ತಾಯಿಯ ಸಾವಿಗೆ ಕಾರಣವಾಯ್ತು ಮಗನ ವಿಡಿಯೋ ಕಾಲ್ !
Team Udayavani, Nov 23, 2020, 11:42 AM IST
ಬಾಗಲಕೋಟೆ: ಮಗನ ವಿಡಿಯೋ ಕಾಲ್, ತಾಯಿಯ ಸಾವಿಗೆ ಕಾರಣವಾದ ಘಟನೆ ಸೋಮವಾರ ಬೆಳಗ್ಗೆ ಜಿಲ್ಲೆಯಲ್ಲಿ ಸಂಭವಿಸಿದೆ.
ಹೌದು, ಯೋಧ ಶೇಖರಯ್ಯ ವಿಭೂತಿ ಮತ್ತು ಪತ್ನಿ ಪುಷ್ಪಾವತಿ ಅವರು ಬೈಕನಲ್ಲಿ ಹುನಗುಂದ ತಾಲೂಕು ಮುಗನೂರ ಬಳಿ ಹೊರಟಿದ್ದರು. ಈ ವೇಳೆ ಯೋಧ ಶೇಖರಯ್ಯ ಅವರ ಪುತ್ರನ ವಿಡಿಯೋ ಕಾಲ್ ಬಂದಿದ್ದು, ಬೈಕ್ ಓಡಿಸುತ್ತಲೇ ವಿಡಿಯೋ ಕಾಲ್ ನಲ್ಲಿ ಮಾತನಾಡುತ್ತ ಹೊರಟಿದ್ದರು.
ಈ ವೇಳೆ ಮುಗನೂರ ಗ್ರಾಮದ ಬಳಿ ರಸ್ತೆಯಲ್ಲಿ ಹಂಪ್ಸ್ ಇದ್ದು, ಅದನ್ನು ಗಮನಿಸದೆ ಶೇಖರಯ್ಯ ಅವರು ವೇಗವಾಗಿ ಹಂಪ್ಸ್ ಮೇಲಿನಿಂದ ಬೈಕ್ ಜಿಗಿಸಿದ್ದಾರೆ. ಇದರಿಂದ ಬೈಕ್ ನ ಹಿಂಬದಿ ಕುಳುತಿದ್ದ ಪುಷ್ಪಾವತಿ (35) ಆಯತಪ್ಪಿ ರಸ್ತೆಯ ಮೇಲೆ ಬಿದ್ದಿದ್ದಾರೆ. ಆಗ ತಲೆಗೆ ತೀವ್ರ ಪೆಟ್ಟುಬಿದ್ದು ಪುಷ್ಪಾವತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದನ್ನೂ ಓದಿ:ಸಿಎಂಗೆ ತಮ್ಮ ಸರ್ಕಾರ ಉಳಿಸಿಕೊಳ್ಳುವುದು ಮುಖ್ಯ, ರೈತರ ಹಿತವಲ್ಲ: ಡಿ ಕೆ ಶಿವಕುಮಾರ್
ಹಿಂಬದಿ ಕುಳಿತ ಪತ್ನಿ ರಸ್ತೆಯ ಮೇಲೆ ಬಿದ್ದು ಸಾವನ್ನಪ್ಪಿರುವುದು ಕಂಡ ಯೋಧ ಶೇಖರಯ್ಯ, ಪತ್ನಿಯ ಶವವನ್ನು ಅಪ್ಪಿ ಗೋಳಾಡಿ ಅಳುತ್ತಿದ್ದ ದೃಶ್ಯ ಮನಕಲುಕುವಂತಿತ್ತು.
ಇಂದು ಬೆಳಿಗ್ಗೆ ಜಮ್ಮು ಕಾಶ್ಮೀರದಲ್ಲಿ ಕರ್ತವ್ಯಕ್ಕೆ ಹೊರಡಬೇಕಿದ್ದ ಯೋಧ, ಪತ್ನಿಯನ್ನು ತವರು ಮನೆ ಹಿರೆಮಳಗಾವಿ ಗ್ರಾಮಕ್ಕೆ ಬಿಡಲು ಹೊರಟಿದ್ದರು.
ಸ್ಥಳಕ್ಕೆ ಅಮೀನಗಡ ಪೊಲೀಸರು ಭೇಟಿ ಪರಿಶೀಲಿಸಿದ್ದು, ಪ್ರಕರಣ ದಾಖಲಾಗಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
I.N.D.I.A ಕೂಟದಲ್ಲಿ ವರ್ಷಕ್ಕೆ ಒಬ್ಬರನ್ನು ಪ್ರಧಾನಿಯನ್ನಾಗಿಸಲು ಚಿಂತನೆ: ಅಣ್ಣಾಮಲೈ
ಬಿಜೆಪಿ ಶಾಸಕ ಯತ್ನಾಳ ಶುಗರ್ ಫ್ಯಾಕ್ಟ್ರಿ ಹೆಂಗ್ ಕಟ್ಟಿದ್ರು: ಶಿವಾನಂದ ಪಾಟೀಲ
Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ
ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
MUST WATCH
ಹೊಸ ಸೇರ್ಪಡೆ
Honnavar; ಖಾಸಗಿ ಬಸ್ ಪಲ್ಟಿ: 2 ಸಾವು, 45ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ
Yellapur: ಟಿಪ್ಪರ್ ಗೆ ಢಿಕ್ಕಿಯಾಗಿ ಬೈಕ್ ಸಹಸವಾರೆ ಬಾಲಕಿ ಮೃತ್ಯು
Madikeri; ಮೊಬೈಲ್ ನಿಂದ ಬಡಿದು ಅತ್ತೆ ಹತ್ಯೆಗೈದು ಕಥೆ ಕಟ್ಟಿದ ಸೊಸೆ!
CD ಮಾಡುವುದರಲ್ಲಿ ಡಿಕೆಶಿ ನುರಿತವರು: ಬಿಜೆಪಿ ಅಭ್ಯರ್ಥಿ ರಾಜುಗೌಡ ವ್ಯಂಗ್ಯ
Rae Bareli ರಣಕಣ; ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ: ಗೆಲುವು ಸುಲಭವೇ?