ಗಾನಕೋಗಿಲೆ ಎಂ.ಎಸ್.ಸುಬ್ಬುಲಕ್ಷ್ಮಿ ಪಾತ್ರಕ್ಕೆ ಬಣ್ಣ ಹಚ್ಚುತ್ತಾರಾ ಈ ಸೌತ್‌ ಬೆಡಗಿಯರು?


Team Udayavani, May 22, 2024, 3:33 PM IST

ಗಾನಕೋಗಿಲೆ ಎಂ.ಎಸ್.ಸುಬ್ಬುಲಕ್ಷ್ಮಿ ಪಾತ್ರಕ್ಕೆ ಬಣ್ಣ ಹಚ್ಚುತ್ತಾರಾ ಈ ಸೌತ್‌ ಬೆಡಗಿಯರು?

ಬೆಂಗಳೂರು/ಚೆನ್ನೈ: ಒಬ್ಬ ಶ್ರೇಷ್ಠ ವ್ಯಕ್ತಿಯ ಜೀವನಗಾಥೆಯ ಕುರಿತು ಕೃತಿ ಅಥವಾ ಸಿನಿಮಾಗಳು ಬರುವುದು ಹೊಸದೇನಲ್ಲ. ಚಿತ್ರರಂಗದಲ್ಲಿ ಕೆಲ ಬಯೋಪಿಕ್‌ ಸೂಪರ್‌ ಹಿಟ್‌ ಆಗಿದೆ. ಶ್ರೇಷ್ಠ ವ್ಯಕ್ತಿಯ ಜೀವನದ ಸವಾಲು, ಸಾಧನೆ ಹಾಗೂ ಸಂಕಷ್ಟವನ್ನು ದೊಡ್ಡ ಪರದೆಯಲ್ಲಿ ದೃಶ್ಯ ರೂಪದಲ್ಲಿ ತರುವ ಪ್ರಯತ್ನ ಚಿತ್ರರಂಗ ಆಗುತ್ತಿರುತ್ತದೆ.

ಇತ್ತೀಚೆಗಷ್ಟೇ ಸಂಗೀತ ದಿಗ್ಗಜ ಇಳಯರಾಜ ಬಯೋಪಿಕ್‌ ಅನೌನ್ಸ್‌ ಆಗಿದೆ. ಇದರಲ್ಲಿ ನಟ ಧನುಷ್‌ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ ಪ್ರಧಾನಿ ಮೋದಿ ಅವರ ಬಯೋಪಿಕ್‌ ಸೆಟ್ಟೇರಲಿದೆ ಎನ್ನುವ ಸುದ್ದಿಯೊಂದು ದಕ್ಷಿಣ ಸಿನಿರಂಗದಲ್ಲಿ ಹರಿದಾಡಿದೆ. ನರೇಂದ್ರ ಮೋದಿಯವರ ಜೀವನಾಧಾರಿತ ಚಿತ್ರದಲ್ಲಿ ಸತ್ಯರಾಜ್‌ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಇದೀಗ ಮತ್ತೊಂದು ಬಯೋಪಿಕ್‌ ಬಗ್ಗೆ ಸುದ್ದಿ ಹರಿದಾಡಿದೆ. ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ ಎಂ.ಎಸ್.‌ ಸುಬ್ಬುಲಕ್ಷ್ಮಿ ಅವರ ಜೀವನಗಾಥೆಯ ಕಥೆ ಸಿನಿಮಾವಾಗಿ ಬರಲಿದೆ.

ಬೆಂಗಳೂರು ಮೂಲದ ಪ್ರೊಡಕ್ಷನ್ ಹೌಸ್ ಮತ್ತು ಪ್ರಸಿದ್ಧ ನಿರ್ದೇಶಕರ ತಂಡವು ಈಗಾಗಲೇ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸವನ್ನು ಪ್ರಾರಂಭಿಸಿದೆ ಎಂದು ʼಪಿಂಕ್‌ ವಿಲ್ಲಾʼ ವರದಿ ಮಾಡಿದೆ.

ಈ ಹಿಂದೆಯೇ ಎಂ.ಎಸ್.‌ ಸುಬ್ಬುಲಕ್ಷ್ಮಿ ಅವರ ಕುರಿತಾದ ಸಿನಿಮಾ ಬರಲಿದೆ ಎನ್ನುವ ಮಾತುಗಳು ಹರಿದಾಡಿತ್ತು. ಆದರೆ ಅದರ ಬಗ್ಗೆ ಮತ್ಯಾವ ಅಪ್ಡೇಟ್ಸ್‌ ಹೊರಬಿದ್ದಿರಲಿಲ್ಲ.

ಇದೀಗ ಚಿತ್ರತಂಡ ಸುಬ್ಬುಲಕ್ಷ್ಮಿ ಅವರ ಪಾತ್ರವನ್ನು ಮಾಡುವ ಕಲಾವಿದರ ಹುಡುಕಾಟದಲ್ಲಿ ನಿರತರಾಗಿದೆ. ದಕ್ಷಿಣ ಭಾರತದಲ್ಲಿ ಸದ್ಯ ಯಶಸ್ಸಿನ ಹಾದಿಯಲ್ಲಿರುವ ನಟಿ ನಯನತಾರಾ, ತ್ರಿಶಾ ಕೃಷ್ಣನ್ ಮತ್ತು ರಶ್ಮಿಕಾ ಮಂದಣ್ಣ ಅವರ ಹೆಸರು ಮುಂಚೂಣಿಯಲ್ಲಿದೆ. ಇದಲ್ಲದೆ ʼಮಹಾನಟಿʼ ಪಾತ್ರವನ್ನು ಮಾಡಿರುವ ಕೀರ್ತಿ ಸುರೇಶ್‌ ಕೂಡ ಸುಬ್ಬುಲಕ್ಷ್ಮಿ ಅವರ ಪಾತ್ರವನ್ನು ಮಾಡುವ ಲಿಸ್ಟ್‌ ನಲ್ಲಿದ್ದಾರೆ ಎಂದು ವರದಿ ತಿಳಿಸಿದೆ.

ಸ್ಕ್ರಿಪ್ಟ್ ಕೆಲಸ ಅಂತಿಮ ಹಂತದಲ್ಲಿದೆ. ಸುಬ್ಬುಲಕ್ಷ್ಮಿ ಪಾತ್ರವನ್ನು ಯಾರು ಮಾಡಲಿದ್ದಾರೆ ಎನ್ನುವುದನ್ನು ಚಿತ್ರತಂಡ ನಿರ್ಧರಿಸಲಿದೆ. ಚಿತ್ರವನ್ನು ದೊಡ್ಡ ಮಟ್ಟದಲ್ಲಿ ತೆರೆಗೆ ತರಲು ಯೋಜಿಸಲಾಗಿದೆ ಎಂದು ಮೂಲಗಳು ಹೇಳಿರುವುದಾಗಿ ವರದಿ ತಿಳಿಸಿದೆ.

ಆದರೆ ಪ್ರೂಡಕ್ಷನ್‌ ಸಂಸ್ಥೆ ಇನ್ನಷ್ಟೇ ಅಧಿಕೃತವಾಗಿ ಚಿತ್ರದ ಬಗ್ಗೆ ಮಾಹಿತಿ ನೀಡಿಬೇಕಿದೆ.

ಮಧುರೈ ಷಣ್ಮುಖವಡಿವು ಸುಬ್ಬುಲಕ್ಷ್ಮಿ ಅವರು ಎಂ.ಎಸ್.ಸುಬ್ಬುಲಕ್ಷ್ಮಿ ಎಂದೇ ಖ್ಯಾತಿ ಆದವರು. ಶಾಸ್ತ್ರೀಯ ಸಂಗೀತ ಗಾಯಕಿ ಮತ್ತು ನಟಿಯೂ ಆಗಿಯೂ ಗುರುತಿಸಿಕೊಂಡಿದ್ದ ಅವರು 10ನೇ ವಯಸ್ಸಿನಲ್ಲೇ ಗಾಯನಕ್ಕೆ ಕಾಲಿಟ್ಟಿದ್ದರು.

1938 ರಲ್ಲಿ ʼಸೇವಾಸದನ್ʼ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ʼಸಾವಿತ್ರಿʼ ಮತ್ತು ʼಮೀರಾʼ ಸಿನಿಮಾದಲ್ಲಿ ನಟಿಸಿದ್ದರು.

ʼಸುಪ್ರಭಾತಂʼ, ʼಕುರೈ ಒನ್ರುಮ್ ಇಲ್ಲೈʼ, ʼಭಜಗೋವಿಂದಂʼ, ʼವಿಷ್ಣು ಸಹಸ್ರನಾಮʼ, ʼಹನುಮಾನ್ ಚಾಲೀಸಾʼ, ಹಾಗೂ ಇತರೆ ಪ್ರಮುಖ ಭಕ್ತಿಗೀತೆಗಳನ್ನು ಹಾಡಿದ್ದರು.

‘ಭಾರತರತ್ನ’ವನ್ನು ಶಾಸ್ತ್ರೀಯ ಸಂಗೀತಕ್ಕೆ ಮೊದಲಾಗಿ ಪಡೆದವರು ಸುಬ್ಬುಲಕ್ಷ್ಮಿ.  2004 ರಲ್ಲಿ ತನ್ನ 88ನೇ ವಯಸ್ಸಿನಲ್ಲಿ ಅವರು ನಿಧನರಾದರು.

 

ಟಾಪ್ ನ್ಯೂಸ್

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

rudraveena movie

Rudra Veena; ಜುಲೈ 26ರಂದು ತೆರೆಗೆ ಬರುತ್ತಿದೆ ‘ರುದ್ರ ವೀಣಾ’ ಚಿತ್ರ

Sai Pallavi: ಎರಡು ಮಕ್ಕಳ ತಂದೆ ಜೊತೆ ನಟಿ ಸಾಯಿಪಲ್ಲವಿ ಡೇಟಿಂಗ್?‌ ಏನಿದು ವಿಚಾರ?

Sai Pallavi: ಎರಡು ಮಕ್ಕಳ ತಂದೆ ಜೊತೆ ನಟಿ ಸಾಯಿಪಲ್ಲವಿ ಡೇಟಿಂಗ್?‌ ಏನಿದು ವಿಚಾರ?

Love Insurance Kompany: ಪತಿಯ ಸಿನಿಮಾಕ್ಕೆ ನಿರ್ಮಾಪಕಿಯಾದ ನಯನತಾರಾ; ಫಸ್ಟ್‌ ಲುಕ್‌ ಔಟ್

Love Insurance Kompany: ಪತಿಯ ಸಿನಿಮಾಕ್ಕೆ ನಿರ್ಮಾಪಕಿಯಾದ ನಯನತಾರಾ; ಫಸ್ಟ್‌ ಲುಕ್‌ ಔಟ್

Kollywood: ರಜಿನಿಕಾಂತ್‌ ʼಕೂಲಿʼಗೆ ಖಡಕ್‌ ವಿಲನ್‌ ಆಗಿ ಅಕ್ಕಿನೇನಿ ನಾಗಾರ್ಜುನ ಎಂಟ್ರಿ?

Kollywood: ರಜಿನಿಕಾಂತ್‌ ʼಕೂಲಿʼಗೆ ಖಡಕ್‌ ವಿಲನ್‌ ಆಗಿ ಅಕ್ಕಿನೇನಿ ನಾಗಾರ್ಜುನ ಎಂಟ್ರಿ?

SK25: ಶಿವಕಾರ್ತಿಕೇಯನ್ ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಸುಧಾ ಕೊಂಗರ

SK25: ಶಿವಕಾರ್ತಿಕೇಯನ್ ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಸುಧಾ ಕೊಂಗರ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

2-chithapura

Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.