ಗಾಯಕನ ಕೊಳಲು ವಾದನ


Team Udayavani, May 24, 2020, 8:26 PM IST

gayaka sajju

ಕೋವಿಡ್‌ 19 ವೈರಸ್‌ ಎಲ್ಲರನ್ನೂ ಸಂಕಷ್ಟಕ್ಕೆ ದೂಡಿದೆ. ಇದರಿಂದ ಆದಂತಹ ಲಾಕ್‌ಡೌನ್‌ ಕೂಡ ಸಾಕಷ್ಟು ಜನರ ಬದಲಾವಣೆಗೆ ಕಾರಣವಾಗಿದೆ. ಬದುಕಿರಲಿ, ಬದುಕುವ ರೀತಿಯಾಗಲಿ ಎಲ್ಲವನ್ನೂ ಈ ಕೋವಿಡ್‌ 19 ಒಂದೊಳ್ಳೆಯ  ಪಾಠ ಕಲಿಸಿದೆ. ಈ ಲಾಕ್‌ಡೌನ್‌ ಸಮಯದಲ್ಲಿ ಬಹಳಷ್ಟು ಮಂದಿ ಹೊಸತನ್ನು ಕಲಿತಿದ್ದಾರೆ. ಹೊಸ ವಿಷಯಗಳನ್ನು ಅರಿತಿದ್ದಾರೆ. ಒಂದಷ್ಟು ಸಂಬಂಧಗಳ ಮೌಲ್ಯಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಹಾಡಿದ್ದಾರೆ, ಕುಣಿದಿದ್ದಾರೆ,  ಕುಣಿಸಿದ್ದಾರೆ. ನಕ್ಕು, ನಗಿಸಿದ್ದಾರೆ. ಹಲವು ಗಾಯಕರು ತಮ್ಮ ಮನೆಯಲ್ಲೇ ಕರೋಂಕೆ ಹಾಡಿದ್ದಾರೆ.

ಇನ್ನೂ ಕೆಲವು ಸಂಗೀತ ನಿರ್ದೇಶಕರು ಸಂಯೋಚನೆ ಎಂಬ ಹೊಸ ವಿಷಯದೊಂದಿಗೆ ಸಾಹಿತ್ಯಕ್ಕೆ ರಾಗಸಂಯೋಜಿಸಿ, ಗಾಯಕರಿಗೆ  ಆದನ್ನು ಹಾಡುವ ಚಾಲೆಂಜ್‌ ಕೂಡ ಮಾಡಿದ್ದಾರೆ. ಇದೆಲ್ಲವೂ ಕೊರೊನೊದಿಂದ ಆದಂತಹ ಲಾಕ್‌ಡೌನ್‌ ಹಿನ್ನೆಲೆಯಲ್ಲೇ ಆಗಿದ್ದು ಅನ್ನೋದನ್ನು ಗಮನಿಸಲೇಬೇಕು. ಈಗ ಗಾಯಕ ನವೀನ್‌ ಸಜ್ಜು ಕೂಡ ಈ ಲಾಕ್‌ ಡೌನ್‌  ಸಮಯದಲ್ಲಿ ಸುಮ್ಮನೆ ಕೂತಿಲ್ಲ ಎಂಬುದನ್ನು ಗಮನಿಸಲೇಬೇಕು.

ಅವರು “ಒಳಿತು ಮಾಡು ಮನುಸ ನೀ ಇರೋದು ಮೂರು ದಿವಸ ‘ ಎಂಬ ಹಾಡನ್ನು ವೇದಿಕೆಯೊಂದರಲ್ಲಿ ಹಾಡಿ ಸೈ ಎನಿಸಿಕೊಂಡವರು. ಆ ಹಾಡಿನ  ಮೂಲಕವೇ  ಗುರುತಿಸಿಕೊಂಡ ನವೀನ್‌ ಸಜ್ಜ ಹಿಂದೆ ಕೂಡ ಕನ್ನಡದ ” ಲೂಸಿಯಾ ‘ ಚಿತ್ರದಲ್ಲೂ “ಎದೆಯೊಳಗೆ ತಮತಮತಮಟೆ ಯಾರೋ ಬಡ್ದಂಗ್‌… ‘ಎಂಬ ಗೀತೆ ಹಾಡಿದ್ದವರು. ಅಲ್ಲಿಂದ ಸುಮಾರು ಸಿನಿಮಾಗಳಿಗೆ ಗಾಯನ ಮಾಡಿ, ಇತ್ತೀಚೆಗೆ ಜೋರು  ಸುದ್ದಿಯಾದ “ಎಣ್ಣೆ ನಿಮ್ದು ಊಟ ನಮ್ದು ‘ ಹಾಡಿಗೂ ಧ್ವನಿಯಾಗಿದ್ದವರು. ಈಗ ಅವರು, ಲಾಕ್‌ಡೌನ್‌ ವೇಳೆ ಕೊಳಲು ವಾದನ ಮಾಡಿದ್ದಾರೆ ಎಂಬುದು ವಿಶೇಷ.

ಅವರು ಕೊಳಲು ನುಡಿಸುವುದನ್ನು ಅಭ್ಯಾಸ ಮಾಡಿ, ಕೊನೆಗೆ ಒಂದಷ್ಟು  ಸಮಯ ಕೊಳಲು ನುಡಿಸಿ, ತಾನೊಬ್ಬ ಕೊಳಲು ವಾದಕ ಎಂಬುದನ್ನೂ ಸಾಬೀತುಪಡಿಸಿದ್ದಾರೆ. ತಾವು ನುಡಿಸುತ್ತಿರುವ ಕೊಳಲನ್ನು ಮುಖಪುಟದಲ್ಲಿ ಹಾಕಿಕೊಂಡಿದ್ದಾರೆ. ಅವರ ಆ ಪ್ರಯತ್ನಕ್ಕೆ ಎಲ್ಲೆಡೆಯಿಂದಲೂ ಉತ್ತಮ ಮೆಚ್ಚುಗೆ  ಸಿಕ್ಕಿದೆ. ಸದ್ಯಕ್ಕೆ ಲಾಕ್‌ಡೌನ್‌ ಸಮಯವನ್ನು ಸರಿಯಾಗಿ ಕಳೆಯುತ್ತಿರುವ ನವೀನ್‌ ಸಜ್ಜು, ಹಾಡುವುದರ ಜೊತೆಯಲ್ಲಿ ರಾಗಸಂಯೋಜ ನೆಯತ್ತವೂ ಗಮನಹರಿಸಿದ್ದಾರೆ.

ಟಾಪ್ ನ್ಯೂಸ್

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada Cinema; ರಾಜ್ಯಾದ್ಯಂತ “ಸಾಂಕೇತ್‌’ ಸಿನೆಮಾ ತೆರೆಗೆ

Kannada Cinema; ರಾಜ್ಯಾದ್ಯಂತ “ಸಾಂಕೇತ್‌’ ಸಿನೆಮಾ ತೆರೆಗೆ

Sandalwood; ಶೀಘ್ರದಲ್ಲಿ ತೆರೆಗೆ ಬರುತ್ತಿದೆ ‘ಕಬಂಧ’

Sandalwood; ಶೀಘ್ರದಲ್ಲಿ ತೆರೆಗೆ ಬರುತ್ತಿದೆ ‘ಕಬಂಧ’

bheema

Duniya Vijay; ‘ಭೀಮ’ನಿಗಾಗಿ ತೆರೆಯಲಿದೆ ಮುಚ್ಚಿದ 18 ಚಿತ್ರಮಂದಿರ

Kannada Movies: ಹಿಟ್‌ ರೇಟ್‌ ಮೇಲೆ; ಸ್ಯಾಟಲೈಟ್‌, ಓಟಿಟಿಯ ಹೊಸ ಧೋರಣೆ

Kannada Movies: ಹಿಟ್‌ ಮೇಲೆ ರೇಟ್‌; ಸ್ಯಾಟಲೈಟ್‌, ಓಟಿಟಿಯ ಹೊಸ ಧೋರಣೆ

Sandalwood; ಕನ್ನಡದಲ್ಲಿ ಇಂದು ತೆರೆಗೆ ಬರುತ್ತಿದೆ ನಾಲ್ಕು ಚಿತ್ರಗಳು

Sandalwood; ಕನ್ನಡದಲ್ಲಿ ಇಂದು ತೆರೆಗೆ ಬರುತ್ತಿದೆ ನಾಲ್ಕು ಚಿತ್ರಗಳು

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.