ಪಡಿತರ ಚೀಟಿ ಇಲ್ಲದವರಿಗೆ ಧಾನ್ಯ ವಿತರಣೆ
Team Udayavani, Apr 9, 2020, 4:14 PM IST
ಚಿಕ್ಕಜಾಜೂರು: ಸವಿತಾ ಸಮಾಜದವರಿಗೆ ಆಹಾರ ಸಾಮಗ್ರಿ ವಿತರಿಸಲಾಯಿತು
ಚಿಕ್ಕಜಾಜೂರು: ಗ್ರಾಮದ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ಹೊಳಲ್ಕೆರೆ ತಾಲೂಕು ಬಿಜೆಪಿ ಅಧ್ಯಕ್ಷ ಸಿದ್ದೇಶ್ ನೇತೃತ್ವದಲ್ಲಿ ಜಿಲ್ಲಾ ಸವಿತಾ ಸಮಾಜ ಸಂಘ ಹಾಗೂ ಹೊಳಲ್ಕೆರೆ ತಾಲೂಕು ಸವಿತಾ ಸಮಾಜದ ವತಿಯಿಂದ ಸಂಗ್ರಹಿಸಲಾಗಿದ್ದ ಆಹಾರ ಸಾಮಗ್ರಿ ಕಿಟ್ ಸವಿತಾ ಸಮಾಜದ ಬಂಧುಗಳಿಗೆ ವಿತರಿಸಲಾಯಿತು.
ಹೊಳಲ್ಕೆರೆ ತಾಲೂಕು ತಹಶೀಲ್ದಾರ್ ನಾಗರಾಜ್ ಮಾತನಾಡಿ, ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಸರ್ಕಾರ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ. ತಾಲೂಕಿನಾದ್ಯಂತ ಪಡಿತರ ಚೀಟಿ ಹೊಂದದ ಕುಟುಂಬಗಳನ್ನು ಗುರುತಿಸಿ ಅವರಿಗೆ ಅಗತ್ಯ ವಸ್ತು ಪೂರೈಸುತ್ತಿದ್ದೇವೆ ಎಂದರು. ತಾಲೂಕು ಬಿಜೆಪಿ ಅಧ್ಯಕ್ಷ ಸಿದ್ದೇಶ್ ಮಾತನಾಡಿ, ಸವಿತಾ ಸಮಾಜದ ಬಡ ಕುಟುಂಬಗಳನ್ನು ಗುರುತಿಸಿ ಅಧಿಕಾರಿಗಳ ಸಹಕಾರದೊಂದಿಗೆ 10 ಕೆಜಿ ರಾಗಿ, 5ಕೆಜಿ ಅಕ್ಕಿ, 2ಕೆಜಿ ರವೆ, 2 ಕೆಜಿ ಅಕ್ಕಿಹಿಟ್ಟು, 2 ಬಟ್ಟೆ ಸೋಪು, ತೊಗರಿಬೇಳೆ, ಬೆಲ್ಲ, ಅಡುಗೆ ಎಣ್ಣೆ, ಉಪ್ಪು ತಲಾ 1ಕೆಜಿಯಂತೆ ಆಹಾರ ಸಾಮಗ್ರಿಗಳ ಕಿಟ್ ನೀಡಲಾಗುತ್ತಿದೆ ಎಂದರು.
ಚಿಕ್ಕಜಾಜೂರು ಗ್ರಾಪಂ ಅಧ್ಯಕ್ಷ ಡಿಸಿ ಮೋಹನ್, ಪಿಎಸ್ಐ ಮೋಹನ್ಕುಮಾರ್, ರವಿಕುಮಾರ್, ಚಿದಾನಂದ, ಬಸವರಾಜು, ಜಗದೀಶ್, ಬಂಡೆ ಬಸಣ್ಣ, ಶಿವಕುಮಾರ್ ಹೆಗ್ಗೆರೆ, ದೇವರಾಜ್ ಸಾಸಲು, ರಾಜಣ್ಣ, ಕೃಷ್ಣಮೂರ್ತಿ ಇತರರಿದ್ದರು.