![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
Cinema: ಸಿಂಗಲ್ ಸ್ಕ್ರೀನ್ಗೆ ಪ್ರೇಕ್ಷಕರ ಬರ: ಇದೇ ಶುಕ್ರವಾರದಿಂದ 10 ದಿನ ಥಿಯೇಟರ್ ಬಂದ್
Team Udayavani, May 15, 2024, 4:41 PM IST
![Cinema: ಸಿಂಗಲ್ ಸ್ಕ್ರೀನ್ಗೆ ಪ್ರೇಕ್ಷಕರ ಬರ: ಇದೇ ಶುಕ್ರವಾರದಿಂದ 10 ದಿನ ಥಿಯೇಟರ್ ಬಂದ್](https://www.udayavani.com/wp-content/uploads/2024/05/14-11-620x372.jpg)
ಹೈದರಾಬಾದ್: ಐಪಿಎಲ್, ಎಲೆಕ್ಷನ್ ಭರಾಟೆ ನಡುವೆ ದಕ್ಷಿಣ ಸಿನಿಮಾರಂಗ ಸಪ್ಪೆಯಾಗಿದೆ. ಮಾಲಿವುಡ್ ನಲ್ಲಿ ಮಾತ್ರ ಸಿನಿಮಾಗಳು ರಿಲೀಸ್ ಆಗುತ್ತಿದೆ. ಅದು ಬಿಟ್ಟರೆ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿಯಲ್ಲೂ ಕೈಲೆಕ್ಕದಷ್ಟು ಸಿನಿಮಾ ರಿಲೀಸ್ ಆಗುತ್ತಿದೆ.
ಓಟಿಟಿ, ಪ್ಯಾನ್ ಇಂಡಿಯಾ ಜಮಾನ ಬಂದ ಬಳಿಕ ಈಗೀಗ ಮೊದಲಿನ ಹಾಗೆ ಸ್ಟಾರ್ ನಟರ ಸಿನಿಮಾಗಳು ತಿಂಗಳಿಗೊಮ್ಮೆ ಅಥವಾ ವಾರದಲ್ಲಿ ಒಂದಾದರೂ ಬರುವುದಿಲ್ಲ. ಸ್ಟಾರ್ ನಟರು ಪ್ಯಾನ್ ಇಂಡಿಯಾ ರಿಲೀಸ್ ಗಾಗಿ ವರ್ಷದಲ್ಲಿ ಅಥವಾ ಎರಡು ವರ್ಷಕ್ಕೊಂದು ಸಿನಿಮಾಗಳನ್ನು ರಿಲೀಸ್ ಮಾಡುತ್ತಿದ್ದಾರೆ. ಆ ಸಿನಿಮಾಗಳು ರಿಲೀಸ್ ಆದ ವೇಳೆ ಹೆಚ್ಚಾಗಿ ಮಲ್ಟಿಫ್ಲೆಕ್ಸ್ ಗಳೇ ಹೌಸ್ ಫುಲ್ ಆಗುತ್ತದೆ ವಿನಃ ಸಿಂಗಲ್ ಸ್ಕ್ರೀನ್ ಗಳತ್ತ ಜನ ಬರುವುದೇ ಕಡಿಮೆ.
ಇತ್ತೀಚೆಗೆ ಸಿಂಗಲ್ ಸ್ಕ್ರೀನ್ ಥಿಯೇಟರ್ ಗೆ ಪ್ರೇಕ್ಷಕರ ಬರ ಉಂಟಾಗಿದೆ. ಈ ಕಾರಣದಿಂದ ಅನೇಕ ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳು ಕಳೆದ ಕೆಲ ವರ್ಷಗಳಿಂದ ಬಾಗಿಲು ಮುಚ್ಚುತ್ತಿವೆ. ಕರ್ನಾಟಕ ಹೆಚ್ಚಾಗಿ ಬೆಂಗಳೂರಿನಲ್ಲಿ ಕಳೆದ ಎರಡು – ಮೂರು ವರ್ಷಗಳಿಂದ ಅನೇಕ ವರ್ಷ ಇತಿಹಾಸವುಳ್ಳ ಥಿಯೇಟರ್ ಗಳು ಪ್ರೇಕ್ಷಕರ ಕೊರತೆಯಿಂದ ಬಂದ್ ಆಗಿವೆ.
ಟಾಲಿವುಡ್ ಚಿತ್ರರಂಗದಲ್ಲೂ ಪ್ರೇಕ್ಷಕರ ಕೊರತೆ ಉಂಟಾಗಿದೆ. ಈ ಕಾರಣದಿಂದ ಥಿಯೇಟರ್ ಗಳು ಬಂದ್ ಆಗುವ ದಿನ ಬಂದಿದೆ.
ತೆಲಂಗಾಣ ಸ್ಟೇಟ್ ಸಿಂಗಲ್ ಥಿಯೇಟರ್ ಅಸೋಸಿಯೇಷನ್ ಹತ್ತು ದಿನಗಳ ಕಾಲ ರಾಜ್ಯದಾದ್ಯಂತ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ಮುಚ್ಚಲು ನಿರ್ಧರಿಸಿರುವುದಾಗಿ ವರದಿಯಾಗಿದೆ.
ಕಳೆದ ಕೆಲ ವಾರಗಳಿಂದ ಟಾಲಿವುಡ್ ನಲ್ಲಿ ಯಾವ ಪ್ರಮುಖ ಸಿನಿಮಾಗಳು ರಿಲೀಸ್ ಆಗುತ್ತಿಲ್ಲ. ರಿಲೀಸ್ ಆದರೂ ಅದಕ್ಕೆ ಪ್ರೇಕ್ಷಕರು ಬರುವುದು ಕಡಿಮೆಯಾಗಿದೆ. ಪ್ರತಿ ವರ್ಷ ಏಪ್ರಿಲ್ – ಮೇ ತಿಂಗಳಿನಲ್ಲಿ ಸ್ಟಾರ್ ನಟರ ಸಿನಿಮಾಗಳು ರಿಲೀಸ್ ಆಗುತ್ತಿತ್ತು. ಈ ಬಾರಿ ಐಪಿಎಲ್ ಹಾಗೂ ಎಲೆಕ್ಷನ್ ಜೊತೆಯಾಗಿ ಬಂದಿರುವುದರಿಂದ ಹತ್ತಾರು ಚಿತ್ರತಂಡಗಳು ಈ ಸಮಯದಲ್ಲಿ ಸಿನಿಮಾ ರಿಲೀಸ್ ಮಾಡುವ ಸಾಹಸಕ್ಕೆ ಮುಂದಾಗುತ್ತಿಲ್ಲ.
ತೆಲಂಗಾಣದಲ್ಲಿ ಸುಮಾರು 400 ಕ್ಕೂ ಅಧಿಕ ಥಿಯೇಟರ್ ಗಳಿವೆ. ಇದೇ ಶುಕ್ರವಾರ(ಮೇ.17 ರಿಂದ) ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳನ್ನು ಬಂದ್ ಮಾಡಲಾಗುತ್ತಿದೆ. ಸದ್ಯ ರಿಲೀಸ್ ಆಗಿರುವ ಸಿನಿಮಾಗಳನ್ನು ನೋಡಲು ಪ್ರೇಕ್ಷಕರು ಬರುತ್ತಿಲ್ಲ ಹಾಗಾಗಿ ಮಾಲೀಕರು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ವರದಿಯಾಗಿದೆ.
ಥಿಯೇಟರ್ ನಲ್ಲಿ ದುಡಿಯುವ ಕೆಲಸಗಾರರಿಗೆ ಸಂಬಳ, ಕರೆಂಟ್ ಬಿಲ್ ಗೆ ಸೇರಿದಂತೆ ಪ್ರತಿಯೊಂದಕ್ಕೂ ಹಣ ವ್ಯಯಿಸಬೇಕಿದೆ. ಇದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟವಾಗುತ್ತಿರುವುದರಿಂದ ಸಿಂಗಲ್ ಸ್ಕ್ರೀನ್ ಥಿಯೇಟರ್ ಮಾಲೀಕರು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಮೇ.17 ರಿಂದ 25 ರವರೆಗೆ ಥಿಯೇಟರ್ ಗಳನ್ನು ಬಂದ್ ಮಾಡಲಾಗುತ್ತಿದೆ. ಮೇ.26 ರಂದು ಥಿಯೇಟರ್ ಓಪನ್ ಆಗಲಿದೆ. “ಲವ್ ಮಿ,” “ಗ್ಯಾಂಗ್ಸ್ ಆಫ್ ಗೋದಾವರಿ”, “ಹರೋಮ್ ಹರಾ,”, “ಸತ್ಯಭಾಮಾ” ಸೇರಿದಂತೆ ತಿಂಗಳಾಂತ್ಯದಲ್ಲಿ ಕೆಲ ಸಿನಿಮಾಗಳು ರಿಲೀಸ್ ಆಗಲಿದೆ.
ಟಾಪ್ ನ್ಯೂಸ್
![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![rudraveena movie](https://www.udayavani.com/wp-content/uploads/2024/07/rudra-veena-150x83.jpg)
Rudra Veena; ಜುಲೈ 26ರಂದು ತೆರೆಗೆ ಬರುತ್ತಿದೆ ‘ರುದ್ರ ವೀಣಾ’ ಚಿತ್ರ
![Sai Pallavi: ಎರಡು ಮಕ್ಕಳ ತಂದೆ ಜೊತೆ ನಟಿ ಸಾಯಿಪಲ್ಲವಿ ಡೇಟಿಂಗ್? ಏನಿದು ವಿಚಾರ?](https://www.udayavani.com/wp-content/uploads/2024/07/14-15-150x90.jpg)
Sai Pallavi: ಎರಡು ಮಕ್ಕಳ ತಂದೆ ಜೊತೆ ನಟಿ ಸಾಯಿಪಲ್ಲವಿ ಡೇಟಿಂಗ್? ಏನಿದು ವಿಚಾರ?
![Love Insurance Kompany: ಪತಿಯ ಸಿನಿಮಾಕ್ಕೆ ನಿರ್ಮಾಪಕಿಯಾದ ನಯನತಾರಾ; ಫಸ್ಟ್ ಲುಕ್ ಔಟ್](https://www.udayavani.com/wp-content/uploads/2024/07/12-19-150x90.jpg)
Love Insurance Kompany: ಪತಿಯ ಸಿನಿಮಾಕ್ಕೆ ನಿರ್ಮಾಪಕಿಯಾದ ನಯನತಾರಾ; ಫಸ್ಟ್ ಲುಕ್ ಔಟ್
![Kollywood: ರಜಿನಿಕಾಂತ್ ʼಕೂಲಿʼಗೆ ಖಡಕ್ ವಿಲನ್ ಆಗಿ ಅಕ್ಕಿನೇನಿ ನಾಗಾರ್ಜುನ ಎಂಟ್ರಿ?](https://www.udayavani.com/wp-content/uploads/2024/07/10-20-150x90.jpg)
Kollywood: ರಜಿನಿಕಾಂತ್ ʼಕೂಲಿʼಗೆ ಖಡಕ್ ವಿಲನ್ ಆಗಿ ಅಕ್ಕಿನೇನಿ ನಾಗಾರ್ಜುನ ಎಂಟ್ರಿ?
![SK25: ಶಿವಕಾರ್ತಿಕೇಯನ್ ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಸುಧಾ ಕೊಂಗರ](https://www.udayavani.com/wp-content/uploads/2024/07/14-14-150x90.jpg)
SK25: ಶಿವಕಾರ್ತಿಕೇಯನ್ ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಸುಧಾ ಕೊಂಗರ
MUST WATCH
ಹೊಸ ಸೇರ್ಪಡೆ
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.