Desi Swara: ಸಿರಿಗನ್ನಡ ಕೂಟ ಮ್ಯೂನಿಕ್‌: ಸ್ತ್ರೀ ಶಕ್ತಿಯ ಸ್ಫೂರ್ತಿ ಬೆಳಗಿಸಿದ ಕಾರ್ಯಕ್ರಮ


Team Udayavani, Mar 30, 2024, 11:15 AM IST

Desi Swara: ಸಿರಿಗನ್ನಡ ಕೂಟ ಮ್ಯೂನಿಕ್‌: ಸ್ತ್ರೀ ಶಕ್ತಿಯ ಸ್ಫೂರ್ತಿ ಬೆಳಗಿಸಿದ ಕಾರ್ಯಕ್ರಮ

ಮ್ಯೂನಿಕ್‌: ಇಲ್ಲಿನ ಸಿರಿಗನ್ನಡ ಕೂಟದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು.

ಚುಟುಕು ಸ್ಪರ್ಧೆಗೆ ಅಭೂತಪೂರ್ವ ಪ್ರತಿಕ್ರಿಯೆ ದೊರಕಿಬಂತು. ಚುಟುಕ ಸ್ಪರ್ಧೆಗೆ 13 ನಮೂನೆಗಳು ಜರ್ಮನಿಯಾದ್ಯಂತ ದೊರೆಕಿದ್ದು ಕನ್ನಡ ಬರವಣಿಗೆಯ ಹಾದಿಯ ಗುರಿಗೆ ಬಹು ದೊಡ್ಡ ಜಯ ಹಾಗೂ ಅತೀ ಸಂತಸದ ವಿಚಾರ. ಅದರಲ್ಲೂ 7 ವರ್ಷದ ಪುಟ್ಟ ಬಾಲಕ ಆದಿಶೇಷನ ಚುಟುಕ ಎಲ್ಲರ ಮನ ಸೆಳೆಯಿತು. ಜತೆಗೆ 120ಕ್ಕೂ ಹೆಚ್ಚಿನ ಮಹಿಳೆಯರು ಮ್ಯೂನಿಕ್‌ ಹಾಗೂ ಸುತ್ತುಮುತ್ತಲಿನ ಪ್ರದೇಶಗಳಿಂದ InspireInclusion ಹಾಗೂ Floral Theme ಆಧಾರಿತ ಕಾರ್ಯಕ್ರಮಕ್ಕೆ ಅತೀ ಉತ್ಸಾಹ, ಹುಮ್ಮಸ್ಸಿನಲ್ಲಿ ಸೇರಿದ್ದರು.

ಆಕರ್ಷಕ ಫೋಟೋ ಬೂತ್‌ನ ಬಳಿ ರಂಗುರಂಗಿನ ಅಲಂಕಾರ ವಸ್ತುಗಳಿಂದ ಮಾಡಲ್ಪಟ್ಟ ಆಕರ್ಷಕ ಹೂಗಳನ್ನು ಇರಿಸಿ ಕೂಟದ ಅಲಂಕಾರ ತಂಡ ನಮ್ಮ ನಾರಿಯರಿಗೆ ಪರಿಪೂರ್ಣ ಸ್ವಾಗತ ನೀಡಿ, ತಮ್ಮ ಪುಷ್ಪಾಲಂಕೃತ ಉಡುಗೆ ತೊಡುಗೆ ಯ ಜತೆ ಭಾವಚಿತ್ರಗಳನ್ನು ಸ್ನೇಹಿತರೊಂದಿಗೆ, ಕೂಟದ ಇತರ ಸದಸ್ಯರೊಂದಿಗೆ ಸಡಗರದಿಂದ ತೆಗೆದು ಕಾರ್ಯಕ್ರಮಕ್ಕೆ ಕಾಮನಬಿಲ್ಲಿನ ಆರಂಭ ನೀಡಿತು. ಕೂಟದ ಪ್ರತೀ ಕಾರ್ಯಕ್ರಮಕ್ಕೆ ನವನವೀನ ಕಲ್ಪನೆಗಳನ್ನು ಹೊರತರುವ ರೇಷ್ಮಾ ಮೋಟುರ್‌ ಹಾಗೂ ತಂಡದವರ ಕೆಲಸ ಮೆಚ್ಚುಗೆಗೆ ಪಾತ್ರವಾಯಿತು.

ಕಾರ್ಯಕ್ರಮ ಸ್ತ್ರೀ ತನವನ್ನು ಆಚರಿಸುತ್ತಿದ್ದರಿಂದ, ಸದಸ್ಯರನ್ನು ಹೊರತುಪಡಿಸಿ ಕಾಶ್ಮೀರಿ, ತಮಿಳು, ತೆಲುಗು ಹಾಗೂ ಎಲ್ಲ ಪ್ರಾಂತದ ಮಹಿಳೆಯರಿಗೆ, ಇನ್ನಿತರ ಕೂಟದವರನ್ನು ಕಾರ್ಯಕ್ರಮದಲ್ಲಿ ಜತೆಯಾಗಿಸಿಕೊಂಡಿದ್ದು ವಿಶೇಷವಾಗಿತ್ತು.
ಆಡಳಿತ ಮಂಡಳಿಯ ದಿವ್ಯ ನಾರಾಯಣ್ಣಯ್ಯ ಅವರು ಕನ್ನಡ ಬಳಗದ ಕಾರ್ಯಕ್ರಮ, ಗುರಿಗಳ ಬಗ್ಗೆ ಪರಿಚಯ ನೀಡಿ, ಮಹಿಳಾ ದಿನಾಚರಣೆಗೆ ಚಾಲನೆ ನೀಡಿದರು. SKMSakkatNaariಸುತ್ತ ಆಧಾರಿತ ಕಾರ್ಯಕ್ರಮವನ್ನು ಸಂಪ್ರೀತ ಶಿರೂರ್‌ ಹಾಗೂ ಅನುಷಾ ರಾವ್‌ ಅವರು ನಿರೂಪಕರಾಗಿ ನೆಡೆಸಿಕೊಟ್ಟರು.

ಕ್ಯಾರಿಯೋಕೆ ಹಾಗೂ ಅದರ ಜತೆ ಎಲ್ಲರ ಸಮೂಹ್ಯ ನೃತ್ಯ, ಸೆಲೆಬ್ರಿಟಿಯನ್ನು ಊಹಿಸಿ, ಸಂವಹನ ಆಟ, ನಾರಿಯರ ನಡಿಗೆ ಹಾಗೂ ಇಂತಹ ಅನನ್ಯ ಕಾರ್ಯಕ್ರಮ ಅಲ್ಲಿ ನೆರೆದಿದ್ದವರನ್ನು ನಿರಂತರವಾಗಿ ರಂಜಿಸಿತು.
ಕಾರ್ಯಕ್ರಮದ ಮತ್ತೂಂದು ವಿಶೇಷ, ಸದಸ್ಯರ ಅದರಲ್ಲೂ ವಿಶೇಷವಾಗಿ ಮಹಿಳೆಯರ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಸದಸ್ಯರು ಸ್ವತಃ ತಯಾರಿಸಿದ ಕರಕುಶಲ ವಸ್ತುಗಳು, ಸೀರೆಗಳು, ತಿಂಡಿ-ತಿನಸುಗಳು, ಮುಂತಾದ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಇಟ್ಟಿದ್ದು ಬಹಳ ಯಶಸ್ವಿಯ ಪರಿಕಲ್ಪನೆ.

Restaurant Suhag Mnchen – ಸುಹಾಗ್‌ ಉಪಹಾರ ಗೃಹದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಬಗೆ ಬಗೆಯ, ರುಚಿಕರವಾದ ಆಹಾರಕ್ಕಂತೂ ಕೊರತೆಯೇ ಇರಲಿಲ್ಲ, ಎಲ್ಲರೂ ಸವಿದು ಮನಸ್ಸು ಹಾಗೂ ತಮ್ಮ ಹಸಿವನ್ನು ತಣಿದರು. ಉಪಾಧ್ಯಕ್ಷೆ ವೈಷ್ಣವಿ ಕುಲಕರ್ಣಿಯವರು ಕಾರ್ಯಕ್ರಮಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಾಯ ಮಾಡಿದವರಿಗೆ ತುಂಬು ಹೃದಯದ ವಂದನಾರ್ಪಣೆ ಸಲ್ಲಿಸಿದರು.

ಸಾರ್ವಜನಿಕ ಸಂಪರ್ಕ ಉಸ್ತುವಾರಿ ವಹಿಸಿರುವ ಚಂದನ ಮಾವಿನಕೆರೆ ಬಳಗದ ಆಧಾರ ಸ್ತಂಭವಾಗಿ ನಮ್ಮ ಬೆನ್ನ ಹಿಂದೆ ನಿಂತಿರುವ ಪ್ರಾಯೋಜಕರನ್ನ ವಂದಿಸಿದರು.

ಇಂತಹ ಕಾರ್ಯಕ್ರಮಕ್ಕೆ ತಮ್ಮ ಸಮಯ, ಶಕ್ತಿಯನ್ನು ಸದಾ ಮುಡಿಪಾಗಿಟ್ಟಿರುವ ಎಲ್ಲ ಕಾರ್ಯಕರ್ತರು, ಕಾರ್ಯಕಾರಿ ಸಮಿತಿ, ಸ್ವಯಂ ಸೇವಕರು, ಆಡಳಿತ ಮಂಡಳಿಯ ಸದಸ್ಯರನ್ನ ಕೂಟ ತುಂಬು ಹೃದಯದಿಂದ ಶ್ಲಾಘಿಸುತ್ತದೆ. ಕೂಟದ ಚಟುವಟಿಕೆಗಳನ್ನು https://www.facebook.com/sirigannadakootamunich, ,https://www.instagram.com/sirigannadakootamunichಜನಲ್ಲಿ ಅನುಸರಿಸಬಹುದು.

ವರದಿ: ಗಿರೀಶ್‌ ರಾವಂದೂರ್‌

 

ಟಾಪ್ ನ್ಯೂಸ್

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ

Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.