ಧರ್ಮಸ್ಥಳದಲ್ಲಿ ನಂದಾದೀಪ ನಂದಿ ಹೋದ ವದಂತಿ; ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸ್ಪಷ್ಟನೆ
Team Udayavani, Mar 27, 2020, 11:45 AM IST
ಧರ್ಮಸ್ಥಳ: ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ನಂದಾದೀಪ ನಂದಿ ಹೋಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹರಿದಾಡುತ್ತಿರುವ ಹಿನ್ನಲೆಯಲ್ಲಿ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಸ್ಪಷ್ಟನೆ ನೀಡಿದ್ದು, ಅಂತಹ ಅಪಪ್ರಚಾರದ ಮಾತುಗಳಿಗೆ ಯಾರೂ ಕಿವಿಕೊಡಬಾರದು ಎಂದು ಮನವಿ ಮಾಡಿದ್ದಾರೆ.
ದೇಗುಲದ ಬಾಗಿಲು ರಾತ್ರಿ 8 ಗಂಟೆಗೆ ಹಾಕಲಾಗುತ್ತದೆ. ಬೆಳಗ್ಗೆ ಐದು ಗಂಟೆಗೆ ಬಾಗಿಲು ತೆರೆಯುತ್ತಾರೆ, ಮಧ್ಯದಲ್ಲಿ ಯಾರು ಪ್ರವೇಶ ಮಾಡುವುದಿಲ್ಲ. ನಂತರ ಪ್ರವೇಶ ಮಾಡಿದವರು ಯಾರು? ನಂದಾದೀಪ ನಂದಿ ಹೋಗಿದನ್ನು ನೋಡಿದ್ದು ಯಾರು? ಇದು ಭಕ್ತರ ಭಾವನೆ, ನಂಬಿಕೆ ಜೊತೆ ಕಿಡಿಗೇಡಿಗಳು ಮಾಡಿದ ಸುಳ್ಳು ವದಂತಿಯಾಗಿದೆ ಎಂದಿದ್ದಾರೆ.
ವದಂತಿಯಿಂದ ದೂರ ಇದ್ದು, ಕೋವಿಡ್-19 ದೂರ ಮಾಡಲು ಮನೆಯಲ್ಲಿ ಮಂಜುನಾಥನಿಗೆ ಪ್ರಾಥನೆ ಮಾಡಿ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಸ್ಪಷ್ಟಪಡಿಸಿದ್ದಾರೆ.