ಸಂಬಳ ನೀಡಲಿಲ್ಲ ಎಂದು ಲಾರಿಯನ್ನೇ ಕದ್ದೊಯ್ದ ಭೂಪ!
Team Udayavani, May 6, 2020, 1:03 PM IST
ಕೊಟ್ಟಿಗೆಹಾರ: ಸಂಬಳ ನೀಡಲಿಲ್ಲ ವೆಂದು ಮಾಲೀಕನ ಲಾರಿಯನ್ನೇ ಕದ್ದೊಯ್ಯಲು ಪ್ರಯತ್ನಿಸಿದ್ದು ಕೊಟ್ಟಿಗೆಹಾರದಲ್ಲಿ ಪೊಲೀಸರು ಲಾರಿಯನ್ನು ವಶಪಡಿಸಿಕೊಂಡ ಘಟನೆ ಮಂಗಳವಾರ ನಡೆದಿದೆ.
ಕಡೂರಿನಿಂದ ಕೊಟ್ಟಿಗೆಹಾರ ಮಾರ್ಗವಾಗಿ ಮೂಡಬಿದರೆಗೆ ಲಾರಿಯಲ್ಲಿ ಹೊರಟ್ಟಿದ್ದ ಚಾಲಕ ರಂಗಪ್ಪನನ್ನು ಕೊಟ್ಟಿಗೆಹಾರ ಚೆಕ್ಪೋಸ್ಟ್ನಲ್ಲಿ ಪೊಲೀಸರು ತಡೆದು ಪ್ರಶ್ನಿಸಿದ್ದು ಮಾಲೀಕ ಪ್ರಭಾಕರ್ ಸಂಬಳ ಕೊಡದೆ ಇರುವುದರಿಂದ ಲಾರಿಯನ್ನು ತೆಗೆದುಕೊಂಡು ಬಂದಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ.
ಮೂಡಬಿದರೆ ಮೂಲದ ರಂಗಪ್ಪ, ಕಡೂರಿನ ಲಾರಿ ಮಾಲೀಕ ಪ್ರಭಾಕರ್ ಎಂಬುವವರ ಲಾರಿಯ ಚಾಲಕನಾಗಿದ್ದು ಮೂರು ವರ್ಷದಿಂದ ಚಾಲಕನಾಗಿ ಕೆಲಸ ಮಾಡುತ್ತಿದ್ದು ಲಾಕ್ಡೌನ್ ಪ್ರಾರಂಭವಾಗಿ 2 ತಿಂಗಳು ಆದರೂ ಸಂಬಳ ನೀಡಿಲ್ಲ. ಇದರಿಂದ ಲಾರಿಯನ್ನು ತೆಗೆದುಕೊಂಡು ಬಂದಿದ್ದಾಗಿ ಪೊಲೀಸರಿಗೆ ರಂಗಪ್ಪ ತಿಳಿಸಿದ್ದಾನೆ. ಪೊಲೀಸರು ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
KLE ಸಂಸ್ಥೆ ಬೆಳೆದಿದ್ದು ದಾನಿಗಳಿಂದ, ಕಾಂಗ್ರೆಸ್ನಿಂದ ಅಲ್ಲ: ಪ್ರಭಾಕರ ಕೋರೆ
Gangavathi: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು…
Heavy Rain: ಹುಣಸೂರು ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಆಲಿಕಲ್ಲು ಮಳೆ…
Bidar; ಪ್ರಜ್ವಲ್ ನನ್ನು ವಿದೇಶಕ್ಕೆ ಕಳುಹಿಸಿದ್ದೇ ಸಿದ್ದರಾಮಯ್ಯ: ಆರ್.ಅಶೋಕ್ ಆರೋಪ
Bengaluru ತಂಪೆರೆದ ವರುಣ; ಕೆಲವೆಡೆ ಹಾನಿ: 4 ದಿನ ಮುಂದುವರಿಯುವ ಸಾಧ್ಯತೆ