ಕೋವಿಡ್ 19 ವೈರಸ್ ಅದೆಷ್ಟು ಡೇಂಜರ್ ಗೊತ್ತಾ? ಅಮೆರಿಕ ವಿಜ್ಞಾನಿಗಳಿಂದ ಮತ್ತಷ್ಟು ಸಂಶೋಧನೆ
ಇದೀಗ ನೂತನ ಅಧ್ಯಯನವೊಂದರ ಪ್ರಕಾರ ಕೋವಿಡ್ 19 ವೈರಸ್ ಗಾಳಿಯಲ್ಲಿ ಹರಡುವ ಸಾಮರ್ಥ್ಯ ಹೊಂದಿದೆ.
Team Udayavani, Apr 1, 2020, 9:24 AM IST
Representative Image
ನವದೆಹಲಿ:ಮಾರಣಾಂತಿಕ ಕೋವಿಡ್ 19ಗೆ ಸಂಬಂಧಿಸಿದಂತೆ ಹೊಸ ಅಧ್ಯಯನ ವರದಿಗಳು ಬರುತ್ತಲೇ ಇದೆ. ಇದೀಗ ನೂತನ ಅಧ್ಯಯನವೊಂದರ ಪ್ರಕಾರ ಕೋವಿಡ್ 19 ವೈರಸ್ ಗಾಳಿಯಲ್ಲಿ ಹರಡುವ ಸಾಮರ್ಥ್ಯ ಹೊಂದಿದೆ. ಅಷ್ಟೇ ಅಲ್ಲ ಹಲವು ಗಂಟೆಗಳ ಕಾಲ ವಾತಾವರಣದಲ್ಲಿ ಬದುಕಿರುತ್ತದೆ ಎಂದು ತಿಳಿಸಿದೆ.
ಅಮೆರಿಕದ ವಿಜ್ಞಾನಿಗಳು ನಡೆಸಿರುವ ಸಂಶೋಧನೆ ಪ್ರಕಾರ, ಕೋವಿಡ್ 19 ಸೋಂಕು ಪೀಡಿತ ವ್ಯಕ್ತಿ ಕೋಣೆಯನ್ನು ಬಿಟ್ಟು ಹೊರಹೋದ ಮೇಲೆ ಮಾರಣಾಂತಿಕ ಸೋಂಕು ಎಷ್ಟು ಹೊತ್ತು ನಿಧಾನವಾಗಿ ಹರಡಬಲ್ಲದು ಎಂಬ ಅಂಶವನ್ನು ಪತ್ತೆಹಚ್ಚಿರುವುದಾಗಿ ಹೇಳಿದೆ.
ನೆಬ್ರಾಸ್ಕಾ ಯೂನಿರ್ವಸಿಟಿ ಸಂಶೋಧಕರ ಪ್ರಕಾರ, ಕೋವಿಡ್ 19 ಪಾಸಿಟಿವ್ ರೋಗಿಗಳಿರುವ ಆಸ್ಪತ್ರೆಯ ಕೋಣೆಯ ಹೊರಭಾಗ ಹಾಗೂ ಕಾರಿಡಾರ್ ಗಳಲ್ಲಿ ಪತ್ತೆಹಚ್ಚಿರುವುದಾಗಿ ತಿಳಿಸಿದ್ದಾರೆ.
ಸಂಶೋಧಕರ ಪ್ರಕಾರ, ಮಾರಣಾಂತಿಕ ಕೋವಿಡ್ 19 ಸೋಂಕು ಪೀಡಿತರ ಆರೈಕೆ ಮಾಡುವ ಸಿಬ್ಬಂದಿಗಳು, ವೈದ್ಯರು ಸುರಕ್ಷತೆಯ ಬಟ್ಟೆ ಧರಿಸುವುದು ತುಂಬಾ ಮುಖ್ಯ ಎಂದು ವಿವರಿಸಿದ್ದಾರೆ. ಅಲ್ಲದೇ ಈ ಅಧ್ಯಯನದ ಬಗ್ಗೆ ಇನ್ನಷ್ಟೇ ಹಿರಿಯ ವಿಜ್ಞಾನಿಗಳು ಪುನರ್ ವಿಮರ್ಶೆ ನಡೆಸಬೇಕಾಗಿದೆ ಎಂದು ವರದಿ ಹೇಳಿದೆ.
ಕೋವಿಡ್ 19 ಸೋಂಕು ಪೀಡಿತ 11 ರೋಗಿಗಳ ಕೋಣೆಯಲ್ಲಿ ಅಧ್ಯಯನ ನಡೆಸಲಾಗಿತ್ತು. ಈ ಕೋಣೆಯಲ್ಲಿ ಕೋವಿಡ್ ರೋಗಿಗಳನ್ನು ಐಸೋಲೇಶನ್ ನಲ್ಲಿ ಇಡಲಾಗಿತ್ತು. ಹೀಗಾಗಿ ಯಾವುದೇ ಸುರಕ್ಷತಾ ಕ್ರಮ ಅನುಸರಿಸದೇ ಯಾವುದೇ ವ್ಯಕ್ತಿ ಕೋಣೆ ಪ್ರವೇಶಿಸಿದಲ್ಲಿ ಸೋಂಕು ತಗಲುವ ಸಾಧ್ಯತೆ ಹೆಚ್ಚು ಎಂದು ಡೈಲಿ ಮೇಲ್ ವಿವರಿಸಿದೆ.
ನೆಬ್ರಾಸ್ಕಾ ಯೂನಿರ್ವಸಿಟಿಯ ಸಾಂಕ್ರಾಮಿಕ ರೋಗ ತಜ್ಞ, ಲೇಖಕ ಜೇಮ್ಸ್ ಲಾಲೇರ್ ಪ್ರಕಟಣೆಯಲ್ಲಿ, ಈಗಾಗಲೇ ಸೋಂಕು ಪೀಡಿತ ರ ಪ್ರಾಥಮಿಕ ಚಿಕಿತ್ಸೆ ಹಂತದಲ್ಲಿ ನಮ್ಮ ವೈದ್ಯರ ತಂಡ ಗಾಳಿಯಲ್ಲಿ ರೋಗಾಣು ದೇಹ ಪ್ರವೇಶಿಸದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smriti ಇರಾನಿ ಎದುರು ಗೆಲುವು ಅಸಾಧ್ಯ ಎಂದು ಗೊತ್ತಾಗಿದೆ: ರಾಹುಲ್ ಗೆ ಬಿಜೆಪಿ ತಿರುಗೇಟು
Campaign: ಮತದಾರರನ್ನು ಸೆಳೆಯಲು ಪ್ಯಾರಾ ಗ್ಲೈಡರ್ ಮೂಲಕ ಅಭಿಯಾನ
Lok Sabha Election: ಬೃಜ್ ಭೂಷಣ್ ಸಿಂಗ್ ಬದಲಿಗೆ ಪುತ್ರನಿಗೆ ಟಿಕೆಟ್ ನೀಡಿದ ಬಿಜೆಪಿ
ಕಾಂಗ್ರೆಸ್ನಿಂದ ಮತ ಬ್ಯಾಂಕ್ ರಾಜಕಾರಣ; ನೇಹಾ ಹತ್ಯೆ ಲವ್ ಜೆಹಾದ್:ಅಮಿತ್ ಶಾ ಆರೋಪ
ಮಣಿಪುರ ಹಿಂಸಾಚಾರಕ್ಕೆ ವರ್ಷ; ಕುಕಿ ಪತ್ನಿ, ಮೈತೇಯಿ ಪತಿ ವರ್ಷದಿಂದ ಭೇಟಿ ಇಲ್ಲ!
MUST WATCH
ಹೊಸ ಸೇರ್ಪಡೆ
Bommai Interview: “ನೀರಾವರಿ-ಕೈಗಾರಿಕಾ ಬೆಳವಣಿಗೆ ಜೊತೆ ಆರ್ಥಿಕಾಭಿವೃದ್ಧಿಗೆ ಆದ್ಯತೆ’
Prajwal Revanna ಯಾವುದೇ ದೇಶದಲ್ಲಿದ್ದರೂ ಕರೆತರುತ್ತೇವೆ: ಸಿದ್ದರಾಮಯ್ಯ ಕಿಡಿ
Interview: “ಈ ಭಾಗದಲ್ಲಿ ಶಿಕ್ಷಣ-ಉದ್ಯೋಗಕ್ಕೆ ಹೆಚ್ಚು ಆದ್ಯತೆ ನೀಡುವುದು ಅಗತ್ಯ’
Sandalwood; ‘ಕನ್ನಡ ಮಾಧ್ಯಮ’ದಲ್ಲಿ ಹೊಸಬರ ಕನಸು
ಇಂಡಿಯಾ ಒಕ್ಕೂಟಕ್ಕೆ ನಾಯಕರೂ ಇಲ್ಲ, ನೇತೃತ್ವವೂ ಇಲ್ಲ: ಸಿ.ಟಿ ರವಿ