ವಚನ ಪಠಣದೊಂದಿಗೆ ಹೊಸ ವರ್ಷಾಚರಣೆ
Team Udayavani, Jan 2, 2020, 11:15 AM IST
ಕೂಡಲಸಂಗಮ: ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಬಸವಣ್ಣವರ ಐಕ್ಯ ಮಂಟಪದ ಪ್ರವೇಶ ದ್ವಾರದಲ್ಲಿ ವಚನ ಪಠಣದೊಂದಿಗೆ ನೂತನ ವರ್ಷವನ್ನು ಸ್ವಾಗತಿಸಿದರು.
ರಾತ್ರಿ 11:50ಕ್ಕೆ ವಿಶೇಷ ಲಿಂಗ ಪೂಜೆ ಮಾಡುತ್ತ ಓಂ ಶ್ರೀ ಗುರು ಬಸವ ಲಿಂಗಾಯ ನಮಃ ಮಂತ್ರ ಪಠಣ ಮಾಡುತ್ತ ಕಳೆದ ವರ್ಷದ ಒಳ್ಳೆಯ ಕಾರ್ಯ ಸ್ಮರಣೆ ಮಾಡುತ್ತ ಕೆಟ್ಟ ಕಾರ್ಯ ಮರೆಯುವಂತೆ ಹೇಳಿ ಧ್ಯಾನದಲ್ಲಿ ತಲ್ಲಿನರಾಗುವಂತೆ ಮಾಡಿದರು.
ಮಧ್ಯರಾತ್ರಿ 1ಗಂಟೆಗೆ ಬಸವಣ್ಣವರ ಐಕ್ಯ ಮಂಟಪ ಪ್ರವೇಶ ದ್ವಾರದಲ್ಲಿ ಬಸವಣ್ಣನ ಪುತ್ಥಳಿ ಎದುರು ವಚನ ಪಠಣ ಮಾಡಿದ ನಂತರ ಹೊಸ ವರ್ಷ ದೇಶ ಅಭಿವೃದ್ದಿ ಹೊಂದಲಿ, ಸಮಾಜದಲ್ಲಿ ಎಲ್ಲರು ಸಾಮರಸ್ಯದಿಂದ ಬದುಕಬೇಕು. ದೇಶದ ಬೆನ್ನೆಲುಬಾದ ರೈತನಿಗೆ ಆರೋಗ್ಯ ಸಂಪತ್ತು, ಉತ್ತಮ ಬೆಳೆ ದೊರೆಯಲಿ ಎಂದು ಹೇಳಿದರು. ಸೊಲ್ಲಾಪುರ ಕಿರೀಟ ಮಠದ ಸ್ವಾಮೀನಾಥ ಸ್ವಾಮೀಜಿ, ಕತಾರ ದೇಶದ ಶಶಿಧರ ಹೆಬ್ಟಾಳ, ಬಾಲ ನಟಿ ಬೇಬಿ ಅಮೂಲ್ಯ, ಕೂಡಲಸಂಗಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಶೇಖರಗೌಡ ಗೌಡರ, ಆದಪ್ಪ ಗೊರಚಿಕ್ಕನವರ ಇತರರು ಇದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್ ಈಗ “ಸಂಯುಕ್ತ’
Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್
Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ
Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು
ತಾಕತ್ತಿದ್ದರೆ ಯತ್ನಾಳ್ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್