ಲಾಕ್ ಡೌನ್ ಮೀರಿ ಮಂಡ್ಯಕ್ಕೆ ಬಂತು ಶವ, ಢವಢವ !
ಮುಂಬಯಿಯಿಂದ ಆ್ಯಂಬುಲೆನ್ಸ್ನಲ್ಲಿ ಸಾಗಾಟ, ನಾಲ್ವರಿಗೆ ಹರಡಿದ ಕೋವಿಡ್-19
Team Udayavani, May 2, 2020, 5:50 AM IST
ಸಾಂದರ್ಭಿಕ ಚಿತ್ರ.
ಮಂಡ್ಯ: ಬರೋಬ್ಬರಿ 42 ಚೆಕ್ಪೋಸ್ಟ್ ದಾಟಿ ಬಂದಿತ್ತು ಪಾರ್ಥಿವ ಶರೀರ ಹೊತ್ತು ಬಂದ ಸರಕಾರಿ ಆ್ಯಂಬುಲೆನ್ಸ್ …!
ಹೌದು, ಶುಕ್ರವಾರ ಮಂಡ್ಯ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಏಕಾಏಕಿ ಹೆಚ್ಚಿ ರುವುದಕ್ಕೂ ಮುಂಬಯಿಯಿಂದ ಬಂದ ಈ ಆ್ಯಂಬುಲೆನ್ಸ್ಗೂ ಸಂಬಂಧ ಇದೆ ಎನ್ನುವುದು ಸ್ಪಷ್ಟವಾಗಿದೆ. ಈ ಆ್ಯಂಬುಲೆನ್ಸ್ನಲ್ಲಿದ್ದ ಪಾರ್ಥೀವ ಶರೀರದ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಏಳು ಜನರಲ್ಲಿ ನಾಲ್ವರಿಗೆ ಕೋವಿಡ್-19 ದೃಢವಾಗಿದೆ.
ಪಾಂಡವಪುರ ತಾಲೂಕಿನ ಬಿ. ಕೊಡಗನ ಹಳ್ಳಿಯ ಮೂವರಲ್ಲಿ ಮತ್ತು ಕೆ.ಆರ್. ಪೇಟೆಯ ಒಬ್ಬರಲ್ಲಿ ಕೋವಿಡ್-19 ಕಾಣಿಸಿಕೊಂಡಿದೆ. ಎ. 23ರಂದು ಮುಂಬಯಿಯಲ್ಲಿ ಮೃತ ಪಟ್ಟಿದ್ದ ಗ್ರಾಮದ ವ್ಯಕ್ತಿಯೊಬ್ಬರ ಶವವನ್ನು ಆ್ಯಂಬುಲೆನ್ಸ್ನಲ್ಲಿ ತಂದು ಅಂತ್ಯಕ್ರಿಯೆ ನೆರವೇರಿಸಲಾಗಿತ್ತು.
ಈ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿತ್ತು. ಇವರಲ್ಲಿ ವೈರಸ್ ಇತ್ತೇ ಅಥವಾ ಇಲ್ಲವೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಜತೆಗೆ ಈ ವ್ಯಕ್ತಿಯ ಪುತ್ರನೊಬ್ಬ ಮುಂಬಯಿಯ ಖಾಸಗಿ ಬ್ಯಾಂಕೊಂದರ ಉದ್ಯೋಗಿಯಾಗಿದ್ದು ಇವರಿಂದ ಸೋಂಕು ಹರಡಿರಬಹುದು ಎಂಬ ಶಂಕೆಯನ್ನೂ ವ್ಯಕ್ತಪಡಿಸಲಾಗಿದೆ.
ಹೀಗಾಗಿ ಮುಂಬಯಿಯಲ್ಲಿ ಮೃತ ವ್ಯಕ್ತಿ ಚಿಕಿತ್ಸೆ ಪಡೆಯುತ್ತಿದ್ದ ದೇಸಾಯಿ ಆಸ್ಪತ್ರೆಯನ್ನು ಸಂಪರ್ಕಿಸಲಾಗಿದೆ. ಮುಂಬಯಿಯಲ್ಲಿ ಸಾವಿಗೀಡಾಗಿದ್ದ ವ್ಯಕ್ತಿಯ ಶವ ಹೊತ್ತ ಆ್ಯಂಬುಲೆನ್ಸ್ 42 ಚೆಕ್ಪೋಸ್ಟ್ ದಾಟಿ ಬಂದಿದೆ. ಸರಕಾರಿ ಆ್ಯಂಬುಲೆನ್ಸ್ ಎಂಬ ಕಾರಣಕ್ಕಾಗಿ ಜಿಲ್ಲಾಡಳಿತವೂ ಅಸಡ್ಡೆ ಮಾಡಿ ದಾರಿ ಬಿಟ್ಟಿತೇ ಎಂಬ ಅನುಮಾನಗಳೂ ಈಗ ವ್ಯಕ್ತವಾಗಿವೆ.
ಮಂಡ್ಯಕ್ಕೆ ತಂದಿದ್ದು ಏಕೆ?
ಮೃತ ವ್ಯಕ್ತಿಯ ಒಬ್ಟಾಕೆ ಪುತ್ರಿ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯಲ್ಲಿದ್ದಾರೆ. ಇವರು ತಂದೆಯ ಅಂತಿಮ ದರ್ಶನ ಪಡೆಯಲು ಆಸೆ ವ್ಯಕ್ತಪಡಿಸಿದ್ದರಿಂದ ಮೃತದೇಹಕ್ಕೆ ದೇಸಾಯಿ ಆಸ್ಪತ್ರೆಯ ಸರಕಾರಿ ಆ್ಯಂಬುಲೆನ್ಸ್ ನಲ್ಲಿಟ್ಟು ಬಿ. ಕೊಡಗಹಳ್ಳಿಗೆ ಕರೆತರಲಾಯಿತು.
ಆ್ಯಂಬುಲೆನ್ಸ್ನಲ್ಲಿ ಪತ್ನಿ, ಪುತ್ರ, ಪುತ್ರಿ, ಅಳಿಯ, ಮೊಮ್ಮಗ ಇದ್ದರು. ಈ ಪೈಕಿ ಮೃತನ ಪುತ್ರ, ಪುತ್ರಿ, ಮೊಮ್ಮಗ ಹಾಗೂ ಕೆ.ಆರ್. ಪೇಟೆಯಲ್ಲಿದ್ದ ಇನ್ನೊಬ್ಬ ಪುತ್ರಿಗೆ ಸೋಂಕು ಕಾಣಿಸಿಕೊಂಡಿದೆ. ಆದರೆ ಮೃತನ ಪತ್ನಿ ಹಾಗೂ ಅಳಿಯನಿಗೆ ಸೋಂಕು ಕಾಣಿಸಿಕೊಂಡಿಲ್ಲ, ಅವರನ್ನು ಕ್ವಾರಂಟೈನ್ ಮಾಡಲಾಗಿದೆ. ಬಿ. ಕೊಡಗಹಳ್ಳಿ ಗ್ರಾಮವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NDA ಕೂಟದಿಂದ ಜೆಡಿಎಸ್ ಹೊರ ಹಾಕಿ: ಶಿವರಾಮೇ ಗೌಡ
H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ
Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
MUST WATCH
ಹೊಸ ಸೇರ್ಪಡೆ
Nijjar Case: ಭಯೋತ್ಪಾದಕ ನಿಜ್ಜರ್ ಹತ್ಯೆ ಪ್ರಕರಣ: ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ
Puttur ಅಡಿಕೆಗೂ ಬಿಸಿಲ ತಾಪ: ಉದುರುತ್ತಿವೆ ನಳ್ಳಿ! ಶೇ. 50ರಷ್ಟು ಫಸಲು ನಷ್ಟದ ಭೀತಿ
ಸಿಆರ್ಝಡ್ ಮರಳು ಇನ್ನು ಸದ್ಯಕ್ಕೆ ಮರೀಚಿಕೆ
Horoscope: ಧೈರ್ಯ, ಸಾಹಸದ ಪ್ರವೃತ್ತಿ ಯಶಸ್ಸಿಗೆ ಪೂರಕ, ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ
Udupi ಇನ್ನೂ ನಡೆಯದ ಟೆಂಡರ್ ಪ್ರಕ್ರಿಯೆ; ರಾಜ್ಯದಲ್ಲಿ ಅಗ್ನಿಶಾಮಕ ವಾಹನ ಕೊರತೆ