![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-415x252.jpg)
ಸುಮಂತ್ ಗೋವಿಂದ ನಾಮ ಸ್ಮರಣೆ!
3 ವರ್ಷಗಳ ಬಳಿಕ ಹೊಸ ಜೋಶ್ನಲ್ಲಿ ಕಂ ಬ್ಯಾಕ್
Team Udayavani, Jan 11, 2020, 7:03 AM IST
![Sumanth-Shylendra](https://www.udayavani.com/wp-content/uploads/2020/01/Sumanth-Shylendra-620x348.jpg)
ಕನ್ನಡದ ಹಿರಿಯ ನಿರ್ಮಾಪಕ ಎಸ್. ಶೈಲೇಂದ್ರ ಬಾಬು ಪುತ್ರ ಸುಮಂತ್ ಶೈಲೇಂದ್ರ ಈ ಬಾರಿ “ಗೋವಿಂದ’ನ ನಾಮ ಸ್ಮರಣೆ ಮಾಡುತ್ತ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಹೌದು, 2017ರಲ್ಲಿ ತೆರೆಕಂಡ “ಲೀ’ ಚಿತ್ರದ ನಂತರ ಕನ್ನಡದಲ್ಲಿ ಸುಮಂತ್ ಶೈಲೇಂದ್ರ ಅಭಿನಯದ ಯಾವ ಚಿತ್ರಗಳೂ ಬಿಡುಗಡೆಯಾಗಿರಲಿಲ್ಲ. ಇದರ ನಡುವೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸುಮಂತ್, ಮತ್ತೆ ಚಿತ್ರರಂಗಕ್ಕೆ ಬರುತ್ತಾರಾ, ಸಿನಿಮಾಗಳನ್ನು ಮಾಡುತ್ತಾರಾ ಎಂಬ ಯಾವ ಪ್ರಶ್ನೆಗಳಿಗೂ ಉತ್ತರ ಸಿಕ್ಕಿರಲಿಲ್ಲ.
ಆದರೆ ಈಗ ಸುಮಂತ್ ಅದೆಲ್ಲದಕ್ಕೂ ಉತ್ತರ ನೀಡಲು ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈಗಾಗಲೇ ಸುಮಂತ್ ಸದ್ದಿಲ್ಲದೆ “ಗೋವಿಂದ ಗೋವಿಂದ’ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಚಿತ್ರದ ಚಿತ್ರೀಕರಣ ಕೂಡ ಒಂದಷ್ಟು ಪೂರ್ಣಗೊಂಡಿದೆ. ಸುಮಾರು ಎರಡೂವರೆ ವರ್ಷದ ನಂತರ ಸುಮಂತ್ ಈ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದ್ದು, ಚಿತ್ರಕ್ಕಾಗಿ ಸಾಕಷ್ಟು ತಯಾರಿ ಕೂಡ ಮಾಡಿಕೊಂಡಿದ್ದಾರೆ.
ಪಕ್ಕಾ ಕಾಮಿಡಿ ಕಂ ಥ್ರಿಲ್ಲರ್ ಕಥಾಹಂದರ ಹೊಂದಿರುವ “ಗೋವಿಂದ ಗೋವಿಂದ’ ಚಿತ್ರದಲ್ಲಿ ಸುಮಂತ್, ಅನೇಕ ವರ್ಷಗಳಿಂದ ಪಿಯುಸಿ ಫೇಲ್ ಆಗುತ್ತಲೇ ಬರುತ್ತಿರುವ ಹುಡುಗನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. “ಗೋವಿಂದ ಗೋವಿಂದ’ ಚಿತ್ರದ ಮೂಲಕ ರೀ-ಎಂಟ್ರಿ ಕೊಡುವುದರ ಬಗ್ಗೆ ಮಾತನಾಡುವ ಸುಮಂತ್, “ಕನ್ನಡದ ನಂತರ ತೆಲುಗಿನಲ್ಲಿ ಒಂದು ಚಿತ್ರದಲ್ಲಿ ಅಭಿನಯಿಸಿದೆ. ಅದಾದ ನಂತರ ಮದುವೆಯಾಯ್ತು. ಫ್ಯಾಮಿಲಿಗಾಗಿ ಒಂದಷ್ಟು ಸಮಯ ತೆಗೆದಿರಿಸಬೇಕಾಯ್ತು.
ಇದರ ನಡುವೆ ಕನ್ನಡದಲ್ಲಿ ಕೆಲವು ಆಫರ್ ಬಂದರೂ, ಸಬ್ಜೆಕ್ಟ್ ಇಷ್ಟವಾಗದಿದ್ದರಿಂದ ಯಾವುದನ್ನೂ ಒಪ್ಪಿಕೊಂಡಿ ರಲಿಲ್ಲ. ಹೀಗಾಗಿ ಸುಮಾರು ಎರಡೂವರೆ- ಮೂರು ವರ್ಷಗಳ ಕಾಲ ಸಿನಿಮಾಗಳಿಂದ ಸ್ವಲ್ಪ ಗ್ಯಾಪ್ ಆಗಿತ್ತು. ಮತ್ತೆ ಒಂದೊಳ್ಳೆ ಸಿನಿಮಾದ ಮೂಲಕ ಆಡಿಯನ್ಸ್ ಮುಂದೆ ಬರಬೇಕು ಅಂಥ ಕಾಯುತ್ತಿದೆ. ಅದೇ ವೇಳೆ “ಗೋವಿಂದ ಗೋವಿಂದ’ ಸಿನಿಮಾ ಸಿಕ್ಕಿತು. ನಾನು ಇಲ್ಲಿಯ ವರೆಗೆ ಮಾಡಿದ ಸಿನಿಮಾಗಳಿಗಿಂತ ಇದರ ಕಥೆ ತುಂಬ ವಿಭಿನ್ನವಾಗಿದ್ದರಿಂದ, ಮೊದಲು ಸ್ವಲ್ಪ ಸಮಯ ತೆಗೆದುಕೊಂಡೆ.
ನಂತರ ನಿರ್ದೇಶಕರು, ನಿರ್ಮಾಪಕರು, ಚಿತ್ರತಂಡ ಭರವಸೆ ತುಂಬಿದ ಮೇಲೆ ಸಿನಿಮಾ ಒಪ್ಪಿಕೊಂಡೆ’ ಎನ್ನುತ್ತಾರೆ. ಇನ್ನು “ಗೋವಿಂದ ಗೋವಿಂದ’ ಚಿತ್ರಕ್ಕೆ ನವ ನಿರ್ದೇಶಕ ತಿಲಕ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಕಿರುತೆರೆಯಲ್ಲಿ ಹಲವು ಧಾರಾವಾಹಿಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿರುವ ತಿಲಕ್, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಹಿರಿತೆರೆಗೆ ಪರಿಚಯವಾಗುತ್ತಿದ್ದಾರೆ.
ಚಿತ್ರದಲ್ಲಿ ಸುಮಂತ್ ಶೈಲೇಂದ್ರಗೆ ನಾಯಕಿಯಾಗಿ ಕವಿತಾ ಗೌಡ ಜೋಡಿ. ಜಾಕಿ ಭಾವನಾ ಕೂಡ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ರೂಪೇಶ್ ಶೆಟ್ಟಿ, ಬೆನಕ ಪವನ್, ಅಚ್ಯುತ ಕುಮಾರ್, ವಿಜಯ್ ಚಂಡೂರ್, ಶೋಭರಾಜ್, ಸುನೇತ್ರಾ ಪಂಡಿತ್, ಪದ್ಮಾ ವಸಂತಿ, ಗೋವಿಂದೇಗೌಡ, ಶ್ರೀನಿವಾಸ ಪ್ರಭು ಇತರರು ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಸದ್ಯ “ಗೋವಿಂದ ಗೋವಿಂದ’ ಚಿತ್ರದ ಚಿತ್ರೀಕರಣ ಅಂತಿಮ ಹಂತದಲ್ಲಿದ್ದು, ಇದೇ ಏಪ್ರಿಲ್ಗೆ ತೆರೆಗೆ ಬರುವ ಸಾಧ್ಯತೆ ಇದೆ. ಹೊಸ ಗೆಟಪ್ನಲ್ಲಿ ಪ್ರೇಕ್ಷಕರ ಮುಂದೆ ಬರೋದಕ್ಕೆ ರೆಡಿಯಾಗಿರುವ “ಗೋವಿಂದ ಗೋವಿಂದ’ ಎಷ್ಟರ ಮಟ್ಟಿಗೆ ಸುಮಂತ್ ಕೈ ಹಿಡಿಯುತ್ತಾನೆ ಅನ್ನೋದು ಚಿತ್ರ ತೆರೆಗೆ ಬಂದ ಮೇಲಷ್ಟೇ ಗೊತ್ತಾಗಲಿದೆ.
ಟಾಪ್ ನ್ಯೂಸ್
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-415x252.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.