Kannada Cinema; ತೆರೆಗೆ ಸಿದ್ದವಾದ ‘ಮನದರಸಿ’
Team Udayavani, Mar 4, 2024, 4:52 PM IST
ಟಿ.ಎಸ್.ಕೃಷ್ಣಮೂರ್ತಿ ನಿರ್ದೇಶನ ಮಾಡಿರುವ “ಮನದರಸಿ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. “ಮುದ್ದು ಮನದ ಪಿಸು ಮಾತು’ ಎಂಬ ಅಡಿಬರಹವಿದೆ. “ಇದರಲ್ಲಿ ಲವ್ ಇರುವುದಿಲ್ಲ. ಆದರೂ ಪ್ರೇಮವಿದೆ. ಮಾಮೂಲು ಕಾಮಿಡಿ ಅಲ್ಲದಿದ್ದರೂ, ಮನರಂಜನೆ ಕೊಡುತ್ತದೆ. ಯಕ್ಷನ್ ಇಲ್ಲದಿದ್ದರೂ ಹೊಡೆದಾಟದ ದೃಶ್ಯಗಳು ಇರಲಿದೆ. ಇತ್ತೀಚೆಗೆ ಬರುತ್ತಿರವ ಸಿನಿಮಾಗಳ ಪೈಕಿ ವಿಭಿನ್ನ ಅಂತ ಹೇಳಬಹುದು. ಆದರ್ಶ ಪ್ರೇಮಿಗಳು ನೋಡಲೇಬೇಕಾದ ಚಿತ್ರ’ ಎನ್ನುವುದು ಚಿತ್ರತಂಡದ ಮಾತು.
“ಸಾರಿಕಣೇ’, “ಧೂಳಿಪಟ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟ, ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ರೂಪೇಶ್.ಡಿ.ರಾಜ್ ನಾಯಕ. ಅಲ್ಲದೇ ಸಿನಿಮಾಕ್ಕೆ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಪ್ರೀತು ಪೂಜಾ, ಸುಹಾನಗೌಡ, ಚುಂಬಿತ ನಾಯಕಿಯರು. ಇವರೊಂದಿಗೆ ಮೀಸೆ ಆಂಜನಪ್ಪ, ಅಂಜಲಿ, ಶ್ವೇತಾ ಮುಂತಾದವರು ನಟಿಸಿದ್ದಾರೆ.
ನಾಲ್ಕು ಹಾಡುಗಳಿಗೆ ವಿನು ಮನಸು ಸಂಗೀತ ಸಂಯೋಜಿಸಿದ್ದಾರೆ. ವೀನಸ್ ಮೂರ್ತಿ ಛಾಯಾಗ್ರಹಣ ಇರಲಿದೆ. ಬೆಂಗಳೂರು, ಮಂಗಳೂರು, ಕನಕಪುರ, ತುಮಕೂರು, ಕೋಲಾರ, ಹೊನ್ನಾವರ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
AI ತಂತ್ರಜ್ಞಾನ ಬಳಸಿ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಆಯ್ಕೆ
Kollywood: ಅಣ್ಣಾಮಲೈ ಬಯೋಪಿಕ್ಗೆ ತಯಾರಿ? ಖಡಕ್ ಐಪಿಎಸ್ ಅಧಿಕಾರಿಯಾಗಿ ವಿಶಾಲ್ ನಟನೆ?
Haveri: ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ ಮಾಡಿದ ಡಿಕೆಶಿ; ವಿಡಿಯೋ ವೈರಲ್
Kollywood: ಕಮಲ್ ಹಾಸನ್ ʼಇಂಡಿಯನ್ -2ʼ ಬಿಡುಗಡೆ ಮುಂದೂಡಿಕೆ; ಈ ತಿಂಗಳಿನಲ್ಲಿ ರಿಲೀಸ್?
Bellary; ಸಿದ್ದರಾಮಯ್ಯ ಹುಚ್ಚು ರಾಜಕಾರಣಕ್ಕೆ ದೊಡ್ಡ ಬೆಲೆ ತೆರಬೇಕಾಗುತ್ತದೆ: ಸದಾನಂದ ಗೌಡ