ಸರ್ಕಾರಿ ಭೂಮಿ ಅಕ್ರಮ ಕಬಳಿಕೆ; ಒಂದೇ ಆಸ್ತಿ ಮೂವರಿಗೆ ಮಾರಾಟ!
ಯಾದಗಿರಿ ಜಿಲ್ಲೆ ಕಕ್ಕೇರಾ ಪುರಸಭೆ ವ್ಯಾಪ್ತಿಯಲ್ಲಿ ಅಪರಾ ತಪರಾ
Team Udayavani, Jan 6, 2020, 12:42 PM IST
ಕಕ್ಕೇರಾ: ಪಟ್ಟಣದ ಪುರಸಭೆ ವ್ಯಾಪ್ತಿಯ ಸರ್ಕಾರಿ ಆಸ್ತಿ ಅಕ್ರಮವಾಗಿ ಭೂ ಕಬಳಿಕೆ ಮಾಡಿಕೊಂಡು ಒಂದೇ ಆಸ್ತಿಯನ್ನು ಮೂರು ಜನರಿಗೆ ಮಾರಾಟ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಶಾಂತಪುರ-ಬಲಶೆಟ್ಟಿಹಾಳ ಮತ್ತು ಹುಣಸಗಿ ಮುಖ್ಯರಸ್ತೆಯ ಹಳೆ ಗ್ರಾಪಂ ಕಾರ್ಯಾಲಯ, ಸರ್ವೇ ನಂಬರ್ 229ರಲ್ಲಿ 2.26 ಗುಂಟೆ ವಿಸ್ತೀರ್ಣದ ಸರ್ಕಾರಿ ಜಮೀನು ಅಕ್ರಮವಾಗಿಸಿಕೊಂಡು ಬರಲಾಗಿದೆ. ಇದನ್ನು ತಡೆ ಹಿಡಿಯುವಲ್ಲಿ ಅಧಿಕಾರಿಗಳು ನಿಷ್ಕಾಳಜಿ ತೋರಿದ್ದಾರೆಂದು ಪುರಸಭೆ ಉಪಾಧ್ಯಕ್ಷೆ ಮಲ್ಲಮ್ಮ ಪಿ.ಮ್ಯಾಗೇರಿ ಹಾಗೂ ಸದಸ್ಯ ಶರಣಕುಮಾರ ಸೊಲ್ಲಾಪುರ ಆರೋಪಿಸಿದ್ದಾರೆ.
ಇದೇ ಸರ್ವೇ ನಂಬರ್ನಲ್ಲಿ ಹಳೆ ಗ್ರಾಪಂ ಕಾರ್ಯಾಲಯ, ವಿಎಸ್ಎಸ್ಎನ್ ಕಟ್ಟಡ, ವಾಲ್ಮೀಕಿ ಭವನ, ಸಂತೆ ಮಾರುಕಟ್ಟೆ ಸೇರಿದಂತೆ ಪುರಸಭೆ ನೂತನ ವಾಣಿಜ್ಯ ಮಳಿಗೆಗಳಿವೆ. ಅಲ್ಲದೆ ಖಾಸಗಿ ವ್ಯಕ್ತಿಗಳಿಂದ ಅಕ್ರಮ ಕಟ್ಟಡಗಳು ನಿರ್ಮಾಣವಾಗುತ್ತಿವೆ. ಆದರೂ ಅ ಧಿಕಾರಿಗಳು ಗಮನ ಹರಿಸುತ್ತಿಲ್ಲವೆಂದು ದೂರಿದ್ದಾರೆ.
ಕರ್ನಾಟಕ ಲ್ಯಾಂಡ್ಗ್ರ್ಯಾಂಟ್ ಆ್ಯಕ್ಟ್ 1969, 18 ಸಬ್ ರೂಲ್ ಎ.ಬಿ.ಸಿಯಲ್ಲಿ ಹೇಳಿರುವ ಪ್ರಕಾರ ವಾಸಿಸಲಿಕ್ಕೆ ಮಂಜೂರಾತಿ ಪಡೆದ ಸರ್ಕಾರಿ ಜಾಗವನ್ನು ಐದು ವರ್ಷದವರೆಗೆ ಬಾಡಿಗೆ ನೀಡುವಂತಿಲ್ಲ. ಜಿಲ್ಲಾ ಧಿಕಾರಿಗಳ ಪೂರ್ವಾನುಮತಿ ಇಲ್ಲದೆ 15 ವರ್ಷದೊಳಗೆ ಆಸ್ತಿ ಮಾರಾಟ ಮಾಡುವಂತಿಲ್ಲ. ಸಬ್ ರೂಲ್ ಡಿ. ಅನ್ವಯ ಉದ್ದೇಶಿತ ಸರ್ಕಾರಿ ಆಸ್ತಿಯನ್ನು ಮಂಜೂರಾತಿ ಪಡೆದವರು ನಿಯಮಗಳನ್ನು ಉಲ್ಲಂಘಿಸಿದರೆ, ಸ್ವತಃ ಜಿಲ್ಲಾ ಧಿಕಾರಿಗಳು ನಿರ್ಮಾಣಗೊಂಡ ಅನಧಿಕೃತ ಕಟ್ಟಡಗಳನ್ನು ಯಾವುದೇ ಪರಿಹಾರ ನೀಡದೇ ತೆರವುಗೊಳಿಸುವ ಮೂಲಕ ಈ ಆಸ್ತಿ ವಶಪಡಿಸಿಕೊಳ್ಳಬಹುದಾಗಿದೆ. ವ್ಯವಸ್ಥೆ ಹೀಗಿರುವಾಗ ಜಿಲ್ಲಾ ಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೇಂದ್ರದಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ದನಿ ಎತ್ತಲು ಕಾಂಗ್ರೆಸ್ ಗೆಲ್ಲಿಸಿ: ರಾಮಲಿಂಗಾರೆಡ್ಡಿ
Borewell: ಬರದ ಮಧ್ಯೆ ಜಲಮಂಡಳಿ ಕೊರೆಸಿದ ಶೇ.90 ಬೋರ್ಗಳು ಸಕ್ಸಸ್
Davanagere; ಗಾಯಿತ್ರಿ ಸಿದ್ದೇಶ್ವರ ಪರ ಯದುವೀರ್ ಒಡೆಯರ್ ರೋಡ್ ಶೋ
KEA ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ವಿರುದ್ದ ತನಿಖೆಗೆ ಆಗ್ರಹ
ಅನ್ಯ ರಾಜ್ಯದ ಅಪರಿಚಿತ ಶಸ್ತ್ರಧಾರಿಗಳಿಂದ ಜೀವಬೆದರಿಕೆ: ಕಾಂಗ್ರೆಸ್ ವಿಪ ಸದಸ್ಯ ಸುನೀಲಗೌಡ
MUST WATCH
ಹೊಸ ಸೇರ್ಪಡೆ
ICC Men’s Test Team Rankings; ಎರಡನೇ ಸ್ಥಾನಕ್ಕೆ ಜಾರಿದ ಟೀಂ ಇಂಡಿಯಾ
Lok Sabha Election: ಬೃಜ್ ಭೂಷಣ್ ಸಿಂಗ್ ಬದಲಿಗೆ ಪುತ್ರನಿಗೆ ಟಿಕೆಟ್ ನೀಡಿದ ಬಿಜೆಪಿ
ಕೇಂದ್ರದಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ದನಿ ಎತ್ತಲು ಕಾಂಗ್ರೆಸ್ ಗೆಲ್ಲಿಸಿ: ರಾಮಲಿಂಗಾರೆಡ್ಡಿ
ಲೇಸರ್ ಸಂವಹನ: ಭೂಮಿಗೆ 14 ಕೋಟಿ ಮೈಲು ದೂರದಿಂದ ಸಂದೇಶ ರವಾನೆ
Boeing aircraft: ಬೋಯಿಂಗ್ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್ ಸಾವು