ಜಾನುವಾರು ಗೋಳು ಕೇಳ್ಳೋರಿಲ್ಲ!
•ಬಿಸಿಲಿನ ತಾಪಕ್ಕೆ ಬಳಲಿದ ಹಸುಗಳು•ತಾಲೂಕಿನಲ್ಲಿ ಮೇವಿನ ಕೊರತೆ ತೀವ್ರ
Team Udayavani, May 1, 2019, 11:46 AM IST
ಹುನಗುಂದ: ಗೋ ಶಾಲೆ ನಿರ್ಮಿಸದಿರುವುದರಿಂದ ಬಿಸಿಲಿನಲ್ಲಿರುವ ಜಾನುವಾರುಗಳು.
ಹುನಗುಂದ: ಈ ಬಾರಿಯ ಬೇಸಿಗೆಯು ಕಳೆದ ಮೂರು-ನಾಲ್ಕು ವರ್ಷಗಳಲ್ಲಿ ಕಾಣದ ಬಿಸಿಲು ಸೃಷ್ಟಿಯಾಗಿದೆ. ಬಿಸಿಲಿನ ತಾಪಕ್ಕೆ ಜನರಿಗಷ್ಟೆ ಅಲ್ಲ, ಜಾನುವಾರಗಳು ಕೂಡಾ ನಿಟ್ಟುಸಿರು ಬಿಡುತ್ತಿವೆ.
ಹೌದು, ಸತತ ಬರಗಾಲದ ಛಾಯೆ ತಾಲೂಕಿನ ಜನ ಜಾನುವಾರುಗಳಿಗೆ ಮೇಲಿಂದ ಮೇಲೆ ಬರೆ ಸಿಡಿಲು ಬಡಿದಂತೆ ಅಪ್ಪಳಿಸುತ್ತಿದೆ. ಈ ವರ್ಷ ಬಿಸಿಲನ ತಾಪ ಹೆಚ್ಚಾಗುತ್ತಿದೆ. ಜನರಿಗೆ ಉಸಿರು ಕಟ್ಟುವ ಸ್ಥಿತಿ ನಿರ್ಮಾಣವಾಗಿದ್ದು, ಇನ್ನೂ ಜಾನುವಾರುಗಳ ಸ್ಥಿತಿ ಹೇಳ ತೀರದು. ಕೆಂಡದಂತ ಬಿಸಿಲೇ ದನಕರುಗಳ ಆಶ್ರಯ ತಾಣವಾಗಿದೆ.
ಬೇಸಿಗೆ ಪ್ರಾರಂಭಕ್ಕೂ ಮುಂಚೆಯೇ ಗೋಶಾಲೆ ತೆರೆದು ತಾಲೂಕಿನ ಜಾನುವಾರುಗಳಿಗೆ ಮೇವು, ನೀರು, ನೆರಳಿನ ಆಶ್ರಯ ಮಾಡಬೇಕಾದ ತಾಲೂಕಾಡಳಿತ ಚುನಾವಣೆಯ ನೆಪ ಹೇಳಿ ಗೋಶಾಲೆ ತೆರೆದಿಲ್ಲ. ಗುಬ್ಬಿಯ ಮೇಲೆ ಬ್ರಹ್ಮಾಶ÷ ಬಿಟ್ಟಂತೆ ಮೂಕ ಪ್ರಾಣಿಗಳ ವೇದನೆ ಅರಿಯದೇ ಗೋಶಾಲೆ ನಿರ್ಮಿಸಲು ಮುಂದಾಗಿಲ್ಲ.
ಜಾಲಿ-ಬೇಲಿಯ ನೆರಳೇ ಜಾನುವಾರುಗಳಿಗೆ ಆಶ್ರಯ:
ಬೇಸಿಗೆ ಬಿಸಿಲನ ತಾಪಮಾನ ಪ್ರತಿನಿತ್ಯ ಹೆಚ್ಚಾಗುತ್ತಿದ್ದು, ತಾಲೂಕಿನ ಜಾನುವಾರುಗಳಿಗೆ ಸರಿಯಾದ ನೆರಳಿನ ವ್ಯವಸ್ಥೆಯಿಲ್ಲದೇ ಜಾಲಿ ಬೇಲಿಗಳೇ ಅವುಗಳ ನೆರಳಿನ ತಾಣವಾಗಿದೆ. ಇದರಿಂದ ಬಿಸಿಲಿನ ತಾಪಕ್ಕೆ ಮೈ ಹೊಡಿ ಬಿಸಿಲನ್ನು ತಾಳಿಕೊಳ್ಳಲು ಸಾಧ್ಯವಾಗದೇ ಎತ್ತು, ಎಮ್ಮೆ, ಆಡು, ಕುರಿಗಳು ಗೋಗರೆಯುತ್ತಿವೆ. ಮೂಕನ ನೋವು, ವೇದನೆ ಮೂಕನಿಗೆ ಗೊತ್ತಾಗುವಂತೆ ಸಾಕಿದ ಪ್ರಾಣಿಗಳ ನೋವು ರೈತರಿಗೆ ಗೊತ್ತಾಗುತ್ತದೆ ವಿನಹ ಅಕಾರಿಗಳಿಗೇನು ಗೊತ್ತು ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮೇವಿನ ಅಭಾವ ರೈತರು ಕಂಗಾಲು:
ಪ್ರತಿ ವರ್ಷ ಬೇಸಿಗೆ ಆರಂಭಕ್ಕೆ ಮುನ್ನ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ತಾಲೂಕಾಡಳಿತ ತಾಲೂಕಿನ ಜಾನುವಾರಗಳಿಗೆ ಬೇಸಿಗೆ ಸಮಯದಲ್ಲಿ ಮೇವಿನ ಕೊರತೆಯಾಗದಂತೆ ಮುಂಚಿತವಾಗಿ ಮೇವು ಸಂಗ್ರಹಿಸಿ ಅವಶ್ಯಕತೆ ಇದ್ದಲ್ಲಿ ಗೋ ಶಾಲೆ ನಿರ್ಮಿಸಬೇಕು. ಸರ್ಕಾರದ ನಿಯಮವಿದ್ದರೂ ಸತತ ಬರಗಾಲದಿಂದ ಮಳೆಯಿಲ್ಲದೇ ದನಕರುಗಳನ್ನು ಬದಿಕಿಸಲು ಜಾನುವರುಗಳು ಮಾಲೀಕರು ನಿತ್ಯ ಹೆಣಗಾಡುತ್ತಿದ್ದಾರೆ. ಸರಿಯಾದ ಮಳೆಯಿಲ್ಲದೆ ಬೆಳಯನ್ನೇ ಕಾಣದ ರೈತರು ಜಾನುವಾರುಗಳಗೆ ಮೇವು ಎಲ್ಲಿಂದ ತರಬೇಕು ಎಂಬುದು ತಿಳಿಯದೇ ಕಂಗಾಲಾಗಿದ್ದಾರೆ.
ತಾಲೂಕಿನ ಜಿಪಂ ಕ್ಷೇತ್ರಕ್ಕೊಂದರಂತೆ ಮತ್ತು ಹುನಗುಂದ ಮತ್ತು ಇಲಕಲ್ಲ ಅವಳಿ ನಗರಕ್ಕೆ ಒಂದರಂತೆ ಏಳು ಗೋಶಾಲೆ ನಿರ್ಮಿಸಬೇಕು ಎಂದು ಕಳೆದ ಎರಡು ತಿಂಗಳ ಹಿಂದೆ ರೈತ ಸಂಘದಿಂದ ಜಿಲ್ಲಾಧಿಕಾರಿ ಮತ್ತು ತಾಲೂಕಿನ ತಹಶೀಲ್ದಾರಿಗೆ ಮನವಿ ಸಲ್ಲಿಸಿದ್ಧೇವೆ. ಇಲ್ಲಿವರೆಗೆ ಒಂದು ಗೋಶಾಲೆ ತರೆದಿಲ್ಲ. ಇದರಿಂದ ಜಾನುವಾರುಗಳಿಗೆ ಮೇವು, ನೀರು, ನೆರಳು ಇಲ್ಲದೇ ನೆರಳಾಡುವ ಪರಸ್ಥಿತಿ ನಿರ್ಮಾಣವಾಗಿದೆ. –ಮಲ್ಲನಗೌಡ ತುಂಬದ, ಅಧ್ಯಕ್ಷರು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ.
•ಮಲ್ಲಿಕಾರ್ಜುನ ಬಂಡರಗಲ್ಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ