ಗೌರಿಪೇಟೆ, ಕುರುಬರಪೇಟೆ ಸೀಲ್ಡೌನ್ ತೆರವು
Team Udayavani, Jun 30, 2020, 6:56 AM IST
ಕೋಲಾರ: ಕೋವಿಡ್ 19 ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಸೀಲ್ ಡೌನ್ ಮಾಡಿದ್ದ ಗೌರಿಪೇಟೆ ಹಾಗೂ ಕುರುಬರಪೇಟೆಯನ್ನು ಸೋಮವಾರ ಮುಕ್ತಗೊಳಿಸಲಾಯಿತು. ಈ ವೇಳೆ ಕೋವಿಡ್ 19 ವಾರಿಯರ್ಸ್, ಸ್ವಯಂ ಸೇವಕರಿಗೆ, ನಗರಸಭೆ ಹಾಗೂ ಪೊಲೀಸ್ ಸಿಬ್ಬಂದಿಗೆ ಸ್ಥಳೀಯ ನಿವಾಸಿಗಳು ಅಭಿನಂದನೆ ಸಲ್ಲಿಸಿದರು.
ಗೌರಿಪೇಟೆ, ಕುರುಬರಪೇಟೆ, ಜೂನಿಯರ್ ಕಾಲೇಜ್ ವೃತ್ತದಿಂದ ಇಟಿಸಿಎಂ ವೃತ್ತದ ರಸ್ತೆ ಸೀಲ್ ಡೌನ್ ತೆರವುಗೊಳಿಸಲಾಯಿತು. ತೆರವಿನ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ನಗರಸಭೆ ಆಯುಕ್ತ ಶ್ರೀಕಾಂತ್, ಸೋಂಕಿತ ಪಿ-3007 ವಾಸವಿದ್ದ ವಾರ್ಡ್ ಅನ್ನು ಒಂದು ತಿಂಗಳ ಹಿಂದೆ ಜಿಲ್ಲಾಡಳಿತ ಸೀಲ್ ಡೌನ್ ಮಾಡಿತ್ತು. ಸೋಂಕಿತ ಗುಣಮುಖವಾದ ಹಿನ್ನೆಲೆಯಲ್ಲಿ ತೆರವುಗೊಳಿಸಲಾಗಿದೆ ಎಂದು ತಿಳಿಸಿದರು.
28 ದಿನಗಳ ಕಾಲ ಸೀಲ್ಡೌನ್ ಸಮಯದಲ್ಲಿ ಈ ಭಾಗದ ಜನರು ಜಿಲ್ಲಾಡಳಿತದ ಜತೆ ಸಹಕಾರ ನೀಡಿದ್ದಾರೆ. ಹಗಲು ರಾತ್ರಿಯನ್ನದೆ ಸ್ವಯಂಸೇವಕರು, ನಗರಸಭೆ, ಆರೋಗ್ಯ ಹಾಗೂ ಪೊಲೀಸ್ ಇಲಾಖೆ ಸೇವೆ ಸಲ್ಲಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸೀಲ್ ಡೌನ್ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸಿದ ಸ್ವಯಂಸೇವಕರಿಗೆ ನಗರಠಾಣೆ ನಿರೀಕ್ಷಕ ಅಣ್ಣಯ್ಯ ಕೃತಜ್ಞತೆ ಸಲ್ಲಿಸಿದರು.
ನಗರದ ಗೌರಿಪೇಟೆ, ಕೋಟೆ, ಗಾಂಧಿ ನಗರ ಹಾಗು ಹಾರೋಹಳ್ಳಿ ಸೇರಿ ನಾಲ್ಕು ಕಡೆ ಚೆಕ್ ಪೋಸ್ಟ್ ತೆರವುಗೊಳಿಸಲಾಗಿದ್ದು. ಕಂಟೇನ್ಮೆಂಟ್ ಪ್ರದೇಶದಲ್ಲಿದ್ದ 14 ಚೆಕ್ ಪೋಸ್ಟ್ ಗಳಲ್ಲಿ 4 ತೆರವುಗೊಳಿಸಲಾಗಿದೆ. ಅಲ್ಲಿ ನಿಯೋಜಿಸಲಾಗಿದ್ದ ಅಧಿಕಾರಿಗಳನ್ನು ಬೇರೆಡೆ ನಿಯೋಜಿಸಲಾಗಿದೆ. ಸೀಲ್ ಡೌನ್ ತೆರವಿನ ವೇಳೆ ಸ್ವಯಂ ಸೇವಕರಾದ ವೈ.ಹರ್ಷಿತ್, ಲಕ್ಷಿಪತಿ(ಬಾಯ್ಸ) ರೇಣು, ಚಂದ್ರಮೋಹನ್, ವಿಜಯಕುಮಾರ್, ಮಂಜುನಾಥ್ ಮತ್ತಿತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar: ಬಿಸಿಲಿನ ಝಳಕ್ಕೆ 2 ಸಾವಿರಕ್ಕೂ ಹೆಚ್ಚು ಕೋಳಿ ಸಾವು
Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
MUST WATCH
ಹೊಸ ಸೇರ್ಪಡೆ
Davanagere; ಗಾಯಿತ್ರಿ ಸಿದ್ದೇಶ್ವರ ಪರ ಯದುವೀರ್ ಒಡೆಯರ್ ರೋಡ್ ಶೋ
KEA ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ವಿರುದ್ದ ತನಿಖೆಗೆ ಆಗ್ರಹ
ಅನ್ಯ ರಾಜ್ಯದ ಅಪರಿಚಿತ ಶಸ್ತ್ರಧಾರಿಗಳಿಂದ ಜೀವಬೆದರಿಕೆ: ಕಾಂಗ್ರೆಸ್ ವಿಪ ಸದಸ್ಯ ಸುನೀಲಗೌಡ
Stock Market: ಆರಂಭಿಕ ವಹಿವಾಟಿನಲ್ಲಿ ಮುಗ್ಗರಿಸಿದ ಷೇರುಪೇಟೆ ಸೆನ್ಸೆಕ್ಸ್; ಭಾರೀ ನಷ್ಟ
Pendrive Case; ನಿರೀಕ್ಷಣಾ ಜಾಮೀನು ಅರ್ಜಿ ವಾಪಾಸ್ ಪಡೆದ ರೇವಣ್ಣ