ಕೋವಿಡ್ ಹೆಚ್ಚಳಕ್ಕೆ ಮೋದಿ ಕಾರಣ
Team Udayavani, May 20, 2020, 8:48 AM IST
ಇಳಕಲ್ಲ: ಜಗತ್ತಿನಲ್ಲಿ ಕೋವಿಡ್ ರೋಗ ಆರಂಭ ಆಗಿದ್ದನ್ನು ಅರಿತು ಯಾವುದೇ ಮುಂದಾಲೋಚನೆಗಳಿಲ್ಲದೇ ಹೊರಗಿನವರನ್ನು ದೇಶದೊಳಗೆ ವೈದ್ಯಕೀಯ ತಪಾಸಣೆಗೆ ಒಳ ಪಡಿಸದೇ ಬಿಟ್ಟಿರುವು ದರಿಂದಲೇ ಇಂದು ದೇಶದಲ್ಲಿ 1 ಲಕ್ಷದ ವರಗೆ ಕೋವಿಡ್ ಸೋಂಕಿತರು ಹೆಚ್ಚಾಗಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ನೇರ ಕಾರಣ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಆರೋಪಿಸಿದರು.
ಮಂಗಳವಾರ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ ಹಾಗೂ ಅಧಿಕಾರಿಗಳು ಬೇರೆ ರಾಜ್ಯದಿಂದ ವಲಸಿ ಬಂದ ಕಾರ್ಮಿಕರನ್ನು ಸರಿಯಾಗಿ ತಪಾಸಣೆ ನಡೆಸದೇ ನಿರ್ಲಕ್ಷ್ಯದಿಂದಾಗಿ ರಾಜ್ಯದಲ್ಲಿ ಕೋವಿಡ್ ಒಂದು ಸಾವಿರ ಗಡಿ ದಾಟುವಂತಾಗಿದೆ. ಯಾವ ಮುಂದಾಲೋಚನೆಯಿಲ್ಲದೇ ವಿರೋಧ ಪಕ್ಷದವರೊಂದಿಗೆ ಸಮಾಲೋಚನೆ ನಡೆಸದೇ ಲಾಕ್ ಡೌನ್ ಸಡಿಲಿಸಿ ಎಲ್ಲ ವ್ಯವಹಾರಕ್ಕೂ ಆಸ್ಪದ ನೀಡಿದ್ದರಿಂದ ಕೋವಿಡ್ ಹೆಚ್ಚಳವಾಗಿದೆ. ಸಂಕಷ್ಟಿತರಿಗೆ ಸರಕಾರದಿಂದ ಸರಿಯಾದ ಸೌಲಭ್ಯ ಒದಗಿಸಿ ಇನ್ನಷ್ಟು ದಿವಸ ಲಾಕ್ಡೌನ್ ಮುಂದುವರೆಸಿದ್ದರೇ ಇಂತಹ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ಕೋವಿಡ್ ದಂತ ಸಂಕಷ್ಟದ ಸಮಯದಲ್ಲೂ ಶಾಸಕರಿಂದ ಹಿಡಿದು ಮುಖ್ಯಮಂತ್ರಿಗಳ ವರೆಗೆ ಸಾರ್ವಜನಿಕರಲ್ಲಿ ಚಂದಾ ಎತ್ತುತ್ತಿರುವುದು ನಾಚಿಕೆ ತರಿಸುವಂತಾಗಿದೆ. ಕೇಂದ್ರ ಹಾಗೂ ರಾಜ್ಯಗಳಲ್ಲಿ ತಮ್ಮದೇ ಆದ ಸರಕಾರವಿದ್ದರೂ ಬಡವರ, ನಿರ್ಗತಿಕರ ಹಾಗೂ ಕೂಲಿ ಕಾರ್ಮಿಕರ ಬಗ್ಗೆ ಕಿಂಚಿತ್ತು ಯೋಚಿಸದೇ ಕೇವಲ ಅನ್ಯಭಾಗ್ಯದ ಅಕ್ಕಿಯೊಂದು ನೀಡಿ ಕೈತೊಳೆದುಕೊಂಡಿದ್ದಾರೆ. ಸರಕಾರದ ಹಾಗೂ ಸಂಘ ಸಂಸ್ಥೆಯವರು ನೀಡುವ ಕಿಟ್ಗಳ ಮೇಲೂ ಕೆಲವು ಬಿಜೆಪಿ ಶಾಸಕರು ತಮ್ಮ ತಮ್ಮ ಭಾವಚಿತ್ರಗಳನ್ನು ಅಂಟಿಸಿ ಜನರಿಗೆ ವಿತರಿಸಿ ಕ್ಷುಲ್ಲಕ ರಾಜಕೀಯ ಮಾಡಿದ್ದಾರೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಧುರೀಣ ಅರುಣ ಬಿಜ್ಜಲ, ನಗರಸಭೆ ಸದಸ್ಯ ಅಮೃತ ಬಿಜ್ಜಲ ಹಾಗೂ ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Polls: ಉತ್ತರ ಪ್ರದೇಶದಲ್ಲಿ ಗಾಂಧಿ ಕುಟುಂಬದ ಸ್ಪರ್ಧೆಗೆ ಕಸರತ್ತು
Lok Sabha Election: ವಾರಾಣಸಿಯಲ್ಲಿ ರಿಯಲ್ ಮೋದಿ VS ರೀಲ್ ಮೋದಿ ಫೈಟ್!
ಬೆನಕಟ್ಟಿ: SC/ST ಯ 200ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ
Daily Horoscope: ಅವಿವಾಹಿತರಿಗೆ ವಿವಾಹ ಯೋಗ, ಉದ್ಯೋಗ ಕ್ಷೇತ್ರದಲ್ಲಿ ಶ್ಲಾಘನಾರ್ಹ ಸಾಧನೆ
Mangaluru University; ಲೋಕ ಸಮರದ ನೆಪ; ಘಟಿಕೋತ್ಸವ ಆಗದೆ ವಿ.ವಿ. ವಿದ್ಯಾರ್ಥಿಗಳು ಕಂಗಾಲು!