ಡೋಂಟ್ ವರಿ ಇನ್ನೊಂದು 20 ವರ್ಷ ನಾನು ಹಿಂಗೆ ಇರ್ತೀನಿ..


Team Udayavani, Jan 7, 2020, 10:26 AM IST

cinema-tdy-1

ಶಿವರಾಜ ಕುಮಾರ್‌ ಎಲ್ಲೇ ಹೋಗಲಿ, ಯಾವುದೇ ಸಂದರ್ಶನ ಕೊಡಲಿ ಅಲ್ಲಿ ಅವರಿಗೆ ಎದುರಾಗುವ ಖಾಯಂ ಪ್ರಶ್ನೆಯೊಂದಿದೆ. ಅದೇನೆಂದರೆ ನಿಮ್ಮ ಎನರ್ಜಿಯ ಗುಟ್ಟೇನು ಹಾಗೂ ಇಷ್ಟೊಂದು ಯಂಗ್‌ ಆಗಿ ಕಾಣಲು ಏನೂ ಮಾಡುತ್ತೀರಿ ಎಂಬುದು. ಆ ಪ್ರಶ್ನೆಗೆ ಕಾರಣ ಶಿವರಾಜಕುಮಾರ್‌ ಅವರ ಉತ್ಸಾಹ ಹಾಗೂ ಇವತ್ತಿನ ಯಂಗ್‌ಸ್ಟಾರ್‌ ನಾಚುವ ಮಟ್ಟಿಗೆ ಆ್ಯಕ್ಟೀವ್‌ ಆಗಿರೋದು. ಇಂತಿಪ್ಪ ಶಿವಣ್ಣ ಇನ್ನೂ 20 ವರ್ಷ ಇದೇ ರೀತಿ, ಹೀರೋ ಆಗಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ! ಈ ಮಾತು ಕೇಳಿ ನೀವು ಆಶ್ಚರ್ಯ ಪಡಬೇಕಾಗಿಲ್ಲ. ಏಕೆಂದರೆ ಇದನ್ನು ಹೇಳಿರೋದು ಬೇರಾರು ಅಲ್ಲ, ಸ್ವತಃ ಶಿವರಾಜಕುಮಾರ್‌.

ಹೌದು, ಇತ್ತೀಚೆಗೆ ನಡೆದ “ಸಲಗ’ ಚಿತ್ರದ “ಸೂರಿಯಣ್ಣ…’ ಹಾಡಿನ ಬಿಡುಗಡೆ ವೇಳೆ ಶಿವರಾಜ ಕುಮಾರ್‌, “ನಾನು ಇನ್ನೂ 20 ವರ್ಷ ಹಿಂಗೆ ಇರಿತ್ತೀನಿ ಎನ್ನುವ ಮೂಲಕ ಅಭಿಮಾನಿಗಳನ್ನು ಇನ್ನಷ್ಟು ವರ್ಷ ರಂಜಿಸುವ ಬಗ್ಗೆ ಮಾತನಾಡಿದರು. “ದುನಿಯಾ ವಿಜಯ್‌ ಡೈರೆಕ್ಷನ್‌ಗೆ ಬಂದಿದ್ದಾರೆ. ಹಾಗಂತ ನಾನು ಬರಲ್ಲ. ನನ್ನನ್ನು ಬರೋಕೂ ಬಿಡಲ್ಲ. ಸಾಕು ಸಾಕು ಅಂದ್ರು, ಇಲ್ಲ ನೀವು ಬೇಕು ಬೇಕು ಅಂತ ಮಾಡ್ತಾನೆ ಇದ್ದಾರೆ. ನೋಡೋಣ ದೇವ್ರು ನನಗೆ ಎಲ್ಲಿವರೆಗೆ ಸ್ಟ್ರೆಂಥ್‌ ಕೊಡ್ತಾನೋ ಅಲ್ಲಿವರೆಗೆ ಸಿನಿಮಾ ಮಾಡ್ತಾನೇ ಇರುತ್ತೀನಿ. ಡೋಂಟ್‌ವರಿ ಇನ್ನೊಂದು 20 ವರ್ಷ ನಾ ಹಿಂಗೆ ಇರಿತ್ತೀನಿ ಎನ್ನುವ ಮೂಲಕ ಹೀರೋ ಆಗಿಯೇ ಮುಂದುವರಿಯುವ ಬಗ್ಗೆ ಹೇಳಿದರು.

ಶಿವರಾಜ ಕುಮಾರ್‌ ಮಾತು ನಿಜ ಕೂಡಾ. ಚಿತ್ರರಂಗಕ್ಕೆ ಯಾರೇ ಬರಲಿ, ಅವರಿಗೆ ಶಿವರಾಜ ಕುಮಾರ್‌ ಅವರ ಜೊತೆ ಸಿನಿಮಾ ಮಾಡುವ ಆಸೆ ಇದ್ದೇ ಇರುತ್ತದೆ. ಅದೇ ಕಾರಣದಿಂದ ಕಥೆಯೊಂದಿಗೆ ಶಿವಣ್ಣ ಮನೆ ಬಾಗಿಲು ಬಡಿಯುವ ನಿರ್ದೇಶಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಸಿನಿಮಾಗಳ ಸೋಲು-ಗೆಲುವು ಏನೇ ಇರಬಹುದು. ಶಿವರಾಜ ಕುಮಾರ್‌ ಅವರ ಸಿನಿಮಾಗಳ ಪಟ್ಟಿಗೆ ಹೊಸದು ಸೇರಿಕೊಳ್ಳುತ್ತಲೇ ಇರುತ್ತವೆಯೇ ಹೊರತು ಕಡಿಮೆಯಾಗಿಲ್ಲ. ಸದ್ಯ ಶಿವರಾಜಕುಮಾರ್‌ ಅವರ “ಭಜರಂಗಿ-2′ ಚಿತ್ರೀಕರಣದಲ್ಲಿ ಬಿಝಿಯಾಗಿದ್ದಾರೆ. ಈ ನಡುವೆಯೇ ಅವರ ಹೊಸ ಚಿತ್ರ ಮುಂದಿನ ತಿಂಗಳು ಸೆಟ್ಟೇರಲಿದೆ. ತಮಿಳು ನಿರ್ಮಾಣ ಸಂಸ್ಥೆ ಹಾಗೂ ತಮಿಳು ನಿರ್ದೇಶಕರೊಬ್ಬರು ಶಿವರಾಜಕುಮಾರ್‌ ಅವರಿಗೆ ಸಿನಿಮಾ ಮಾಡುತ್ತಿದ್ದು, ಚಿತ್ರಕ್ಕೆ “ಆರ್‌ಡಿಎಕ್ಸ್‌’ ಎಂದು ಟೈಟಲ್‌ ಇಡಲಾಗಿದೆ.  ಚಿತ್ರ ಫೆ.19 ರಂದು ಆರಂಭವಾಗಲಿದೆ. ವಿಶೇಷವೆಂದರೆ ಶಿವರಾಜಕುಮಾರ್‌ ಅವರ ಮೊದಲ ಚಿತ್ರ “ಆನಂದ್‌’ ಕೂಡಾ ಅಂದೇ ಆರಂಭವಾಗಿತ್ತು. ಈಗ ಅವರ ಹೊಸ ಚಿತ್ರಕ್ಕೂ ಅದೇ ದಿನ ಮುಹೂರ್ತ ನಡೆಯಲಿದೆ.

ಟಾಪ್ ನ್ಯೂಸ್

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

rahul-Gandhi-Car

Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್‌: ರಾಹುಲ್‌ ಆರೋಪ

1-dubey

Increase of Muslims; ಝಾರ್ಖಂಡ್‌,ಪಶ್ಚಿಮ ಬಂಗಾಲ ಕೇಂದ್ರಾಡಳಿತ ಪ್ರದೇಶವಾಗಿಸಿ: ದುಬೆ

Supreme Court

State-Governor ಕದನ: ಕೇಂದ್ರ ಸರಕಾರಕ್ಕೆ ಸುಪ್ರೀಂ ನೋಟಿಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada Cinema; ರಾಜ್ಯಾದ್ಯಂತ “ಸಾಂಕೇತ್‌’ ಸಿನೆಮಾ ತೆರೆಗೆ

Kannada Cinema; ರಾಜ್ಯಾದ್ಯಂತ “ಸಾಂಕೇತ್‌’ ಸಿನೆಮಾ ತೆರೆಗೆ

Sandalwood; ಶೀಘ್ರದಲ್ಲಿ ತೆರೆಗೆ ಬರುತ್ತಿದೆ ‘ಕಬಂಧ’

Sandalwood; ಶೀಘ್ರದಲ್ಲಿ ತೆರೆಗೆ ಬರುತ್ತಿದೆ ‘ಕಬಂಧ’

bheema

Duniya Vijay; ‘ಭೀಮ’ನಿಗಾಗಿ ತೆರೆಯಲಿದೆ ಮುಚ್ಚಿದ 18 ಚಿತ್ರಮಂದಿರ

Kannada Movies: ಹಿಟ್‌ ರೇಟ್‌ ಮೇಲೆ; ಸ್ಯಾಟಲೈಟ್‌, ಓಟಿಟಿಯ ಹೊಸ ಧೋರಣೆ

Kannada Movies: ಹಿಟ್‌ ಮೇಲೆ ರೇಟ್‌; ಸ್ಯಾಟಲೈಟ್‌, ಓಟಿಟಿಯ ಹೊಸ ಧೋರಣೆ

Sandalwood; ಕನ್ನಡದಲ್ಲಿ ಇಂದು ತೆರೆಗೆ ಬರುತ್ತಿದೆ ನಾಲ್ಕು ಚಿತ್ರಗಳು

Sandalwood; ಕನ್ನಡದಲ್ಲಿ ಇಂದು ತೆರೆಗೆ ಬರುತ್ತಿದೆ ನಾಲ್ಕು ಚಿತ್ರಗಳು

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.