ಮಾನವನ ತಪ್ಪಿನಿಂದ ಅತಿವೃಷ್ಟಿ
Team Udayavani, Aug 21, 2018, 12:01 PM IST
ಬೆಂಗಳೂರು: ಕೇರಳ ಹಾಗೂ ಕೊಡಗು ಭಾಗದಲ್ಲಿ ಉಂಟಾಗಿರುವ ಅತಿವೃಷ್ಟಿ ಮಾನವ ತಪ್ಪುಗಳಿಂದ ಆಗಿರುವುದೇ ಹೊರತು ಪ್ರಕೃತಿ ವಿಕೋಪವಲ್ಲ ಎಂದು ಪರಿಸರ ತಜ್ಞ ನಾಗೇಶ ಹೆಗಡೆ ಎಂದು ಅಭಿಪ್ರಾಯಪಟ್ಟರು.
ನವಕರ್ನಾಟಕ ಪ್ರಕಾಶನವು ಕೆಂಪೇಗೌಡ ರಸ್ತೆಯಲ್ಲಿನ ತನ್ನ ಮಳಿಗೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸುಮಂಗಲಾ ಎಸ್.ಮುಮ್ಮಿಗಟ್ಟಿ ಅವರು ಅನುವಾದಿಸಿರುವ “ಕೊನೆಯ ಅಲೆ’ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಮಾನವನ ಆಕ್ರಮಣ ಮಿತಿಮೀರಿದ ಪರಿಣಾಮದಿಂದಾಗಿ ಪ್ರಕೃತಿ ವಿಕೋಪಕ್ಕೆ ತಿರುಗಿದೆ.
ಅತಿವೃಷ್ಠಿ ಅಥವಾ ಅನಾವೃಷ್ಠಿಗೆ ಕಾರಣವಾಗುವಂತಹ ಅಂಶಗಳನ್ನು ಅಕಾಡೆಮಿಗಳ ಮಟ್ಟದಲ್ಲಿ ಚರ್ಚೆಯಾಗುತ್ತಿದೆಯೇ ಹೊರತು ಸಾಮಾನ್ಯ ಜನರಿಗೆ ತಲುಪುತ್ತಿಲ್ಲ. ಪರಿಸರದ ವಿನಾಶ ಮತ್ತು ಉಳಿವಿನ ಬಗ್ಗೆ ಜನ ಸಾಮಾನ್ಯರಿಗೆ ಅರ್ಥವಾಗಬೇಕು. ಆಗಲೇ ಪರಿಸರ ಉಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕೊನೆಯ ಅಲೆ ಕೃತಿ ಕಾದಂಬರಿ ಸ್ವರೂಪದಲ್ಲಿದ್ದರೂ ಕಾಡಿನ ವಿನಾಶದೊಂದಿಗೆ ಸಂಸ್ಕೃತಿಯೂ ವಿನಾಶವಾಗುತ್ತಿರುವುದರ ಬಗ್ಗೆ ವಾಸ್ತವ ಅಂಶಗಳನ್ನು ತೆರೆದಿಟ್ಟಿದೆ. ಅಂಡಮಾನ್ನಂತಹ ಪುಟ್ಟ ದ್ವೀಪಗಳು ಜೀವ ವೈವಿಧ್ಯಗಳ ರಾಶಿ. ಆದರೆ ಅವುಗಳನ್ನು ಅಭಿವೃದ್ಧಿಯ ಹೆಸರಿನಲ್ಲಿ ನಾಶ ಮಾಡಲಾಗುತ್ತಿದೆ. ಹಿಂದೆ ಅಂಡಮಾನ್ ದ್ವೀಪದಲ್ಲಿ 20 ಸಾವಿರ ಜರೋವಾ ಎಂಬ ಆದಿವಾಸಿಗಳು ಬದುಕುತ್ತಿದ್ದರು.
ಆದರೆ ಇಂದು ಕೇವಲ 300 ಮಂದಿ ಬದುಕುಳಿದಿದ್ದಾರೆ. ನಾಗರಿಕರು ಎನ್ನಿಸಿಕೊಂಡಿರುವ ನಾವು ಅಂಡಮಾನ್ ದ್ವೀಪಕ್ಕೆ ಹೋಗಿ ಬ್ರಿಟಿಷರಂತೆ ಅದನ್ನು ಆಕ್ರಮಿಸಿಕೊಂಡಿದ್ದೇವೆ. ಜೊತೆಗೆ ಅಲ್ಲಿನ ಮೂಲನಿವಾಸಿಗಳನ್ನು ನಮ್ಮಂತೆ ಬದಲಾವಣೆ ಮಾಡಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಅನುಭೋಗಿಸುವ ಜಗತ್ತು ನಮ್ಮನ್ನಾಳುತ್ತಿದೆ. ಕೊಳ್ಳುಬಾಕುತನ ಸಂಸ್ಕೃತಿ ಬದುಕನ್ನು ಮುಳುಗಿಸುತ್ತದೆ ಎಂಬ ಅರಿವಿದ್ದರೂ ಹಳ್ಳಿಗಳಲ್ಲಿ ನೆಮ್ಮದಿಯಾಗಿ ಬದುಕು ನಡೆಸುತ್ತಿರುವವರನ್ನು ಈ ಸಂಸ್ಕೃತಿಯೆಡೆಗೆ ಸೆಳೆಯಲಾಗುತ್ತಿದೆ. ಗ್ರಾಹಕ ಅನುಭೋಗದ ಸಂಸ್ಕೃತಿಯಿಂದಾಗಿ ನಮ್ಮ ನಾಡಿನ ಆದಿವಾಸಿಗಳಗಳು ವಿನಾಶದ ಕೊನೆಯ ಹಂತದಲ್ಲಿದ್ದಾರೆ.
ಅಭಿವೃದ್ಧಿಯ ಏರುಗತಿ ಪ್ರಕೃತಿ, ಸಂಸತಿ ಮತ್ತು ಜೀವ ವೈವಿಧ್ಯದ ವಿನಾಶಕ್ಕೆ ಕಾರಣವಾಗಿದೆ. ನಿಸರ್ಗ ವಿಕೋಪಕ್ಕೆ ಕಾರಣ ಮಾನವವನೇ ಹೊರತು ಮತಾöರು ಅಲ್ಲ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಮೂಲ ಲೇಖಕ ಪಂಕಜ್ ಸೇಖ್ಸರಿಯಾ, ಅನುವಾದಕಿ ಸುಮಂಗಲಾ ಎಸ್.ಮುಮ್ಮಿಗಟ್ಟಿ, ನವಕರ್ನಾಟಕ ಪ್ರಕಾಶನದ ವ್ಯವಸ್ಥಾಪಕ ನಿರ್ದೇಶಕ ಡಾ.ಸಿದ್ದನಗೌಡ ಪಾಟೀಲ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ
Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!
Glanders infection: ಗ್ಲ್ಯಾಂಡರ್ಸ್ ಸೋಂಕು; ಬೆಂಗಳೂರು ತೊರೆದ ಕುದುರೆ ಮಾಲೀಕ, ಸವಾರ
Chain theft: ಒಂಟಿ ಮಹಿಳೆಯರ ಸರ ಕದಿಯುತ್ತಿದ್ದ 5 ಬಂಧನ; 10.82 ಲಕ್ಷದ ವಸ್ತು ಜಪ್ತಿ
MUST WATCH
ಹೊಸ ಸೇರ್ಪಡೆ
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ
Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ
ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್