![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-415x250.jpg)
ಕಿರಿಕ್ ಕೀರ್ತಿ ಜತೆ ಸಂಜನಾ ಡಿಂಗು ಡಾಂಗು!
Team Udayavani, Feb 18, 2017, 11:49 AM IST
![Sanjana-1.jpg](https://www.udayavani.com/wp-content/uploads/2017/02/18/Sanjana-1.jpg)
“ಬಿಗ್ ಬಾಸ್’ ಮನೆಗೆ ಹೋಗಿ ಒಂದಷ್ಟು ಸುದ್ದಿಯಾಗಿ ಹೊರಬಂದ ನಿರ್ದೇಶಕ ಓಂಪ್ರಕಾಶ್ ರಾವ್, ಒಂದು ಸಿನಿಮಾ ಅನೌನ್ಸ್ ಮಾಡಿಬಿಟ್ಟರು. ಅವರು ನಿರ್ದೇಶಿಸಲಿರುವ ಸಿನಿಮಾಗೆ “ಕಿರಿಕ್ ಕೀರ್ತಿ’ ಎಂದು ನಾಮಕರಣವನ್ನೂ ಮಾಡಿಬಿಟ್ಟರು! ಈ “ಕಿರಿಕ್ ಕೀರ್ತಿ’ ಹೆಸರು ಕೇಳಿದೊಡನೆ, ನೆನಪಾಗೋದು ಮತ್ತದೇ “ಬಿಗ್ ಬಾಸ್’ ಮನೆಯ ಮತ್ತೂಬ್ಬ ಸ್ಪರ್ಧಿ ಕಿರಿಕ್ ಕೀರ್ತಿ. ಹೌದು. ಕಿರಿಕ್ ಕೀರ್ತಿ ಅವರಿಗಾಗಿ, ಓಂ ಪ್ರಕಾಶ್ರಾವ್ ಅವರು ಸಿನಿಮಾವೊಂದನ್ನು ನಿರ್ದೇಶಿಸಲು ಅಣಿಯಾಗಿದ್ದಾರೆ.
ಈಗಾಗಲೇ ಅವರು ಅದಕ್ಕೆ ತಕ್ಕಂತೆ ತಯಾರೂ ಮಾಡಿಕೊಂಡಿದ್ದಾಗಿದೆ. ಅಂದಹಾಗೆ, ಈ ಸಿನಿಮಾಗೆ ಕಿರಿಕ್ ಕೀರ್ತಿ ಹೀರೋ. ಈ ಸುದ್ದಿ ಈ ಹಿಂದೆಯೇ ಹೊರಬಿದ್ದಿತ್ತು. ಆದರೆ, ನಿರ್ದೇಶಕ ಓಂಪ್ರಕಾಶ್ರಾವ್ ಅವರು ಮಾತ್ರ ಯಾರನ್ನು ನಾಯಕಿಯನ್ನಾಗಿಸುತ್ತಾರೆ ಎಂಬುದು ಮಾತ್ರ ಇನ್ನು, ಗೌಪ್ಯವಾಗಿತ್ತು. ಈಗ ಓಂಪ್ರಕಾಶ್ರಾವ್, ಕಿರಿಕ್ ಕೀರ್ತಿಗೆ ನಾಯಕಿಯನ್ನು ಹುಡುಕಿದ್ದಾಗಿದೆ. ಅವರು ಕೂಡ ಬಿಗ್ಬಾಸ್ ಸ್ಪರ್ಧಿ ಅನ್ನೋದು ವಿಶೇಷ. ಅವರು ಬೇರಾರೂ ಅಲ್ಲ, ಸಂಜನಾ.
ಹೌದು, ಸಂಜನಾ “ಕಿರಿಕ್ ಕೀರ್ತಿ’ ಚಿತ್ರಕ್ಕೆ ನಾಯಕಿಯಾಗಿದ್ದಾರೆ. ಓಂಪ್ರಕಾಶ್ರಾವ್, ಬಿಗ್ಬಾಸ್ ಮನೆಯಲ್ಲಿದ್ದಾಗಲೇ, ಕಿರಿಕ್ ಕೀರ್ತಿ ಹಾಗೂ ಸಂಜನಾ ಇವರಿಬ್ಬರನ್ನೂ ಹತ್ತಿರದಿಂದಲೇ ನೋಡಿದ್ದರು. ಅವರ ಮ್ಯಾನರಿಸಂ ಬಗ್ಗೆಯೂ ತಿಳಿದುಕೊಂಡಿದ್ದರು. ಅಲ್ಲೇ ಒಂದು ಸ್ಕೆಚ್ ಹಾಕಿದ್ದ ಓಂ, ಹೊರ ಬರುತ್ತಿದ್ದಂತೆಯೇ, ಇಬ್ಬರನ್ನೂ ಇಟ್ಟುಕೊಂಡು ಕ್ಯಾಮೆರಾ ಮುಂದೆ ನಿಲ್ಲಿಸಲು ರೆಡಿಯಾಗಿದ್ದಾರೆ. ಕಿರಿಕ್ ಕೀರ್ತಿ ಈಗಾಗಲೇ ಗುರುಪ್ರಸಾದ್ ನಿರ್ದೇಶನದ “ಎರಡನೇ ಸಲ’ ಚಿತ್ರದಲ್ಲಿ ಒಂದು ಪಾತ್ರ ನಿರ್ವಹಿಸಿದ್ದಾರೆ.
ಹಾಗಾಗಿ, ಕಿರಿಕ್ ಕೀರ್ತಿಗೆ ಸಿನಿಮಾ ಹೊಸದೇನೂ ಅಲ್ಲದಿದ್ದರೂ, ಹೀರೋ ಆಗಿ ಇದು ಮೊದಲ ಹೆಜ್ಜೆ. ಇನ್ನು, ಸಂಜನಾ ಕೂಡ “ಬಿಗ್ ಬಾಸ್’ ಮನೆಯಿಂದ ಹೊರಬಂದಿದ್ದೇ ತಡ, ಒಂದಷ್ಟು ಸಿನಿಮಾ ಮಂದಿ ಸಂಜನಾಳರನ್ನು ಹುಡುಕಿ ಹೋಗಿದ್ದು ನಿಜ. ಎಷ್ಟೋ ನಿರ್ದೇಶಕರು, ತಮ್ಮ ಚಿತ್ರದ ಹಾಡೊಂದಕ್ಕೆ ಹೆಜ್ಜೆ ಹಾಕಿ ಬನ್ನಿ ಅಂತ ಆಹ್ವಾನಿಸಿದ್ದುಂಟು. ಆದರೆ, ಸಂಜನಾ ಮಾತ್ರ ಎಲ್ಲವನ್ನೂ ಬದಿಗೊತ್ತಿ, “ಮೊಂಬತ್ತಿ’ ಎಂಬ ಚಿತ್ರದ ಹಾಡೊಂದರಲ್ಲಿ ಕಾಣಿಸಿಕೊಂಡರು. ಅದೊಂದು ಸ್ಪೆಷಲ್ ಸಾಂಗ್ ಆಗಿತ್ತು.
ಅದಾದ ಬಳಿಕ ಒಂದಷ್ಟು ನಿರ್ದೇಶಕರುಗಳು, ತಮ್ಮ ಚಿತ್ರದಲ್ಲೂ ಒಂದು ಐಟಂ ಸಾಂಗ್ ಇದೆ. ಆ ಸಾಂಗ್ಗೆ ಸ್ಟೆಪ್ ಹಾಕ್ತೀರಾ ಅಂತಾನೂ ಕೇಳಿದ್ದುಂಟು. ಆದರೆ, ಸಂಜನಾ, ಡ್ಯಾನ್ಸ್ ಮಾಡಬೇಕಾ, ಬಿಡಬೇಕಾ ಎಂಬ ಗೊಂದಲದಲ್ಲಿರುವಾಗಲೇ, ಓಂಪ್ರಕಾಶ್ರಾವ್ ಅವರು ಸಂಜನಾರನ್ನು ನಾಯಕಿಯನ್ನಾಗಿ ಮಾಡಿದ್ದಾರೆ. ರಮೇಶ್ ಯಾದವ್ ಹಾಗೂ ಸುಧೀಂದ್ರ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಎಂ.ಎಸ್.ರಮೇಶ್ ಅವರು “ಕಿರಿಕ್ ಕೀರ್ತಿ ಚಿತ್ರಕ್ಕೆ ಮಾತುಗಳನ್ನು ಪೋಣಿಸಿದ್ದಾರೆ. ಚಂದನ್ ಶೆಟ್ಟಿ ಸಂಗೀತ ನೀಡುತ್ತಿದ್ದಾರೆ.
ಟಾಪ್ ನ್ಯೂಸ್
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-415x250.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![2-chithapura](https://www.udayavani.com/wp-content/uploads/2024/07/2-chithapura-150x90.jpg)
Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-150x90.jpg)
Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ
![Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/BUILDING-1-150x84.jpg)
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
![Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು](https://www.udayavani.com/wp-content/uploads/2024/07/BIKE-7-150x86.jpg)
Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.