ರೈತರಿಗೆ ಕಣ್ಣೀರು ತರಿಸಿದ ಮಳೆ

ಈ ಬಾರಿ ಗಗನಕ್ಕೇರಲಿದೆ ಈರುಳ್ಳಿ ,ಯಂಕಂಚಿ ಒಂದೇ ಊರಿಗೆ 4 ಕೋಟಿ ನಷ್ಟ

Team Udayavani, Oct 9, 2020, 4:57 PM IST

BK-TDY-1

ಬಾಗಲಕೋಟೆ: ಜಿಲ್ಲೆಯಲ್ಲಿ ಕಳೆದೊಂದು ವಾರ ಸುರಿದ ನಿರಂತರ ಮಳೆಗೆ ಈರುಳ್ಳಿ ಬೆಳೆಗಾರರು ಕಣ್ಣೀರಾಗಿದ್ದಾರೆ. ಪ್ರತಿ ವರ್ಷ ಈರುಳ್ಳಿ ಬೆಳೆದು ಕೈತುಂಬ ಹಣದೊಂದಿಗೆ ಸಂಭ್ರಮಿಸುತ್ತಿದ್ದ ರೈತ ಈ ಬಾರಿ ದಿಕ್ಕು ತೋಚದಂತೆ ಕುಳಿತಿದ್ದಾರೆ. ಕೊಳೆತ ಈರುಳ್ಳಿ ಒಂದೆಡೆ ಗುಡ್ಡೆ ಹಾಕಿ ನೋಡ್ರಿ ನಮ್ಮ ಪರಿಸ್ಥಿತಿ.. ಎಂದು ಗೋಗರೆಯುವ ಪರಿಸ್ಥಿತಿಯಲ್ಲಿದ್ದಾನೆ.

ಎರಡನೇ ಅತಿ ಹೆಚ್ಚು ಈರುಳ್ಳಿ ಬೆಳೆಯುವ ಗ್ರಾಮ ಯಂಕಂಚಿ. ಈ ಊರಿನ ಈರುಳ್ಳಿಗೆ ಹುಬ್ಬಳ್ಳಿಯಲ್ಲೂ ಬೇಡಿಕೆ. ಪ್ರತಿ ವರ್ಷ ಹುಬ್ಬಳ್ಳಿ ವ್ಯಾಪಾರಸ್ಥರು ರೈತರ ಹೊಲಕ್ಕೆ ಬಂದು ಮುಂಗಡ ಹಣ ಕೊಟ್ಟು ಹೋಗುತ್ತಿದ್ದರು. ಆದರೆ ಈ ಬಾರಿ ಈರುಳ್ಳಿ ಕೊಳೆತು ಹೋಗಿವೆ. ಹೀಗಾಗಿ ಈ ಊರಿನ ರೈತರು, ಕಣ್ಣೀರು ಹಾಕುತ್ತಿದ್ದಾರೆ.ಯಂಕಂಚಿಯಲ್ಲಿ 4 ಕೋಟಿ ನಷ್ಟ: ಬಾಗಲಕೋಟೆ ತಾಲೂಕಿನ ಯಂಕಂಚಿ ಗ್ರಾಮ ಈರುಳ್ಳಿ ಬೆಳೆಗೆ ಹೆಸರುವಾಸಿ. ಇಲ್ಲಿನ ಈರುಳ್ಳಿ ಖರೀದಿಗೆ ಹುಬ್ಬಳ್ಳಿ ವ್ಯಾಪಾರಸ್ಥರು ಬಂದು ರೈತರಿಗೆ ಮುಂಗಡ ಹಣಕೊಟ್ಟು ಹೋಗುತ್ತಿದ್ದರು. ಆದರೆ ಈ ಬಾರಿ ಅತಿಯಾದ ಮಳೆಯಿಂದ ಈರುಳ್ಳಿ ಗಡ್ಡೆಗಳು ಹೊಲದಲ್ಲೇ ಕೊಳೆತಿವೆ. ನೂರು ಕೆ.ಜಿ ಈರುಳ್ಳಿ ಸೋಸಿ ತೆಗೆದಾಗ, ಕನಿಷ್ಠ ಐದು ಕೆ.ಜಿಯೂ ಬರುತ್ತಿಲ್ಲ. ಹೀಗಾಗಿ ಕೈಯ್ನಾರೆ ಬಿತ್ತಿ, ಆರೈಕೆ ಮಾಡಿ ಬೆಳೆದ ಈರುಳ್ಳಿ ಗಡ್ಡೆಯನ್ನು ಭೂಮಿಯ ಬದುವಿಗೆ ಹಾಕಿ ಮರಗುವ ಪರಿಸ್ಥಿತಿ ರೈತರಿಗೆ ಬಂದಿದೆ.

22 ಸಾವಿರ ಹೆಕ್ಟೇರ್‌ ಹಾನಿ: ಜಿಲ್ಲೆಯಲ್ಲಿ ಹಾನಿಯಾದ ಈರುಳ್ಳಿ ಬೆಳೆ ಸರ್ವೇ ನಡೆಸಲಾಗುತ್ತಿದೆ. ಇಲಾಖೆಯಪ್ರಾಥಮಿಕ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 22 ಸಾವಿರ  ಹೆಕ್ಟೇರ್‌ ಈರುಳ್ಳಿ ಬೆಳೆ ಹಾನಿಯಾಗಿದೆ. ಪ್ರತಿ ವರ್ಷಅಲ್ಪಸ್ವಲ್ಪ ಬೆಳೆಯಾದರೂ ಕೈಗೆ ಬರುತ್ತಿತ್ತು. ಈ ಬಾರಿ ಭೂಮಿಯಿಂದ ಈರುಳ್ಳಿ ಗಡ್ಡೆ ಹೊರ ತೆಗೆಯಲೂ ಮಳೆ ಬಿಟ್ಟಿಲ್ಲ. ಹೀಗಾಗಿ ನೂರಾರು ಎಕರೆ ಭೂಮಿಯಲ್ಲಿ ಈರುಳ್ಳಿ ಗಡ್ಡೆ ಕೊಳೆತು ಬಿದ್ದಿವೆ.

ಬಾಗಲಕೋಟೆ, ಬಾದಾಮಿ, ಹುನಗುಂದ,ಮುಧೋಳ, ಬೀಳಗಿ ತಾಲೂಕಿನಲ್ಲಿ ಅತಿ ಹೆಚ್ಚು ಈರುಳ್ಳಿ ಬೆಳೆಯುತ್ತಿದ್ದು, ಇಲ್ಲಿನ ಈರುಳ್ಳಿ, ಹುಬ್ಬಳ್ಳಿ, ಸೊಲ್ಲಾಪುರ,ಬೆಂಗಳೂರು, ದಾವಣಗೆರೆ ಸಹಿತ ರಾಜ್ಯದ ಪಕ್ಕದ ಹೈದ್ರಾಬಾದ್‌ಗೂ ಪೂರೈಕೆಯಾಗುತ್ತಿತ್ತು. ಅದರಲ್ಲೂ ಬಲಿತ ಹಾಗೂ ಒಣಗಿದ ಈರುಳ್ಳಿ ಬೆಳೆಯುವಲ್ಲಿ ಜಿಲ್ಲೆಯ ಕೆಲ ಪ್ರದೇಶ ಹೆಸರುವಾಸಿಯಾಗಿವೆ. ಆದರೆ ಈ ವರ್ಷ ಯಾವ ಪ್ರದೇಶದಲ್ಲೂ ಈರುಳ್ಳಿ ಕೈಗೆ ಬಂದಿಲ್ಲ.

ಅಂದು ಪ್ರವಾಹ; ಇಂದು ಮಳೆ: ಕಳೆದ ವರ್ಷ ಪ್ರವಾಹದಿಂದ ಜಿಲ್ಲೆಯ ಕೃಷಿ ಬೆಳೆಗಳ ಜತೆಗೆ ಈರುಳ್ಳಿ ಬೆಳೆಯೂ ಹಾನಿಯಾಗಿತ್ತು. ಪ್ರವಾಹ ಬಾರದ ಪ್ರದೇಶದಲ್ಲಿ ಉತ್ತಮ ಬೆಳೆ ಬಂದಿತ್ತು. ಹೀಗಾಗಿ ಜಿಲ್ಲೆಯ ಬೆನಕಟ್ಟಿ, ರಾಂಪುರ, ಬಂಟನೂರ ಮುಂತಾದ ಗ್ರಾಮಗಳ ಕೆಲ ರೈತರು 50 ಲಕ್ಷದಿಂದ 1 ಕೋಟಿವರೆಗೂ ಈರುಳ್ಳಿ ಬೆಳೆ ಹಣ ಪಡೆದಿದ್ದರು. ನದಿ ಪಾತ್ರದ ಸುಮಾರು 117 ಗ್ರಾಮಗಳಲ್ಲಿ ಬೆಳೆದ ಈರುಳ್ಳಿ ಸಂಪೂರ್ಣ ಹಾನಿಯಾಗಿತ್ತು.

ಆದರೆ ಈ ಬಾರಿ ಜಿಲ್ಲೆಯ ಎಲ್ಲ ತಾಲೂಕು ವ್ಯಾಪ್ತಿಯಲ್ಲಿ ನಿರಂತರ ಮಳೆ ಸುರಿದ್ದು, ಯಾವ ಬೆಳೆಯನ್ನೂ ಕಟಾವು ಮಾಡಲು ಬಿಟ್ಟಿಲ್ಲ. ಅದರಲ್ಲೂಸಜ್ಜೆಯಂತಹ ಬೆಳೆ, ಒಂದೆರಡು ವಾರ ಬಿಟ್ಟು ಕಟಾವು ಮಾಡಲು ಸಾಧ್ಯವಾಗಿದೆ. ಆದರೆ, ಈರುಳ್ಳಿಯನ್ನು ಕಿತ್ತು, ಸೋಸಿ, ಬಿಸಿಲಿಗೆ ಒಣ ಹಾಕಬೇಕು. ಒಣಗಿದ ಈರುಳ್ಳಿ ಮಾತ್ರ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗೆ ಮಾರಾಟವಾಗುತ್ತವೆ. ಹಸಿ ಗಡ್ಡೆ ಇದ್ದರೆ ಅವುಗಳನ್ನು ವ್ಯಾಪಾರಸ್ಥರಾಗಲಿ, ಗ್ರಾಹಕರಾಗಲಿ ಖರೀದಿಸುವುದಿಲ್ಲ. ಹೀಗಾಗಿ ಈ ವರ್ಷವೂ ಜಿಲ್ಲೆಯ ಈರುಳ್ಳಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ನಮ್ಮೂರಲ್ಲಿ ಪ್ರತಿಯೊಬ್ಬ ರೈತರು ಈರುಳ್ಳಿ ಬೆಳೆಯುತ್ತಾರೆ. ನಾನು ಆರು ಎಕರೆ ಈರುಳ್ಳಿ ಬೆಳೆದಿದ್ದೆ. ಮಳೆ ಬಾರದಿದ್ದರೆ ಲಕ್ಷಾಂತರ ರೂ. ಕೈಗೆ ಬರುತ್ತಿತ್ತು. ನಮ್ಮ ಗ್ರಾಮದ ಬಹುತೇಕ ರೈತರು ಹುಬ್ಬಳ್ಳಿಗೆ ಈರುಳ್ಳಿ ಕಳುಹಿಸುತ್ತಿದ್ದೆವು. ಅಲ್ಲಿನ ವ್ಯಾಪಾರಸ್ಥರೇ ನಮ್ಮೂರಿಗೆ ಬಂದು ಹಣ ಕೊಟ್ಟು, ಲಾರಿ ತುಂಬಿಕೊಂಡು ಹೋಗು ತ್ತಾರೆ. ಈ ಬಾರಿ ಈರುಳ್ಳಿ ಕೊಳೆತಿದ್ದು, ಹಾಕಿದ ಹಣವೂ ಬರುತ್ತಿಲ್ಲ. ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಪರಸಪ್ಪ ತೆಪಗಿ, ಈರುಳ್ಳಿ ಬೆಳೆಗಾರ, ಯಂಕಂಚಿ

 

-ವಿಶೇಷ ವರದಿ

ಟಾಪ್ ನ್ಯೂಸ್

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಖಾನಾಪುರ ಬಳಿ ಭೀಕರ ಅಪಘಾತ: ವಕೀಲ ದೇಶಪಾಂಡೆ ಸಾವು

ಖಾನಾಪುರ ಬಳಿ ಭೀಕರ ಅಪಘಾತ: ವಕೀಲ ಕೆ.ಎಸ್‌. ದೇಶಪಾಂಡೆ ಸಾವು

ಶ್ರೀಶೈಲ ಪಾದಯಾತ್ರೆಯಲ್ಲಿ ಮತದಾನ ಜಾಗೃತಿ: ಮಲ್ಲಯ್ಯನ ಧ್ವಜ ಅನಾವರಣ

ಶ್ರೀಶೈಲ ಪಾದಯಾತ್ರೆಯಲ್ಲಿ ಮತದಾನ ಜಾಗೃತಿ: ಮಲ್ಲಯ್ಯನ ಧ್ವಜ ಅನಾವರಣ

4-bgl

Theft: ಅಮೀನಗಡದ ದೇವಸ್ಥಾನದಲ್ಲಿ ಕಳ್ಳತನ

ಬಾಗಲಕೋಟೆ: ಐತಿಹಾಸಿಕ ಹೋಳಿ ಬಣ್ಣದಾಟಕ್ಕೆ ಚಾಲನೆ

ಬಾಗಲಕೋಟೆ: ಐತಿಹಾಸಿಕ ಹೋಳಿ ಬಣ್ಣದಾಟಕ್ಕೆ ಚಾಲನೆ

ವೀಣಕ್ಕನನ್ನು ಜತೆಗೆ ಕರೆದೊಯ್ಯುವೆ: ಸಂಯುಕ್ತಾ ಪಾಟೀಲ್‌

Lok Sabha Elections; ವೀಣಕ್ಕನನ್ನು ಜತೆಗೆ ಕರೆದೊಯ್ಯುವೆ: ಸಂಯುಕ್ತಾ ಪಾಟೀಲ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.