ದಿನಗೂಲಿ ಕಾರ್ಮಿಕರ ಮೇಲೆ ಪ್ರಹಾರ


Team Udayavani, Mar 23, 2020, 3:10 AM IST

dinaguli

ಬೆಂಗಳೂರು: ಒಂದು ಕಡೆ ಮುಖಗವಸು ಮತ್ತು ಕೈತೊಳೆಯಲು ಸ್ಯಾನಿಟೈಸರ್‌ ಇದೆ. ಮತ್ತೂಂದೆಡೆ ತುತ್ತಿನ ಊಟಕ್ಕೆ ಬೇಕಾದ ದಿನಗೂಲಿ ಇದೆ. ಇವೆರಡರಲ್ಲಿ ನಿಮ್ಮ ಆಯ್ಕೆ ಯಾವುದು ಎಂದು ಕಟ್ಟಡ ಕಾರ್ಮಿಕ ಮುನ್ನಾ ಅವರನ್ನು ಕೇಳಿದಾಗ, ಬಂದ ಉತ್ತರ- ದಿನಗೂಲಿ.

ಇದು ಕೇವಲ ಮುನ್ನಾನ ಆಯ್ಕೆ ಅಲ್ಲ; ಬಹುತೇಕ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ಆಯ್ಕೆಯೂ ಆಗಿದೆ. ಜಗತ್ತು ಈಗ ಆರೋಗ್ಯ ರಕ್ಷಣೆಗೆ ಅಗತ್ಯ ಇರುವ ಮಾಸ್ಕ್ ಮತ್ತು ಸ್ಯಾನಿಟೈಸರ್‌ ಹಿಂದೆಬಿದ್ದಿದೆ. ಆದರೆ, ಕಾರ್ಮಿಕರ ವರ್ಗದ ಮೈಯೆಲ್ಲಾ ಮಣ್ಣಲ್ಲಿ ಕೊಳೆಯಾಗಿದ್ದರೂ ಅದರ ಅರಿವೂ ಇಲ್ಲ.

ಬದಲಿಗೆ ವಾರಗಟ್ಟಲೆ ಊರುಗಳಿಗೇ ಬೀಗ ಹಾಕಲಾಗುತ್ತಿದ್ದು, ಹೊಟ್ಟೆಪಾಡು ಏನು ಎಂಬ ಚಿಂತೆ ಕಾಡುತ್ತಿದೆ. ಸರ್ಕಾರವು ವೇತನ ಸಹಿತ ರಜೆ ನೀಡುವಂತೆ ಹೇಳುತ್ತಿದೆ; ವಾಸ್ತವ ಸ್ಥಿತಿ ದುಡಿದ ಪಗಾರವೂ ಸಿಗುತ್ತಿಲ್ಲ. ಕೋವಿಡ್-19 ವೈರಸ್‌ ತಂದಿಟ್ಟ ಫ‌ಜೀತಿಯ ವಾಸ್ತವ ಇದು.

ಕೈಯಲ್ಲಿ ಕೆಲಸ ಇಲ್ಲ, ಜೇಬಲ್ಲಿ ದುಡ್ಡಿಲ್ಲ, ಕಳೆದೊಂದು ವಾರದಿಂದ ಬಾಯಿಗೆ ಮಾಸ್ಕ್ ಹಾಕಿಕೊಂಡು ಓಡಾಡುತ್ತಿದ್ದೇವೆ. ಮುಂದೆ ಇನ್ನೇನು ಹಾಕಿಕೊಳ್ಳಬೇಕಾಗುತ್ತೋ ತಿಳಿಯುತ್ತಿಲ್ಲ. ಆರೋಗ್ಯ ಮುಖ್ಯ ಇರಬಹುದು. ಆದರೆ, ಬದುಕಲು ಬೇಕಾದ ಸೌಕರ್ಯವೂ ಅಷ್ಟೇ ಮುಖ್ಯ ಎನ್ನುತ್ತಾರೆ ಕಟ್ಟಡ ಕಾರ್ಮಿಕ ಮುನ್ನಾ.

ಅಸಂಘಟಿತ ಕಾರ್ಮಿಕರಿಗೆ ಉದ್ಯೋ ಮತ್ತು ವೇತನದ ಭದ್ರತೆಯಿಲ್ಲ. ಆದರೆ, ಕೋವಿಡ್-19ದಿಂದ ಕೆಲಸದ ಅಭದ್ರತೆಯೂ ಇಲ್ಲದಂತಾಗಿದೆ ಎಂದು ಕೃಷಿ ಕೂಲಿ ಕಾರ್ಮಿಕ ದೂರದ ಕಲಬುರಗಿ ಜಿಲ್ಲೆಯ ಜಂಬಣ್ಣ ಅಲವತ್ತುಕೊಂಡರೆ, “ರಜೆ ಕೊಟ್ಟಿದ್ದಾರೆ, ಆದರೆ ಸಂಬಳ ಇಲ್ಲ.

ಬದುಕಲು ಆರೋಗ್ಯ ನೋಡಬೇಕಾ? ಅಥವಾ ಬದುಕು ನೋಡಬೇಕಾ? ಎಂದು ತೋಚುತ್ತಿಲ್ಲ ಎಂದು ಗಾರ್ಮೆಂಟ್ಸ್‌ ಉದ್ಯೋಗಿ ಕೆಂಪೇಗೌಡ ತಿಳಿಸುತ್ತಾರೆ. ಆರೋಗ್ಯ ಮುಖ್ಯ ಅನ್ನುವುದರಲ್ಲಿ ಎರಡು ಮಾತಿಲ್ಲ. ತಿಂಗಳ ಸಂಬಳವನ್ನೇ ನಂಬಿ ಬದುಕುವ ಅಸಂಘಟಿತ ಕಾರ್ಮಿಕರ ವಿಚಾರದಲ್ಲಿ ವ್ಯವಸ್ಥೆ ಇಷ್ಟೊಂದು ಕಲ್ಲು ಹೃದಯ ಹೊಂದಿರಬಾರದು. ಮೇಲ್ನೋಟಕ್ಕೆ ಎಲ್ಲಾ ಉದ್ಯೋಗದಾತರು ರಜೆ ಕೊಡುತ್ತಿದ್ದಾರೆ.

ಆದರೆ, ವೇತನ ಕೊಡಲು ಒಪ್ಪುತ್ತಿಲ್ಲ. ಕೆಲವರು ಸದ್ಯಕ್ಕೆ ರಜೆ ತೆಗೆದುಕೊಳ್ಳಿ ವೇತನದ ಬಗ್ಗೆ ಯೋಚಿಸೋಣ ಎನ್ನುತ್ತಿದ್ದಾರೆ. ಮತ್ತೆ ಕೆಲವರು ಕೆಲಸಕ್ಕೆ ಗೈರಾದ ಅಷ್ಟೂ ದಿನದ ಸಂಬಳ ಕಟ್‌ ಮಾಡುವುದಾಗಿ ತಿಳಿಸಿದ್ದಾರೆ ಎಂದು ಕಾರ್ಮಿಕ ಮುಖಂಡ ಸತ್ಯಾನಂದ ಮಾಹಿತಿ ನೀಡಿದರು.

ಏನೆಲ್ಲಾ ಸಮಸ್ಯೆಗಳು: ಸಂಘಟಿತ ವಲಯದ ಕೆಲವು ಸಂಸ್ಥೆಗಳು ಬಿಟ್ಟರೆ ಅಸಂಘಟಿತ ವಲಯದ ಬಹುತೇಕ ಕಾರ್ಮಿಕರಿಗೆ ವೇತನರಹಿತ ರಜೆ ನೀಡಲಾಗುತ್ತಿದೆ. ಸಂಬಳ ಇಲ್ಲದಿದ್ದರೆ ಬೆಂಗಳೂರಿ ನಂತಹ ನಗರದಲ್ಲಿ ಬದುಕು ಸಾಗಿಸುವುದು ದುಸ್ತರ.

ಇಂತಹ ಪರಿಸ್ಥಿತಿ ಎಷ್ಟು ದಿನ, ಎಷ್ಟು ತಿಂಗಳು ಇರುತ್ತದೆ ಗೊತ್ತಿಲ್ಲ. ಈ ನಡುವೆ, ಮಾರ್ಚ್‌ ಎರಡನೇ ವಾರದಿಂದ ಈ ಸಮಸ್ಯೆ ಆರಂಭವಾಗಿದೆ. ಹಾಗಾಗಿ, ಮಾರ್ಚ್‌ ತಿಂಗಳ ವೇತನ ಸಿಗುತ್ತೋ ಇಲ್ಲವೋ ಎಂಬ ಆತಂಕ ಕಾಡುತ್ತಿದೆ ಎಂದು ಗಾರ್ಮೆಂಟ್‌ ಉದ್ಯೋಗಿ ರತ್ನಮ್ಮ ಹೇಳುತ್ತಾರೆ.

ಕೋವಿಡ್-19 ವೈರಸ್‌ ಭೀತಿ ಹಿನ್ನೆಲೆಯಲ್ಲಿ ಕಾರ್ಮಿಕ ವಲಯಕ್ಕೆ ಎದುರಾಗಿರುವ ಸಂಕಷ್ಟಗಳನ್ನು ನಿವಾರಿಸಲು ಸರ್ಕಾರ ಮುಂದೆ ಬರಬೇಕು. ಗುತ್ತಿಗೆ ಕಾರ್ಮಿಕರು ಸೇರಿದಂತೆ ಸಾರ್ವಜನಿಕ ಹಾಗೂ ಖಾಸಗಿ ಉದ್ದಿಮೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡಬೇಕು. ಕಾರ್ಮಿಕರ ನೆರವಿಗೆ ವಿಶೇಷ ಪ್ಯಾಕೇಜ್‌ ಘೋಷಿಸಬೇಕು.
ಎಸ್‌, ವರಲಕ್ಷ್ಮಿ, ಸಿಐಟಿಯು ಅಧ್ಯಕ್ಷೆ

* ರಫೀಕ್‌ ಅಹ್ಮದ್‌

ಟಾಪ್ ನ್ಯೂಸ್

Vijayapura ಮರ್ಯಾದಾ ಹತ್ಯೆ: ಇಬ್ಬರಿಗೆ ಗಲ್ಲು,ಐವರಿಗೆ ಜೀವಾವಧಿ ಶಿಕ್ಷೆ

Vijayapura ಮರ್ಯಾದಾ ಹತ್ಯೆ: ಇಬ್ಬರಿಗೆ ಗಲ್ಲು,ಐವರಿಗೆ ಜೀವಾವಧಿ ಶಿಕ್ಷೆ

Dharwad; ವಾರಂಟಿ ಇಲ್ಲದ ಕಾಂಗ್ರೆಸ್ ನ‌ ಗ್ಯಾರಂಟಿ ನಂಬಬೇಡಿ: ಅಣ್ಣಾಮಲೈ

Dharwad; ವಾರಂಟಿ ಇಲ್ಲದ ಕಾಂಗ್ರೆಸ್ ನ‌ ಗ್ಯಾರಂಟಿ ನಂಬಬೇಡಿ: ಅಣ್ಣಾಮಲೈ

Shobha Karandlaje; 60 ವರ್ಷ ದೇಶವನ್ನಾಳಿದ ಕಾಂಗ್ರೆಸ್‌ಗೆ ಪ್ರಧಾನಿ ಅಭ್ಯರ್ಥಿ ಸಿಗ್ತಿಲ್ಲ

Shobha Karandlaje; 60 ವರ್ಷ ದೇಶವನ್ನಾಳಿದ ಕಾಂಗ್ರೆಸ್‌ಗೆ ಪ್ರಧಾನಿ ಅಭ್ಯರ್ಥಿ ಸಿಗ್ತಿಲ್ಲ

1–dsdsadd

Honnavar; ಖಾಸಗಿ ಬಸ್‌ ಪಲ್ಟಿ: 2 ಸಾವು, 45ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

1-qewqeqweqw

CD ಮಾಡುವುದರಲ್ಲಿ ಡಿಕೆಶಿ ನುರಿತವರು: ಬಿಜೆಪಿ ಅಭ್ಯರ್ಥಿ ರಾಜುಗೌಡ ವ್ಯಂಗ್ಯ

1-assas-aa

Rae Bareli ರಣಕಣ; ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ: ಗೆಲುವು ಸುಲಭವೇ?

Water Supply

Water scarcity; ಮಂಗಳೂರು ನಗರಕ್ಕೆ ಎರಡು ದಿನಕ್ಕೊಮ್ಮೆ ನೀರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Borewell: ಬರದ ಮಧ್ಯೆ ಜಲಮಂಡಳಿ ಕೊರೆಸಿದ ಶೇ.90 ಬೋರ್‌ಗಳು ಸಕ್ಸಸ್‌

8-

KEA ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ವಿರುದ್ದ ತನಿಖೆಗೆ ಆಗ್ರಹ

7-bng-crime

Bengaluru: ವಿವಾಹಕ್ಕೆ ಒಪ್ಪದ ಮಹಿಳೆ ಮನೆಗೆ ಬೆಂಕಿ ಹಚ್ಚಿದ

6-

Bengaluru: ವಿಮಾನ ಹಾರಾಟದ ವೇಳೆ ತುರ್ತು ಬಾಗಿಲು ತೆರೆಯಲು ಯತ್ನಿಸಿದ ಯುವಕ ಸೆರೆ

5-fir

Bengaluru: ಠಾಣೆಯಲ್ಲೇ ಮಹಿಳಾ ಪಿಎಸ್‌ಐಗೆ ಕಪಾಳಮೋಕ್ಷ, ಪೊಲೀಸರ ಮೇಲೆ ಹಲ್ಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Vijayapura ಮರ್ಯಾದಾ ಹತ್ಯೆ: ಇಬ್ಬರಿಗೆ ಗಲ್ಲು,ಐವರಿಗೆ ಜೀವಾವಧಿ ಶಿಕ್ಷೆ

Vijayapura ಮರ್ಯಾದಾ ಹತ್ಯೆ: ಇಬ್ಬರಿಗೆ ಗಲ್ಲು,ಐವರಿಗೆ ಜೀವಾವಧಿ ಶಿಕ್ಷೆ

Dharwad; ವಾರಂಟಿ ಇಲ್ಲದ ಕಾಂಗ್ರೆಸ್ ನ‌ ಗ್ಯಾರಂಟಿ ನಂಬಬೇಡಿ: ಅಣ್ಣಾಮಲೈ

Dharwad; ವಾರಂಟಿ ಇಲ್ಲದ ಕಾಂಗ್ರೆಸ್ ನ‌ ಗ್ಯಾರಂಟಿ ನಂಬಬೇಡಿ: ಅಣ್ಣಾಮಲೈ

Shobha Karandlaje; 60 ವರ್ಷ ದೇಶವನ್ನಾಳಿದ ಕಾಂಗ್ರೆಸ್‌ಗೆ ಪ್ರಧಾನಿ ಅಭ್ಯರ್ಥಿ ಸಿಗ್ತಿಲ್ಲ

Shobha Karandlaje; 60 ವರ್ಷ ದೇಶವನ್ನಾಳಿದ ಕಾಂಗ್ರೆಸ್‌ಗೆ ಪ್ರಧಾನಿ ಅಭ್ಯರ್ಥಿ ಸಿಗ್ತಿಲ್ಲ

1–dsdsadd

Honnavar; ಖಾಸಗಿ ಬಸ್‌ ಪಲ್ಟಿ: 2 ಸಾವು, 45ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

accident

Yellapur: ಟಿಪ್ಪರ್ ಗೆ ಢಿಕ್ಕಿಯಾಗಿ ಬೈಕ್ ಸಹಸವಾರೆ ಬಾಲಕಿ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.