Desi Swara: ಸಿರಿಗನ್ನಡ ಕೂಟ ಮ್ಯೂನಿಕ್‌: ಸ್ತ್ರೀ ಶಕ್ತಿಯ ಸ್ಫೂರ್ತಿ ಬೆಳಗಿಸಿದ ಕಾರ್ಯಕ್ರಮ


Team Udayavani, Mar 30, 2024, 11:15 AM IST

Desi Swara: ಸಿರಿಗನ್ನಡ ಕೂಟ ಮ್ಯೂನಿಕ್‌: ಸ್ತ್ರೀ ಶಕ್ತಿಯ ಸ್ಫೂರ್ತಿ ಬೆಳಗಿಸಿದ ಕಾರ್ಯಕ್ರಮ

ಮ್ಯೂನಿಕ್‌: ಇಲ್ಲಿನ ಸಿರಿಗನ್ನಡ ಕೂಟದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು.

ಚುಟುಕು ಸ್ಪರ್ಧೆಗೆ ಅಭೂತಪೂರ್ವ ಪ್ರತಿಕ್ರಿಯೆ ದೊರಕಿಬಂತು. ಚುಟುಕ ಸ್ಪರ್ಧೆಗೆ 13 ನಮೂನೆಗಳು ಜರ್ಮನಿಯಾದ್ಯಂತ ದೊರೆಕಿದ್ದು ಕನ್ನಡ ಬರವಣಿಗೆಯ ಹಾದಿಯ ಗುರಿಗೆ ಬಹು ದೊಡ್ಡ ಜಯ ಹಾಗೂ ಅತೀ ಸಂತಸದ ವಿಚಾರ. ಅದರಲ್ಲೂ 7 ವರ್ಷದ ಪುಟ್ಟ ಬಾಲಕ ಆದಿಶೇಷನ ಚುಟುಕ ಎಲ್ಲರ ಮನ ಸೆಳೆಯಿತು. ಜತೆಗೆ 120ಕ್ಕೂ ಹೆಚ್ಚಿನ ಮಹಿಳೆಯರು ಮ್ಯೂನಿಕ್‌ ಹಾಗೂ ಸುತ್ತುಮುತ್ತಲಿನ ಪ್ರದೇಶಗಳಿಂದ InspireInclusion ಹಾಗೂ Floral Theme ಆಧಾರಿತ ಕಾರ್ಯಕ್ರಮಕ್ಕೆ ಅತೀ ಉತ್ಸಾಹ, ಹುಮ್ಮಸ್ಸಿನಲ್ಲಿ ಸೇರಿದ್ದರು.

ಆಕರ್ಷಕ ಫೋಟೋ ಬೂತ್‌ನ ಬಳಿ ರಂಗುರಂಗಿನ ಅಲಂಕಾರ ವಸ್ತುಗಳಿಂದ ಮಾಡಲ್ಪಟ್ಟ ಆಕರ್ಷಕ ಹೂಗಳನ್ನು ಇರಿಸಿ ಕೂಟದ ಅಲಂಕಾರ ತಂಡ ನಮ್ಮ ನಾರಿಯರಿಗೆ ಪರಿಪೂರ್ಣ ಸ್ವಾಗತ ನೀಡಿ, ತಮ್ಮ ಪುಷ್ಪಾಲಂಕೃತ ಉಡುಗೆ ತೊಡುಗೆ ಯ ಜತೆ ಭಾವಚಿತ್ರಗಳನ್ನು ಸ್ನೇಹಿತರೊಂದಿಗೆ, ಕೂಟದ ಇತರ ಸದಸ್ಯರೊಂದಿಗೆ ಸಡಗರದಿಂದ ತೆಗೆದು ಕಾರ್ಯಕ್ರಮಕ್ಕೆ ಕಾಮನಬಿಲ್ಲಿನ ಆರಂಭ ನೀಡಿತು. ಕೂಟದ ಪ್ರತೀ ಕಾರ್ಯಕ್ರಮಕ್ಕೆ ನವನವೀನ ಕಲ್ಪನೆಗಳನ್ನು ಹೊರತರುವ ರೇಷ್ಮಾ ಮೋಟುರ್‌ ಹಾಗೂ ತಂಡದವರ ಕೆಲಸ ಮೆಚ್ಚುಗೆಗೆ ಪಾತ್ರವಾಯಿತು.

ಕಾರ್ಯಕ್ರಮ ಸ್ತ್ರೀ ತನವನ್ನು ಆಚರಿಸುತ್ತಿದ್ದರಿಂದ, ಸದಸ್ಯರನ್ನು ಹೊರತುಪಡಿಸಿ ಕಾಶ್ಮೀರಿ, ತಮಿಳು, ತೆಲುಗು ಹಾಗೂ ಎಲ್ಲ ಪ್ರಾಂತದ ಮಹಿಳೆಯರಿಗೆ, ಇನ್ನಿತರ ಕೂಟದವರನ್ನು ಕಾರ್ಯಕ್ರಮದಲ್ಲಿ ಜತೆಯಾಗಿಸಿಕೊಂಡಿದ್ದು ವಿಶೇಷವಾಗಿತ್ತು.
ಆಡಳಿತ ಮಂಡಳಿಯ ದಿವ್ಯ ನಾರಾಯಣ್ಣಯ್ಯ ಅವರು ಕನ್ನಡ ಬಳಗದ ಕಾರ್ಯಕ್ರಮ, ಗುರಿಗಳ ಬಗ್ಗೆ ಪರಿಚಯ ನೀಡಿ, ಮಹಿಳಾ ದಿನಾಚರಣೆಗೆ ಚಾಲನೆ ನೀಡಿದರು. SKMSakkatNaariಸುತ್ತ ಆಧಾರಿತ ಕಾರ್ಯಕ್ರಮವನ್ನು ಸಂಪ್ರೀತ ಶಿರೂರ್‌ ಹಾಗೂ ಅನುಷಾ ರಾವ್‌ ಅವರು ನಿರೂಪಕರಾಗಿ ನೆಡೆಸಿಕೊಟ್ಟರು.

ಕ್ಯಾರಿಯೋಕೆ ಹಾಗೂ ಅದರ ಜತೆ ಎಲ್ಲರ ಸಮೂಹ್ಯ ನೃತ್ಯ, ಸೆಲೆಬ್ರಿಟಿಯನ್ನು ಊಹಿಸಿ, ಸಂವಹನ ಆಟ, ನಾರಿಯರ ನಡಿಗೆ ಹಾಗೂ ಇಂತಹ ಅನನ್ಯ ಕಾರ್ಯಕ್ರಮ ಅಲ್ಲಿ ನೆರೆದಿದ್ದವರನ್ನು ನಿರಂತರವಾಗಿ ರಂಜಿಸಿತು.
ಕಾರ್ಯಕ್ರಮದ ಮತ್ತೂಂದು ವಿಶೇಷ, ಸದಸ್ಯರ ಅದರಲ್ಲೂ ವಿಶೇಷವಾಗಿ ಮಹಿಳೆಯರ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಸದಸ್ಯರು ಸ್ವತಃ ತಯಾರಿಸಿದ ಕರಕುಶಲ ವಸ್ತುಗಳು, ಸೀರೆಗಳು, ತಿಂಡಿ-ತಿನಸುಗಳು, ಮುಂತಾದ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಇಟ್ಟಿದ್ದು ಬಹಳ ಯಶಸ್ವಿಯ ಪರಿಕಲ್ಪನೆ.

Restaurant Suhag Mnchen – ಸುಹಾಗ್‌ ಉಪಹಾರ ಗೃಹದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಬಗೆ ಬಗೆಯ, ರುಚಿಕರವಾದ ಆಹಾರಕ್ಕಂತೂ ಕೊರತೆಯೇ ಇರಲಿಲ್ಲ, ಎಲ್ಲರೂ ಸವಿದು ಮನಸ್ಸು ಹಾಗೂ ತಮ್ಮ ಹಸಿವನ್ನು ತಣಿದರು. ಉಪಾಧ್ಯಕ್ಷೆ ವೈಷ್ಣವಿ ಕುಲಕರ್ಣಿಯವರು ಕಾರ್ಯಕ್ರಮಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಾಯ ಮಾಡಿದವರಿಗೆ ತುಂಬು ಹೃದಯದ ವಂದನಾರ್ಪಣೆ ಸಲ್ಲಿಸಿದರು.

ಸಾರ್ವಜನಿಕ ಸಂಪರ್ಕ ಉಸ್ತುವಾರಿ ವಹಿಸಿರುವ ಚಂದನ ಮಾವಿನಕೆರೆ ಬಳಗದ ಆಧಾರ ಸ್ತಂಭವಾಗಿ ನಮ್ಮ ಬೆನ್ನ ಹಿಂದೆ ನಿಂತಿರುವ ಪ್ರಾಯೋಜಕರನ್ನ ವಂದಿಸಿದರು.

ಇಂತಹ ಕಾರ್ಯಕ್ರಮಕ್ಕೆ ತಮ್ಮ ಸಮಯ, ಶಕ್ತಿಯನ್ನು ಸದಾ ಮುಡಿಪಾಗಿಟ್ಟಿರುವ ಎಲ್ಲ ಕಾರ್ಯಕರ್ತರು, ಕಾರ್ಯಕಾರಿ ಸಮಿತಿ, ಸ್ವಯಂ ಸೇವಕರು, ಆಡಳಿತ ಮಂಡಳಿಯ ಸದಸ್ಯರನ್ನ ಕೂಟ ತುಂಬು ಹೃದಯದಿಂದ ಶ್ಲಾಘಿಸುತ್ತದೆ. ಕೂಟದ ಚಟುವಟಿಕೆಗಳನ್ನು https://www.facebook.com/sirigannadakootamunich, ,https://www.instagram.com/sirigannadakootamunichಜನಲ್ಲಿ ಅನುಸರಿಸಬಹುದು.

ವರದಿ: ಗಿರೀಶ್‌ ರಾವಂದೂರ್‌

 

ಟಾಪ್ ನ್ಯೂಸ್

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಬಾಲ್ಯದ ನೆನಪು ತಂದ ನೃತ್ಯ

Desi Swara: ಬಾಲ್ಯದ ನೆನಪು ತಂದ ನೃತ್ಯ

Desi Swara: ಭಾವನೆಗಳ ನವರೂಪವೋ ಅಥವಾ ಗತ ಕಾಲದ ಭಾಷೆಯೋ…..

Desi Swara: ಇಮೋಜಿ… ಭಾವನೆಗಳ ನವರೂಪವೋ ಅಥವಾ ಗತ ಕಾಲದ ಭಾಷೆಯೋ…

Desi Swara: ಕತಾರ್‌- ಅನಿವಾಸಿ ಕನ್ನಡತಿ ಸುಮಾ ಮಹೇಶ್‌ ಗೌಡ ಅವರಿಗೆ ಸಮ್ಮಾನ

Desi Swara: ಕತಾರ್‌- ಅನಿವಾಸಿ ಕನ್ನಡತಿ ಸುಮಾ ಮಹೇಶ್‌ ಗೌಡ ಅವರಿಗೆ ಸಮ್ಮಾನ

Desi Swara: ಮೊಗವೀರ್ಸ್‌ ಬಹ್ರೈನ್‌- ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ

Desi Swara: ಮೊಗವೀರ್ಸ್‌ ಬಹ್ರೈನ್‌- ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ

Desi Swara: ಹೊನ್ನುಡಿ-ಒಳಿತಿನ ಭವಿಷ್ಯ ಇಲ್ಲದ ಕಾಲಹರಣವೇ ಮರಣ…

Desi Swara: ಹೊನ್ನುಡಿ-ಒಳಿತಿನ ಭವಿಷ್ಯ ಇಲ್ಲದ ಕಾಲಹರಣವೇ ಮರಣ…

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

2-chithapura

Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.