ಕೆಜಿಎಫ್ ಗರುಡನಿಗೆ “ಬಂಪರ್’ ಆಫರ್
Team Udayavani, Mar 10, 2020, 7:02 AM IST
“ಕೆಜಿಎಫ್’ ಚಿತ್ರದಲ್ಲಿ ಗರುಡ ಪಾತ್ರದ ಮೂಲಕ ಬೆಳಕಿಗೆ ಬಂದವರು ರಾಮಚಂದ್ರ ರಾಜು. ಆ ಚಿತ್ರ ಹಿಟ್ ಆಗುತ್ತಿದ್ದಂತೆ ರಾಮಚಂದ್ರ ರಾಜು ಹೆಸರು ಮರೆತು ಹೋಗಿ ಸಿನಿಪ್ರೇಮಿಗಳಲ್ಲಿ ಗರುಡ ಎಂದೇ ಕರೆಯಲ್ಪಡುತ್ತಿದ್ದಾರೆ. ಈಗ ಈ ಗರುಡನಿಗೆ ಬಂಪರ್ ಆಫರ್ ಸಿಕ್ಕಿದೆ. ಈ ಮೂಲಕ ಮತ್ತೂಮ್ಮೆ ತೆರೆಮೇಲೆ ಮಿಂಚಲಿದ್ದಾರೆ.
ಹೌದು, ಗರುಡ ಅವರು ಈಗ “ಬಂಪರ್’ ತಂಡ ಸೇರಿಕೊಂಡಿದ್ದಾರೆ. ಹರಿ ಸಂತೋಷ್ ನಿರ್ದೇಶನದಲ್ಲಿ ಮೂಡಿಬರಲಿರುವ “ಬಂಪರ್’ ಚಿತ್ರದಲ್ಲಿ ವಿಲನ್ ಆಗಿ ಗರುಡ ನಟಿಸಲಿದ್ದಾರೆ. ಖಡಕ್ ವಿಲನ್ ಆಗಿ ಸಿನಿಮಾದುದ್ದಕ್ಕೂ ಸಾಗಿಬರಲಿದ್ದಾರೆ. ಈ ಮೂಲಕ “ಬಂಪರ್’ ಒಂದು ಹೈವೋಲ್ಟೆಜ್ ಆ್ಯಕ್ಷನ್ ಸಿನಿಮಾವಾಗಿ ಮೂಡಿಬರುವುದು ಖಚಿತ.
ಧನ್ವೀರ್ ಈ ಚಿತ್ರದ ನಾಯಕ. ಸುನಿ ನಿರ್ದೇಶನದ “ಬಜಾರ್’ ಚಿತ್ರದ ಮೂಲಕ ಲಾಂಚ್ ಆದ ಧನ್ವೀರ್ ನಾಯಕರಾಗಿರುವ ನಟಿಸುತ್ತಿರುವ ಎರಡನೇ ಚಿತ್ರವಿದು. ಚಿತ್ರವನ್ನು ಸುಪ್ರೀತ್ ನಿರ್ಮಿಸುತ್ತಿದ್ದಾರೆ. ಈ ಹಿಂದೆ “ಭರಾಟೆ’ ಚಿತ್ರ ನಿರ್ಮಿಸಿರುವ ಸುಪ್ರೀತ್ ಈಗ “ಬಂಪರ್’ ನಿರೀಕ್ಷೆಯಲ್ಲಿದ್ದಾರೆ.
ಈ ನಡುವೆಯೇ ಸುಪ್ರೀತ್ ನಿರ್ಮಾಣದಲ್ಲಿ ಗಣೇಶ್ ನಾಯಕರಾಗಿರುವ “ಸಖತ್’ ಚಿತ್ರವೂ ಚಿತ್ರೀಕರಣದಲ್ಲಿದೆ. “ಬಂಪರ್’ ಚಿತ್ರಕ್ಕೆ ಪ್ರಶಾಂತ್ ರಾಜಪ್ಪ ಸಂಭಾಷಣೆ ಇದ್ದು, ಶಿವಸೇನಾ ಅವರ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಅವರ ಸಂಗೀತ, ಕೆ.ಎಂ. ಪ್ರಕಾಶ್ ಸಂಕಲನವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema; ನಮ್ ಜನ, ನಮ್ ಸಿನಿಮಾ… ತಗ್ಗಿದ ಪ್ಯಾನ್ ಇಂಡಿಯಾ ಕ್ರೇಜ್
Kantara-Chapter 1: 600 ಮಂದಿ ಬಡಗಿಗಳು, ಕಳರಿಪಯಟ್ಟು ಕಲಾವಿದರು; ಬೃಹತ್ ಸೆಟ್ ನಿರ್ಮಾಣ
Kangaroo; ಥ್ರಿಲ್ಲರ್ ಹಾದಿಯಲ್ಲಿ ಆದಿತ್ಯ ಹೆಜ್ಜೆ ಗುರುತು
Kannada Cinema; ರಂಗಮಂಟಪ ಸುತ್ತ ‘ರಂಗಸ್ಥಳ’; ಹೊಸ ಚಿತ್ರದ ಟೈಟಲ್ ಲಾಂಚ್
Jasti Preethi; ಫೇಸ್ ಬುಕ್ ಪೋಸ್ಟ್ ಸಿನಿಮಾವಾಯಿತು..
MUST WATCH
ಹೊಸ ಸೇರ್ಪಡೆ
ಈ ಬಾರಿ ಚುನಾವಣೆಯಲ್ಲಿ ಸಂವಿಧಾನದ ಅಳಿವು ಉಳಿವಿನ ಪ್ರೆಶ್ನೆಯಾಗಿದೆ: ಟಿ.ಬಿ.ಜಯಚಂದ್ರ
Hunsur: ಉರುಳು ಹಾಕಿ ಜಿಂಕೆ ಕೊಂದು ಮಾಂಸ ಹೊತ್ತೊಯ್ಯುತ್ತಿದ್ದ ಇಬ್ಬರ ಬಂಧನ
Belagavi; ನೇಹಾ ಹತ್ಯೆ ಪ್ರಕರಣ ಸಿಬಿಐಗೆ ಕೊಡಿ, ಆರೋಪಿಗಳ ತಲೆ ಕೆಳಗೆ ಮಾಡ್ತೀವಿ: ಶಾ ಗುಡುಗು
Campaign: ಮತದಾರರನ್ನು ಸೆಳೆಯಲು ಪ್ಯಾರಾ ಗ್ಲೈಡರ್ ಮೂಲಕ ಅಭಿಯಾನ
Gadag; ಬಿಜೆಪಿಗೆ ಹೆಚ್ಚಿನ ಮತ ಹಾಕಿಸಲು ಪ್ರಕೋಷ್ಠಗಳು ಶ್ರಮಿಸಬೇಕು: ಬಸವರಾಜ ಬೊಮ್ಮಾಯಿ