ಎಪಿಎಂಸಿಗೆ ತಂದ ಹಣ್ಣು -ತರಕಾರಿ ಖರೀದಿಸುವರಿಲ್ಲ
ಲಾಕ್ಡೌನ್ನಲ್ಲಿ ತರಕಾರಿ ಸರಬರಾಜಿಗೆ ಅವಕಾಶ | ಬಾರದ ವ್ಯಾಪಾರಿಗಳು | ತಂದ ಮಾಲು ಖರೀದಿಸುತ್ತಿಲ್ಲ ದಲ್ಲಾಳಿಗಳು
Team Udayavani, Apr 8, 2020, 4:50 PM IST
ಹುಬ್ಬಳ್ಳಿ: ಕೊರೊನಾ ವೈರಸ್ ರೈತರ ಪಾಲಿಗೆ ಮಾತ್ರ ಕಣ್ಣೀರು ಸುರಿಸುವಂತೆ ಮಾಡಿದೆ. ಒಂದೆಡೆ ಲಾಕ್ಡೌನ್ನಿಂದ ಸಮಸ್ಯೆಯಾಗಿದ್ದರೆ, ಇನ್ನೊಂದೆಡೆ ತಾವು ಬೆಳೆದ ಬೆಳೆ ಕಣ್ಣೆದುರಲ್ಲೇ ಹಾಳಾಗುತ್ತಿರುವುದನ್ನು ಕಂಡರೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿ ಅನ್ನದಾತರದ್ದಾಗಿದೆ.
ರೈತರು ತಾವು ಕಷ್ಟಪಟ್ಟು ಬೆಳೆದ ತರಕಾರಿ, ಹಣ್ಣು-ಹಂಪಲ ಹಾಗೂ ಇತರೆ ಬೆಳೆಯನ್ನು ಮಾರುಕಟ್ಟೆಗೆ ತಂದರೂ ಲಾಕ್ಡೌನ್ ಆಗಿದ್ದರಿಂದ ಅದನ್ನು ಕೊಳ್ಳುವವರೇ ಇಲ್ಲದಂತಾಗಿದೆ. ಸಗಟು ವ್ಯಾಪಾರಿಗಳು, ದಲ್ಲಾಳಿಗಳು ಸಹ ವ್ಯಾಪಾರವೇ ಇಲ್ಲ ಖರೀದಿದಾರರೂ ಬರುತ್ತಿಲ್ಲ. ನಮಗೆ ನಿಮ್ಮ ಬೆಳೆ ಬೇಡವೆಂದು ವಾಪಸ್ಸು ಕಳುಹಿಸುತ್ತಿದ್ದಾರೆ. ಹೀಗಾಗಿ ರೈತರು ಕಷ್ಟಪಟ್ಟು ಬೆಳೆದ ಬೆಳೆಯನ್ನು ಮಾರಲಾಗದೆ ಕಣ್ಣೆದುರಲ್ಲೇ ಅವು ಹಾಳಾಗುವುದನ್ನು ನೋಡುವ ಅನಿವಾರ್ಯತೆಗೆ ಸಿಲುಕಿದ್ದಾರೆ.
ಮಾರುಕಟ್ಟೆ ಹಾಗೂ ಊರು ಮಾರ್ಗಗಳೇ ಬಂದ್: ಬೆಳಗಾವಿ ಸೇರಿದಂತೆ ಆ ಜಿಲ್ಲೆಯ ಬಹುತೇಕ ಪಟ್ಟಣ, ಗ್ರಾಮಗಳಿಗೆ ಪ್ರವೇಶ ಬಂದ್ ಮಾಡಲಾಗಿದೆ. ಹೀಗಾಗಿ ಬೆಳಗಾವಿಯ ಮಾರುಕಟ್ಟೆಗೆ ಕಾಯಿಪಲ್ಲೆ, ಹಣ್ಣು-ಹಂಪಲ ಸೇರಿದಂತೆ ರೈತರು ಬೆಳೆದ ಯಾವುದೇ ಉತ್ಪನ್ನಗಳನ್ನು ಸಾಗಿಸಲಾಗುತ್ತಿಲ್ಲ. ಆ ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿದ್ದ ಕೃಷಿ ಉತ್ಪನ್ನ ಹುಬ್ಬಳ್ಳಿ ಮಾರುಕಟ್ಟೆಗೆ ಬರುತ್ತಿದೆ. ಆದರೆ ಕೊಳ್ಳುವವರೇ ಇಲ್ಲದ್ದರಿಂದ ರೈತರು ತಂದ ಮಾಲನ್ನು ವ್ಯಾಪಾರಸ್ಥರು ವಾಪಸ್ಸು ಕಳುಹಿಸುತ್ತಿದ್ದಾರೆ. ರೈತರು ಬೆಳೆಯನ್ನು ವಾಪಸ್ ಒಯ್ಯಲೂ ಆಗದೆ, ಬಿಟ್ಟು ಹೋಗಲೂ ಆಗದೆ ಕಣ್ಣೀರು ಹಾಕುತ್ತಿದ್ದಾರೆ. ಫಸಲು ತಂದ ವಾಹನದ ಬಾಡಿಗೆಯೂ ಸಿಗುತ್ತಿಲ್ಲವೆಂದು ಗೋಳಾಡುತ್ತಿದ್ದಾರೆ.
ಕಾಯಂ ರೈತರ ಮಾಲು ಖರೀದಿಯೆ ದುಸ್ತರ: ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ದಲ್ಲಾಳಿಗಳು ಮತ್ತು ಸಗಟು ವ್ಯಾಪಾರಸ್ಥರಿಗೆ ಕಾಯಂ ಆಗಿ ಕೆಲ ರೈತರು ತಾವು ಬೆಳೆದ ಬೆಳೆ ತಂದು ಕೊಡುತ್ತಾರೆ. ಆದರೆ ಈ ಬಾರಿ ಕೊರೊನಾ ವೈರಸ್ ತಡೆಗಾಗಿ ಲಾಕ್ಡೌನ್ದಿಂದಾಗಿ ಮಾರುಕಟ್ಟೆಯೇ ಸ್ತಬ್ಧಗೊಂಡಿದೆ. ಜನರು ಅಗತ್ಯ ವಸ್ತುಗಳ ಖರೀದಿಗೆ ಹೆಚ್ಚಿನ ಒತ್ತು ಕೊಡುತ್ತಿದ್ದಾರೆ. ಇದರ ಪರಿಣಾಮವಾಗಿ ವ್ಯಾಪಾರಸ್ಥರು, ದಲ್ಲಾಳಿಗಳು ರೈತರಿಂದ ಮಾಲು ಪಡೆಯುತ್ತಿದ್ದವರು ಈಗ ಹಿಂದೇಟು ಹಾಕುತ್ತಿದ್ದಾರೆ. ಒಂದು ವೇಳೆ ನಾವು ರೈತರಿಂದ ಮಾಲು ಪಡೆದುಕೊಂಡರೆ ಅದು ಮಾರಾಟವಾಗದೆ ಹಾನಿಯಾದರೆ ನಾವೇ ನಷ್ಟ ಭರಿಸಬೇಕಾಗುತ್ತದೆ ಎನ್ನುತ್ತಿದ್ದಾರೆ ವ್ಯಾಪಾರಸ್ಥರು, ದಲ್ಲಾಳಿಗಳು. ಒಂದೆಡೆ ಕೊರೊನಾ ವೈರಸ್ ಭಯ ಕಾಡುತ್ತಿದ್ದರೆ ಇನ್ನೊಂದೆಡೆ ಲಾಕ್ ಡೌನ್ದಿಂದ ರೈತರು ಮಾತ್ರ ಬೆಳೆ ಮಾರಾಟವಾಗದೆ ಹಾಳಾಗುತ್ತಿರುವುದನ್ನು ಕಂಡು ತತ್ತರಗೊಂಡಿದ್ದು ಅವರ ಪಾಡು ಹೇಳತೀರದಾಗಿದೆ.
ನಗರದ ಸುತ್ತಮುತ್ತಲಿನ ಹಾಗೂ ಸ್ಥಳೀಯ ರೈತರಷ್ಟೆ ಎಪಿಎಂಸಿಗೆ ತಮ್ಮ ಮಾಲು ತಂದು ಕೊಡುತ್ತಾರೆ. ಇನ್ನುಳಿದೆಡೆ ದೂರದ ಊರಿನ ರೈತರು ಇಲ್ಲಿಗೆ ಬರುವುದು ಬಹಳ ಕಡಿಮೆ. ತೋಟದಲ್ಲಿಯೆ ವ್ಯಾಪಾರಿಗಳಿಂದ ಹಣ ಪಡೆದು ತಮ್ಮ ಮಾಲು ಮಾರಾಟ ಮಾಡುತ್ತಾರೆ. ರೈತರಿಂದ ಮೊದಲೇ ಮಾಲು ಪಡೆದಂತಹ ವ್ಯಾಪಾರಿಗಳು ಲಾಕ್ಡೌನ್ ಆಗಿದ್ದರಿಂದ ತುಂಬಾ ನಷ್ಟ ಅನುಭವಿಸುವಂತಾಗಿದೆ ಎಂಬುದು ದಲ್ಲಾಳಿ ವ್ಯಾಪಾರಸ್ಥರ ಗೋಳಾಗಿದೆ.
ಕೊರೊನಾ ವೈರಸ್ ಭೀತಿಯಿಂದಾಗಿ ಮಾರುಕಟ್ಟೆಯು ಸ್ತಬ್ಧಗೊಂಡಿದೆ. ಗ್ರಾಹಕರು ಭಯದಿಂದಾಗಿ ಮಾಲು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಚಿಲ್ಲರೆ ವ್ಯಾಪಾರಿಗಳಿಂದಲೂ ಖರೀದಿ ಕಡಿಮೆಯಾಗಿದ್ದು, ವ್ಯಾಪಾರವೂ ಅಷ್ಟಕ್ಕಷ್ಟೆ ಆಗಿದೆ. ಕಾರಣ ರೈತರಿಂದ ಪಡೆದ ಮಾಲು ಮಾರಾಟವಾಗದೆ ಹಾನಿ ಅನುಭವಿಸುವಂತಾಗಿದೆ. ಪೊಲೀಸರು ಬೆಳಗ್ಗೆ ಒಂದೆರಡು ತಾಸು ಮಾತ್ರ ಮಾರಾಟಕ್ಕೆ ಅವಕಾಶ ನೀಡುತ್ತಿದ್ದಾರೆ. ಇದರಿಂದ ಕೆಲ ರೈತರು ಮಾರುಕಟ್ಟೆಗೆ ಮಾಲು ತರಲು ಹಿಂಜರಿಯುತ್ತಿದ್ದಾರೆ.
ಹೆಸರು ಹೇಳಲಿಚ್ಛಿಸದ ದಲ್ಲಾಳಿ ವ್ಯಾಪಾರಿ
ಶಿವಶಂಕರ ಕಂಠಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Central Government ನೀಡಿದ ಬರ ಹಣ ಶೀಘ್ರವೇ ರೈತರ ಖಾತೆಗೆ ಜಮಾ: ಕೃಷ್ಣ ಬೈರೇಗೌಡ
ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ
ಮಹಾತ್ಮರ ಸಮಾಜಮುಖಿ ಸಂದೇಶ ಸಾರ್ವಕಾಲಿಕ: ಗುರುಮೂರ್ತಿ ಶ್ರೀ
ಮೋದಿಯಿಂದ ಬಡತನ ಮುಕ್ತ ಭಾರತ: ಬಸವರಾಜ ಬೊಮ್ಮಾಯಿ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
MUST WATCH
ಹೊಸ ಸೇರ್ಪಡೆ
BC Road, ಉಪ್ಪಿನಂಗಡಿಯಲ್ಲಿ ಸಂಚಾರ ಸಂಕಷ್ಟ : ಗಂಟೆಗಳ ಕಾಲ ಟ್ರಾಫಿಕ್ ಜಾಮ್
Retail Market; ತಾಪಮಾನ ಏರಿಕೆ: ಮೊಟ್ಟೆ ದರ ಇಳಿಕೆ
Prajwal Revanna Case ಜಾಲತಾಣದಲ್ಲಿ ಅಶ್ಲೀಲ ವೀಡಿಯೋ ಡಿಲೀಟ್ ಮಾಡಿಸಲು ಕ್ರಮ: ಪರಂ
Prajwal Revanna ವಿದೇಶಕ್ಕೆ ಹಾರಲು ರಾಜ್ಯ ಸರಕಾರದ ವೈಫಲ್ಯ ಕಾರಣ: ಅಶೋಕ್
Prajwal Revanna ಬಂಧನಕ್ಕೆ ಸಹಕರಿಸುವಂತೆ ಪ್ರಧಾನಿಗೆ ಸಿಎಂ ಪತ್ರ