ನಾಳೆಯಿಂದ ಅವಳಿ ಜಿಲ್ಲೆ ಮಾರ್ಗದಲ್ಲಿ ರೈಲು ಸಂಚಾರ

ಕೋಲಾರ-ಚಿಕ್ಕಬಳ್ಳಾಪುರ ಜನತೆಗೆ ಅನುಕೂಲ , ಮಾರ್ಚ್‌ ತಿಂಗಳಿಂದ ಸ್ಥಗಿತಗೊಂಡಿದ್ದ ರೈಲು

Team Udayavani, Jan 3, 2021, 2:05 PM IST

ನಾಳೆಯಿಂದ ಅವಳಿ ಜಿಲ್ಲೆ ಮಾರ್ಗದಲ್ಲಿ ರೈಲು ಸಂಚಾರ

ಕೋಲಾರ/ಚಿಕ್ಕಬಳ್ಳಾಪುರ: ಕೋವಿಡ್ ಸೋಂಕು ಕಾರಣದಿಂದ 2020 ಮಾರ್ಚ್‌ 23 ರಿಂದ ಸ್ಥಗಿತಗೊಂಡಿದ್ದ ಡೆಮು ರೈಲು ಸಂಚಾರ 2021ರ ಜ.4 ಸೋಮವಾರದಿಂದ ಆರಂಭವಾಗುತ್ತಿದೆ.

ರೈಲ್ವೆ ಇಲಾಖೆಯು ಈಗಾಗಲೇ ಜಿಲ್ಲೆಯ ಮಾರಿಕುಪ್ಪಂನಿಂದ ಬೆಂಗಳೂರಿಗೆ ಡೆಮು ರೈಲುಸಂಚಾರ ಡಿಸೆಂಬರ್‌ನಲ್ಲಿ ಆರಂಭಿಸಿದ್ದು, ಇದೀಗಬಂಗಾರಪೇಟೆಯಿಂದ ಕೋಲಾರ ಮತ್ತುಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರಗಳ ಮೂಲಕಬೆಂಗಳೂರಿನ ಯಶವಂತಪುರ, ಮೆಜೆಸ್ಟಿಕ್‌ ಹಾಗೂಕಂಟೋನ್ಮೆಂಟ್‌ ರೈಲು ನಿಲ್ದಾಣಗಳಿಗೆ ಸಂಚಾರ ಆರಂಭವಾಗಲಿದೆ.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಮಾರ್ಗದಮೂಲಕ ಎರಡು ರೈಲುಗಳ ಬಂದು ಹೋಗುವ ಸಂಚಾರ ಆರಂಭಿಸಲು ನಿರ್ಧರಿಸಿರುವ ರೈಲ್ವೆ ಇಲಾಖೆಯು ಭಾನುವಾರ ಹೊರತುಪಡಿಸಿಪ್ರತಿದಿನದ ವೇಳಾಪಟ್ಟಿ ಪ್ರಕಟಿಸಿದೆ.

ಮಾರ್ಗ-1: ರೈಲು ಸಂಖ್ಯೆ 06270 ಪ್ರತಿದಿನ ಬೆಳಗ್ಗೆ 5.30 ಕ್ಕೆ ಬಂಗಾರಪೇಟೆ ಬಿಟ್ಟು ಕೋಲಾರ ಚಿಕ್ಕಬಳ್ಳಾಪುರ ಮಾರ್ಗವಾಗಿ ಬೆಳಗ್ಗೆ 9.25ಕ್ಕೆಯಶವಂತಪುರ ರೈಲು ನಿಲ್ದಾಣ ಸೇರುತ್ತದೆ. ಈ ರೈಲಕೋಲಾರವನ್ನು 5.50 ತಲುಪಿ 6 ಕ್ಕೆ ಬಿಡಲಿದೆ. ಚಿಕ್ಕಬಳ್ಳಾಪುರವನ್ನು 7.53 ಕ್ಕೆ ಬಿಟ್ಟು 7.55 ಕ್ಕೆ ಬಿಡಲಿದೆ.

ಮಾರ್ಗ-2: ರೈಲು ಸಂಖ್ಯೆ 06279 ಪ್ರತಿ ದಿನ ಬೆಳಗ್ಗೆ 8.30 ಕ್ಕೆ ಬೆಂಗಳೂರು ಯಶವಂತಪುರ ರೈಲು ನಿಲ್ದಾಣ ಬಿಟ್ಟು ಬಂಗಾರಪೇಟೆ ಮಧ್ಯಾಹ್ನ 12.30ಕ್ಕೆತಲುಪಲಿದೆ. ಚಿಕ್ಕಬಳ್ಳಾಪುರ ನಿಲ್ದಾಣ 9.45 ಕ್ಕೆ ತಲುಪಿ9.55 ಕ್ಕೆ ಬಿಡಲಿದೆ. ಕೋಲಾರವನ್ನು 11.28 ಕ್ಕೆ ತಲುಪಿ 11.30 ಕ್ಕೆ ಬಿಡಲಿದೆ.

ಮಾರ್ಗ-3: ರೈಲು ಸಂಖ್ಯೆ 0680 ಪ್ರತಿ ನಿತ್ಯವೂ ಸಂಜೆ 4 ಗಂಟೆಗೆ ಬಂಗಾರಪೇಟೆ ಬಿಟ್ಟುರಾತ್ರಿ 8.20 ಕ್ಕೆ ಬೆಂಗಳೂರುಮೆಜೆಸ್ಟಿಕ್‌ ತಲುಪಲಿದೆ. ಈರೈಲು ಕೋಲಾರವನ್ನು 4.22 ಕ್ಕೆತಲುಪಿ 4.23 ಕ್ಕೆ ಬಿಡಲಿದೆ.ಚಿಕ್ಕಬಳ್ಳಾಪುರ 6.07 ಕ್ಕೆ ತಲುಪಿ 6.08 ಕ್ಕೆ ಬಿಡಲಿದೆ.

ಮಾರ್ಗ-4: ರೈಲು ಸಂಖ್ಯೆ 06269 ಪ್ರತಿ ನಿತ್ಯವೂ ಸಂಜೆ 5.55 ಕ್ಕೆ ಬೆಂಗಳೂರು ಕಂಟೋನ್ಮೆಂಟ್‌ ರೈಲುನಿಲ್ದಾಣ ಬಿಟ್ಟು ರಾತ್ರಿ 9.45 ಕ್ಕೆ ಬಂಗಾರಪೇಟೆತಲುಪಲಿದೆ. ಚಿಕ್ಕಬಳ್ಳಾಪುರವನ್ನು ರಾತ್ರಿ 7.28 ಕ್ಕೆತಲುಪಿ 7.30 ಕ್ಕೆ ಬಿಡಲಿದೆ. ಕೋಲಾರವನ್ನು ರಾತ್ರಿ 9.10 ತಲುಪಿ 9.12 ಕ್ಕೆ ಬಿಡಲಿದೆ.

ಪ್ರಯಾಣಿಕರಿಗೆ ಅನುಕೂಲ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಮಾರ್ಗದಲ್ಲಿ ರೈಲುಗಳಸಂಚಾರವಾಗುವುದು ನಿತ್ಯವೂ ಸರ್ಕಾರಿ ಮತ್ತುಖಾಸಗಿ ಕಂಪನಿಗಳಲ್ಲಿ ಕೆಲಸಕ್ಕೆ ತೆರಳುವ ಉದ್ಯೋಗಿಗಳಿಗೆ ಹೆಚ್ಚು ಅನುಕೂಲವಾಗುತ್ತದೆ.ಹಾಗೆಯೇ ತಾವು ಬೆಳೆದ ತರಕಾರಿಗಳನ್ನು ರೈಲುಮೂಲಕ ಬೆಂಗಳೂರು ಮಾರುಕಟ್ಟೆಗೆ ಸಾಗಿಸಲು ರೈತಾಪಿ ವರ್ಗಕ್ಕೂ ಪ್ರಯೋಜನಕಾರಿಯಾಗಿದೆ.ಜೊತೆಗೆ ಬಸ್‌ಗಳಲ್ಲಿ 70 ರಿಂದ 80 ರೂ.ಟಿಕೆಟ್‌ ಖರೀದಿಸಿ ಪ್ರಯಾಣಿಸಲು ಕಷ್ಟವಾಗುವ ಬಡ ಹಾಗೂ ಸಾಮಾನ್ಯ ವರ್ಗದ ಪ್ರಯಾಣಿಕರುಇದಕ್ಕಿಂತಲೂಕಡಿಮೆ ಮೊತ್ತದಲ್ಲಿ ಬಂಗಾರಪೇಟೆಯಿಂದ ಬೆಂಗಳೂರಿನ ನಿಲ್ದಾಣಗಳಿಗೆ ಹೋಗಿ ವಾಪಸ್‌ ಬರಲು ಅನುಕೂಲವಾಗುತ್ತದೆ.

ಸಿದ್ಧತೆಗಳೇನು?: ಸತತ ಒಂಬತ್ತು ತಿಂಗಳಿನಿಂದಲೂಕೋಲಾರ ಮತ್ತು ಚಿಕ್ಕಬಳ್ಳಾಪುರ ಮಾರ್ಗದಲ್ಲಿ ರೈಲುಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಈಹಿನ್ನೆಲೆಯಲ್ಲಿ ಹೊಸದಾಗಿ ರೈಲು ಸಂಚಾರ ಆರಂಭವಾಗುತ್ತಿರುವುದರಿಂದ ಸುರಕ್ಷತೆಯ ದೃಷ್ಟಿಯಿಂದ ರೈಲ್ವೆ

ಇಲಾಖೆ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದೆ. ಟ್ರ್ಯಾಕ್‌ ಸುರಕ್ಷತೆ ಖಚಿತಪಡಿಸಿಕೊಳ್ಳಲು ರೈಲುಗಳ ಓಡಾಟ ಸ್ಥಗಿತಗೊಂಡಿದ್ದಾಗಲೂ ಪ್ರತಿ ಹದಿನೈದುದಿನಗಳಿಗೊಮ್ಮೆ ಟ್ರಯಲ್‌ ರೈಲುಗಳ ಸಂಚಾರ ನಡೆಸಿಟ್ರ್ಯಾಕ್‌ ಸುರಕ್ಷತೆ ದೃಢಪಡಿಸಿಕೊಳ್ಳಲಾಗುತ್ತಿತ್ತು.ಇದೀಗ ಪ್ರಯಾಣಿಕರ ಓಡಾಟ ಆರಂಭವಾಗುವಹಿನ್ನೆಲೆಯಲ್ಲಿ ಸ್ಟೇಷನ್‌ ಮಾಸ್ಟರ್‌ಗಳು ಕಡ್ಡಾಯವಾಗಿಫೇಸ್‌ ಮಾಸ್ಕ್ ಧರಿಸಿಯೇ ಟಿಕೆಟ್‌ ನೀಡಬೇಕೆಂದು ಸೂಚಿಸಲಾಗಿದೆ.

ಹಾಗೆಯೇ ಪ್ರಯಾಣಿಕರು ಸಾಮಾನ್ಯವಾಗಿ ಇರುವ ಕೋವಿಡ್‌ಮಾರ್ಗಸೂಚಿಗಳಾದ ಕಡ್ಡಾಯ ಮಾಸ್ಕ್, ಸ್ಯಾನಿಟೈಸರ್‌ ಬಳಕೆ ಇತ್ಯಾದಿಗಳನ್ನು ತಪ್ಪದೇ ಬಳಸಲುಸೂಚಿಸಲಾಗಿದೆ.

ಒಟ್ಟಾರೆ ಕೋಲಾರ ಚಿಕ್ಕಬಳ್ಳಾಪುರ ಮಾರ್ಗದಲ್ಲಿಮತ್ತೇ ರೈಲುಗಳ ಸಂಚಾರ ಆರಂಭವಾಗುತ್ತಿರುವುದುಅವಿಭಜಿತ ಕೋಲಾರ ಜಿಲ್ಲೆಯ ನೂರಾರು ಪ್ರಯಾಣಿಕರ ಸಂತಸಕ್ಕೆ ಕಾರಣವಾಗಿದೆ

ಒಂಬತ್ತು ತಿಂಗಳ ನಂತರ ಕೋಲಾರ ಮತ್ತುಚಿಕ್ಕಬಳ್ಳಾಪುರ ಮಾರ್ಗದಲ್ಲಿ ಡೆಮುರೈಲುಗಳ ಸಂಚಾರ ಆರಂಭವಾಗಲಿದೆ. ಕೋವಿಡ್‌ಮಾರ್ಗಸೂಚಿಗಳ ಪ್ರಕಾರ ಸುರಕ್ಷತೆಗೆ ಮಾರ್ಗಸೂಚಿ ಬಂದಿದೆ. ಜೋಡಿಜಿಲ್ಲೆಯ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಪ್ರಯೋಜನ ಪಡೆಯಲು ಕೋರಿದೆ. – ಅಮರೇಶ್‌, ಸ್ಟೇಷನ್‌ ಮಾಸ್ಟರ್‌

ಕೋಲಾರ ಮತ್ತು ಚಿಕ್ಕಬಳ್ಳಾಪುರ ಮಾರ್ಗದಲ್ಲಿ ಡೆಮು ರೈಲುಗಳ ಸಂಚಾರಆರಂಭವಾಗುತ್ತಿರುವುದು ಸಂತೋಷ. ಬಡವರು ಮತ್ತು ವ್ಯಾಪಾರಿ, ಕೃಷಿಕರು ತಮ್ಮ ಸರಕುಸಾಗಾಣಿಕೆಗಾಗಿ ಸುಲಭ ದರದಲ್ಲಿ ಬೆಂಗಳೂರಿಗೆ ಹೋಗಿ ಬರಲು ಅನುಕೂಲವಾಗುತ್ತದೆ. ಕೋಲಾರದಿಂದ ಬೆಳಗ್ಗೆ 7 ಗಂಟೆ ವೇಳೆಗೆಮತ್ತೂಂದು ರೈಲು ಸಂಚಾರ ಆರಂಭಿಸಿದರೆಮತ್ತಷ್ಟು ಅನುಕೂಲವಾಗುತ್ತದೆ. – ಚಾನ್‌ಪಾಷಾ, ರೈಲ್ವೆ ಪ್ರಯಾಣಿಕರು. ಕೋಲಾರ

 

 -ಕೆ.ಎಸ್‌.ಗಣೇಶ್‌/ತಮೀಮ್‌ ಪಾಷ

ಟಾಪ್ ನ್ಯೂಸ್

1-weweewq

Modi ಕೈ ಬಲ ಪಡಿಸಲು ಜೋಶಿ ಗೆಲ್ಲಬೇಕು : ಏಕನಾಥ ಶಿಂಧೆ

eshwarappa

Modi ಫೋಟೋ ಬಳಕೆ ಹಕ್ಕು 140 ಕೋಟಿ ಜನರಿಗೂ ಇದೆ: ಈಶ್ವರಪ್ಪ

1——asdsad

IPL ರೋಚಕ ಪಂದ್ಯ:ರಾಜಸ್ಥಾನ್‌ ವಿರುದ್ಧ ಹೈದರಾಬಾದ್ ಗೆ 1 ರನ್ ಜಯ

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

1-wewqewqe

BJP; ಭಾರತ ವಿಶ್ವ ಮಟ್ಟದಲ್ಲಿ ಮಿಂಚಿದ್ದು ಮೋದಿ ಅಭಿವೃದ್ಧಿಯಿಂದ: ಅಣ್ಣಾಮಲೈ

1-asdsad

Farmers ಸಂಪೂರ್ಣ ಸಾಲ ಮನ್ನಾ ಮಾಡದಿದ್ದರೆ ಬೀದಿಗಿಳಿದು ಹೋರಾಟ:ಯಡಿಯೂರಪ್ಪ

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

Kolar; ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

DR SUDHA

Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweewq

Modi ಕೈ ಬಲ ಪಡಿಸಲು ಜೋಶಿ ಗೆಲ್ಲಬೇಕು : ಏಕನಾಥ ಶಿಂಧೆ

rahul gandhi (2)

ನಾನು ರಾಹುಲ್‌ ಫಿಟ್ನೆಸ್‌ ಅಭಿಮಾನಿ: ಶಿವರಾಜ್‌ಕುಮಾರ್‌

eshwarappa

Modi ಫೋಟೋ ಬಳಕೆ ಹಕ್ಕು 140 ಕೋಟಿ ಜನರಿಗೂ ಇದೆ: ಈಶ್ವರಪ್ಪ

Exam 2

ಕೆಸೆಟ್‌: ತಾತ್ಕಾಲಿಕ ಅಂಕ ಪ್ರಕಟ

35

Siddaramaiah: ಚುನಾವಣೆ ಬಂದಾಗ ಮೋದಿಗೆ ರಾಜ್ಯದ ನೆನಪು; ಸಿದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.