ತೆಲಂಗಾಣದಲ್ಲಿ ನಾಯಕತ್ವ ಬದಲು?
Team Udayavani, Jan 21, 2021, 7:00 AM IST
ಹೈದರಾಬಾದ್: ತೆಲಂಗಾಣದಲ್ಲಿ ನಾಯಕತ್ವ ಬದಲಾವಣೆಯಾಗ ಲಿ ದೆಯೇ? ಹೈದರಾಬಾದ್ನಲ್ಲಿ ಕಳೆದ ಕೆಲವು ಸಮಯಗಳಿಂದ ಚಾಲ್ತಿಯ ಲ್ಲಿರುವ ವದಂತಿಗಳ ಪ್ರಕಾರ ಹೌದು. ಮುಂದಿನ ತಿಂಗಳು ಮುಖ್ಯಮಂತ್ರಿ ಸ್ಥಾನಕ್ಕೆ ಕವಲಕುಂಟ ಚಂದ್ರಶೇಖರ ರಾವ್ ಪುತ್ರ ಕವಲಕುಂಟ ತಾರಕ ರಾಮ ರಾವ್ ನೇಮಕವಾಗುವುದು ಬಹುತೇಕ ಖಚಿತವೇ ಆಗಿದೆ.
ಈ ಬಗ್ಗೆ ಹಾಲಿ ಮುಖ್ಯಮಂತ್ರಿ ಕವಲಕುಂಟ ಚಂದ್ರಶೇಖರ ರಾವ್ ಕುಟುಂಬ ಸದಸ್ಯರಲ್ಲಿ ಚರ್ಚೆ ನಡೆಯುತ್ತಿದೆ. ಮುಂದಿನ ಮುಖ್ಯಮಂತ್ರಿ ಕೆ.ಟಿ.ರಾಮ ರಾವ್ ಅವ ರೇ ಆಗಲಿದ್ದಾರೆ. ಶೀಘ್ರ ವೇ ಅಂದರೆ ಮುಂದಿನ ತಿಂಗಳೇ ನಾಯಕತ್ವ ಬದಲಾಗಲಿದೆ. ಜತೆಗೆ ಹಾಲಿ ಸಂಪುಟದಲ್ಲಿಯೂ ಮಹತ್ವಪೂರ್ಣ ಬದಲಾವಣೆ ನಡೆಯಲಿದೆ ಎಂದು ರಾವ್ ಕುಟುಂಬದ ನಿಕಟ ವರ್ತಿಗಳನ್ನು ಉಲ್ಲೇಖೀಸಿ “ನ್ಯೂಸ್18′ ಆಂಗ್ಲ ಸುದ್ದಿವಾಹಿನಿ ವರದಿ ಮಾಡಿದೆ.
ತೆಲಂಗಾಣದ ಹಾಲಿ ವಿಧಾನಸಭೆಯ ಅವಧಿ 2023ಕ್ಕೆ ಮುಕ್ತಾಯಗೊಳ್ಳಲಿದೆ. ಇತ್ತೀಚೆಗಷ್ಟೇ “10 ಟಿವಿ ನ್ಯೂಸ್’ ಎಂಬ ಸುದ್ದಿವಾಹಿನಿಗೆ ನೀಡಿದ್ದ ಸಂದರ್ಶ ನದಲ್ಲಿ ಮಾತನಾಡಿದ್ದ ಆರೋಗ್ಯ ಸಚಿವ ಎಟೇಲ ರಾಜೇಂದ್ರ “ತೆಲಂಗಾಣ ಸರಕಾರದ ಪ್ರಮುಖ ನಿರ್ಧಾರಗಳೆಲ್ಲವೂ ಕೆ.ಟಿ.ರಾಮ ರಾವ್ ಅವರ ಜತೆಗೆ ಚರ್ಚೆ ನಡೆಸಿಯೇ ಕೈಗೊಳ್ಳಲಾಗುತ್ತದೆ. ನಾಯಕತ್ವ ಬದಲಾವಣೆ ತಪ್ಪೇನಲ್ಲ’ ಎಂದು ಹೇಳಿದ್ದರು.
ರಾಷ್ಟ್ರ ರಾಜಕಾರಣಕ್ಕೆ ಕೆಸಿಆರ್: 2023ರ ವರೆಗೆ ಕೆ.ಚಂದ್ರಶೇಖರ ರಾವ್ ಅವರೇ ಮುಖ್ಯಮಂತ್ರಿಯಾಗಿ ಇರಲಿ. ಸದ್ಯಕ್ಕೆ ನಾಯಕತ್ವ ಬೇಡ ಎನ್ನುವುದು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್)ಯ ನಾಯಕರೆಲ್ಲರ ಒಲವಾಗಿತ್ತು. ಜತೆಗೆ ರಾಮ ರಾವ್ ಸಹಜವಾಗಿಯೇ ಕೆಸಿಆರ್ ಸ್ಥಾನಕ್ಕೆ ಬರಲಿದ್ದಾರೆ ಎನ್ನುವುದನ್ನು ಚರ್ಚಿಸಿದ್ದರು. ಕೆಸಿಆರ್ ಅವರಿಗೆ ರಾಷ್ಟ್ರ ರಾಜಕಾರಣದಲ್ಲಿ ಮುಂದುವರಿಯುವ ನಿಟ್ಟಿನಲ್ಲಿ ಈ ಬದಲಾವಣೆ ಎನ್ನಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
E.D. ಬಂಧನ ಪ್ರಶ್ನಿಸಿದ್ದ ಸೊರೇನ್ ಅರ್ಜಿ ತಿರಸ್ಕಾರ
Smriti ಇರಾನಿ ಎದುರು ಗೆಲುವು ಅಸಾಧ್ಯ ಎಂದು ಗೊತ್ತಾಗಿದೆ: ರಾಹುಲ್ ಗೆ ಬಿಜೆಪಿ ತಿರುಗೇಟು
Campaign: ಮತದಾರರನ್ನು ಸೆಳೆಯಲು ಪ್ಯಾರಾ ಗ್ಲೈಡರ್ ಮೂಲಕ ಅಭಿಯಾನ
Lok Sabha Election: ಬೃಜ್ ಭೂಷಣ್ ಸಿಂಗ್ ಬದಲಿಗೆ ಪುತ್ರನಿಗೆ ಟಿಕೆಟ್ ನೀಡಿದ ಬಿಜೆಪಿ
ಕಾಂಗ್ರೆಸ್ನಿಂದ ಮತ ಬ್ಯಾಂಕ್ ರಾಜಕಾರಣ; ನೇಹಾ ಹತ್ಯೆ ಲವ್ ಜೆಹಾದ್:ಅಮಿತ್ ಶಾ ಆರೋಪ
MUST WATCH
ಹೊಸ ಸೇರ್ಪಡೆ
Sullia ವಿವಿಧೆಡೆ ಕಾಡಾನೆಗಳಿಂದ ಕೃಷಿ ಹಾನಿ : ಅರಣ್ಯ ಇಲಾಖೆ ಅಧಿಕಾರಿಗಳಿಂದ ಪರಿಶೀಲನೆ
Theme Park Karkala ಅವಶೇಷ ತೆರವಿಗೆ ಕೋರ್ಟ್ ಆದೇಶ; ಜಿಲ್ಲಾಧಿಕಾರಿ ತಡೆ!
E.D. ಬಂಧನ ಪ್ರಶ್ನಿಸಿದ್ದ ಸೊರೇನ್ ಅರ್ಜಿ ತಿರಸ್ಕಾರ
Parashurama Theme Park; ಕೊನೆಯ ಸಾಕ್ಷ್ಯವೂ ನಾಶಕ್ಕೆ ಯತ್ನ: ಉದಯ ಕುಮಾರ್ ಶೆಟ್ಟಿ ಆರೋಪ
Rahul Gandhi ಭೇಟಿ ಯಾವುದೇ ಪರಿಣಾಮ ಬೀರದು: ಬಿಎಸ್ವೈ