ಕೋಟಿ ಹಣ ಸುರಿದರೂ ನಿಲ್ಲದ ಬಯಲು ಶೌಚ
Team Udayavani, Apr 30, 2019, 1:00 PM IST
ಹುನಗುಂದ: ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿ ಬಯಲು ಬಹಿರ್ದೆಸೆ ಮುಕ್ತ ದೇಶವನ್ನಾಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿವೆ. ಬೆಳಗಲ್ಲ ಗ್ರಾಪಂ ವ್ಯಾಪ್ತಿಯ ಬಿಸನಾಳ ಗ್ರಾಮದಲ್ಲಿ ಸಮುದಾಯ ಶೌಚಾಲಯ ನಿರ್ಮಿಸಿ ಒಂದು ವರ್ಷವಾದರೂ ಮೂಲಭೂತ ಸೌಕರ್ಯವಿಲ್ಲದೇ ಅನಾಥ ಸ್ಥಿತಿಯಲ್ಲಿವೆ.
ಹೌದು, ಆರೋಗ್ಯಕರ ಜೀವನ ಮತ್ತು ಉತ್ತಮ ವಾತವಾರಣ ಹೊಂದಲು ಮನೆಗೊಂದು ಶೌಚಾಲಯ ಇರಲಿ ಎಂಬ ಉದ್ದೇಶದಿಂದ ಸರ್ಕಾರಗಳು ಶೌಚಾಲಯ ನಿರ್ಮಾಣಕ್ಕಾಗಿ ಒತ್ತು ನೀಡುತ್ತಿವೆ. ಈ ಶೌಚಾಲಯ ನಿರ್ಮಾಣದ ಜವಾಬ್ದಾರಿ ಸ್ಥಳೀಯ ಸಂಸ್ಥೆಗಳಿಗೆ ವಹಿಸಿದ್ದಾರೆ. ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯತ, ಪಟ್ಟಣ ಪಂಚಾಯತ, ಪುರಸಭೆ, ನಗರಸಭೆಗಳ ಅಧಿಕಾರಿಗಳು ಸರ್ಕಾರ ಕೊಟ್ಟ ಟಾರ್ಗೆಟ್ ಮುಗಿಸುವ ಸಲುವಾಗಿ ನಾಮಕವಾಸ್ತೆ ಶೌಚಾಲಯ ನಿರ್ಮಿಸಿಕೊಟ್ಟು ಕೈ ತೊಳೆದುಕೊಳ್ಳುತ್ತಿದ್ದಾರೆ.
ಶೌಚಾಲಯ ನಿರ್ಮಿಸುವುದಷ್ಟೇ ಆಗಬಾರದು. ಅದಕ್ಕೆ ಬೇಕಾದ ಸೆಪ್ಟಿಕ್ ಟ್ಯಾಂಕ್, ನೀರಿನ ವ್ಯವಸ್ಥೆ, ವಿದ್ಯುತ್ ಸಂಪರ್ಕ ಮೊದಲಾದ ಮೂಲಭೂತ ಸೌಲಭ್ಯ ಒದಗಿಸುವುದು ಮುಖ್ಯವಾಗಿದೆ. ಅವುಗಳ ಬಳಕೆ ಕುರಿತು ಜನರಲ್ಲಿ ತಿಳಿವಳಿಕೆ ಮೂಡಿಸಬೇಕು.
ಮುಳ್ಳು ಕಂಟಿ ಮತ್ತು ತಿಪ್ಪಿಗುಂಡಿಯಲ್ಲಿ ಮರೆಯಾದ ಸಮುದಾಯ ಶೌಚಾಲಯಗಳು: ಗ್ರಾಪಂ 14 ನೆಯ ಹಣಕಾಸು ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿಯಲ್ಲಿ 20 ಸಮುದಾಯ ಶೌಚಾಲಯ ನಿರ್ಮಿಸಲಾಗಿದೆ. ಸರಿಯಾದ ನಿರ್ವಹಣೆ ಇಲ್ಲದಿರುವುದರಿಂದ ಅವುಗಳ ಸುತ್ತ ಮುಳ್ಳು ಕಂಟಿ ಬೆಳೆದಿವೆ. ಶೌಚಾಲಯದ ಮುಂದೆ ತಿಪ್ಪೆಗುಂಡಿ ಹಾಕಲಾಗಿದೆ. ಇದರ
ಮಧ್ಯೆದಲ್ಲಿ ಶೌಚಾಲಯ ಮರೆಯಾಗಿ ಹೋಗಿವೆ. ಇದನ್ನು ನೋಡಿದರೇ ಜನರ ಮರ್ಯಾದೆ ಉಳಿಸುವ ಸಮುದಾಯ ಶೌಚಾಲಯವೋ ಅಥವಾ ತಿಪ್ಪಿಗುಂಡಿಯ ಸ್ಥಳವೂ ಎನ್ನುವ ಮನೋಭಾವನೆ ಗ್ರಾಮಸ್ಥರಲ್ಲ್ಲಿ ಕಾಡುತ್ತಿದೆ.
ಶೌಚಾಲಯ ನಿರ್ಮಾಣ: ಬಯಲು ಶೌಚ ತಪ್ಪಿಸಲು ಸರ್ಕಾರ ತಮ್ಮ ಸ್ವಂತ ಜಾಗೆಯಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಲು ಎಸ್ಸಿ, ಎಸ್ಟಿ ಜನಾಂಗದವರಿಗೆ 15 ಸಾವಿರ, ಇತರೆ ಜನಾಂಗಕ್ಕೆ 12 ಸಾವಿರ ಸಹಾಯ ಧನ ನೀಡಿದೆ. ಇನ್ನು ಜಾಗೆ ಇಲ್ಲದೇ ಇರುವ ಜನರಿಗೆ ಗ್ರಾಮ ಪಂಚಾಯತಗಳೇ ಎಷ್ಟು ಜನರಿಗೆ ಸ್ವಂತ ಜಾಗವಿಲ್ಲ ಎಂಬುದನ್ನು ತಿಳಿದುಕೊಂಡು ಅಂತಹ ಜನರಿಗೆ ಸಮುದಾಯ ಶೌಚಾಲಯ ನಿರ್ಮಾಣ ಮಾಡಬೇಕು ಎಂಬ ನಿಯಮವಿದೆ.
ಸರ್ಕಾರದ ವಿವಿಧ ಯೋಜನೆ ಅನುದಾನದಲ್ಲಿ ಸಮುದಾಯ ಶೌಚಾಲಯ ನಿರ್ಮಿಸಲು ಹಣಕಾಸಿನ ನೇರವು ನೀಡಿದರೂ ಬೇಕಾಬಿಟ್ಟಿಯಾಗಿ ಶೌಚಾಲಯ ಕಟ್ಟಿrಸಿ ಅದರ ಅನುದಾನ ತೆಗೆಯುವುದರಲ್ಲಿ ಜಾಣರಾಗಿದ್ದಾರೆ. ಅದಕ್ಕೆ ಬೇಕಾದ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ಮೂಕರಾಗಿದ್ದಾರೆ. ಸರ್ಕಾರ ಕೊಡುವ ಸಹಾಯ ಧನದ ಆಸೆಗಾಗಿ ಶೌಚ ನಿರ್ಮಿಸಿ ಅದನ್ನು ಬಳಕೆ ಮಾಡದೇ ಅದರಲ್ಲಿ ಕಟ್ಟಿಗೆ ಕುಳ್ಳು ಇಟ್ಟು ಮತ್ತೇ ಬಯಲು ಶೌಚಕ್ಕೆ ಹೋಗುವುದು ಮಾತ್ರ ಗ್ರಾಮದಲ್ಲಿ ತಪ್ಪಿಲ್ಲ.
ಬಿಸನಾಳದಲ್ಲಿ ಸಮುದಾಯ ಶೌಚಾಲಯ ಕಟ್ಟಿಸಿ ಒಂದು ವರ್ಷವಾಗಿದೆ. ಇಲ್ಲಿವರೆಗೆ ಅವುಗಳಿಗೆ ನೀರಿನ ವ್ಯವಸ್ಥೆಯಿಲ್ಲ. ಕರೆಂಟ್ ಸಹಿತ ಹಾಕಿಲ್ಲ. ಗ್ರಾಮದ ಜನರಿಗೆ ರಸ್ತೆ, ಹೊಲಗಳೇ ಶೌಚಾಲಯಗಳಾಗಿವೆ. ಈ ಶೌಚಾಲಯಗಳಿಗೆ ಮೂಲಭೂತ ಸೌಲಭ್ಯ ಒದಗಿಸಬೇಕು.
•ಮಹಾಂತಪ್ಪ ವಾಲೀಕಾರ, ಬಿಸನಾಳ ಗ್ರಾಮಸ್ಥ.
ಬೆಳಗಲ್ಲ ಗ್ರಾ.ಪಂ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಸಮುದಾಯ ಶೌಚಾಲಯ ಮೂಲಭೂತ ವ್ಯವಸ್ಥೆ ಬಗ್ಗೆ ನಾನು ಅಲ್ಲಿನ ಪಿಡಿಒ ಜೊತೆ ಮಾತನಾಡುತ್ತೇನೆ. ಸ್ವತಃ ನಾನೇ ಅಲ್ಲಿಗೆ ಹೋಗಿ ಅದಕ್ಕೆ ಬೇಕಾಗಿರುವ ಸೌಲಭ್ಯ ಕಲ್ಪಿಸುವ ವ್ಯವಸ್ಥೆ ಮಾಡುತ್ತೇನೆ.
•ಪುಷ್ಪಾ ಕಮ್ಮಾರ,ಹುನಗುಂದ ತಾಪಂ ಇಒ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು