![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-415x252.jpg)
ಶಿವಣ್ಣ ನಿರ್ಮಾಣದಲ್ಲಿ “ಭೈರತಿ ರಣಗಲ್’
Team Udayavani, Oct 31, 2018, 5:07 PM IST
![mufti.jpg](https://www.udayavani.com/wp-content/uploads/2018/10/31/mufti.jpg)
ಶಿವರಾಜಕುಮಾರ್ ಹಾಗೂ “ಮಫ್ತಿ’ ನರ್ತನ್ ಕಾಂಬಿನೇಷನ್ನಲ್ಲಿ “ಭೈರತಿ ರಣಗಲ್’ ಸಿನಿಮಾ ಬರಲಿದ್ದು, ಚಿತ್ರವನ್ನು ಕೆ.ಪಿ.ಶ್ರೀಕಾಂತ್ ಅಥವಾ ಜಯಣ್ಣ ನಿರ್ಮಿಸುತ್ತಾರಾ ಎಂಬ ಗೊಂದಲವಿತ್ತು. ಇದೀಗ ಚಿತ್ರವನ್ನು ಖುದ್ದು ಶಿವರಾಜ್ಕುಮಾರ್ ಅವರೇ ನಿರ್ಮಿಸಲಿದ್ದಾರೆ. ಹೌದು! ಶಿವಣ್ಣ ಇದೇ ಮೊದಲ ಬಾರಿಗೆ ತಮ್ಮ ಸಿನಿಮುತ್ತು ಕ್ರಿಯೇಷನ್ ಮೂಲಕ ಚಿತ್ರ ನಿರ್ಮಾಣಕ್ಕಿಳಿದ್ದಾರೆ.
ಯಾಕೆಂದರೆ ಭೈರತಿ ರಣಗಲ್ ಎನ್ನುವ ಹೆಸರು “ಮಫ್ತಿ’ ಚಿತ್ರದಲ್ಲಿ ಶಿವಣ್ಣ ಪಾತ್ರಧಾರಿಯ ಹೆಸರು. ಈ ಚಿತ್ರವನ್ನು ನಿರ್ಮಿಸಿದ್ದು ಜಯಣ್ಣ. ಆದರೆ, ಈ ಕ್ಯಾರೆಕ್ಟರ್ ಹೆಸರಿನಲ್ಲಿ ಸಿನಿಮಾ ಮಾಡುವುದಾಗಿ ಘೋಷಿಸಿದ್ದು ನಿರ್ಮಾಪಕ ಕೆ.ಪಿ. ಶ್ರೀಕಾಂತ್. ಹೀಗಾಗಿ ಇಬ್ಬರ ಪೈಕಿ ಯಾರಾದರೊಬ್ಬರು “ಭೈರತಿ ರಣಗಲ್’ ಚಿತ್ರಕ್ಕೆ ನಿರ್ಮಾಪಕರಾಗುತ್ತಾರೆಂದು ಅಂದುಕೊಳ್ಳಲಾಗಿತ್ತು.
ಆದರೆ ಈಗ ಶಿವಣ್ಣ ಚಿತ್ರವನ್ನು ನಿರ್ಮಿಸಲಿದ್ದಾರೆ. ಮುಖ್ಯವಾಗಿ ಶಿವಣ್ಣ ಅವರಿಗೆ “ಭೈರತಿ ರಣಗಲ್’ 125 ನೇ ಚಿತ್ರ. ನಿರ್ದೇಶಕ ನರ್ತನ್ “ಮಫ್ತಿ’ ನಂತರ ಮತ್ತೊಂದು ಪಕ್ಕಾ ಕಮರ್ಷಿಯಲ್ ಆ್ಯಕ್ಷನ್ ಸಿನಿಮಾ ಕೈಗೆತ್ತಿಕೊಂಡಿದ್ದು, ಚಿತ್ರದ ಟೈಟಲ್, “ಮಫ್ತಿ’ ಚಿತ್ರದಲ್ಲಿನ ಅವರ ಪಾತ್ರದ ಸ್ಪೆಷಾಲಿಟಿಗೆ ತಕ್ಕಂತೆಗೆ ಕಥೆಯನ್ನು ಹೆಣೆಯಲಾಗುತ್ತಿದೆಯಂತೆ.
ಟಾಪ್ ನ್ಯೂಸ್
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-415x252.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.