ಬ್ಯಾಂಕ್ ಅಧಿಕಾರಿಗೆ ಸಿಎಂ ತರಾಟೆ
Team Udayavani, Aug 19, 2018, 11:59 AM IST
ಬೆಂಗಳೂರು: “ಸರ್ಕಾರ ರೈತರ ಸಾಲ ಮನ್ನಾ ಮಾಡ್ತಿದ್ರೆ, ನೀವು ಅವರಿಗೆ ನೋಟಿಸ್ ಕೊಟ್ಟು ಕಿರುಕುಳ ಕೊಡ್ತೀರಾ’ ಹೀಗೆಂದು ಬ್ಯಾಂಕ್ ಅಧಿಕಾರಿ ಒಬ್ಬರನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡ ಪ್ರಸಂಗ ಶನಿವಾರ ನಡೆಯಿತು.
ದೇವನಹಳ್ಳಿ ತಾಲೂಕು ವಿಜಯಪುರದ ಆಕ್ಸಿಸ್ ಬ್ಯಾಂಕ್ ಶಾಖೆ ಅಧಿಕಾರಿಗಳು ನೋಟಿಸ್ ನೀಡಿ ಕಿರುಕುಳ ಕೊಡುತ್ತಿದ್ದಾರೆ ಎಂದು ರೈತ ದೇವರಾಜ್ ಸಿಎಂಗೆ ದೂರಿದರು. ಇದಕ್ಕೆ ತಕ್ಷಣ ಬ್ಯಾಂಕಿನ ಅಧಿಕಾರಿ ವೆಂಕಟೇಶ್ರಿಗೆ ಕರೆ ಮಾಡಿದ ಸಿಎಂ, “ರೀ ವೆಂಕಟೇಶ್ ನಾನು ಕುಮಾರಸ್ವಾಮಿ ಮಾತಾಡ್ತಿದೀನಿ, ಸರ್ಕಾರ ರೈತರ ಸಾಲ ಮನ್ನಾ ಮಾಡ್ತಿದ್ರೆ, ನೀವು ಅವರಿಗೆ ನೋಟಿಸ್ ಕೊಟ್ಟು ಯಾಕೆ ಕಾಟ ಕೊಡ್ತೀದಿರಾ, ಯಾರು ನಿಮ್ಮ ಅಧ್ಯಕ್ಷರು, ಹೇಳಿ ಅವರಿಗೆ, ಇದೆಲ್ಲಾ ಮಾಡಬೇಡಿ ಅಂತ’ ಎಂದು ಗದರಿದರು.
“ಈಗಾಗಲೇ ಸಹಕಾರಿ ಬ್ಯಾಂಕುಗಳಲ್ಲಿನ ಸಾಲ ಮನ್ನಾ ಬಗ್ಗೆ ಸರ್ಕಾರಿ ಆದೇಶ ಹೊರಡಿಸಲಾಗಿದೆ. ಶೀಘ್ರವೇ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾಲ ಮನ್ನಾ ಬಗ್ಗೆಯೂ ಆದೇಶ ಹೊರಡಿಸುತ್ತೇವೆ. ರೈತರಿಗೆ ಈ ರೀತಿ ನೋಟಿಸ್ ಕೊಟ್ಟು ಅವರನ್ನು ಮಾನಸಿಕವಾಗಿ ಕುಗ್ಗಿಸಬೇಡಿ,’ ಎಂದು ಅಧಿಕಾರಿಗೆ ಹೇಳಿದರು.
ಅಸಲಿಯತ್ತು ಬಿಚ್ಚಿಡುತ್ತೇನೆ: ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, “ರೈತರ ಸಾಲ ಮನ್ನಾದ ಮೊತ್ತ 28 ಸಾವಿರ ಕೋಟಿ ರೂ.ಗಳನ್ನು ಒಂದೇ ಕಂತಿನಲ್ಲಿ ಪಾವತಿಸಲು ಸರ್ಕಾರ ನಿರ್ಧರಿಸಿದೆ. ಇದಕ್ಕೆ ಅಡ್ಡಗಾಲು ಹಾಕಲು ಬಿಜೆಪಿಯವರು ದೆಹಲಿಯಲ್ಲಿ ಇನ್ನಿಲ್ಲಿದ ಕಸರತ್ತು ನಡೆಸುತ್ತಿದ್ದಾರೆ. ಇದನ್ನು ನಾನು ಸವಾಲಾಗಿ ಸ್ವೀಕರಿಸಿದ್ದು, ಸೂಕ್ತ ಸಮಯದಲ್ಲಿ ಬಿಜೆಪಿಯ ಅಸಲಿಯತ್ತು ಬಿಚ್ಚಿಡುತ್ತೇನೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura; ಚುನಾವಣೆ ಕರ್ತವ್ಯ ನಿರ್ಲಕ್ಷ: ಇಬ್ಬರು ಶಿಕ್ಷಕರು ಸಸ್ಪೆಂಡ್
Hunsur: ಅಪರಿಚಿತ ವಾಹನ ಡಿಕ್ಕಿಯಾಗಿ ಪಾದಾಚಾರಿ ಸಾವು
Central Government ನೀಡಿದ ಬರ ಹಣ ಶೀಘ್ರವೇ ರೈತರ ಖಾತೆಗೆ ಜಮಾ: ಕೃಷ್ಣ ಬೈರೇಗೌಡ
IPL 2024; ಅತಿಯಾದ ಸಂಭ್ರಮಾಚರಣೆ ಮಾಡಿದ ಹರ್ಷಿತ್ ರಾಣಾಗೆ ಭಾರಿ ಶಿಕ್ಷೆ
Karnataka CM ಸಿದ್ದುಗೆ ಮಿಷನ್ ಮೇಲೆ ನಂಬಿಕೆ ಇಲ್ಲ,ಬರೀ ಕಮಿಷನ್ ನಂಬಿಕೆ: ಜೆ.ಪಿ.ನಡ್ಡಾ