ಸಾಗರ ತಾಲೂಕಿನಲ್ಲಿ ಅಡಕೆಗೆ ವ್ಯಾಪಕ ಕೊಳೆಬಾಧೆ

ಬೆಳೆ ಕೈಗೆ ಸಿಗದ ಆತಂಕದಲ್ಲಿ ಅಡಕೆ ಕೃಷಿಕರು

Team Udayavani, Aug 17, 2019, 11:36 AM IST

17-Agust-16

ಸಾಗರ: ಕೊಳೆರೋಗದಿಂದ ಉದುರಿರುವ ಅಡಕೆ ನೋಡಿ ಚಿಂತಾಕ್ರಾಂತರಾದ ಅಡಕೆ ಬೆಳೆಗಾರ ಸುಳ್ಮನೆಯ ಗುರುಮೂರ್ತಿ.

ಸಾಗರ: ಒಂದೆಡೆ ಆಗಸ್ಟ್‌ ಮೂರರಿಂದ ವಾರ ಕಾಲ ಸುರಿದ ಆಶ್ಲೇಷಾ ಮಳೆಯಿಂದ ನೀರು ನುಗ್ಗಿ, ಧರೆ ಉರುಳಿ ಅಡಕೆ ತೋಟಗಳು ತೀವ್ರ ಹಾನಿಯಾಗುವುದನ್ನು ಕಂಡು ತತ್ತರಿಸಿದ್ದ ತಾಲೂಕಿನ ಅಡಕೆ ಬೆಳೆಗಾರ, ಮಳೆಯ ರಭಸ ಕಡಿಮೆಯಾಗುತ್ತಿದ್ದುದನ್ನು ನೋಡಿ ನಿಟ್ಟುಸಿರು ಬಿಡುವ ವೇಳೆಯಲ್ಲಿಯೇ ಕೊಳೆ ರೋಗ ಆವರಿಸಿದ್ದು ಅಡಕೆ ದೊಡ್ಡ ಪ್ರಮಾಣದಲ್ಲಿ ನೆಲಕಚ್ಚುತ್ತಿರುವುದು ರೈತರಿಗೆ ಗಾಯದ ಮೇಲೆ ಉಪ್ಪು ಸುರಿದಂತಾಗಿದೆ.

ತಾಲೂಕಿನ ತಾಳಗುಪ್ಪ ಹೋಬಳಿಯ ಹೊಸಳ್ಳಿ, ಹಂಸಗಾರು ಭಾಗದಲ್ಲಿ ಈ ವರ್ಷ ಬಂದಿರುವ ಕೊಳೆ ರೋಗ ಕಳೆದೆರಡು ದಶಕಗಳಲ್ಲಿಯೂ ಬಂದಿರಲಿಲ್ಲ. ಹೊಸಳ್ಳಿಯ ಬಿ.ಎನ್‌. ರಾಜಾರಾಮ, ಎಚ್.ಎನ್‌. ಅಶೋಕ, ಗೋಟಗಾರಿನ ಅರುಣ ಜಿ.ಜಿ., ಅರೆಹದದ ಮಂಜುನಾಥ್‌, ಹೊಸಳ್ಳಿಯ ಜಗದೀಶ್‌ ಬಿ.ಆರ್‌. ಮೊದಲಾದವರ ತೋಟದಲ್ಲಿ ಅಡಕೆ ಮರದ ಮೇಲೆ ಇರಬೇಕಾದ ಅಡಕೆಯಷ್ಟೂ ನೆಲದಲ್ಲಿದೆ. ಅಡಕೆ ಮರದಲ್ಲಿ ಒಂದಡಿಕೆ ಉಳಿಯದಂತೆ ನೆಲಕ್ಕೆ ಬೀಳುತ್ತಿದೆ ಎಂದು ರೈತರು ಅಲವತ್ತುಕೊಳ್ಳುತ್ತಿದ್ದಾರೆ. ಇದೇ ಪರಿಸ್ಥಿತಿ ಇಕ್ಕೇರಿ ಸಮೀಪದ ಸುಳ್ಮನೆ, ಮಾವಿನಸರ ಮೊದಲಾದ ಕಡೆಗಳಲ್ಲಿಯೂ ಕಾಣಿಸಿದೆ. ಸುಳ್ಮನೆಯ ಗುರುಮೂರ್ತಿ, ಚಿಪಿÛ ಲಿಂಗದಹಳ್ಳಿಯ ವರದಭಟ್, ವರದಾಮೂಲದ ವಿ.ಟಿ. ನಾಗರಾಜ, ಶೆಡ್ತಿಕೆರೆಯ ಎಸ್‌.ಕೆ. ಚಂದ್ರಶೇಖರ್‌, ವಿದ್ಯಾಧರ, ಎಸ್‌.ಎಸ್‌. ಶ್ರೀಕಾಂತ್‌ ಮೊದಲಾದವರ ತೋಟದಲ್ಲಿಯೂ ಇದೇ ಕಥೆ. ತಾಲೂಕಿನ ಬಹುಪಾಲು ಅಡಕೆ ತೋಟಗಳಲ್ಲಿ ತುಸು ಕಡಿಮೆ ಅಥವಾ ಅದಕ್ಕಿಂತ ಹೆಚ್ಚು ಅಡಕೆ ಉದುರುವ ದೃಶ್ಯ ಕಾಣುತ್ತಿದೆ.

ಈಗಾಗಲೇ ವಿಷಯ ಶಾಸಕ ಹಾಲಪ್ಪ ಅವರ ಗಮನಕ್ಕೂ ಬಂದಿದೆ. ನಾವು ತಾಲೂಕಿನ ಸಂಪೂರ್ಣ ಬೆಳೆಹಾನಿ ಪರಿಸ್ಥಿತಿಯ ಕುರಿತು ವಿಡಿಯೋ ಮಾಡಿ ಮುಖ್ಯಮಂತ್ರಿಗಳಿಗೆ ನೀಡಿದ್ದೇವೆ. ಕೊಳೆ ರೋಗ ಹಾನಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಪ್ರಕೃತಿ ವಿಕೋಪದ ನಿಧಿಯಿಂದ ಸಹಾಯ ಒದಗಿಸಲು ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದರು.

ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಕಳೆದ ವರ್ಷ ಕೂಡ ನಾಲ್ಕಾರು ಸಭೆ, ಒತ್ತಡ ತಂತ್ರಗಳನ್ನು ರೂಪಿಸಿ 18 ಕೋಟಿ ರೂ.ಗಳನ್ನು ಕೊಳೆ ಹಾನಿಯ ಪರಿಹಾರಕ್ಕೆ ಮಂಜೂರು ಮಾಡಿಸಲಾಗಿತ್ತು. ಆ ಮೊತ್ತದಲ್ಲಿಯೇ ಬಾಕಿ ಇರುವ 8.01 ಕೋಟಿ ರೂ. ಬಿಡುಗಡೆ ಮಾಡಲು ಒತ್ತಾಯಿಸುವ ಕೆಲಸವನ್ನು ತಾಪಂ ಮಾಡಿದ್ದು, ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಗಿದೆ. ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್‌. ಜಯಂತ್‌ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರಕ್ಕೆ ಆಗ್ರಹ ಮಂಡಿಸುವ ಕೆಲಸ ಮಾಡಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಅಡಕೆ ಕೊಳೆ ರೋಗ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಇತ್ತೀಚಿನ ದಿನಗಳಲ್ಲಿ ರೈತರು 30 ದಿನಗಳ ಅವಧಿಯಲ್ಲಿ ಎರಡೆರಡು ಬಾರಿ ಬೋರ್ಡೊ ಸಿಂಪಡನೆ ಮಾಡಿಯೂ ಕೊಳೆ ಬಂದಿದೆ. ಅಡಕೆ ಸಂಶೋಧನಾ ಕೇಂದ್ರ ಕೊಳೆ ರೋಗವನ್ನು ಗಂಭೀರವಾಗಿಯೇ ಪರಿಗಣಿಸಿಲ್ಲ. ಮಳೆಗಾಲದ ಸಂದರ್ಭದಲ್ಲಿ ಮಣ್ಣಿನಲ್ಲಿ ಅಗತ್ಯ ಪೋಷಕಾಂಶಗಳ ಕೊರತೆಯಾಗಿ ಕೊಳೆ ರೋಗ ಬರುತ್ತದೆಯೇ ಎಂಬುದು ಕೂಡ ಸಂಶೋಧನೆಯಾಗಬೇಕು. ಈ ಕೃಷಿ ವಿಜ್ಞಾನಿಗಳು ತೋಟಗಳಲ್ಲಿ ಪರಿಶೀಲನೆ ಮಾಡಿ, ಮಣ್ಣು ಪರೀಕ್ಷೆ ವರದಿ ಮೊದಲಾದ ಆಧಾರಗಳ ಮೂಲಕ ಪರಿಣಾಮಕಾರಿ ಸಲಹೆ ನೀಡಬೇಕಾಗಿದೆ ಎಂದು ಕೃಷಿಕ ಜಯಪ್ರಕಾಶ್‌ ಗೋಳಿಕೊಪ್ಪ ಪ್ರತಿಪಾದಿಸಿದರು.

ಟಾಪ್ ನ್ಯೂಸ್

ಮಣಿಪುರ ಹಿಂಸಾಚಾರಕ್ಕೆ ವರ್ಷ; ಕುಕಿ ಪತ್ನಿ, ಮೈತೇಯಿ ಪತಿ ವರ್ಷದಿಂದ ಭೇಟಿ ಇಲ್ಲ!

ಮಣಿಪುರ ಹಿಂಸಾಚಾರಕ್ಕೆ ವರ್ಷ; ಕುಕಿ ಪತ್ನಿ, ಮೈತೇಯಿ ಪತಿ ವರ್ಷದಿಂದ ಭೇಟಿ ಇಲ್ಲ!

ಅನ್ಯ ರಾಜ್ಯದ ಅಪರಿಚಿತ ಶಸ್ತ್ರಧಾರಿಗಳಿಂದ ಜೀವಬೆದರಿಕೆ: ಕಾಂಗ್ರೆಸ್ ವಿಪ ಸದಸ್ಯ ಸುನೀಲಗೌಡ

ಅನ್ಯ ರಾಜ್ಯದ ಅಪರಿಚಿತ ಶಸ್ತ್ರಧಾರಿಗಳಿಂದ ಜೀವಬೆದರಿಕೆ: ಕಾಂಗ್ರೆಸ್ ವಿಪ ಸದಸ್ಯ ಸುನೀಲಗೌಡ

Stock Market: ಆರಂಭಿಕ ವಹಿವಾಟಿನಲ್ಲಿ ಮುಗ್ಗರಿಸಿದ ಷೇರುಪೇಟೆ ಸೆನ್ಸೆಕ್ಸ್;‌ ಭಾರೀ ನಷ್ಟ

Stock Market: ಆರಂಭಿಕ ವಹಿವಾಟಿನಲ್ಲಿ ಮುಗ್ಗರಿಸಿದ ಷೇರುಪೇಟೆ ಸೆನ್ಸೆಕ್ಸ್;‌ ಭಾರೀ ನಷ್ಟ

Pendrive Case; ನಿರೀಕ್ಷಣಾ ಜಾಮೀನು ಅರ್ಜಿ ವಾಪಾಸ್ ಪಡೆದ ರೇವಣ್ಣ

Pendrive Case; ನಿರೀಕ್ಷಣಾ ಜಾಮೀನು ಅರ್ಜಿ ವಾಪಾಸ್ ಪಡೆದ ರೇವಣ್ಣ

Kantara-Chapter 1: 600 ಮಂದಿ ಬಡಗಿಗಳು, ಕಳರಿಪಯಟ್ಟು ಕಲಾವಿದರು; ಬೃಹತ್ ಸೆಟ್ ನಿರ್ಮಾಣ

Kantara-Chapter 1: 600 ಮಂದಿ ಬಡಗಿಗಳು, ಕಳರಿಪಯಟ್ಟು ಕಲಾವಿದರು; ಬೃಹತ್ ಸೆಟ್ ನಿರ್ಮಾಣ

7-bng-crime

Bengaluru: ವಿವಾಹಕ್ಕೆ ಒಪ್ಪದ ಮಹಿಳೆ ಮನೆಗೆ ಬೆಂಕಿ ಹಚ್ಚಿದ

Helicopter Crash: ಹೆಲಿಕಾಪ್ಟರ್ ಪತನ… ಕೂದಲೆಳೆಯ ಅಂತರದಲ್ಲಿ ಪಾರಾದ ಶಿವಸೇನಾ ಉಪನಾಯಕಿ

Helicopter Crash: ಹೆಲಿಕಾಪ್ಟರ್ ಪತನ… ಕೂದಲೆಳೆಯ ಅಂತರದಲ್ಲಿ ಪಾರಾದ ಶಿವಸೇನಾ ಉಪನಾಯಕಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಾಯಿತ್ರಿ ಸಿದ್ದೇಶ್ವರ ಪರ ಯದುವೀರ್ ಒಡೆಯರ್ ರೋಡ್ ಶೋ

Davanagere; ಗಾಯಿತ್ರಿ ಸಿದ್ದೇಶ್ವರ ಪರ ಯದುವೀರ್ ಒಡೆಯರ್ ರೋಡ್ ಶೋ

8-

KEA ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ವಿರುದ್ದ ತನಿಖೆಗೆ ಆಗ್ರಹ

ಅನ್ಯ ರಾಜ್ಯದ ಅಪರಿಚಿತ ಶಸ್ತ್ರಧಾರಿಗಳಿಂದ ಜೀವಬೆದರಿಕೆ: ಕಾಂಗ್ರೆಸ್ ವಿಪ ಸದಸ್ಯ ಸುನೀಲಗೌಡ

ಅನ್ಯ ರಾಜ್ಯದ ಅಪರಿಚಿತ ಶಸ್ತ್ರಧಾರಿಗಳಿಂದ ಜೀವಬೆದರಿಕೆ: ಕಾಂಗ್ರೆಸ್ ವಿಪ ಸದಸ್ಯ ಸುನೀಲಗೌಡ

7-bng-crime

Bengaluru: ವಿವಾಹಕ್ಕೆ ಒಪ್ಪದ ಮಹಿಳೆ ಮನೆಗೆ ಬೆಂಕಿ ಹಚ್ಚಿದ

Lok Sabha Polls: ಕಾಗೆ ಮಾತು ಕಾಂಗ್ರೆಸ್‌ನ ಮನಸ್ಥಿತಿ: ಬಿ.ವೈ.ರಾಘವೇಂದ್ರ

Lok Sabha Polls: ಕಾಗೆ ಮಾತು ಕಾಂಗ್ರೆಸ್‌ನ ಮನಸ್ಥಿತಿ: ಬಿ.ವೈ.ರಾಘವೇಂದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Thomas Cup: ಬ್ಯಾಡ್ಮಿಂಟನ್‌; ಭಾರತದ ಆಟಕ್ಕೆ ತೆರೆ

Thomas Cup: ಬ್ಯಾಡ್ಮಿಂಟನ್‌; ಭಾರತದ ಆಟಕ್ಕೆ ತೆರೆ

ಮಣಿಪುರ ಹಿಂಸಾಚಾರಕ್ಕೆ ವರ್ಷ; ಕುಕಿ ಪತ್ನಿ, ಮೈತೇಯಿ ಪತಿ ವರ್ಷದಿಂದ ಭೇಟಿ ಇಲ್ಲ!

ಮಣಿಪುರ ಹಿಂಸಾಚಾರಕ್ಕೆ ವರ್ಷ; ಕುಕಿ ಪತ್ನಿ, ಮೈತೇಯಿ ಪತಿ ವರ್ಷದಿಂದ ಭೇಟಿ ಇಲ್ಲ!

ಗಾಯಿತ್ರಿ ಸಿದ್ದೇಶ್ವರ ಪರ ಯದುವೀರ್ ಒಡೆಯರ್ ರೋಡ್ ಶೋ

Davanagere; ಗಾಯಿತ್ರಿ ಸಿದ್ದೇಶ್ವರ ಪರ ಯದುವೀರ್ ಒಡೆಯರ್ ರೋಡ್ ಶೋ

8-

KEA ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ವಿರುದ್ದ ತನಿಖೆಗೆ ಆಗ್ರಹ

ಅನ್ಯ ರಾಜ್ಯದ ಅಪರಿಚಿತ ಶಸ್ತ್ರಧಾರಿಗಳಿಂದ ಜೀವಬೆದರಿಕೆ: ಕಾಂಗ್ರೆಸ್ ವಿಪ ಸದಸ್ಯ ಸುನೀಲಗೌಡ

ಅನ್ಯ ರಾಜ್ಯದ ಅಪರಿಚಿತ ಶಸ್ತ್ರಧಾರಿಗಳಿಂದ ಜೀವಬೆದರಿಕೆ: ಕಾಂಗ್ರೆಸ್ ವಿಪ ಸದಸ್ಯ ಸುನೀಲಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.