ಸರ್ಕಾರಿ ಗೌರವಗಳೊಂದಿಗೆ ಮೃತ ಯೋಧನ ಅಂತ್ಯಕ್ರಿಯೆ
•ರಸ್ತೆ ಅಪಘಾತದಲ್ಲಿ ಮೃತಪಟ್ಟ ಯೋಧ ವಿರೂಪಾಕ್ಷಿ ತ್ರಿಪುರಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ
Team Udayavani, Jun 6, 2019, 1:19 PM IST
ಕುಳಗೇರಿ ಕ್ರಾಸ್: ರಸ್ತೆ ಅಪಘಾತದಲ್ಲಿ ಮೃತಪಟ್ಟ ಯೋಧನ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು.
ಕುಳಗೇರಿ ಕ್ರಾಸ್: ರಸ್ತೆ ಅಪಘಾತದಲ್ಲಿ ಮೃತಪಟ್ಟ ಯೋಧನ ಅಂತ್ಯಕ್ರಿಯೆ ಸರ್ಕಾರಿ ಗೌರವಗಳೊಂದಿಗೆ ಬುಧವಾರ ಸ್ವಗ್ರಾಮ ಕಾಕನೂರ ಗ್ರಾಮದಲ್ಲಿ ಜರುಗಿತು.
ಕಾಕನೂರ ಗ್ರಾಮದ ವಿರೂಪಾಕ್ಷಿ ಯಲ್ಲಪ್ಪ ಶಿಳ್ಳಿಕೇತರ (37) ಮೃತ ಯೋಧ. ತ್ರಿಪುರಾದಲ್ಲಿ ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ಬಾದಾಮಿ ಸಮೀಪ ಚೊಳಚಗುಡ್ಡ ಹತ್ತಿರ ಮಂಗಳವಾರ ಖ್ಯಾಡಗೆ ಸಹೋದರಿ ಮನೆಗೆ ಜಾತ್ರೆಗೆ ಹೋಗಿದ್ದ ಅವರು ಮರಳಿ ಬರುತ್ತಿದ್ದಾಗ ರಸ್ತೆ ಅಪಘಾತದಲ್ಲಿ ಸ್ಥಳದಲ್ಲಿ ಮೃತಪಟ್ಟಿದ್ದರು.
ಯೋಧನ ಪಾರ್ಥಿವ ಶರೀರವನ್ನು ಬುಧವಾರ ಸ್ವ ಗ್ರಾಮಕ್ಕೆ ತರಲಾಯಿತು. ಪತ್ನಿ ಸಕ್ಕುಬಾಯಿ ಹಾಗೂ ಕುಟುಂಬ ಸಂಬಂಧಿಕರ ರೋಧನ ಮುಗಿಲು ಮುಟ್ಟಿತ್ತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಯೋಧನ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು. ಯೋಧ ಪತ್ನಿ ಸಕ್ಕುಬಾಯಿ, ಮಕ್ಕಳಾದ ವರ್ಷಾ, ಖುಷಿ, ಗಗನ ಸೇರಿದಂರೆ ಅಪಾರ ಬಂಧು-ಬಳಗ ಅಗಲಿದ್ದಾರೆ. ತಹಶೀಲ್ದಾರ್ ಇಂಗಳೆ, ಸಿಪಿಐ ಕೆ.ಎಸ್. ಹಟ್ಟಿ, ಪಿಎಸ್ಐ ಪ್ರಕಾಶ ಬಣಕಾರ, ಜಿ.ಎಸ್. ಸುಣಗದ, ಎಂ.ಬಿ. ಕೋರಿ, ಜಿಲ್ಲೆಯ ಪೊಲೀಸ್ ಸಿಬ್ಬಂದಿ ನಮನ ಸಲ್ಲಿಸಿದರು.
ಹೊಳಬಸು ಶೆಟ್ಟರ, ಪಿ.ಆರ್. ಗೌಡರ, ನಾಗಪ್ಪ ಅಡಪಟ್ಟಿ, ಎಂ ಬಿ ಹಂಗರಗಿ, ಗ್ರಾಪಂ ಅಧ್ಯಕ್ಷ ಪುಂಡಲಿಕಪ್ಪ ಶಿಳ್ಳಿಕೇತರ, ನೀಲಪ್ಪ ಶಿಳ್ಳಿಕೇತರ, ಮಹಾಂತೇಶ ಕಲಬಾಶೆಟ್ಟಿ, ಈರಪ್ಪ ನವಲಗುಂದ, ಹನಮಂತ ಅಮೃತಕರ್, ಶರಣಪ್ಪ ಕಲಬಾಶೆಟ್ಟಿ, ಶ್ರೀಕಾಂತ ಅಡಪಟ್ಟಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
I.N.D.I.A ಕೂಟದಲ್ಲಿ ವರ್ಷಕ್ಕೆ ಒಬ್ಬರನ್ನು ಪ್ರಧಾನಿಯನ್ನಾಗಿಸಲು ಚಿಂತನೆ: ಅಣ್ಣಾಮಲೈ
ಬಿಜೆಪಿ ಶಾಸಕ ಯತ್ನಾಳ ಶುಗರ್ ಫ್ಯಾಕ್ಟ್ರಿ ಹೆಂಗ್ ಕಟ್ಟಿದ್ರು: ಶಿವಾನಂದ ಪಾಟೀಲ
Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ
ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
MUST WATCH
ಹೊಸ ಸೇರ್ಪಡೆ
ಅನ್ಯ ರಾಜ್ಯದ ಅಪರಿಚಿತ ಶಸ್ತ್ರಧಾರಿಗಳಿಂದ ಜೀವಬೆದರಿಕೆ: ಕಾಂಗ್ರೆಸ್ ವಿಪ ಸದಸ್ಯ ಸುನೀಲಗೌಡ
Stock Market: ಆರಂಭಿಕ ವಹಿವಾಟಿನಲ್ಲಿ ಮುಗ್ಗರಿಸಿದ ಷೇರುಪೇಟೆ ಸೆನ್ಸೆಕ್ಸ್; ಭಾರೀ ನಷ್ಟ
Pendrive Case; ನಿರೀಕ್ಷಣಾ ಜಾಮೀನು ಅರ್ಜಿ ವಾಪಾಸ್ ಪಡೆದ ರೇವಣ್ಣ
Kantara-Chapter 1: 600 ಮಂದಿ ಬಡಗಿಗಳು, ಕಳರಿಪಯಟ್ಟು ಕಲಾವಿದರು; ಬೃಹತ್ ಸೆಟ್ ನಿರ್ಮಾಣ
Bengaluru: ವಿವಾಹಕ್ಕೆ ಒಪ್ಪದ ಮಹಿಳೆ ಮನೆಗೆ ಬೆಂಕಿ ಹಚ್ಚಿದ