ಪ್ರೊ ಕಬಡ್ಡಿ: ಡೆಲ್ಲಿ-ಬೆಂಗಾಲ್ ಫೈನಲ್ ಕಾಳಗ
Team Udayavani, Oct 17, 2019, 6:00 AM IST
ಅಹ್ಮದಾಬಾದ್: ಲೀಗ್ ಹಂತದ ಮೊದಲೆರಡು ಸ್ಥಾನ ಅಲಂಕರಿಸಿದ ದಬಾಂಗ್ ಡೆಲ್ಲಿ ಮತ್ತು ಬೆಂಗಾಲ್ ವಾರಿಯರ್ 7ನೇ ಪ್ರೊ ಕಬಡ್ಡಿ ಪಂದ್ಯಾವಳಿಯ ಪ್ರಶಸ್ತಿ ಕಾಳಗಕ್ಕೆ ಅಣಿಯಾಗಿವೆ. ಯಾರೇ ಗೆದ್ದರೂ ಮೊದಲ ಸಲ ಚಾಂಪಿಯನ್ ಆಗಿ ಹೊರಹೊಮ್ಮಲಿವೆ.
ಬುಧವಾರ ನಡೆದ ಸೆಮಿಫೈನಲ್ ಮುಖಾ ಮುಖೀಯಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ಪರಾಭವಗೊಂಡವು. ಮೊದಲ ಸೆಣಸಾಟದಲ್ಲಿ ದಬಾಂಗ್ ಡೆಲ್ಲಿ 44-38 ಅಂತರದಿಂದ ಬುಲ್ಸ್ ತಂಡವನ್ನು ಕೆಡವಿತು. ಅನಂತರದ ರೋಚಕ ಮುಖಾಮುಖೀಯಲ್ಲಿ ಬೆಂಗಾಲ್ 37-35 ಅಂಕಗಳಿಂದ ಮುಂಬಾವನ್ನು ಮನೆಗಟ್ಟಿತು.
ಪವನ್ ಹೋರಾಟ ವ್ಯರ್ಥ
ಪವನ್ ಸೆಹ್ರಾವತ್ (18 ರೈಡಿಂಗ್ ಅಂಕ) ಪ್ರಚಂಡ ರೈಡಿಂಗ್ ಪ್ರದರ್ಶಿಸಿದರು. ಬೆಂಗಳೂರು ಬುಲ್ಸ್ ತಂಡವನ್ನು ಗೆಲ್ಲಿಸುವ ಎಲ್ಲ ಪ್ರಯತ್ನ ನಡೆಸಿದರು. ಮತ್ತೂಮ್ಮೆ ವನ್ ಮ್ಯಾನ್ ಆರ್ಮಿಯಾಗಿ ಮಿಂಚಿದರು. ಡೆಲ್ಲಿಗೆ ಕಬ್ಬಿಣದ ಕಡಲೆಯಾದರು. ಆದರೆ ಉಳಿದ ಆಟಗಾರರು ಕಳಪೆ ಆಟವಾಡಿದರು.
ಬುಲ್ಸ್ಗೆ ತಿವಿದ ನವೀನ್, ಚಂದ್ರನ್
ಡೆಲ್ಲಿ ತನ್ನ ಸಾಮರ್ಥ್ಯವನ್ನು ಪಣಕ್ಕಿಟ್ಟು ಆಡಿತು. ನವೀನ್ ಕುಮಾರ್ (15 ರೈಡಿಂಗ್ ಅಂಕ) ಹಾಗೂ ಚಂದ್ರನ್ ರಂಜಿತ್ (9 ಆಲ್ರೌಂಡರ್ ಅಂಕ) ಭರ್ಜರಿ ಪ್ರದರ್ಶನವಿತ್ತರು.
ನವೀನ್ ಕುಮಾರ್ 22 ರೈಡಿಂಗ್ ಮಾಡಿದರು. 13 ಟಚ್ ಪಾಯಿಂಟ್ ಜತೆಗೆ 2 ಬೋನಸ್ ಅಂಕವನ್ನೂ ತಂದಿತ್ತರು. ಅವರಿಗೆ ಮತ್ತೂಂದು ತುದಿಯಲ್ಲಿ ಚಂದ್ರನ್ ರಂಜಿತ್ ಆಲ್ರೌಂಡ್ ಆಟದ ಮೂಲಕ ನೆರವು ನೀಡಿದರು.
ಉಳಿದಂತೆ ವಿಜಯ್ (3 ಅಂಕ), ರವೀಂದರ್ ಪಹಾಲ್ (3 ಟ್ಯಾಕಲ್ ಅಂಕ), ಜೋಗಿಂದರ್ ನರ್ವಾಲ್ (3 ಟ್ಯಾಕಲ್ ಅಂಕ) ಗೆಲುವಿಗಾಗಿ ಶ್ರಮಿಸಿದರು.
ಪವನ್ ಏಕಾಂಗಿ ಹೋರಾಟ
ಹಾಲಿ ಚಾಂಪಿಯನ್ಸ್ ಬುಲ್ಸ್ಗೆ ಪವನ್ ಸೆಹ್ರಾವತ್ ಎಂಬ ಬೆಂಕಿ ಬಿರುಗಾಳಿಯ ರೈಡರ್ ಪ್ರಮುಖ ಶಕ್ತಿಯಾಗಿದ್ದರು. ನಿರೀಕ್ಷೆಯಂತೆ ಅವರು ಅದ್ಭುತ ರೈಡಿಂಗ್ ಪ್ರದರ್ಶಿಸಿದರು.
ರಕ್ಷಣಾ ವಿಭಾಗದಲ್ಲಿ ಅನುಭವಿಸಿದ ಭಾರೀ ವೈಫಲ್ಯ ಬೆಂಗಳೂರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು.
ಮಹೇಂದರ ಸಿಂಗ್ (2 ಟ್ಯಾಕಲ್ ಅಂಕ), ಸೌರಭ್ ನಂದಲ್ (2 ಟ್ಯಾಕಲ್ ಅಂಕ) ಹಾಗೂ ಅಂಕಿತ್ (0) ವೈಫಲ್ಯ ತಂಡವನ್ನು ಸೋಲಿನ ಸುಳಿಗೆ ಸಿಲುಕಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL;ಇಂದು ಆರ್ಸಿಬಿ ಎದುರಾಳಿ ಗುಜರಾತ್ ಟೈಟಾನ್ಸ್:ಪ್ಲೇಆಫ್ ಸಾಧ್ಯತೆಗೆ ಗೆಲುವು ಅನಿವಾರ್ಯ
England; 20 ವರ್ಷದ ಕ್ರಿಕೆಟಿಗ ನಿಗೂಢ ಸಾವು!
IPL; ವಾಂಖೇಡೆಯಲ್ಲಿ ಬೌಲರ್ಗಳ ಮೇಲುಗೈ: ಮುಂಬೈ ವಿರುದ್ಧ ಕೆಕೆಆರ್ ಜಯಭೇರಿ
Mumbai Indians ನಾಯಕತ್ವ ಕಳೆದುಕೊಂಡ ಬಗ್ಗೆ ಮೊದಲ ಬಾರಿ ಮಾತನಾಡಿದ ರೋಹಿತ್
ICC Men’s Test Team Rankings; ಎರಡನೇ ಸ್ಥಾನಕ್ಕೆ ಜಾರಿದ ಟೀಂ ಇಂಡಿಯಾ
MUST WATCH
ಹೊಸ ಸೇರ್ಪಡೆ
ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನ… ಅತ್ಯಾಚಾರ ಆರೋಪಿ ಕಾಲಿಗೆ ಗುಂಡೇಟು
Bihar: 2025ರ ಚುನಾವಣೆಗೂ ಮುನ್ನ ಬಿಜೆಪಿಯಿಂದ 10 ಲಕ್ಷ ಸರ್ಕಾರಿ ಉದ್ಯೋಗದ ಭರವಸೆ
Nijjar Case: ಭಯೋತ್ಪಾದಕ ನಿಜ್ಜರ್ ಹತ್ಯೆ ಪ್ರಕರಣ: ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ
Puttur ಅಡಿಕೆಗೂ ಬಿಸಿಲ ತಾಪ: ಉದುರುತ್ತಿವೆ ನಳ್ಳಿ! ಶೇ. 50ರಷ್ಟು ಫಸಲು ನಷ್ಟದ ಭೀತಿ
ಸಿಆರ್ಝಡ್ ಮರಳು ಇನ್ನು ಸದ್ಯಕ್ಕೆ ಮರೀಚಿಕೆ