![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
ದಳಪತಿ ಅಭಿಮಾನಿಗಳ ಟ್ರೋಲ್ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?
Team Udayavani, Apr 18, 2024, 4:11 PM IST
![ದಳಪತಿ ಅಭಿಮಾನಿಗಳ ಟ್ರೋಲ್ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?](https://www.udayavani.com/wp-content/uploads/2024/04/2-13-620x372.jpg)
ಚೆನ್ನೈ: ಕಾಲಿವುಡ್ ಸಿನಿರಂಗದ ಖ್ಯಾತ ಗಾಯಕ-ಸಂಯೋಜಕ ಯುವನ್ ಶಂಕರ್ ರಾಜಾ ಏಕಾಏಕಿ ಇನ್ಸ್ಟಾಗ್ರಾಮ್ ಖಾತೆಯನ್ನು ನಿಷ್ಕ್ರಿಯಗೊಳಿಸಿರುವುದು ಅವರ ಅಭಿಮಾನಿಗಳಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟಿಹಾಕಿದೆ.
ಕಾಲಿವುಡ್, ಟಾಲಿವುಡ್ ಸೇರಿದಂತೆ ದಕ್ಷಿಣದ ಹಲವು ಸಿನಿಮಾಗಳಿಗೆ ಮ್ಯೂಸಿಕ್ ನೀಡಿರುವ ಯುವನ್ ಶಂಕರ್ ರಾಜಾ ಇತ್ತೀಚೆಗೆ ದಳಪತಿ ವಿಜಯ್ ಅವರ ʼದಿ ಗ್ರೇಟಿಸ್ಟ್ ಆಫ್ ಆಲ್ ಟೈಮ್ʼ ಸಿನಿಮಾಕ್ಕೂ ಸಂಗೀತ ಸಂಯೋಜಿಸಿದ್ದಾರೆ.
ʼದಿ ಗ್ರೇಟಿಸ್ಟ್ ಆಫ್ ಆಲ್ ಟೈಮ್ʼ ಸಿನಿಮಾದ ಮೊದಲ ಸಿಂಗಲ್ ಟ್ರ್ಯಾಕ್ ʼವಿಜಿಲ್ ಪೋಡ್ʼ ಹಾಡು ರಿಲೀಸ್ ಆಗಿದೆ. ಆದರೆ ಈ ಹಾಡಿಗೆ ನಿರೀಕ್ಷೆಗೆ ತಕ್ಕ ಹಾಗೆ ಪಾಸಿಟಿವ್ ರೆಸ್ಪಾನ್ಸ್ ಕೇಳಿ ಬಂದಿಲ್ಲ. ಈ ಕಾರಣದಿಂದ ದಳಪತಿ ವಿಜಯ್ ಅವರ ಕೆಲ ಅಭಿಮಾನಿಗಳು ಯುವನ್ ಅವರನ್ನು ಟೀಕೆ ಮಾಡಿದ್ದಾರೆ. ಮಾತ್ರವಲ್ಲದೆ ಕೆಲ ಮಿಮ್ಸ್ ಪೇಜ್ ಗಳಲ್ಲಿ ಅವರನ್ನು ಟ್ರೋಲ್ ಮಾಡಿದ್ದಾರೆ.
ಇದನ್ನೂ ಓದಿ: Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್ ಹಕ್ಕನ್ನು ಖರೀದಿಸಿದ ನೆಟ್ಫ್ಲಿಕ್ಸ್
ಇದೇ ಕಾರಣದಿಂದ ಯುವನ್ ಶಂಕರ್ ರಾಜಾ ಅವರು ತಮ್ಮ ಇನ್ಸ್ರಾಗ್ರಾಮ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದಾರೆ ಎನ್ನಲಾಗುತ್ತಿದೆ.
ʼವಿಜಿಲ್ ಪೋಡ್ʼ ಹಾಡು ಅಷ್ಟಾಗಿ ಸದ್ದು ಮಾಡಿಲ್ಲ. ಈ ಬಗ್ಗೆ ಕೇಳಿ ಬರುತ್ತಿರುವ ಟೀಕೆ ಬಗ್ಗೆ ಯುವನ್ ಅವರು ಯಾವ ಪ್ರತಿಕ್ರಿಯೆಯನ್ನು ಇದುವರೆಗೆ ನೀಡಿಲ್ಲ.
ಯುವನ್ ಶಂಕರ್ ರಾಜಾ ಅವರು ಸಂಗೀತ ಮಾಂತ್ರಿಕ ಇಳಯರಾಜ ಅವರ ಪುತ್ರನಾಗಿದ್ದು, 1997 ರಲ್ಲಿ ಬಂದ ʼಅರವಿಂಧನ್ʼ ಸಿನಿಮಾದ ಮೂಲಕ ಮ್ಯೂಸಿಕ್ ಇಂಡಸ್ಟ್ರಿಗೆ ಕಾಲಿಟ್ಟರು. 2002 ರಲ್ಲಿ ಬಂಧ ಧನುಷ್ ಅಭಿನಯದ ʼತುಳ್ಳುವದೋ ಇಳಮೈʼ ಚಿತ್ರಕ್ಕಾಗಿ ಸಂಯೋಜಿಸಿದ ಹಾಡುಗಳಿಂದ ಅವರಿಗೆ ದೊಡ್ಡ ಬ್ರೇಕ್ ಸಿಕ್ಕಿತು.
ದಳಪತಿ ವಿಜಯ್ ಮತ್ತು ವೆಂಕಟ್ ಪ್ರಭು ಅವರ ಚೊಚ್ಚಲ ಸಹಯೋಗ ʼದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ʼ ಸಿನಿಮಾದಲ್ಲಿ ಪ್ರಭುದೇವ, ಜಯರಾಮ್, ಮೀನಾಕ್ಷಿ ಚೌಧರಿ, ಮಿಕ್ ಮೋಹನ್, ಪ್ರಶಾಂತ್, ಅಜ್ಮಲ್ ಮುಂತಾದವರು ನಟಿಸಿದ್ದು ಇದೇ ಸೆ.5 ರಂದು ಸಿನಿಮಾ ತೆರೆ ಕಾಣಲಿದೆ.
ಟಾಪ್ ನ್ಯೂಸ್
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![rudraveena movie](https://www.udayavani.com/wp-content/uploads/2024/07/rudra-veena-150x83.jpg)
Rudra Veena; ಜುಲೈ 26ರಂದು ತೆರೆಗೆ ಬರುತ್ತಿದೆ ‘ರುದ್ರ ವೀಣಾ’ ಚಿತ್ರ
![Sai Pallavi: ಎರಡು ಮಕ್ಕಳ ತಂದೆ ಜೊತೆ ನಟಿ ಸಾಯಿಪಲ್ಲವಿ ಡೇಟಿಂಗ್? ಏನಿದು ವಿಚಾರ?](https://www.udayavani.com/wp-content/uploads/2024/07/14-15-150x90.jpg)
Sai Pallavi: ಎರಡು ಮಕ್ಕಳ ತಂದೆ ಜೊತೆ ನಟಿ ಸಾಯಿಪಲ್ಲವಿ ಡೇಟಿಂಗ್? ಏನಿದು ವಿಚಾರ?
![Love Insurance Kompany: ಪತಿಯ ಸಿನಿಮಾಕ್ಕೆ ನಿರ್ಮಾಪಕಿಯಾದ ನಯನತಾರಾ; ಫಸ್ಟ್ ಲುಕ್ ಔಟ್](https://www.udayavani.com/wp-content/uploads/2024/07/12-19-150x90.jpg)
Love Insurance Kompany: ಪತಿಯ ಸಿನಿಮಾಕ್ಕೆ ನಿರ್ಮಾಪಕಿಯಾದ ನಯನತಾರಾ; ಫಸ್ಟ್ ಲುಕ್ ಔಟ್
![Kollywood: ರಜಿನಿಕಾಂತ್ ʼಕೂಲಿʼಗೆ ಖಡಕ್ ವಿಲನ್ ಆಗಿ ಅಕ್ಕಿನೇನಿ ನಾಗಾರ್ಜುನ ಎಂಟ್ರಿ?](https://www.udayavani.com/wp-content/uploads/2024/07/10-20-150x90.jpg)
Kollywood: ರಜಿನಿಕಾಂತ್ ʼಕೂಲಿʼಗೆ ಖಡಕ್ ವಿಲನ್ ಆಗಿ ಅಕ್ಕಿನೇನಿ ನಾಗಾರ್ಜುನ ಎಂಟ್ರಿ?
![SK25: ಶಿವಕಾರ್ತಿಕೇಯನ್ ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಸುಧಾ ಕೊಂಗರ](https://www.udayavani.com/wp-content/uploads/2024/07/14-14-150x90.jpg)
SK25: ಶಿವಕಾರ್ತಿಕೇಯನ್ ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಸುಧಾ ಕೊಂಗರ
MUST WATCH
ಹೊಸ ಸೇರ್ಪಡೆ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
![1-aaasdeqweqw](https://www.udayavani.com/wp-content/uploads/2024/07/1-aaasdeqweqw-150x100.jpg)
India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್ ಯುಗಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.