ಪಂಟ ಮುಂದಕ್ಕೆ ಹೋಗೋಕೆ ಕಾರಣ ಏನು ಗೊತ್ತಾ?
Team Udayavani, Feb 16, 2017, 11:14 AM IST
ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಎಸ್. ನಾರಾಯಣ್ ನಿರ್ದೇಶನದ “ಪಂಟ’ ಚಿತ್ರ ಬಿಡುಗಡೆಯಾಗಬೇಕಿತ್ತು. ಈ ಕುರಿತು ಜಾಹೀರಾತುಗಳು ಸಹ ಬಂದಿದ್ದವು. ಆದರೆ, ಕೊನೆಯ ಹಂತದಲ್ಲಿ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ. ಹಾಗೆ ಮುಂದಕ್ಕೆ ಹೋಗುವುದಕ್ಕೆ ಕಾರಣವೇನು ಗೊತ್ತಾ? “ಚೌಕ’ ಚಿತ್ರದ “ಅಲ್ಲಾಡ್ಸುಅಲ್ಲಾಡ್ಸು…’ ಹಾಡು.
“ಚೌಕ’ ಚಿತ್ರದ “ಅಲ್ಲಾಡ್ಸುಅಲ್ಲಾಡ್ಸು…’ ಹಾಡಿಗೂ, “ಪಂಟ’ ಮುಂಂದೂಡಲ್ಪಟ್ಟಿದ್ದಕ್ಕೂ ಸಂಬಂಧವೇನು ಎಂಬ ಪ್ರಶ್ನೆ ಸಹಜ. ವಿಷಯವೇನೆಂದರೆ, “ಚೌಕ’ ಚಿತ್ರದ “ಅಲ್ಲಾಡ್ಸುಅಲ್ಲಾಡ್ಸು…’ ಯಾವ ಪರಿ ಜನಪ್ರಿಯವಾಯಿತು ಎಂಬುದು ಗೊತ್ತು ತಾನೇ? ನಾರಾಯಣ್ ಸಹ “ಪಂಟ’ಕ್ಕೆ “ಕುಲುಕು ಕುಲುಕು …’ ತರಹದ ಹಾಡೊಂದನ್ನು ಮಾಡಿದ್ದರಂತೆ.
ಆದರೆ, ಯಾಕೋ ಅದು ಸರಿ ಹೋಗಲಿಲ್ಲ ಎಂಬ ಕಾರಣಕ್ಕೆ ಬಿಟ್ಟಿದ್ದರಂತೆ. ಚಿತ್ರೀಕರಣ ಸಹ ಮಾಡದೆ ಸುಮ್ಮನಿದ್ದರಂತೆ. ಈಗ “ಅಲ್ಲಾಡ್ಸುಅಲ್ಲಾಡ್ಸು…’ ಹಾಡು ಜನಪ್ರಿಯವಾಗಿರುವ ಹಿನ್ನೆಲೆಯಲ್ಲಿ, “ಪಂಟ’ದ ನಿರ್ಮಾಪಕ ಸುಬ್ರಹ್ಮಣ್ಯಂ, ತಮ್ಮ ಚಿತ್ರದಲ್ಲೂ ಆ ತರಹದ್ದೊಂದು ಹಾಡಿದ್ದರೆ ಚೆನ್ನ ಎಂದು ಅಭಿಪ್ರಾಯ ವ್ಯಕ್ತಪಡಿಸಿದರಂತೆ.
ಮುಂಚೆ ಈ ಹಾಡು ಬೇಡ ಎಂದು ತೀರ್ಮಾನಿಸಿದ್ದ ನಾರಾಯಣ್, ಕೊನೆಗೆ ನಿರ್ಮಾಪಕರ ಒತ್ತಾಯಕ್ಕೆ ಮಣಿದು, ಹಾಡನ್ನು ಸೇರಿಸುವುದಕ್ಕೆ ತೀರ್ಮಾನಿಸಿದ್ದಾರೆ. ಹಾಡು ಸೇರಿಸುವುದು ಎಂದರೆ, ಅದು ಸುಲಭದ ಮಾತೇ? ಮೊದಲು ಚಿತ್ರೀಕರಣ ಮಾಡಿ, ಎಡಿಟ್ ಮಾಡಿ, ಆ ನಂತರ ಇನ್ನೊಮ್ಮೆ ಸೆನ್ಸಾರ್ ಮಾಡಿಸಬೇಕು.
ಹಾಗಾಗಿ ಮೊದಲು ಮೂರು ದಿನಗಳ ಚಿತ್ರೀಕರಣ ಪ್ಲಾನ್ ಮಾಡಿದ್ದಾರೆ ನಾರಾಯಣ್. ಇಂದಿನಿಂದ ಮೂರು ದಿನಗಳ ಕಾಲ ಚಿತ್ರೀಕರಣ ನಡೆಯಲಿದೆಯಂತೆ. ಆ ನಂತರ ಹಾಡನ್ನು ಸೇರಿಸಿ ಬಿಡುಗಡೆ ಮಾಡುತ್ತಿದ್ದಾರೆ ನಾರಾಯಣ್. ಅಲ್ಲಿಯವರೆಗೂ ತಾಳ್ಮೆಯಿಂದ ಕಾಯಬೇಕಷ್ಟೇ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
MUST WATCH
ಹೊಸ ಸೇರ್ಪಡೆ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!
LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ
Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ