Raj Kundra: ನನ್ನ ಕೆಲಸ ಬಟ್ಟೆ ತೆಗೆಯು.. ವೇದಿಕೆಯಲ್ಲಿ 18+ ಜೋಕ್ ಹೇಳಿದ ರಾಜ್ ಕುಂದ್ರಾ
Team Udayavani, Oct 5, 2023, 1:41 PM IST
ಮುಂಬಯಿ: ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಆಶ್ಲೀಲ ವಿಡಿಯೋ ಪ್ರಕರಣ ಸುದ್ದಿಯಾದ ದಿನದಿಂದ ಇಂದಿನವರೆಗೆ ಮುಖ ಮುಚ್ಚಿಕೊಂಡೇ ಜನರ ಮುಂದೆ ಕಾಣಿಸಿಕೊಳ್ಳುತ್ತಿದ್ದಾರೆ.
ರಾಜ್ ಕುಂದ್ರಾ ಜೈಲಿನಲ್ಲಿದ್ದ ದಿನ ಹಾಗೂ ಜಾಮೀನು ಪಡೆದವರೆಗಿನ ದಿನಗಳಲ್ಲಿ ನಡೆದ ಸಂಗತಿಗಳ ಸುತ್ತ ಸಿನಿಮಾವೊಂದು ಬರಲಿದೆ ಎಂದು ಇತ್ತೀಚೆಗೆ ಸುದ್ದಿಯಾಗಿತ್ತು. ಈ ಬಗ್ಗೆ ಮಾತುಕತೆ ಚಾಲ್ತಿಯಲ್ಲಿದೆ ಎನ್ನಲಾಗುತ್ತಿದೆ.
ಇದೀಗ ರಾಜ್ ಕುಂದ್ರಾ ಮೊದಲ ಬಾರಿ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಆಗಿ ಜನರ ಮುಂದೆ ಕಾಣಿಸಿಕೊಂಡಿದ್ದಾರೆ. ಮುಖಕ್ಕೆ ಮಾಸ್ಕ್ ಹಾಕಿಕೊಂಡು ಅವರು 18+ ಜೋಕ್ಸ್ ಗಳನ್ನು ಹೇಳಿದ್ದಾರೆ.
ಇದನ್ನೂ ಓದಿ: Viral: ಹೆಲ್ಮೆಟ್ ಇಲ್ಲದೆ ಪೊಲೀಸರ ಕೈಗೆ ಸಿಕ್ಕಿಬಿದ್ದರೂ,ಈತನಿಗೆ ಇದುವರಗೆ ದಂಡವೇ ಹಾಕಿಲ್ಲ!
ಅವರ ಸ್ಟ್ಯಾಂಡ್ ಅಪ್ ಕಾಮಿಡಿಯ ಝಲಕ್ ನ್ನು ರಾಜ್ ಕುಂದ್ರಾ ಅವರೇ ಹಂಚಿಕೊಂಡಿದ್ದಾರೆ. ವೇದಿಕೆಯ ಬರುವ ವೇಳೆ ಅವರು “ನಾನು ಹೇಳುವ ‘ಲೈಂಗಿಕ ಜೋಕ್ಗಳಿಂದ'(18+) ನಿಮಗೆ ಮುಜುಗರವಾದರೆ ನೀವು ಇಲ್ಲಿಂದ ಹೋಗಬಹುದು” ಎಂದಿದ್ದಾರೆ.
ಲೇಡೀಸ್ & ಜಂಟಲ್ ಮೆನ್ ನಾನು ರಾಜ್ ಕುಂದ್ರಾ, ‘ಮಾಸ್ಕ್ ಮ್ಯಾನ್’ ಶಿಲ್ಪಾ ಕಾ ಪತಿ ಮತ್ತು ‘ಸಾಸ್ತಾ ಕನ್ಯೆ ವೆಸ್ಟ್’ ಎಂದೂ ನನ್ನನು ಕರೆಯುತ್ತಾರೆ. 18 ವರ್ಷದವನಾಗಿದ್ದಾಗ ಲಂಡನ್ ನಲ್ಲಿ ಟ್ಯಾಕ್ಸಿ ಓಡಿಸುತ್ತಿದ್ದೆ. 21ನೇ ವಯಸ್ಸಿನಲ್ಲಿ ಪಾಶ್ಮಿನಾ ಶಾಲು ಉದ್ಯಮವನ್ನೇ ಕಟ್ಟಿ ಬೆಳೆಸಿದೆ. ನನ್ನ ಕೆಲಸ ಯಾವತ್ತೂ ಬಟ್ಟೆ ಏರಿಸುವುದೇ ಆಗಿತ್ತು, ಬಟ್ಟೆ ತೆಗೆಯುವುದಿಲ್ಲ” ಎಂದು ಪರೋಕ್ಷವಾಗಿ ಆಶ್ಲೀಲ ವಿಡಿಯೋ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ.
ಸ್ಟ್ಯಾಂಡ್ ಅಪ್ ಕಾಮಿಡಿಯ ಈ ವಿಡಿಯೋ ಕ್ಲಿಪಿಂಗ್ ನ್ನು ರಾಜ್ ಕುಂದ್ರಾ ಅವರು ತನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸೆಪ್ಟೆಂಬರ್ 2021 ರಲ್ಲಿ ಆಶ್ಲೀಲ ವಿಡಿಯೋ ನಿರ್ಮಾಣ ಹಾಗೂ ವಿತರಣೆ ಮಾಡಿದ ಆರೋಪದ ಮೇಲೆ ರಾಜ್ ಕುಂದ್ರಾ ಅವರನ್ನು ಪೊಲೀಸರು ಬಂಧಿಸಿದ್ದರು. ಕೆಲ ದಿನಗಳ ಕಾಲ ರಾಜ್ ಕುಂದ್ರಾ ಈ ಪ್ರಕರಣಕ್ಕೆ ಸಂಬಂಧ ಜೈಲಿನಲ್ಲಿದ್ದರು.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid vaccine ಅಡ್ಡ ಪರಿಣಾಮದಿಂದಲೇ ಹೃದಯಾಘಾತ?: ನಟ ಶ್ರೇಯಸ್ ಹೇಳಿದ್ದೇನು?
Sunidhi Chauhan: ಹಾಡುತ್ತಿರುವಾಗಲೇ ಖ್ಯಾತ ಗಾಯಕಿ ಮೇಲೆ ಬಾಟಲಿ ಎಸೆದ ಅಭಿಮಾನಿ
ಅಮಿತಾಭ್ ಟು ಶಾರುಖ್: ಇಂದು ಕೋಟಿ ಕುಳರಾದ ಈ ನಟರ ಮೊದಲ ಸಂಪಾದನೆ ಎಷ್ಟಾಗಿತ್ತು ಗೊತ್ತಾ?
Toxic: ಯಶ್ ಸಿನಿಮಾದಿಂದ ಹೊರಹೋದ ಕರೀನಾ ಕಪೂರ್?
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
MUST WATCH
ಹೊಸ ಸೇರ್ಪಡೆ
Samantha: ಬೆತ್ತಲೆ ಫೋಟೋ ಹಾಕಿ ಡಿಲೀಟ್ ಮಾಡಿದ್ರಾ ಸಮಂತಾ?: ಟ್ರೆಂಡ್ ಆದ ಸ್ಯಾಮ್
Amethi: ಕಾಂಗ್ರೆಸ್ ಕಚೇರಿ ಮೇಲೆ ದಾಳಿ… ಕಾರುಗಳು ಪುಡಿ ಪುಡಿ, ಕಾರ್ಯಕರ್ತರಿಂದ ಪ್ರತಿಭಟನೆ
Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್ ಇನ್ನಿಲ್ಲ
ಕಾಡಾನೆ ತಡೆಗೆ ಜೋತಾಡುವ ಸೌರ ವಿದ್ಯುತ್ ಬೇಲಿ!
Todays Horoscope: ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದ ಕೀಟಲೆಗಳು ಇರಲಿದೆ