ಶರಣ್‌ ಈಗ ಲೇಡೀಸ್‌ ಟೈಲರ್‌


Team Udayavani, Apr 18, 2018, 10:59 AM IST

sharan.jpg

ವಿಜಯಪ್ರಸಾದ್‌ ನಿರ್ದೇಶಿಸಬೇಕಿದ್ದ “ಲೇಡೀಸ್‌ ಟೈಲರ್‌’ ಎಂಬ ಚಿತ್ರ ನೆನಪಿದೆಯಾ?ಬಹುಶಃ ಕಳೆದ ವರ್ಷ ಕನ್ನಡ ಚಿತ್ರರಂಗದಲ್ಲಿ ಅತೀ ಹೆಚ್ಚು ಚರ್ಚೆಯಾದ ವಿಷಯ ಎಂದರೆ ಅದು “ಲೇಡೀಸ್‌ ಟೈಲರ್‌’. ಚಿತ್ರ ಪ್ರಾರಂಭವಾಗುವುದಕ್ಕೆ ಮುನ್ನವೇ ಮೂರ್ಮೂರು ಬಾರಿ ನಾಯಕರು ಬದಲಾಗಿದ್ದರು. ಕೊನೆಗೆ ರವಿಶಂಕರ್‌ ಗೌಡ ಮತ್ತು ಶ್ರುತಿ ಹರಿಹರನ್‌ ಅಭಿನಯದಲ್ಲಿ “ಲೇಡೀಸ್‌ ಟೈಲರ್‌’ ಚಿತ್ರವನ್ನು ಮತ್ತೆ ಶುರು ಮಾಡಲಾಗುತ್ತದೆ ಎಂದು ಹೇಳಲಾಗಿತ್ತು.

ಆದರೆ, ಇದೀಗ ಬಂದ ಸುದ್ದಿಯ ಪ್ರಕಾರ, ಚಿತ್ರದ ನಾಯಕ ಮತ್ತೆ ಬದಲಾಗಿದ್ದಾರೆ. ಈ ಬಾರಿ ರವಿಶಂಕರ್‌ ಗೌಡ ಬದಲು ಶರಣ್‌ ಈ ಚಿತ್ರದಲ್ಲಿ “ಲೇಡೀಸ್‌ ಟೈಲರ್‌’ ಆಗಿ ನಟಿಸುತ್ತಾರೆ ಎಂದು ಹೇಳಲಾಗುತ್ತಿದೆ. ಹೌದು, ರವಿಶಂಕರ್‌ ಗೌಡ ಅವರನ್ನು ಚಿತ್ರತಂಡದಿಂದ ಕೈಬಿಟ್ಟು, ಶರಣ್‌ ಅಭಿನಯದಲ್ಲಿ ಚಿತ್ರ ಪ್ರಾರಂಭ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇದು ಬಹುಶಃ ಒಂದು ಹೊಸ ದಾಖಲೆ ಎಂದರೆ ತಪ್ಪಿಲ್ಲ.

ಏಕೆಂದರೆ, ಒಂದೇ ಚಿತ್ರದಿಂದ ನಾಯಕನನ್ನು ಎರಡೆರೆಡು ಬಾರಿ ಕೈಬಿಟ್ಟು ಬೇರೆಯವರನ್ನು ಆಯ್ಕೆ ಮಾಡಿದ ಉದಾಹರಣೆ ಸಿಗುವುದು ಕಷ್ಟ. ಕಳೆದ ವರ್ಷ, “ಲೇಡೀಸ್‌ ಟೈಲರ್‌’ ಎಂಬ ಚಿತ್ರವಾಗುತ್ತದೆ ಎಂಬ ಮೊದಲ ಪ್ರಕಟಣೆ ಹೊರಬಿದ್ದಾಗ, ಚಿತ್ರದ ನಾಯಕನಾಗಿದ್ದವರು ರವಿಶಂಕರ್‌ ಗೌಡ. ಆದರೆ, ಕೆಲವು ದಿನಗಳ ನಂತರ ರವಿಶಂಕರ್‌ ಬದಲು ಸತೀಶ್‌ ನೀನಾಸಂ ನಟಿಸುತ್ತಿದ್ದಾರೆ ಎಂದು ಹೇಳಲಾಯ್ತು.

ಅದಾದ ಕೆಲವು ದಿನಗಳಿಗೆ, ಸತೀಶ್‌ ಜಾಗಕ್ಕೆ ಜಗ್ಗೇಶ್‌ ಬಂದಿದ್ದಾರೆ ಎಂದು ಸುದ್ದಿಯಾಯ್ತು. ಅದಾದ ಕೆಲವು ದಿನಗಳಿಗೆ ಚಿತ್ರ ನಿಂತು ಹೋದ ಸುದ್ದಿ ಬಂತು. ಇನ್ನು “ಲೇಡೀಸ್‌ ಟೈಲರ್‌’ ಚಿತ್ರ ಆಗುವುದಿಲ್ಲ ಎಂದು ಎಲ್ಲರೂ ನಂಬಿರುವಾಗಲೇ, ಮತ್ತೆ ರವಿಶಂಕರ್‌ ಅಭಿನಯದಲ್ಲಿ ಚಿತ್ರವನ್ನು ಶುರು ಮಾಡುತ್ತಿರುವ ಸುದ್ದಿಯಾಯ್ತು. ಆ ನಂತರ ಚಿತ್ರತಂಡದಿಂದ ಯಾವುದೇ ಸುದ್ದಿ ಬರದ ಕಾರಣ, ಯಾರೂ ಆ ಚಿತ್ರದ ಬಗ್ಗೆ ಗಮನಹರಿಸುವುದಕ್ಕೆ ಹೋಗಿರಲಿಲ್ಲ.

ಹೀಗಿರುವಾಗಲೇ, ಚಿತ್ರ ಸದ್ಯದಲ್ಲೇ ಸೆಟ್ಟೇರಲಿದೆ ಮತ್ತು ರವಿಶಂಕರ್‌ ಗೌಡ ಬದಲು ಶರಣ್‌ ಆ ಚಿತ್ರದ ನಾಯಕರಾಗಿ ನಟಿಸುತ್ತಿದ್ದಾರೆ ಎಂಬ ಸುದ್ದಿಯೊಂದು ಹೊರಬಿದ್ದಿದೆ. ರವಿಶಂಕರ್‌ ಗೌಡ ಹೊರಹೋಗುತ್ತಿರುವುದಕ್ಕೆ ನಿಖರವಾದ ಕಾರಣವಿಲ್ಲದಿದ್ದರೂ, ಚಿತ್ರಕ್ಕೆ ಮೂರ್‍ನಾಲ್ಕು ಕೋಟಿ ಬಜೆಟ್‌ ಆಗುತ್ತಿರುವುದರಿಂದ, ಅವರ ಬದಲು ಸ್ವಲ್ಪ ಸ್ಟಾರ್‌ಗಿರಿ ಇರುವ ನಟರನ್ನು ಹಾಕಿಕೊಂಡರೆ ಅನುಕೂಲವಾಗುತ್ತದಂತೆ ಎಂಬ ಅಭಿಪ್ರಾಯ ಚಿತ್ರತಂಡದಲ್ಲಿ ಮೂಡಿತಂತೆ.

ಅದೇ ಕಾರಣಕ್ಕೆ ರವಿಶಂಕರ್‌ ಗೌಡ ಬದಲು ಶರಣ್‌ ಚಿತ್ರಕ್ಕೆ ಎಂಟ್ರಿಯಾಗುತ್ತಿರುವ ಸುದ್ದಿ ಇದೆ. ಇನ್ನು ಚಿತ್ರ ಯಾವಾಗ ಶುರುವಾಗಲಿದೆ ಮತ್ತು ಚಿತ್ರದಲ್ಲಿ ಯಾರ್ಯಾರು ನಟಿಸುತ್ತಾರೆ ಮತ್ತು ಕೆಲಸ ಮಾಡುತ್ತಾರೆ ಎಂಬ ವಿಷಯಗಳು ಇನ್ನಷ್ಟೇ ಹೊರಬೀಳಬೇಕಿವೆ.

ಟಾಪ್ ನ್ಯೂಸ್

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada Cinema; ರಾಜ್ಯಾದ್ಯಂತ “ಸಾಂಕೇತ್‌’ ಸಿನೆಮಾ ತೆರೆಗೆ

Kannada Cinema; ರಾಜ್ಯಾದ್ಯಂತ “ಸಾಂಕೇತ್‌’ ಸಿನೆಮಾ ತೆರೆಗೆ

Sandalwood; ಶೀಘ್ರದಲ್ಲಿ ತೆರೆಗೆ ಬರುತ್ತಿದೆ ‘ಕಬಂಧ’

Sandalwood; ಶೀಘ್ರದಲ್ಲಿ ತೆರೆಗೆ ಬರುತ್ತಿದೆ ‘ಕಬಂಧ’

bheema

Duniya Vijay; ‘ಭೀಮ’ನಿಗಾಗಿ ತೆರೆಯಲಿದೆ ಮುಚ್ಚಿದ 18 ಚಿತ್ರಮಂದಿರ

Kannada Movies: ಹಿಟ್‌ ರೇಟ್‌ ಮೇಲೆ; ಸ್ಯಾಟಲೈಟ್‌, ಓಟಿಟಿಯ ಹೊಸ ಧೋರಣೆ

Kannada Movies: ಹಿಟ್‌ ಮೇಲೆ ರೇಟ್‌; ಸ್ಯಾಟಲೈಟ್‌, ಓಟಿಟಿಯ ಹೊಸ ಧೋರಣೆ

Sandalwood; ಕನ್ನಡದಲ್ಲಿ ಇಂದು ತೆರೆಗೆ ಬರುತ್ತಿದೆ ನಾಲ್ಕು ಚಿತ್ರಗಳು

Sandalwood; ಕನ್ನಡದಲ್ಲಿ ಇಂದು ತೆರೆಗೆ ಬರುತ್ತಿದೆ ನಾಲ್ಕು ಚಿತ್ರಗಳು

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.