![modi (4)](https://www.udayavani.com/wp-content/uploads/2024/07/modi-4-4-415x256.jpg)
SonuSrinivasGowda: ಜೈಲಿನಲ್ಲಿನ ಕರಾಳ ದಿನಗಳ ಅನುಭವ ಹಂಚಿಕೊಂಡ ಸೋನು ಗೌಡ
Team Udayavani, Apr 13, 2024, 3:32 PM IST
![SonuSrinivasGowda: ಜೈಲಿನಲ್ಲಿನ ಕರಾಳ ದಿನಗಳ ಅನುಭವ ಹಂಚಿಕೊಂಡ ಸೋನು ಗೌಡ](https://www.udayavani.com/wp-content/uploads/2024/04/12-7-620x372.jpg)
ಬೆಂಗಳೂರು: ಅಕ್ರಮವಾಗಿ ಮಗು ದತ್ತು ಪಡೆದ ಆರೋಪದಲ್ಲಿ ಜೈಲು ಸೇರಿ ಜಾಮೀನು ಪಡೆದು ಹೊರಬಂದಿರುವ ಬಿಗ್ ಬಾಸ್ ಹಾಗೂ ಟಿಕ್ ಟಾಕ್ ಸ್ಟಾರ್ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ತಮ್ಮ ಜೈಲಿನ ಅನುಭವದ ಬಗ್ಗೆ ಮಾತನಾಡಿದ್ದಾರೆ.
ಈ ಬಗ್ಗೆ ತಮ್ಮ ಯೂಟ್ಯೂಬ್ ನಲ್ಲಿ ವಿಡಿಯೋ ಮಾಡಿರುವ ಅವರು, “ಮೊದಲಿಗೆ ನನ್ನನ್ನು ಕಾನೂನತ್ಮಕವಾಗಿ ವಿಚಾರಣೆ ಮಾಡಲೆಂದು ಕರೆದುಕೊಂಡು ಹೋದರು. ಆ ಬಳಿಕ ನನ್ನನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದರು. ಅಲ್ಲಿಗೆ ಹೋದ ಬಳಿಕ ತುಂಬಾ ಬೇಸರವಾಯಿತು. 23 -24 ರ ವಯಸಿಗೆ ಆ ನಾಲ್ಕು ಗೋಡೆಗಳ ಮಧ್ಯೆ ಇದ್ದೆ. ಅಲ್ಲಿರುವ ಜನ, ಸ್ಥಳ, ವಾತಾವಾರಣ ನೋಡಿ ಯಾಕೆ ಇವೆಲ್ಲಾ ಬೇಕಿತ್ತಾ ಅಂಥ ಅನ್ನಿಸಿತು. ಜೈಲಿನಲ್ಲಿ ನನ್ನ ಅನುಭವ ಹೇಗಿತ್ತು ಅಂದ್ರೆ, ನನ್ನ ರೀತಿಯೇ ಸಾಕಷ್ಟು ಜನ ಇರ್ತಾರೆ. ಏನೇನೋ ಕೇಸ್ಗಳು. ಅವರ ಮಧ್ಯೆ ನಾನು ಇದ್ದೆ ಅದಕ್ಕೆ ಏನು ಹೇಳೋದಂತೆಲ್ಲೇ ನನಗೆ ಗೊತ್ತಾಗ್ತಾ ಇಲ್ಲ” ಎಂದು ಹೇಳಿದ್ದಾರೆ.
“ಜೈಲಿನಲ್ಲಿ ಮೂರು ದಿನಕ್ಕೆ ಒಂದು ಸಲಿ ಫೋನ್ ಕೊಡ್ತಾರೆ. ಆಗ ನಾವು ಫ್ಯಾಮಿಲಿ ಜೊತೆ ಮಾತನಾಡಬಹುದು, ವಕೀಲರ ಜೊತೆ, ಯಾರ ಜೊತೆ ಬೇಕಾದರೂ ಮಾತನಾಡಬಹುದು. ನನ್ನ ಜೊತೆ ಮಾತನಾಡುವವರು ಇದ್ದರು, ಅನ್ ಲಿಮಿಟಿಡ್ ಕಾಲ್ಸ್ ಕೂಡ ಇತ್ತು. ಆದರೆ ನಾನು ಮಾತನಾಡುತ್ತಿರಲಿಲ್ಲ. ಅಲ್ಲಿದ್ದು ನಮಗೆ ವ್ಯಕ್ತಿಯ ಮೌಲ್ಯ ಗೊತ್ತಾಗುತ್ತದೆ. ನಾಲ್ಕು ಗೋಡೆಯೇ ನಿಮ್ಮ ಜೊತೆ ಏನೆಲ್ಲಾ ಆಯಿತೆಂದು ಹೇಳಿಕೊಡುತ್ತದೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಸೌದಿಯಲ್ಲಿ ಮರಣದಂಡನೆಗೆ ಒಳಗಾದ ಕೇರಳದ ವ್ಯಕ್ತಿಗಾಗಿ 34 ಕೋಟಿ ರೂ ಸಂಗ್ರಹ: ಏನಿದು ಸ್ಟೋರಿ?
“ಸ್ಟೇಷನ್ನಲ್ಲಿ ಇದ್ದಾಗ ಅಕ್ಕ ಪಕ್ಕ ಇದ್ದವರ ಫೋನ್ ನೋಡುತ್ತಿದ್ದೆ. ತುಂಬಾ ನೆಗೆಟಿವ್ ಕಾಮೆಂಟ್ಸ್ ಬರುತ್ತಿತ್ತು. ಈ ವೇಳೆ ಮತ್ತೆ ನನ್ನ ಲೈಫ್ ನೆಗೆಟಿವ್ ಆಗಿಬಿಡ್ತು ಅಂತ ಬೇಸರಗೊಂಡಿದ್ದೆ. ನನ್ನ ಇಷ್ಟದ ಜನ, ಕುಟುಂಬ, ಊಟ, ಪೆಟ್ಸ್ ಏನೂ ಇಲ್ಲದೆ ನಾನು ಹೇಗೆ ಜೀವನ ಕಳೆದ ಅಂತ ನನಗೆ ಹೇಳೋಕೆ ಆಗ್ತಾ ಇಲ್ಲ. ನನಗೆ ತುಂಬಾ ಬೇಸರವಾಯಿತು. ನನಗೆ ತುಂಬಾನೇ ಖುಷಿ ಆದದ್ದು ಏನೆಂದರೆ ಟ್ರೋಲ್ ಪೇಜ್ ನವರು ನನಗೆ ಸಪೋರ್ಟ್ ಮಾಡಿದ್ದೀರಿ ಅದಕ್ಕೆ ಥ್ಯಾಂಕ್ಸ್” ಎಂದು ಸೋನು ಹೇಳಿದ್ದಾರೆ.
“ಕಷ್ಟದಲ್ಲಿ ಯಾರು ಜೊತೆಗಿರುತ್ತಾರೆ ಎನ್ನುವುದು ಮುಖ್ಯ. ನನಗೆ ಅದು ಈ ಘಟನೆಯಿಂದ ಗೊತ್ತಾಯಿತು. ಜೈಲಿನಲ್ಲಿ ತುಂಬಾ ಸೊಳ್ಳೆ ಇರ್ತಿತ್ತು. ನಾವು ಹೊರಗೆ ನೋಡಿದ ಲೈಫ್ ಬೇರೆ, ಅಲ್ಲಿ ನೋಡಿದ ಲೈಫ್ ಬೇರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಅದನ್ನೆಲ್ಲಾ ನೋಡಿದೆ ಎನ್ನುವುದು ಬೇಸರ. ನಮ್ಮ ಫ್ಯಾಮಿಲಿ ಹಾಗೂ ಆಪ್ತರ ಸಹಾಯದಿಂದ ಬೇಗ ಹೊರಬಂದೆ. ನಿಯಮಗಳ ಪ್ರಕಾರ ನಾನು ಪ್ರಕರಣದ ಬಗ್ಗೆ ಮಾತನಾಡುವಂತಿಲ್ಲ. ಹಾಗಾಗಿ ಮಾತನಾಡಲಿಲ್ಲ” ಎಂದು ಸೋನು ಹೇಳಿದ್ದಾರೆ.
ಏನಿದು ಪ್ರಕರಣ: ಸೋನು ಗೌಡ ಇತ್ತೀಚೆಗೆ ಚಿಕ್ಕ ಬಾಲಕಿಯನ್ನು ದತ್ತು ಪಡೆದಿರುವುದಾಗಿ ಹೇಳಿಕೊಂಡಿದ್ದರು. ಆದರೆ, ದತ್ತು ಪಡೆದಿರುವ ರೀತಿ ನಿಯಮದ ಅನುಸಾರವಾಗಿಲ್ಲ ಎಂಬ ಕಾರಣಕ್ಕೆ ಆಕೆಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಅಲ್ಲದೇ, ಸೋನು ಗೌಡರನ್ನು ಪೊಲೀಸರು ಬಂಧಿಸಿದ್ದರು. ಸೋನು ಗೌಡ ಇತ್ತೀಚೆಗೆ ಚಿಕ್ಕ ಬಾಲಕಿಯನ್ನು ದತ್ತು ಪಡೆದಿರುವುದಾಗಿ ಹೇಳಿಕೊಂಡಿದ್ದರು. ಆದರೆ, ದತ್ತು ಪಡೆದಿರುವ ರೀತಿ ನಿಯಮದ ಅನುಸಾರವಾಗಿಲ್ಲ ಎಂಬ ಕಾರಣಕ್ಕೆ ಆಕೆಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಅಲ್ಲದೇ, ಸೋನು ಗೌಡರನ್ನು ಪೊಲೀಸರು ಬಂಧಿಸಿದ್ದರು. ಆ ಬಳಿಕ ಶ್ರೀನಿವಾಸ್ ಗೌಡ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಸಿಜೆಎಂ ನ್ಯಾಯಾಲಯ ಆದೇಶ ಹೊರಡಿಸಿತ್ತು.
ಏಪ್ರಿಲ್ 6ರಂದು ಕೇಂದ್ರ ಕಾರಾಗೃಹದಿಂದ ಜಾಮೀನು ಮೂಲಕ ಸೋನು ಹೊರ ಬಂದಿದ್ದರು.
ಟಾಪ್ ನ್ಯೂಸ್
![modi (4)](https://www.udayavani.com/wp-content/uploads/2024/07/modi-4-4-415x256.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Sunny Mahipal: ಪತ್ನಿ ಮೇಲೆ ಹಲ್ಲೆ ನಡೆಸಿದ ಕಿರುತೆರೆ ನಟನಿಗೆ ಜಾಮೀನು](https://www.udayavani.com/wp-content/uploads/2024/07/3-29-150x90.jpg)
Sunny Mahipal: ಪತ್ನಿ ಮೇಲೆ ಹಲ್ಲೆ ನಡೆಸಿದ ಕಿರುತೆರೆ ನಟನಿಗೆ ಜಾಮೀನು
![Bigg Boss ಮನೆಯಲ್ಲಿ ಖುಲ್ಲಂ ಖುಲ್ಲಾ ರೊಮ್ಯಾನ್ಸ್: ವೈರಲ್ ವಿಡಿಯೋಗೆ ಆಯೋಜಕರ ಸ್ಪಷ್ಟನೆ](https://www.udayavani.com/wp-content/uploads/2024/07/7-19-150x90.jpg)
Bigg Boss ಮನೆಯಲ್ಲಿ ಖುಲ್ಲಂ ಖುಲ್ಲಾ ರೊಮ್ಯಾನ್ಸ್: ವೈರಲ್ ವಿಡಿಯೋಗೆ ಆಯೋಜಕರ ಸ್ಪಷ್ಟನೆ
![6](https://www.udayavani.com/wp-content/uploads/2024/07/6-22-150x90.jpg)
ಕಿರುತೆರೆ ನಟನಿಂದ ಗರ್ಭಿಣಿ ಪತ್ನಿ ಮೇಲೆ ಹಲ್ಲೆ: ಮದುವೆ ಬಳಿಕ ಮತ್ತೊಬ್ಬಳ ಜತೆ ನಿಶ್ಚಿತಾರ್ಥ?
![1](https://www.udayavani.com/wp-content/uploads/2024/07/1-22-150x90.jpg)
Vinod Dondale: ʼಕರಿಮಣಿʼ ಧಾರಾವಾಹಿ ನಿರ್ದೇಶಕ ನೇಣಿಗೆ ಶರಣು; ಸಾಲದ ಸುಳಿಯೇ ಕಾರಣ?
![Bigg Boss Kannada ಸೀಸನ್11ರ ಆರಂಭಕ್ಕೆ ಸಿದ್ಧತೆ; ಸ್ಪರ್ಧಿಗಳಾಗಿ ಬರುವವರು ಇವರೇನಾ?](https://www.udayavani.com/wp-content/uploads/2024/07/12555-150x90.jpg)
Bigg Boss Kannada ಸೀಸನ್ 11ರ ಆರಂಭಕ್ಕೆ ಸಿದ್ಧತೆ; ಸ್ಪರ್ಧಿಗಳಾಗಿ ಬರುವವರು ಇವರೇನಾ?
MUST WATCH
ಹೊಸ ಸೇರ್ಪಡೆ
![modi (4)](https://www.udayavani.com/wp-content/uploads/2024/07/modi-4-4-150x92.jpg)
NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!
![Exam](https://www.udayavani.com/wp-content/uploads/2024/07/Exam-8-150x84.jpg)
NEET ಟಾಪರ್ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!
![1-assam](https://www.udayavani.com/wp-content/uploads/2024/07/1-assam-150x84.jpg)
UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್?
![New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್ ಗ್ಯಾಂಗ್’](https://www.udayavani.com/wp-content/uploads/2024/07/POLICE-5-12-150x79.jpg)
New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್ ಗ್ಯಾಂಗ್’
![1-kanwar-msid](https://www.udayavani.com/wp-content/uploads/2024/07/1-kanwar-msid-150x84.jpg)
Uttara Khand; ಕನ್ವರ್ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.