ಶೂಟ್ ವೇಳೆ ನನ್ನನು ನೋಡಲು ಅಭಿಮಾನಿಗಳು ಕಲ್ಲು ತೂರಾಟಕ್ಕೆ ಸಿದ್ಧರಾಗಿದ್ದರು: ಅಮೀಶಾ ಪಟೇಲ್


Team Udayavani, Jul 27, 2023, 4:21 PM IST

ಶೂಟ್ ವೇಳೆ ನನ್ನನು ನೋಡಲು ಅಭಿಮಾನಿಗಳು ಕಲ್ಲು ತೂರಾಟಕ್ಕೆ ಸಿದ್ಧರಾಗಿದ್ದರು: ಅಮೀಶಾ ಪಟೇಲ್

ಮುಂಬಯಿ: ಸನ್ನಿ ಡಿಯೋಲ್‌ – ಅಮೀಶಾ ಪಟೇಲ್ ಅವರ ʼಗದರ್-2‌ʼ ಬಾಲಿವುಡ್‌ ನ ಬಹು ನಿರೀಕ್ಷಿತ ಸಿನಿಮಾಗಳಲ್ಲೊಂದು. ಸಿನಿಮಾದ ಟ್ರೇಲರ್‌  ಈಗಾಗಲೇ ರಿಲೀಸ್‌ ಆಗಿದ್ದು, ಟ್ರೆಂಡಿಂಗ್‌ ನಲ್ಲಿದೆ.

ಸಿನಿಮಾದ ಹಾಡು ಹಾಗೂ ಟ್ರೇಲರ್‌ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.  ಸನ್ನಿ ಡಿಯೋಲ್‌ ಮತ್ತೆ ತಾರಾ ಸಿಂಗ್‌ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಪಾಕ್‌ ನಲ್ಲಿ ಸಿಲುಕಿರು ತನ್ನ ಮಗನನ್ನು ಉಳಿಸಲು ಹೋರಾಡುವ ʼಗದರ್-2ʼ ನಲ್ಲಿ ಸಾಹಸದ ದೃಶ್ಯಗಳಿವೆ. ಸನ್ನಿ ಡಿಯೋಲ್‌ ಅವರ ಡೈಲಾಗ್ಸ್‌ ಗಳಿವೆ. ಒಟ್ಟಿನಲ್ಲಿ ಸಿನಿಮಾದಲ್ಲಿ ದೇಶ ಪ್ರೇಮದೊಂದಿಗೆ, ಮಾಸ್‌ ಅಂಶಗಳು ಇರುವುದು ಪಕ್ಕಾ ಎನ್ನುವಂತಿದೆ ಟ್ರೇಲರ್.

ಪ್ರಚಾರದ ಹಂತವಾಗಿ ಚಿತ್ರತಂಡ ಪ್ರತಿಕಾಗೋಷ್ಠಿ ನಡೆಸಿದೆ.  ಇದರಲ್ಲಿ ನಾಯಕಿ ಅಮೀಶಾ ಪಟೇಲ್‌ ಶೂಟಿಂಗ್‌ ಸಂದರ್ಭದಲ್ಲಾದ ಘಟನೆಯೊಂದರ ಬಗ್ಗೆ ಮಾತನಾಡಿದ್ದಾರೆ.

“ಅಂದಿನ ಶೂಟಿಂಗ್‌ ಗೆ ನಮ್ಮ ತಂಡದವರು ಕಷ್ಟಪಟ್ಟು ಸೆಟ್‌ ಹಾಕಿದರು. ಅದು ರಾತ್ರಿ ನಡೆಯುವ ಚಿತ್ರೀಕರಣವಾಗಿತ್ತು. ಆದರೆ ರಾತ್ರಿಯಾದರೂ ಅಲ್ಲಿ ಅನೇಕ ಜನರು ಸೇರಿದ್ದರು. ನಾವು ಏನೇ ಹೇಳಿದರೂ ಅವರು ಹೋಗಲು ಕೇಳುತ್ತಿರಲಿಲ್ಲ. ಅವರು ನನ್ನನ್ನೊಮ್ಮೆ ನೋಡಬೇಕೆಂದು ಹಟ ಹಿಡಿದಿದ್ದರು. ಇಲ್ಲದಿದ್ರೆ ನಾವು ಶೂಟಿಂಗ್‌ ಮಾಡಲು ಬಿಡುವುದಿಲ್ಲ ಎನ್ನುತ್ತಿದ್ದರು. ನಮ್ಮ ತಂಡ ಶೂಟ್‌ ಗಾಗಿ ಸಾಕಷ್ಟು ತಯಾರಿ ನಡೆಸಿಕೊಂಡು ಕಾಯುತ್ತಿದ್ದರು. ನಾನು ಮೇಕಪ್‌ ವಾಹನದಲ್ಲಿ ಕೂತಿದ್ದೆ. ನೀವು ಹೊರಗೆ ಹೋಗಿ ಕೈ ಬೀಸಿ, ಅಲ್ಲಿಂದಲೇ ಹೊಟೇಲ್‌ ಗೆ ಹೋಗಿ, ಇಲ್ಲದಿದ್ರೆ ಅವರು ನಮ್ಮ ಮೇಲೆ ಕಲ್ಲು ಎಸೆಯುತ್ತಾರೆ ಎಂದು ನನ್ನ ಬಳಿ ನಿರ್ದೇಶಕರು ಹೇಳಿದರು. ಇದಲ್ಲದೆ ನಮ್ಮ ವಾಹನವನ್ನು ಬಡಿಯಲು ಆರಂಭಿಸಿದರು ಎಂದು ಘಟನೆ ಬಗ್ಗೆ ಹೇಳಿದರು.

ಇದಲ್ಲದೇ ಅಮೃತಸರದಲ್ಲಿ ಸನ್ನಿ ಡಿಯೋಲ್‌ ಬರುವುದು ಗೊತ್ತಾಗಿ ಅಲ್ಲಿ, ಅನೇಕರು ಗುಂಪುಗೂಡಿದ್ದರು. ಅವರನ್ನು ನಿಯಂತ್ರಿಸಲು ಲಾಠಿ ಪ್ರಹಾರ ಮಾಡಬೇಕಾಗಿ ಬಂತು.  ಅಲ್ಲಿಗೆ ಬಂದ ಸನ್ನಿ ಡಿಯೋಲ್‌ ಜನರ ಗುಂಪನ್ನು ನೋಡಿ, ಮುಂದಿನ ಫ್ಲೈಟ್‌ ನಲ್ಲಿ ವಾಪಾಸ್‌ ಮುಂಬಯಿಗೆ ಹೋದರು ಎಂದು ನಟಿ ಹೇಳಿದರು.

‘ಗದರ್ 2’ ಅನಿಲ್ ಶರ್ಮಾ ಅವರ 2001 ರ ನಿರ್ದೇಶನದ ‘ಗದರ್: ಏಕ್ ಪ್ರೇಮ್ ಕಥಾ’ದ ಮುಂದುವರಿದ ಭಾಗವಾಗಿದೆ. ‘ಗದರ್ 2’ ಚಿತ್ರದಲ್ಲಿ ಅಮೀಶಾ ಪಟೇಲ್, ಸನ್ನಿ ಡಿಯೋಲ್ ಮತ್ತು ಉತ್ಕರ್ಷ್ ಶರ್ಮಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಸಿನಿಮಾ ಆಗಸ್ಟ್‌  11 ರಂದು ತೆರೆಗ ಬರಲಿದೆ.

ಟಾಪ್ ನ್ಯೂಸ್

1-weweewq

Modi ಕೈ ಬಲ ಪಡಿಸಲು ಜೋಶಿ ಗೆಲ್ಲಬೇಕು : ಏಕನಾಥ ಶಿಂಧೆ

eshwarappa

Modi ಫೋಟೋ ಬಳಕೆ ಹಕ್ಕು 140 ಕೋಟಿ ಜನರಿಗೂ ಇದೆ: ಈಶ್ವರಪ್ಪ

1——asdsad

IPL ರೋಚಕ ಪಂದ್ಯ:ರಾಜಸ್ಥಾನ್‌ ವಿರುದ್ಧ ಹೈದರಾಬಾದ್ ಗೆ 1 ರನ್ ಜಯ

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

1-wewqewqe

BJP; ಭಾರತ ವಿಶ್ವ ಮಟ್ಟದಲ್ಲಿ ಮಿಂಚಿದ್ದು ಮೋದಿ ಅಭಿವೃದ್ಧಿಯಿಂದ: ಅಣ್ಣಾಮಲೈ

1-asdsad

Farmers ಸಂಪೂರ್ಣ ಸಾಲ ಮನ್ನಾ ಮಾಡದಿದ್ದರೆ ಬೀದಿಗಿಳಿದು ಹೋರಾಟ:ಯಡಿಯೂರಪ್ಪ

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಲ್ಮಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ

ಸಲ್ಮಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweewq

Modi ಕೈ ಬಲ ಪಡಿಸಲು ಜೋಶಿ ಗೆಲ್ಲಬೇಕು : ಏಕನಾಥ ಶಿಂಧೆ

rahul gandhi (2)

ನಾನು ರಾಹುಲ್‌ ಫಿಟ್ನೆಸ್‌ ಅಭಿಮಾನಿ: ಶಿವರಾಜ್‌ಕುಮಾರ್‌

eshwarappa

Modi ಫೋಟೋ ಬಳಕೆ ಹಕ್ಕು 140 ಕೋಟಿ ಜನರಿಗೂ ಇದೆ: ಈಶ್ವರಪ್ಪ

Exam 2

ಕೆಸೆಟ್‌: ತಾತ್ಕಾಲಿಕ ಅಂಕ ಪ್ರಕಟ

35

Siddaramaiah: ಚುನಾವಣೆ ಬಂದಾಗ ಮೋದಿಗೆ ರಾಜ್ಯದ ನೆನಪು; ಸಿದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.