ತುಂತುರು ಮಳೆಗೆ ನೆಲಕ್ಕೊರಗಿದ ಭತ್ತ
3-4 ದಿನದಿಂದ ಮೋಡ ಕವಿದ ವಾತಾವರಣ ಹತ್ತಿ-ಜೋಳ-ಕಡ್ಲಿ ಬೆಳೆಗೆ ಕೀಟ ಬಾಧೆ
Team Udayavani, Dec 4, 2019, 12:46 PM IST
ಚಂದ್ರಶೇಖರ ಯರದಿಹಾಳ
ಸಿಂಧನೂರು: ತಾಲೂಕಿನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮೋಡ ಮುಸುಕಿದ ವಾತಾವರಣ ಮತ್ತು ಆಗಾಗ ತುಂತುರು ಮಳೆ ಸುರಿಯುತ್ತಿದ್ದು ಭತ್ತ, ತೊಗರಿ, ಕಡ್ಲಿ ಸೇರಿ ವಿವಿಧ ಬೆಳೆ ಬೆಳೆದ ರೈತರು ಬೆಳೆ ರಕ್ಷಣೆಗಾಗಿ ಪರದಾಡುವಂತಾಗಿದೆ.
ತಾಲೂಕಿನ ನೀರಾವರಿ ಆಶ್ರಿತ ಪ್ರದೇಶಗಳಾದ ಜವಳಗೇರಾ, ಪಗಡದಿನ್ನಿ, ಹಂಚಿನಾಳ ಕ್ಯಾಂಪ್, ಸಿಂಗಾಪುರ, ಮುಕ್ಕುಂದಾ, ಆಯನೂರು, ಧಡೇಸಗೂರು, ಕೆಂಗಲ್, ಸಾಲಗುಂದಾ, ಹೆಡಗಿನಾಳ, ಹುಡಾ ಸೇರಿದಂತೆ ಇತರೆಡೆಗಳಲ್ಲಿ ಕಟಾವಿಗೆ ಬಂದಂತಹ ಭತ್ತವು ನೆಲಕ್ಕುರುಳುವಂತಾಗಿದ್ದು, ರೈತರ ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ಸ್ಥಿತಿ ನಿರ್ಮಾಣವಾಗಿದೆ.
ಇನ್ನು ಒಣ ಬೇಸಾಯದ ಪ್ರದೇಶಗಳಾದ ಕಲ್ಮಂಗಿ, ಹತ್ತಿಗುಡ್ಡ, ಹಿರೇಬೇರ್ಗಿ, ಚಿಕ್ಕಬೇರ್ಗಿ, ಸಂಕನಾಳ, ಬಪ್ಪೂರು, ಗುಡಗಲದಿನ್ನಿ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಹಿಂಗಾರಿನಲ್ಲಿ ತೊಗರಿ, ಕಡ್ಲಿ, ಹತ್ತಿ, ಜೋಳ ಇತರೆ ಬೆಳೆಯಲಾಗಿದೆ. ಈಗ ಮೋಡ ಮುಸುಕಿದ ವಾತಾವರಣ ಮತ್ತು ಅಕಾಲಿಕ ಮಳೆಯಿಂದಾಗಿ ಈ ಬೆಳೆಗಳಿಗೆ ಕೀಟಬಾಧೆ ತಗಲುವಂತಾಗಿದೆ. ತುಂತುರು ಮಳೆಗೆ ಕಡ್ಲಿ, ತೊಗರಿ, ಹತ್ತಿ ಉದುರುವಂತಾಗಿದೆ.
ಕಡ್ಲಿ ಬೆಳೆ ಹುಳಿ ಕಳೆದುಕೊಳ್ಳುವಂತಾಗಿರುವುದು ರೈತರನ್ನು ಚಿಂತೆಗೀಡು ಮಾಡಿದೆ. ನಾಲ್ಕೈದು ವರ್ಷಗಳಿಂದ ಮಳೆ ಇಲ್ಲದೇ ಹಾಗೂ ಕಾಲುವೆಗೆ ನೀರಿಲ್ಲದೆ ರೈತರು ಕಂಗಾಲಾಗಿದ್ದರು. ಮುಂಗಾರಿನಲ್ಲಿ ತಡವಾಗಿಯಾದರೂ ಉತ್ತಮ ಮಳೆ ಆಗಿದೆ. ಜೊತೆಗೆ ಕಾಲುವೆಗೆ ನೀರು ಹರಿಬಿಡಲಾಗಿದೆ. ಈ ಬಾರಿಯಾದರೂ ಉತ್ತಮ ಬೆಳೆ ಬೆಳೆಯಬೇಕೆಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಇದೀಗ ಸುರಿಯುತ್ತಿರುವ ಅಕಾಲಿಕ ಮಳೆ ಸಂಕಷ್ಟ ತಂದೊಡ್ಡಿದೆ.
ಅಕಾಲಿಕ ತುಂತುರು ಮಳೆಯಿಂದಾಗಿ ಕಾಳುಕಟ್ಟಿದ ಭತ್ತದ ಬೆಳೆ ನೆಲಕ್ಕೆ ಉರುಳುತ್ತಿದೆ. ಹಿಂಗಾರು ಕಡಲೆ ಬೆಳೆಗೆ ಹುಳಿ ಕಳೆದುಕೊಳ್ಳುತ್ತಿದೆ. ಹೂವು, ಮಗ್ಗು ಉದುರುತ್ತಿದೆ. ಇದರಿಂದ ರೈತರು ಸಂಕಷ್ಟ ಅನುಭವಿಸುವಂತಾಗಿದೆ.
ರವಿಗೌಡ ಮಲ್ಲದಗುಡ್ಡ,
ರೈತ ಮುಖಂಡ
ಕಳೆದ ಮೂರ್ನಾಲ್ಕು ದಿನಗಳಿಂದ ವಾತಾವರಣದಲ್ಲಿ ಏರುಪೇರಾಗಿದೆ. ಸ್ವಲ್ಪ ಪ್ರಮಾಣದಲ್ಲಿ ಚಂಡ ಮಾರುತದ ಬಿಸಿ ತಟ್ಟಿದೆ. ಈಗಾಗಲೇ ಕೆಲವು ಕಡೆ ರೈತರು ಭತ್ತ ಕಟಾವು ಮಾಡಿದ್ದಾರೆ. ಇನ್ನೂ ಕೆಲ ರೈತರು ಈ ವಾತಾವರಣಕ್ಕೆ ಭತ್ತ ಕಟಾವು ಮಾಡದಂತಾಗಿದೆ. ಇಂತಹ ವಾತಾವರಣದಿಂದ ಯಾವುದೇ ತೊಂದರೆ ಆಗದು.
ಜಯಪ್ರಕಾಶ ದೇಸಾಯಿ,
ಕೃಷಿ ಇಲಾಖೆ ಅಧಿಕಾರಿ ಸಿಂಧನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur; ಅಣ್ಣಾಮಲೈ ಸೆಲ್ಫಿಗಾಗಿ ನೂಕುನುಗ್ಗಲು: ವೇದಿಕೆಯಲ್ಲೇ ಲಾಠಿ ಬೀಸಿದ ಪೊಲೀಸರು
Kalaburagi Lok Sabha Constituency: ಖರ್ಗೆಗೆ ಪ್ರತಿಷ್ಠೆಯ ಕಣ: ಜಾಧವ್ ಏಕಾಂಗಿ ಫೈಟ್
Prajwal Revanna Case; ರೆಕಾರ್ಡ್ ಸ್ಪೀಡ್ನಲ್ಲಿ ತನಿಖೆ ನಡೆಸಲಿ: ಅಣ್ಣಾಮಲೈ
Belgaum Lok Sabha Constituency: ಅನುಭವದ ರಾಜಕಾರಣಕ್ಕೆ ಯುವ ಮುಖದ ಸವಾಲು
Hubli; ಕೇರಳ ಮಾದರಿಯಲ್ಲಿ ರಾಜ್ಯದಲ್ಲಿ ಸರ್ಕಾರ ನಡೆಯುತ್ತಿದೆ: ವಿಜಯೇಂದ್ರ ಆರೋಪ
MUST WATCH
ಹೊಸ ಸೇರ್ಪಡೆ
Raichur; ಅಣ್ಣಾಮಲೈ ಸೆಲ್ಫಿಗಾಗಿ ನೂಕುನುಗ್ಗಲು: ವೇದಿಕೆಯಲ್ಲೇ ಲಾಠಿ ಬೀಸಿದ ಪೊಲೀಸರು
MIvsKKR; ಹಲವು ಪ್ರಶ್ನೆಗಳಿವೆ, ಆದರೆ…: ಎಂಟನೇ ಸೋಲಿನ ಬಳಿಕ ಹಾರ್ದಿಕ್ ಪಾಂಡ್ಯ ಹೇಳಿದ್ದೇನು?
ಅರವಿಂದ್ ಕೇಜ್ರಿವಾಲ್ಗೆ ಮಧ್ಯಂತರ ಜಾಮೀನು? ಸುಪ್ರೀಂ ಸುಳಿವು
ಬಿಗ್ಬಾಸ್ ವಿಜೇತ ಎಲ್ವಿಶ್ ಯಾದವ್ ವಿರುದ್ಧ ಅಕ್ರಮ ವರ್ಗಾವಣೆ ಕೇಸ್ ದಾಖಲಿಸಿದ ಇ.ಡಿ
T20 World Cup; ಅಮೆರಿಕ ತಂಡದಲ್ಲಿ ಮೂಡಿಗೆರೆಯ ನಾಸ್ತುಷ್ ಕೆಂಜಿಗೆಗೆ ಸ್ಥಾನ