೋದ ವಿ. ಥಾಮಸ್ ಸಮ್ಮೇಳನವನ್ನು ಉದ್ಘಾಟಿಸಿದರು. ಎಂಐಟಿ ನಿರ್ದೇಶಕ ಡಾ| ಶ್ರೀಕಾಂತ ರಾವ್ ಅಧ್ಯಕ್ಷತೆ ವಹಿಸಿ ಹೊಸದಾಗಿ ಉದಯಿಸುತ್ತಿರುವ ತಂತ್ರಜ್ಞಾನಗಳ ಬಗೆಗೆ ಸಮ್ಮೇಳನದ ಗುರಿಯನ್ನು ವಿವರಿಸಿ ಈ ಕ್ಷೇತ್ರದಲ್ಲಿ ಸಂಶೋಧಕರು ಹೆಚ್ಚಿನ ಆಸ್ಥೆ ತಳೆಯಬೇಕೆಂದರು. ಕಾರ್ಯಾಗಾರದ ಕುರಿತು ಮಾತನಾಡಿದ ಐಇಇಇ ಅಧ್ಯಕ್ಷ ಡಾ| ಮನೋಹರ ಪೈ ಎಂ.ಎಂ. ಅವರು ಸ್ವಾಗತಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi ಇನ್ನೂ ನಡೆಯದ ಟೆಂಡರ್ ಪ್ರಕ್ರಿಯೆ; ರಾಜ್ಯದಲ್ಲಿ ಅಗ್ನಿಶಾಮಕ ವಾಹನ ಕೊರತೆ
Road Mishap ಮಣಿಪಾಲ: ಕಾರು ಢಿಕ್ಕಿಯಾಗಿ ಪಾದಚಾರಿ ಸಾವು
Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು
Theme Park Karkala ಅವಶೇಷ ತೆರವಿಗೆ ಕೋರ್ಟ್ ಆದೇಶ; ಜಿಲ್ಲಾಧಿಕಾರಿ ತಡೆ!
Parashurama Theme Park; ಕೊನೆಯ ಸಾಕ್ಷ್ಯವೂ ನಾಶಕ್ಕೆ ಯತ್ನ: ಉದಯ ಕುಮಾರ್ ಶೆಟ್ಟಿ ಆರೋಪ
MUST WATCH
ಹೊಸ ಸೇರ್ಪಡೆ
Nijjar Case: ಭಯೋತ್ಪಾದಕ ನಿಜ್ಜರ್ ಹತ್ಯೆ ಪ್ರಕರಣ: ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ
Puttur ಅಡಿಕೆಗೂ ಬಿಸಿಲ ತಾಪ: ಉದುರುತ್ತಿವೆ ನಳ್ಳಿ! ಶೇ. 50ರಷ್ಟು ಫಸಲು ನಷ್ಟದ ಭೀತಿ
ಸಿಆರ್ಝಡ್ ಮರಳು ಇನ್ನು ಸದ್ಯಕ್ಕೆ ಮರೀಚಿಕೆ
Horoscope: ಧೈರ್ಯ, ಸಾಹಸದ ಪ್ರವೃತ್ತಿ ಯಶಸ್ಸಿಗೆ ಪೂರಕ, ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ
Udupi ಇನ್ನೂ ನಡೆಯದ ಟೆಂಡರ್ ಪ್ರಕ್ರಿಯೆ; ರಾಜ್ಯದಲ್ಲಿ ಅಗ್ನಿಶಾಮಕ ವಾಹನ ಕೊರತೆ