ಕೋಟೆಕಲ್ಲನಲ್ಲಿ ಅಗಸಿ ಕಟ್ಟೆ ನಿರ್ಮಾಣ


Team Udayavani, May 13, 2019, 1:50 PM IST

bag-5

ಗುಳೇದಗುಡ್ಡ: ಊರೆಂದರೆ ಅಗಸಿ ಕಟ್ಟೆ ಇರಲೇಬೇಕು. ಹಲವು ಸಂಪ್ರದಾಯಗಳಿಗೆ ಸಾಕ್ಷಿಯಾದ ಅಗಸಿ ಕಟ್ಟೆಗಳು ಇರದ ಊರೇ ಇಲ್ಲ ಎನ್ನಬಹುದು. ಆದರೆ ಇಂದು ಎಷ್ಟೋ ಹಳ್ಳಿಗಳಲ್ಲಿ ಇಂದು ಅಗಸಿ ಕಟ್ಟೆಗಳು ಕಾಣುತ್ತಿಲ್ಲ. ಇರುವ ಅಗಸಿ ಕಟ್ಟೆಗಳನ್ನು ಕೆಲವು ಕಡೆ ಸುಸ್ಥಿತಿಯಲ್ಲಿ ಇಟ್ಟುಕೊಂಡಿಲ್ಲ.

ಆದರೆ ಸಮೀಪದ ಕೋಟೆಕಲ್ಲ ಗ್ರಾಮದಲ್ಲಿ ಅಗಸಿ ಕಟ್ಟೆ ಬಿದ್ದು ಎರಡ್ಮೂರು ವರ್ಷಗಳು ಕಳೆದಿತ್ತು. ಗ್ರಾಮದ ಘನತೆಯ ಪ್ರತೀಕವಾದ ಕಟ್ಟೆಯನ್ನು ನಿರ್ಮಾಣ ಮಾಡಬೇಕು ಎಂಬುದನ್ನು ಮನಗಂಡ ಗ್ರಾಮಸ್ಥರು ಊರ ಅಗಸಿಕಟ್ಟೆಯ ಮಹತ್ವ ಮುಂದಿನ ಪೀಳಿಗೆಗೂ ಇರಲೆಂದು ಗ್ರಾಮದ ಹಿರಿಯರೆಲ್ಲರೂ ಸೇರಿ ಹಣ ಸೇರಿಸಿ ಅಗಸಿಕಟ್ಟೆ ನಿರ್ಮಿಸಿ ಮಾದರಿಯಾಗಿದ್ದಾರೆ.

ಕೋಟೆಕಲ್ಲ ಗ್ರಾಮದಲ್ಲಿ ನಡೆಯುವ ಕೆಲವು ಪ್ರಮುಖ ಕಾರ್ಯಗಳಿಗೆ ಅಗಸಿ ಕಟ್ಟೆ ಆಸರೆಯಾಗಿತ್ತು. ಮದುವೆಯಲ್ಲಿ ಬೀಗರನ್ನು ಇದುರು ಗುಮ್ಮುವುದು, ತವರು ಮನೆಯಲ್ಲಿ ಹೆರಿಗೆಯಾದ ನಂತರ ಗಂಡನ ಮನೆಗೆ ತೊಟ್ಟಿಲು ತೆಗೆದುಕೊಂಡು ಹೋಗುವುದು, ಗ್ರಾಮದಲ್ಲಿ ಯಾರಾದರೂ ಮರಣ ಹೊಂದಿದರೆ ಅವರಿಗೆ ಈ ಕಟ್ಟೆಯಿಂದಲೇ ದೈವದ ತುರಾಯಿ ತೆಗೆದುಕೊಂಡು ಹೋಗುವುದು ಸೇರಿದಂತೆ ಅನೇಕ ಸಂಪ್ರದಾಯಗಳಿಗೆ ಈ ಅಗಸಿ ಕಟ್ಟೆಯೇ ಆಸರೆಯಾಗಿತ್ತು, ಇದನ್ನೆಲ್ಲ ಮನಗಂಡ ಗ್ರಾಮಸ್ಥರು ಸ್ವಯಃ ತಾವೇ ಕಟ್ಟೆಯನ್ನು ನಿರ್ಮಿಸಿದ್ದಾರೆ. ಈ ಕಟ್ಟೆ ನಿರ್ಮಾಣಕ್ಕೆ 60 ಸಾವಿರಕ್ಕೂ ಹೆಚ್ಚು ಹಣ ವ್ಯಯಿಸಿದ್ದಾರೆ.ಗ್ರಾಮದ ಕಾರ್ಮಿಕರು ಸಹ ಒಂದು ದಿನ ಉದ್ಯೋಗಕ್ಕೆ ಹೋಗುವುದನ್ನು ಬಿಟ್ಟು ಈ ಅಗಸಿ ಕಟ್ಟೆ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ. ಹತ್ತು ಹಲವು ಸಂಪ್ರದಾಯಗಳಿಗೆ ಸಾಕ್ಷಿಯಾದ ಅಗಸಿ ಕಟ್ಟೆಯನ್ನು ಕೋಟೆಕಲ್ಲ ಹಿರಿಯರ, ಗ್ರಾಮಸ್ಥರ ಕಾರ್ಯವನ್ನು ಪರ ಊರಿನ ಗ್ರಾಮಸ್ಥರು ಶ್ಲಾಘಿಸಿದ್ದಾರೆ.

ಗ್ರಾಮದ ಅಗಸಿ ಕಟ್ಟೆಯು ಸುಮಾರು ನೂರು ವರ್ಷಗಳಾಗಿದ್ದು, ಇಲ್ಲಿಂದಲೇ ಗ್ರಾಮದ ಪ್ರಮುಖ ಕಾರ್ಯಗಳು ನಡೆಯುತ್ತವೆ. ನಮ್ಮ ಮುಂದಿನ ಪೀಳಿಗೆಗೆ ಈ ಕಟ್ಟೆಯ ಮಹತ್ವ ತಿಳಿಯಲು ಪುನಃ ನಿರ್ಮಿಸಿದ್ದು, ಖುಷಿ ತರಿಸಿದೆ.
•ಗುಂಡಪ್ಪ ಕೋಟಿ, ಯುವಕ, ಕೋಟೆಕಲ್

ಟಾಪ್ ನ್ಯೂಸ್

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

rahul-Gandhi-Car

Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್‌: ರಾಹುಲ್‌ ಆರೋಪ

1-dubey

Increase of Muslims; ಝಾರ್ಖಂಡ್‌,ಪಶ್ಚಿಮ ಬಂಗಾಲ ಕೇಂದ್ರಾಡಳಿತ ಪ್ರದೇಶವಾಗಿಸಿ: ದುಬೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rain: ಬಾಗಲಕೋಟೆಯ ಜಿಲ್ಲೆಯ ನಾಲ್ಕು ತಾಲೂಕಿನ ಶಾಲೆಗಳಿಗೆ ಇಂದು (ಜುಲೈ 26) ರಜೆ

Heavy Rain: ಬಾಗಲಕೋಟೆ ಜಿಲ್ಲೆಯ ನಾಲ್ಕು ತಾಲೂಕಿನ ಶಾಲೆಗಳಿಗೆ ಇಂದು (ಜುಲೈ 26) ರಜೆ

ರಬಕವಿ-ಬನಹಟ್ಟಿ: ಭೋರ್ಗರೆಯುತ್ತಿರುವ ಕೃಷ್ಣೆ… ಪ್ರವಾಹ ಭೀತಿಯಲ್ಲಿ ಜನತೆ

ರಬಕವಿ-ಬನಹಟ್ಟಿ: ಭೋರ್ಗರೆಯುತ್ತಿರುವ ಕೃಷ್ಣೆ… ಪ್ರವಾಹ ಭೀತಿಯಲ್ಲಿ ಜನತೆ

Fetoside

Bagalakote: ಸರಕಾರಿ ವೈದ್ಯೆಯಿಂದಲೇ ಭ್ರೂಣಹತ್ಯೆ!

Mudhol ಸಾವಿರ ಶ್ರೀಗಂಧ ಸಸಿಗಳ ಸರದಾರ; ಅರಣ್ಯ ಕೃಷಿಯಲ್ಲಿ ಖುಷಿ ಜೀವನ ಕಂಡ‌‌ ನಾಗಪ್ಪ

Mudhol ಸಾವಿರ ಶ್ರೀಗಂಧ ಸಸಿಗಳ ಸರದಾರ; ಅರಣ್ಯ ಕೃಷಿಯಲ್ಲಿ ಖುಷಿ ಜೀವನ ಕಂಡ‌‌ ನಾಗಪ್ಪ

4-

Mahalingpur: ಘಟಪ್ರಭಾ ನದಿಗೆ ಹೆಚ್ಚಿದ ನೀರು: ಮೂರು ಸೇತುವೆಗಳು ಜಲಾವೃತ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.