ಶರಣ್‌ ಈಗ ಲೇಡೀಸ್‌ ಟೈಲರ್‌


Team Udayavani, Apr 18, 2018, 10:59 AM IST

sharan.jpg

ವಿಜಯಪ್ರಸಾದ್‌ ನಿರ್ದೇಶಿಸಬೇಕಿದ್ದ “ಲೇಡೀಸ್‌ ಟೈಲರ್‌’ ಎಂಬ ಚಿತ್ರ ನೆನಪಿದೆಯಾ?ಬಹುಶಃ ಕಳೆದ ವರ್ಷ ಕನ್ನಡ ಚಿತ್ರರಂಗದಲ್ಲಿ ಅತೀ ಹೆಚ್ಚು ಚರ್ಚೆಯಾದ ವಿಷಯ ಎಂದರೆ ಅದು “ಲೇಡೀಸ್‌ ಟೈಲರ್‌’. ಚಿತ್ರ ಪ್ರಾರಂಭವಾಗುವುದಕ್ಕೆ ಮುನ್ನವೇ ಮೂರ್ಮೂರು ಬಾರಿ ನಾಯಕರು ಬದಲಾಗಿದ್ದರು. ಕೊನೆಗೆ ರವಿಶಂಕರ್‌ ಗೌಡ ಮತ್ತು ಶ್ರುತಿ ಹರಿಹರನ್‌ ಅಭಿನಯದಲ್ಲಿ “ಲೇಡೀಸ್‌ ಟೈಲರ್‌’ ಚಿತ್ರವನ್ನು ಮತ್ತೆ ಶುರು ಮಾಡಲಾಗುತ್ತದೆ ಎಂದು ಹೇಳಲಾಗಿತ್ತು.

ಆದರೆ, ಇದೀಗ ಬಂದ ಸುದ್ದಿಯ ಪ್ರಕಾರ, ಚಿತ್ರದ ನಾಯಕ ಮತ್ತೆ ಬದಲಾಗಿದ್ದಾರೆ. ಈ ಬಾರಿ ರವಿಶಂಕರ್‌ ಗೌಡ ಬದಲು ಶರಣ್‌ ಈ ಚಿತ್ರದಲ್ಲಿ “ಲೇಡೀಸ್‌ ಟೈಲರ್‌’ ಆಗಿ ನಟಿಸುತ್ತಾರೆ ಎಂದು ಹೇಳಲಾಗುತ್ತಿದೆ. ಹೌದು, ರವಿಶಂಕರ್‌ ಗೌಡ ಅವರನ್ನು ಚಿತ್ರತಂಡದಿಂದ ಕೈಬಿಟ್ಟು, ಶರಣ್‌ ಅಭಿನಯದಲ್ಲಿ ಚಿತ್ರ ಪ್ರಾರಂಭ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇದು ಬಹುಶಃ ಒಂದು ಹೊಸ ದಾಖಲೆ ಎಂದರೆ ತಪ್ಪಿಲ್ಲ.

ಏಕೆಂದರೆ, ಒಂದೇ ಚಿತ್ರದಿಂದ ನಾಯಕನನ್ನು ಎರಡೆರೆಡು ಬಾರಿ ಕೈಬಿಟ್ಟು ಬೇರೆಯವರನ್ನು ಆಯ್ಕೆ ಮಾಡಿದ ಉದಾಹರಣೆ ಸಿಗುವುದು ಕಷ್ಟ. ಕಳೆದ ವರ್ಷ, “ಲೇಡೀಸ್‌ ಟೈಲರ್‌’ ಎಂಬ ಚಿತ್ರವಾಗುತ್ತದೆ ಎಂಬ ಮೊದಲ ಪ್ರಕಟಣೆ ಹೊರಬಿದ್ದಾಗ, ಚಿತ್ರದ ನಾಯಕನಾಗಿದ್ದವರು ರವಿಶಂಕರ್‌ ಗೌಡ. ಆದರೆ, ಕೆಲವು ದಿನಗಳ ನಂತರ ರವಿಶಂಕರ್‌ ಬದಲು ಸತೀಶ್‌ ನೀನಾಸಂ ನಟಿಸುತ್ತಿದ್ದಾರೆ ಎಂದು ಹೇಳಲಾಯ್ತು.

ಅದಾದ ಕೆಲವು ದಿನಗಳಿಗೆ, ಸತೀಶ್‌ ಜಾಗಕ್ಕೆ ಜಗ್ಗೇಶ್‌ ಬಂದಿದ್ದಾರೆ ಎಂದು ಸುದ್ದಿಯಾಯ್ತು. ಅದಾದ ಕೆಲವು ದಿನಗಳಿಗೆ ಚಿತ್ರ ನಿಂತು ಹೋದ ಸುದ್ದಿ ಬಂತು. ಇನ್ನು “ಲೇಡೀಸ್‌ ಟೈಲರ್‌’ ಚಿತ್ರ ಆಗುವುದಿಲ್ಲ ಎಂದು ಎಲ್ಲರೂ ನಂಬಿರುವಾಗಲೇ, ಮತ್ತೆ ರವಿಶಂಕರ್‌ ಅಭಿನಯದಲ್ಲಿ ಚಿತ್ರವನ್ನು ಶುರು ಮಾಡುತ್ತಿರುವ ಸುದ್ದಿಯಾಯ್ತು. ಆ ನಂತರ ಚಿತ್ರತಂಡದಿಂದ ಯಾವುದೇ ಸುದ್ದಿ ಬರದ ಕಾರಣ, ಯಾರೂ ಆ ಚಿತ್ರದ ಬಗ್ಗೆ ಗಮನಹರಿಸುವುದಕ್ಕೆ ಹೋಗಿರಲಿಲ್ಲ.

ಹೀಗಿರುವಾಗಲೇ, ಚಿತ್ರ ಸದ್ಯದಲ್ಲೇ ಸೆಟ್ಟೇರಲಿದೆ ಮತ್ತು ರವಿಶಂಕರ್‌ ಗೌಡ ಬದಲು ಶರಣ್‌ ಆ ಚಿತ್ರದ ನಾಯಕರಾಗಿ ನಟಿಸುತ್ತಿದ್ದಾರೆ ಎಂಬ ಸುದ್ದಿಯೊಂದು ಹೊರಬಿದ್ದಿದೆ. ರವಿಶಂಕರ್‌ ಗೌಡ ಹೊರಹೋಗುತ್ತಿರುವುದಕ್ಕೆ ನಿಖರವಾದ ಕಾರಣವಿಲ್ಲದಿದ್ದರೂ, ಚಿತ್ರಕ್ಕೆ ಮೂರ್‍ನಾಲ್ಕು ಕೋಟಿ ಬಜೆಟ್‌ ಆಗುತ್ತಿರುವುದರಿಂದ, ಅವರ ಬದಲು ಸ್ವಲ್ಪ ಸ್ಟಾರ್‌ಗಿರಿ ಇರುವ ನಟರನ್ನು ಹಾಕಿಕೊಂಡರೆ ಅನುಕೂಲವಾಗುತ್ತದಂತೆ ಎಂಬ ಅಭಿಪ್ರಾಯ ಚಿತ್ರತಂಡದಲ್ಲಿ ಮೂಡಿತಂತೆ.

ಅದೇ ಕಾರಣಕ್ಕೆ ರವಿಶಂಕರ್‌ ಗೌಡ ಬದಲು ಶರಣ್‌ ಚಿತ್ರಕ್ಕೆ ಎಂಟ್ರಿಯಾಗುತ್ತಿರುವ ಸುದ್ದಿ ಇದೆ. ಇನ್ನು ಚಿತ್ರ ಯಾವಾಗ ಶುರುವಾಗಲಿದೆ ಮತ್ತು ಚಿತ್ರದಲ್ಲಿ ಯಾರ್ಯಾರು ನಟಿಸುತ್ತಾರೆ ಮತ್ತು ಕೆಲಸ ಮಾಡುತ್ತಾರೆ ಎಂಬ ವಿಷಯಗಳು ಇನ್ನಷ್ಟೇ ಹೊರಬೀಳಬೇಕಿವೆ.

ಟಾಪ್ ನ್ಯೂಸ್

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.