![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
ಸಾಯಿ ಪಲ್ಲವಿ ಒಮ್ಮೆ ಕನ್ನಡಕ್ಕೆ ಬಾರಮ್ಮ ….
ಅಂತೆ-ಕಂತೆ ಕೇಳಿ ಅಭಿಮಾನಿಗಳ ಬೇಸರ
Team Udayavani, May 8, 2019, 3:00 AM IST
![Sai-Pallavi—05](https://www.udayavani.com/wp-content/uploads/2019/05/Sai-Pallavi-05-620x348.jpg)
ಸಾಯಿ ಪಲ್ಲವಿ ಸದ್ಯ ಸೌತ್ ಸಿನಿ ದುನಿಯಾದ ಬೇಡಿಕೆಯ ನಟಿ. ತನ್ನ ಕ್ಯೂಟ್ ಲುಕ್, ಅಭಿನಯ ಮೂಲಕ ದೊಡ್ಡ ಅಭಿಮಾನಿ ವರ್ಗವನ್ನು ಹೊಂದಿರುವ ಸಾಯಿ ಪಲ್ಲವಿಯನ್ನು ಈಗ ಕನ್ನಡಕ್ಕೆ ಕರೆತರುವ ಪ್ರಯತ್ನ ನಡೆಯುತ್ತಿದೆ. ಸಾಯಿ ಪಲ್ಲವಿ ಬಿಝಿಯಾಗುತ್ತಿದ್ದಂತೆ ಆಕೆಯ ಹೆಸರು ಕೂಡಾ ಒಂದೊಂದೇ ಕನ್ನಡ ಸಿನಿಮಾಗಳಲ್ಲಿ ಕೇಳಿಬರುತ್ತಿದೆ.
ಹಾಗಂತ ಆಕೆ ಕನ್ನಡದಲ್ಲಿ ನಟಿಸುತ್ತಾರಾ ಎಂದರೆ ಸದ್ಯಕ್ಕೆ ಉತ್ತರವಿಲ್ಲ. ಈಗಾಗಲೇ ನಿರ್ದೇಶಕ ಮಹೇಶ್ ಕುಮಾರ್ ತಮ್ಮ “ಮದಗಜ’ ಚಿತ್ರಕ್ಕೆ ಸಾಯಿ ಪಲ್ಲವಿಯನ್ನು ಕರೆತರಲು ಪ್ರಯತ್ನಿಸುತ್ತಿರುವುದಾಗಿ ಹೇಳಿದ್ದಾರೆ. ಇದಕ್ಕೂ ಮುನ್ನ ನಿರ್ದೇಶಕರೊಬ್ಬರು ಸಾಯಿ ಪಲ್ಲವಿ ಹೆಸರನ್ನು ತಮ್ಮ ಸಿನಿಮಾ ಜೊತೆ ಹರಿಬಿಟ್ಟಿದ್ದರು.
ಆದರೆ, ಆ ಜಾಗಕ್ಕೆ ಬಂದಿದ್ದು, ಮಾತ್ರ ಬೇರೊಬ್ಬ ನವನಟಿ. ಈಗ ದರ್ಶನ್ ಅವರ “ರಾಬರ್ಟ್’ ಚಿತ್ರಕ್ಕೆ ಸಾಯಿ ಪಲ್ಲವಿ ಬರುತ್ತಾರೆಂಬ ಸುದ್ದಿ ಹಬ್ಬಿದೆ. ಹಾಗಂತ ಚಿತ್ರತಂಡ ಮಾತ್ರ ಈ ಬಗ್ಗೆ ಏನೂ ಮಾತನಾಡಿಲ್ಲ. ನಿರ್ದೇಶಕ ತರುಣ್ ಸುಧೀರ್ ಹೇಳುವಂತೆ, ಸಾಯಿ ಪಲ್ಲವಿ ಜೊತೆ ಚಿತ್ರತಂಡ ಮಾತುಕತೆ ನಡೆಸಿಯೇ ಇಲ್ಲವಂತೆ. ಹೀಗಿದ್ದರೂ ಆಕೆಯ ಹೆಸರು ಓಡಾಡುತ್ತಿದೆ.
ಪರಭಾಷಾ ಸ್ಟಾರ್ ನಟಿಯರ ಹೆಸರುಗಳು ಕನ್ನಡದಲ್ಲಿ ಸೆಟ್ಟೇರುತ್ತಿರುವ ದೊಡ್ಡ ಸಿನಿಮಾಗಳ ಸುತ್ತ ಓಡಾಡುವುದು ಇದು ಹೊಸತೇನಲ್ಲ. ಈ ಹಿಂದಿನಿಂದಲೂ ಇದು ನಡೆದುಕೊಂಡು ಬಂದಿದೆ. ಚಿತ್ರದ ನಿರ್ದೇಶಕರಿಗೆ ಆ ಬಗ್ಗೆ ಅರಿವಿಲ್ಲದಿದ್ದರೂ, ಯಾರೋ ಒಬ್ಬರು ದೊಡ್ಡ ನಟಿಯ ಹೆಸರನ್ನು ಹೇಳುವ ಮೂಲಕ ಸುದ್ದಿಗೆ ಕಾರಣರಾಗುತ್ತಾರೆ.
ಈ ಹಿಂದೆ ಅನುಷ್ಕಾ ಶೆಟ್ಟಿ, ಸಮಂತಾ, ತಮನ್ನಾ … ಹೀಗೆ ಅನೇಕ ನಟಿಯರ ಹೆಸರುಗಳು ಸ್ಟಾರ್ ಸಿನಿಮಾಗಳ ನಾಯಕಿಯರ ಪಟ್ಟಿಯಲ್ಲಿ ಓಡಾಡಿವೆ. ನಟಿ ಪ್ರಿಯಾ ವಾರಿಯರ್ ಕಣ್ಸನ್ನೆ ಮೂಲಕ ಜನಪ್ರಿಯವಾಗುತ್ತಿದ್ದಂತೆ ಕನ್ನಡ ಸಿನಿಮಾವೊಂದರಲ್ಲಿ ಆಕೆಯ ಹೆಸರು ಕೂಡಾ ಕೇಳಿಬಂದಿತ್ತು.
ಆದರೆ, ಆಕೆ ಬರಲಿಲ್ಲ ಎಂಬುದು ಬೇರೆ ಮಾತು. ಈಗ ಕನ್ನಡದ ಒಂದಷ್ಟು ಸಿನಿಮಾಗಳು ಸೆಟ್ಟೇರುತ್ತಿದ್ದಂತೆ ಸಾಯಿ ಪಲ್ಲವಿ ಹೆಸರು ಕೇಳಿಬರುತ್ತಿದೆ. ಹೀಗೆ ಸುಖಾಸುಮ್ಮನೆ ಹೆಸರನ್ನು ಕೇಳಿದ ಕನ್ನಡ ಸಿನಿ ಪ್ರೇಮಿಗಳು “ಸಾಯಿ ಪಲ್ಲವಿ ಒಮ್ಮೆ ಕನ್ನಡಕ್ಕೆ ಬಾರಮ್ಮ …’ ಎನ್ನುತ್ತಿರುವುದು ಸುಳ್ಳಲ್ಲ.
ಟಾಪ್ ನ್ಯೂಸ್
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
![1-aaasdeqweqw](https://www.udayavani.com/wp-content/uploads/2024/07/1-aaasdeqweqw-150x100.jpg)
India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್ ಯುಗಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.