ಗಡಿ ಕಣ್ಗಾವಲಿಗೂ ಬರಲಿದೆ ಏರ್‌ ಇಂಡಿಯಾ!


Team Udayavani, Dec 17, 2020, 6:16 AM IST

ಗಡಿ ಕಣ್ಗಾವಲಿಗೂ ಬರಲಿದೆ ಏರ್‌ ಇಂಡಿಯಾ!

6 ವಿಮಾನಗಳಿಗೆ “ಎಇಡಬ್ಲ್ಯು ಆ್ಯಂಡ್‌ ಸಿ’ ಅಳವಡಿಕೆ
ಡಿಆರ್‌ಡಿಒದಿಂದ ಅಗತ್ಯ ಮಾರ್ಪಾಡು, ರಾಡಾರ್‌ ಅಳವಡಿಕೆ
ಗಡಿಗಳಲ್ಲಿ ಕಣ್ಗಾವಲು ಹೊಣೆ

ಹೊಸದಿಲ್ಲಿ: ಇಷ್ಟು ದಿನ ಏರ್‌ಇಂಡಿಯಾ ವಿಮಾನ­ಗಳು ಪ್ರಯಾಣಿಕರ ಸಾಗಾಟಕ್ಕಷ್ಟೇ ಸೀಮಿತವಾಗಿ­ದ್ದವು. ಡಿಆರ್‌ಡಿಒ ತಾಂತ್ರಿಕ ಸ್ಪರ್ಶದಿಂದ ಈ ವಿಮಾನಗಳಿನ್ನು ಗಡಿ ಆಗಸದಲ್ಲೂ ಕಣ್ಗಾವಲು ವಿಮಾನಗಳಾಗಿ ಹಾರಾಟ ನಡೆಸಲಿವೆ!

ಹೌದು, ಭಾರತೀಯ ವಾಯುಪಡೆ 6 ವಾಯುಗಾಮಿ ಮುನ್ಸೂಚಕ ಮತ್ತು ನಿಯಂತ್ರಣ (ಎಇಡಬ್ಲ್ಯು ಆ್ಯಂಡ್‌ ಸಿ) ವಿಮಾನಗಳನ್ನು ಪಾಕಿ­ಸ್ತಾನ ಮತ್ತು ಚೀನದ ಗಡಿಗೆ ನಿಯೋಜಿಸಲು ಸಿದ್ಧತೆ ಆರಂಭಿಸಿದೆ. ಇದಕ್ಕಾಗಿ ಪ್ರತ್ಯೇಕ ವಿಮಾನಗಳನ್ನು ನಿರ್ಮಿಸದೆ, ಏರ್‌ಇಂಡಿಯಾದ ಪ್ಯಾಸೆಂಜರ್‌ ವಿಮಾನಗಳಿಗೇ “ಎಇಡಬ್ಲ್ಯು ಆ್ಯಂಡ್‌ ಸಿ’ ತಂತ್ರಜ್ಞಾನ ಅಳವಡಿಸಲು ತೀರ್ಮಾ­ನಿಸಿದೆ. 10,500 ಕೋ. ರೂ. ವೆಚ್ಚದಲ್ಲಿ “ಎಇಡಬ್ಲ್ಯು ಆ್ಯಂಡ್‌ ಸಿ’ ಬ್ಲಾಕ್‌-2 ಏರ್‌ಕ್ರಾಫ್ಟ್ಗಳನ್ನು ಅಭಿವೃದ್ಧಿಪಡಿಸಲು ಡಿಆರ್‌ಡಿಒಗೆ ಸೂಚಿಸಲಾಗಿದೆ.

ಮಾರ್ಪಾಡು ಹೇಗಿರಲಿದೆ?: ಸುಧಾರಿತ ಏರ್‌ಇಂಡಿಯಾ ವಿಮಾನಗಳನ್ನು ಯುದ್ಧವಿಮಾನ ಮಾದರಿಗೆ ಬದಲಿಸಲಾಗುತ್ತದೆ. ಇವುಗಳ ಮೇಲ್ಭಾಗದಲ್ಲಿ 360 ಡಿಗ್ರಿ ಕಣ್ಗಾವಲು ಸಾಮರ್ಥ್ಯವುಳ್ಳ ರಾಡಾರ್‌ಗಳನ್ನು ಅಳವಡಿಸಲಾ­ಗುತ್ತದೆ. ಸ್ಥಾಪಿತ ರಾಡಾರ್‌ಗಳಷ್ಟೇ ವಿಮಾನಗಳ ಮುಖೇನ ಚಲಿಸುವ ಈ ರಾಡಾರ್‌ಗಳೂ ನಿರ್ಣಾಯಕ ಪಾತ್ರ ವಹಿಸಲಿವೆ.

“ನೇತ್ರಾ’ಗಿಂತ ಸಮರ್ಥ: “ಈಗಿರುವ ನೇತ್ರಾ ಕಣ್ಗಾವಲು ವಿಮಾನಗಳಿಂತ 6 “ಎಇಡಬ್ಲ್ಯು ಆ್ಯಂಡ್‌ ಸಿ’ ಏರ್‌ಕ್ರಾಫ್ಟ್ಗಳು ಸುಧಾರಿತ ತಂತ್ರಜ್ಞಾನ ಹೊಂದಿರಲಿವೆ. ಶತ್ರು ಪ್ರದೇಶದ ಒಳಭಾಗದ ದಾಳಿಯ ಮುನ್ಸೂಚನೆಗಳನ್ನು ಸಮರ್ಥವಾಗಿ ಪತ್ತೆಹಚ್ಚಲಿವೆ’ ಎಂದು ಮೂಲಗಳು ತಿಳಿಸಿವೆ.

ಮಾರ್ಪಾಡಿನ ಬಳಿಕ ಯುರೋಪ್‌ಗೆ!
ಏರ್‌ಇಂಡಿಯಾದ 6 ವಿಮಾನಗಳ ಅಗತ್ಯ ಮಾರ್ಪಾಡಿನ ಅನಂತರ ಇವುಗಳನ್ನು ಯುರೋಪ್‌ನ ಪ್ರಮುಖ ರಾಡಾರ್‌ ವಿಮಾನಗಳ ಮೂಲ ಉಪಕರಣ ತಯಾರಕ ಸಂಸ್ಥೆಯೊಂದಕ್ಕೆ ಕಳುಹಿಸಿಕೊಡಲಾಗುತ್ತದೆ. ರಾಡಾರ್‌ ಸ್ಥಾಪನೆಯ ಕಾರ್ಯ ಅಲ್ಲಿ ನಡೆಯಲಿದೆ.

ಚೀನಕ್ಕೆ ಟೆಲಿಕಾಂ ಶಾಕ್‌
ಲಡಾಖ್‌ ಬಿಕ್ಕಟ್ಟಿನ ಬೆನ್ನಲ್ಲೇ ಕೇಂದ್ರ ಸರಕಾರ, ಚೀನೀ ಟೆಲಿಕಾಂ ಸೇವೆ ಉತ್ಪನ್ನಗಳ ಸಂಸ್ಥೆಗೆ ಶಾಕ್‌ ನೀಡಿದೆ. ವಿಶ್ವಾಸಾರ್ಹ ಟೆಲಿಕಾಂ ಉತ್ಪನ್ನ ಮಾರಾಟಗಾರ ಸಂಸ್ಥೆಗಳ ಪಟ್ಟಿ ತಯಾರಿಸಲು ಕೇಂದ್ರ ಮುಂದಾಗಿದೆ. ಈ ಸಂಬಂಧ ಭದ್ರತೆ ಕುರಿತಾದ ಸಂಸದೀಯ ಸಮಿತಿಯು ಟೆಲಿಕಮ್ಯೂ ನಿಕೇಷನ್ಸ್‌ ವಲಯದ ರಾಷ್ಟ್ರೀಯ ಭದ್ರತಾ ನಿರ್ದೇಶನ ವಿಭಾಗಕ್ಕೆ ಸೂಚನೆ ಹೊರಡಿಸಿದೆ. “ಟೆಲಿಕಾಂ ಸೇವಾ ಪೂರೈಕೆದಾರರ ಅನುಕೂಲಕ್ಕಾಗಿ ವಿಶ್ವಾಸಾರ್ಹ ಮೂಲಗಳ/ ಉತ್ಪನ್ನಗಳ ಪಟ್ಟಿಯನ್ನು ಸರಕಾರ ಘೋಷಿಸಲಿದೆ’ ಎಂದು ತಿಳಿಸಿದೆ.

ಟಾಪ್ ನ್ಯೂಸ್

1-qweqqweqwe

ಲೈಂಗಿಕ ಕಿರುಕುಳದೂರು ರಾಜಕೀಯ ಪ್ರೇರಿತ: ಪ.ಬಂಗಾಲ ಗವರ್ನರ್‌

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು

Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು

bjpRoad Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

Road Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

Uppinangady ಹೃದಯಾಘಾತ; ಯುವಕ ಸಾವು

Uppinangady ಹೃದಯಾಘಾತ; ಯುವಕ ಸಾವು

IND VS PAK

ಪಾಕ್‌ಗೆ ರಾಜತಾಂತ್ರಿಕ ಸಭ್ಯತೆ ಇಲ್ಲ: ಭಾರತ ಕಿಡಿ

Kadaba ಪತಿಯ ಕಿರುಕುಳ ತಾಳಲಾರದೆ ಪತ್ನಿ ಆತ್ಮಹತ್ಯೆ

Kadaba ಪತಿಯ ಕಿರುಕುಳ ತಾಳಲಾರದೆ ಪತ್ನಿ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqqweqwe

ಲೈಂಗಿಕ ಕಿರುಕುಳದೂರು ರಾಜಕೀಯ ಪ್ರೇರಿತ: ಪ.ಬಂಗಾಲ ಗವರ್ನರ್‌

Supreme Court

ಒಂದೇ ಹೆಸರಿರುವ ಅಭ್ಯರ್ಥಿಗಳ ಸ್ಪರ್ಧೆಗೆ ನಿಷೇಧ ಇಲ್ಲ: ಸುಪ್ರೀಂ

1-ewqeqewq

Eknath Shinde ಬಣ ಶಿವಸೇನೆ ಸೇರಿದ ಮಾಜಿ ಸಂಸದ ಸಂಜಯ ನಿರುಪಮ್‌

2000

2,000 ರೂ.ನ 97.76% ನೋಟು ವಾಪಸ್‌: ಆರ್‌ಬಿಐ

police crime

Deepfake ವೀಡಿಯೋ ಸೃಷ್ಟಿಕರ್ತರನ್ನು ಬಂಧಿಸಿ: ಮಹಾ ಸರಕಾರ ಆದೇಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqqweqwe

ಲೈಂಗಿಕ ಕಿರುಕುಳದೂರು ರಾಜಕೀಯ ಪ್ರೇರಿತ: ಪ.ಬಂಗಾಲ ಗವರ್ನರ್‌

Supreme Court

ಒಂದೇ ಹೆಸರಿರುವ ಅಭ್ಯರ್ಥಿಗಳ ಸ್ಪರ್ಧೆಗೆ ನಿಷೇಧ ಇಲ್ಲ: ಸುಪ್ರೀಂ

1-ewqeqewq

Eknath Shinde ಬಣ ಶಿವಸೇನೆ ಸೇರಿದ ಮಾಜಿ ಸಂಸದ ಸಂಜಯ ನಿರುಪಮ್‌

2000

2,000 ರೂ.ನ 97.76% ನೋಟು ವಾಪಸ್‌: ಆರ್‌ಬಿಐ

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.