![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-415x250.jpg)
ಶುರುವಾಯ್ತು “ತಾರಕಾಸುರ’ನ ಆರ್ಭಟ : Watch
Team Udayavani, Oct 30, 2018, 3:37 PM IST
![taraka.jpg](https://www.udayavani.com/wp-content/uploads/2018/10/30/taraka.jpg)
ನಟ ವೈಭವ್ ಕನ್ನಡ ಚಿತ್ರರಂಗಕ್ಕೆ “ತಾರಕಾಸುರ’ ಚಿತ್ರದ ಮೂಲಕ ಪರಿಚಯವಾಗುತ್ತಿದ್ದು, ಇದೀಗ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. “ತಾರಕಾಸುರ’ ಚಿತ್ರ ಎಂಥಾ ಕಥೆ ಹೊಂದಿದೆ ಎಂಬ ಕುತೂಹಲ ಎಲ್ಲರಲ್ಲಿಯೂ ಇದ್ದೇ ಇತ್ತು. ಇದೀಗ ಬಿಡುಗಡೆಯಾಗಿರೋ ಟ್ರೈಲರ್ ಅದನ್ನು ಸಣ್ಣದಾಗಿ ತಣಿಸುತ್ತಲೇ ದೊಡ್ಡ ಮಟ್ಟದಲ್ಲಿಯೇ ಕ್ರೇಜ್ ಹುಟ್ಟುಹಾಕುವಂತಿದೆ!
ಇದು ಪಕ್ಕಾ ಫೋರ್ಸ್ ಹೊಂದಿರೋ ಮಾಸ್ ಟ್ರೈಲರ್. ಚಂದ್ರಶೇಖರ್ ಈ ಹಿಂದೆ ತಾರಕಾಸುರ ಎಂಬುದು ತುಳಿತಕ್ಕೊಳಗಾಗಿ, ಅವಸಾನದಂಚಿನಲ್ಲಿರೋ ಜಾನಪದ ಸಂಸ್ಕೃತಿ ಹಾಗೂ ಸಮುದಾಯದ ಕಥೆ ಹೊಂದಿದೆ ಎಂಬ ಸುಳಿವು ನೀಡಿದ್ದರು. ಅದು ಯಾವ ಸಮುದಾಯ ಎಂಬ ಸಣ್ಣ ಹಿಂಟ್ ಕೂಡಾ ಈ ಟ್ರೈಲರ್ ನಲ್ಲಿ ಕಾಣ ಸಿಗುತ್ತದೆ. ಹಾಲಿವುಡ್ನ ಖ್ಯಾತ ನಟ ಡ್ಯಾನಿ ಸಫಾನಿ ಭಯಾನಕ ಶೇಡ್ ಹೊಂದಿರೋ ಪಾತ್ರದಲ್ಲಿ ನಟಿಸಿರೋದೂ ಕೂಡಾ ಪಕ್ಕಾ ಆಗಿದೆ.
ಅಲ್ಲದೇ ಬಿಡುಗಡೆಯಾಗಿರೋ ಈ ಟ್ರೈಲರ್ ಎಲ್ಲೆಡೆ ಟಾಕ್ ಕ್ರಿಯೇಟ್ ಮಾಡಿದೆ. “ರಥಾವರ’ ಚಿತ್ರ ನಿರ್ದೇಶಿಸಿದ್ದ ಚಂದ್ರಶೇಖರ್ ಬಂಡಿಯಪ್ಪ “ತಾರಕಾಸುರ’ನಿಗೆ ಆ್ಯಕ್ಷನ್ ಕಟ್ ಹೇಳಿದ್ದು, ವೈಭವ್ ತಂದೆ ನರಸಿಂಹಲೂ ಬಂಡವಾಳ ಹೂಡಿದ್ದಾರೆ. ವೈಭವ್ ಜತೆ ಮಾನ್ವಿತಾ ನಾಯಕಿಯಾಗಿ ನಟಿಸಿದ್ದಾರೆ.
ಇನ್ನು ಚಿತ್ರಕ್ಕೆ ಧರ್ಮ ವಿಶ್ ಸಂಗೀತ ಸಂಯೋಜನೆಯಿದ್ದು, ಪ್ರದೀಪ್ ಗೌಡ ಕ್ಯಾಮರಾ ವರ್ಕ್, ಕೆ.ಎಂ.ಪ್ರಕಾಶ್ ಸಂಕಲನ, ಡಿಫರೆಂಟ್ ಡ್ಯಾನಿ ಮತ್ತು ಜಾಲಿಬಾಸ್ಟಿನ್ ಸಾಹಸ, ಮುರಳಿ ನೃತ್ಯ ನಿರ್ದೇಶನ ಸೇರಿದಂತೆ ನಾಗೇಂದ್ರ ಪ್ರಸಾದ್, ಕವಿರಾಜ್, ಯೋಗರಾಜ್ ಭಟ್, ಚೇತನ್ ಕುಮಾರ್ ಹಾಗೂ ಹೊಸ ಹುಡುಗ ವಿನಾಯಕ್ ಸಾಹಿತ್ಯ ಚಿತ್ರಕ್ಕಿದೆ. ತಾರಾಗಣದಲ್ಲಿ ವೈಭವ್, ಮಾನ್ವಿತಾ ಹರೀಶ್, ಸಾಧು ಕೋಕಿಲ, ಡ್ಯಾನಿ ಸಪಾನಿ, ಕರಿಸುಬ್ಬು, ಎಂ.ಕೆ. ಮಠ ಮುಂತಾದವರು ಇದ್ದಾರೆ.
ಟಾಪ್ ನ್ಯೂಸ್
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-415x250.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![2-chithapura](https://www.udayavani.com/wp-content/uploads/2024/07/2-chithapura-150x90.jpg)
Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-150x90.jpg)
Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ
![Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/BUILDING-1-150x84.jpg)
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
![Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು](https://www.udayavani.com/wp-content/uploads/2024/07/BIKE-7-150x86.jpg)
Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.