ಅಪ್ಪನ ಕನಸಿನ ಕುಚ್ಚಿಕು


Team Udayavani, Jul 4, 2018, 11:50 AM IST

nakshatra-2.jpg

ಎಲ್ಲವೂ ಅಂದುಕೊಂಡ ಆಗಿದ್ದರೆ “ಕುಚ್ಚಿಕು ಕುಚ್ಚಿಕೂ’ ಚಿತ್ರ ಬಿಡುಗಡೆಯಾಗಿ ನಾಲ್ಕೈದು ವರ್ಷಗಳೇ ಕಳೆಯಬೇಕಿತ್ತು. ಆದರೆ, ನಿರ್ದೇಶಕ ಡಿ.ರಾಜೇಂದ್ರ ಬಾಬು ಅವರ ನಿಧನ ಸೇರಿದಂತೆ ನಾನಾ ಕಾರಣಗಳಿಂದಾಗಿ ತಡವಾದ ಚಿತ್ರ, ಈ ವಾರ ಬಿಡುಗಡೆಯಾಗುತ್ತಿದೆ. ತನ್ನ ನಿರ್ದೇಶನದ ಸಿನಿಮಾದಲ್ಲಿ ಮಗಳನ್ನು ತೆರೆಯ ಮೇಲೆ ನೋಡಬೇಕೆಂಬ ಕನಸನ್ನು ಬಾಬು ಅವರು ಕಂಡಿದ್ದರು.

ತಮ್ಮ ಮಗಳ ನಟನೆತಯನ್ನು ನೋಡಿ ಬಾಬು ಅವರು ಸೆಟ್‌ನಲ್ಲಿ ಖುಷಿ ಕೂಡಾ ಪಟ್ಟಿದ್ದರಂತೆ. ಈ ವಿಷಯವನ್ನು ಬಾಬು ಅವರ ಮಗಳು, “ಕುಚ್ಚಿಕು ಕುಚ್ಚಿಕೂ’ ಚಿತ್ರದ ನಾಯಕಿ ನಕ್ಷತ್ರ (ದೀಪ್ತಿ) ನೆನಪಿಸಿಕೊಳ್ಳುತ್ತಾರೆ. “ಅಪ್ಪ ನನ್ನನ್ನು ಅವರ ಸಿನಿಮಾದ ಮೂಲಕ ತೆರೆಮೇಲೆ ನೋಡಬೇಕೆಂದು ಕನಸು ಕಂಡಿದ್ದರು. ಮೊದಲ ದಿನ ಅಪ್ಪನ ಸಿನಿಮಾದಲ್ಲಿ ನಟಿಸುವಾಗ ತುಂಬಾ ಭಯಪಟ್ಟಿದ್ದೆ.

ಏಕೆಂದರೆ, ಅವರಿಗೆ ಸಿಟ್ಟು ಬೇಗ ಬರುತ್ತಿತ್ತು. ಅವರ ಕಲ್ಪನೆಯ ದೃಶ್ಯ ಬಾರದೇ ಹೋದರೆ ಬೈಯ್ಯುತ್ತಾರೆಂಬ ಭಯದಿಂದಲೇ ಸೆಟ್‌ಗೆ ಹೋದೆ. ಆದರೆ, ನನಗೆ ಬೈಯ್ಯಲಿಲ್ಲ. ತುಂಬಾ ಕೂಲ್‌ ಆಗಿ ದೃಶ್ಯಗಳನ್ನು ತೆಗೆದರು. ನಟನೆಯ ವಿಷಯದಲ್ಲಿ ಆಗಷ್ಟೇ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದ ಜೆಕೆ ಹಾಗೂ ಪ್ರವೀಣ್‌ಗೆ ಅನೇಕ ವಿಷಯಗಳನ್ನು ಹೇಳಿಕೊಡುತ್ತಿದ್ದರು. ಆದರೆ, ನನಗೆ ಏನೂ ಹೇಳುತ್ತಿರಲಿಲ್ಲ. ಅ

ವರಿಗೆ ಹೇಳಿಕೊಡುತ್ತಿದ್ದಾರೆ, ನನಗ್ಯಾಕೆ ಏನೂ ಹೇಳುತ್ತಿಲ್ಲ ಎಂಬ ನಾನು ಯೋಚಿಸುತ್ತಲೇ ಇದ್ದೆ. ಆ ನಂತರ ಮನೆಗೆ ಹೋದ ಮೇಲೆ, “ಅವರಿಗೆ ಮಾತ್ರ ನಟನೆ ಬಗ್ಗೆ ಹೇಳ್ತಾ ಇದ್ರಿ, ನನಗೆ ಏನೂ ಹೇಳಲೇ ಇಲ್ಲ. ಯಾಕೆ’ ಎಂದು ಅಪ್ಪನನ್ನ ಕೇಳಿದೆ. ಆಗ ಅವರು, “ನೀನು ಚೆನ್ನಾಗಿ ನಟಿಸುತ್ತಿದ್ದೆ. ನಾನಂದುಕೊಂಡಂತೆ ಪಾತ್ರ ಪೋಷಣೆ ಮಾಡುತ್ತಿದ್ದೀಯ. ಹಾಗಾಗಿ, ನಿನಗೆ ಏನೂ ಹೇಳುವ ಸಂದರ್ಭ ಬರಲಿಲ್ಲ’ ಎಂದರು.

ಇದರಿಂದ ನಾನು ಖುಷಿಯಾದೆ’ ಎನ್ನುತ್ತಾ “ಕುಚ್ಚಿಕು ಕುಚ್ಚಿಕೂ’ ಸಿನಿಮಾದ ಚಿತ್ರೀಕರಣದ ಅನುಭವವನ್ನು ಬಿಚ್ಚಿಡುತ್ತಾರೆ ದೀಪ್ತಿ. ಈ ಸಿನಿಮಾದಲ್ಲಿ ನಕ್ಷತ್ರ ಅವರಿಗೆ ಒಳ್ಳೆಯ ಪಾತ್ರ ಸಿಕ್ಕಿದೆಯಂತೆ. ಇವತ್ತಿನ ಟ್ರೆಂಡ್‌ಗೆ ಈ ಸಿನಿಮಾ ಹೊಂದುತ್ತದೆ ಎಂಬ ವಿಶ್ವಾಸ ಕೂಡಾ ನಕ್ಷತ್ರ ಅವರಿಗಿದೆಯಂತೆ. ಈ ಚಿತ್ರವನ್ನು ಕೃಷ್ಣಮೂರ್ತಿ ನಿರ್ಮಿಸಿದ್ದಾರೆ. ಚಿತ್ರಕ್ಕೆ ಹಂಸಲೇಖಾ ಅವರ ಸಂಗೀತ, ನಂದಕುಮಾರ್‌ ಛಾಯಾಗ್ರಹಣವಿದೆ. 

ಟಾಪ್ ನ್ಯೂಸ್

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

Kohli IPL 2024

IPL; 10 ಸೀಸನ್‌, 400 ರನ್‌: ಕೊಹ್ಲಿ ಸಾಧನೆ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

Kohli IPL 2024

IPL; 10 ಸೀಸನ್‌, 400 ರನ್‌: ಕೊಹ್ಲಿ ಸಾಧನೆ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.