![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
8ನೇ ಆವೃತ್ತಿಯ ಕಲಾ ಉತ್ಸವಕ್ಕೆ ಚಾಲನೆ
Team Udayavani, Nov 3, 2018, 12:17 PM IST
![8ne-avru.jpg](https://www.udayavani.com/wp-content/uploads/2018/11/3/8ne-avru-513x465.jpg)
ಬೆಂಗಳೂರು: ಅಲ್ಲಿ ನಿಮ್ಮನ್ನು ಸ್ವಾಗತಿಸುವುದು ಅಪರೂಪದ ಕಲಾಕೃತಿಗಳಾದರೂ ಮುಂದುವರಿದಂತೆ ಕಂಡುಬರುವುದು ಕಣ್ಮನ ತಣಿಸುವ ವೈವಿಧ್ಯಮಯ ಬಣ್ಣದ ಚಿತ್ರಗಳು. ನೋಡನೋಡುತ್ತಿದ್ದಂತೆ ನಿಮ್ಮನ್ನು ಕಲ್ಪನಾಲೋಕದಲ್ಲಿ ವಿಹರಿಸುವಂತೆ ಮಾಡುತ್ತವೆ. ಈ ಅದ್ಭುತ ಕಲಾಕೃತಿಗಳು. ಅವು ಎಲ್ಲಿವೆ ಎಂದು ಯೋಚಿಸುತ್ತಿದೀªರೆ, ಅವುಗಳು ನಗರದ ಯುಬಿ ಸಿಟಿಯ ಕಲೆಕ್ಷನ್ ಕೇಂದ್ರದಲ್ಲಿ ಪ್ರದರ್ಶನಗೊಂಡಿವೆ.
ದೇಶದ 17 ಖ್ಯಾತ ಕಲಾವಿದರ ವಿಶಿಷ್ಟ ಕಲಾಕೃತಿಗಳು ಪ್ರದರ್ಶನಗೊಂಡಿರುವುದು ಬಹುನಿರೀಕ್ಷಿತ ಆರ್ಟ್ ಬೆಂಗಳೂರು-2018ರ ಕಲಾ ಉತ್ಸವದಲ್ಲಿ. ನ.2 ರಿಂದ 11ರವರೆಗೆ 10 ದಿನಗಳು ನಡೆಯುವ ಈ ಉತ್ಸವದಲ್ಲಿ ದೇಶದ ಖ್ಯಾತ ಕಲಾವಿದರಾದ ಬಾಲನ್ ನಂಬಿಯಾರ್, ಗುರುದಾಸ್ ಶೆಣೈ, ವಿಪ್ತ ಕಪಾಡಿಯ, ಪಲ್ಲನ್ ದಾರುವಾಲ, ಡಿ. ವೆಂಕಟಪತಿ, ಚಂದನ್ ಭೌಮಿಕ್, ರೋಹಲ್ ಸುಲೈಮಾನ್, ಯುವನ್ ಬೋತಿಸತ್ವಾವುರ್, ಆಶಿಷ್ ದುಬೆ ಮುಂತಾದವರ ಕಲಾಕೃತಿಗಳ ಪ್ರದರ್ಶನ ಏರ್ಪಡಿಸಲಾಗಿದೆ.
ಆರ್ಟ್ ಬೆಂಗಳೂರು ಸಂಸ್ಥಾಪಕಿ ಮತ್ತು ಪ್ರಸ್ಟಿಜ್ ಗ್ರೂಪ್ ನಿರ್ದೇಶಕಿ ಉಜ್ಮಾ ಇರ್ಫಾನ್ ಅವರು ಮಾತನಾಡಿ, ಒಂದು ಸುಂದರ ಕಲಾಕೃತಿಯನ್ನು ಕಂಡು ಮೆಚ್ಚಿಕೊಂಡಾಗ ಬದುಕಿನ ಹಲವಾರು ಒತ್ತಡಗಳು ಕಡಿಮೆಯಾಗುತ್ತವೆ. ಈ ಉತ್ಸವದ ಅಸಂಖ್ಯಾತ ಚಿತ್ರಗಳನ್ನು ಸಾರ್ವಜನಿಕರು ಉಚಿತವಾಗಿ ವೀಕ್ಷಿಸಲು ಅನುವು ಮಾಡಿಕೊಟ್ಟಿದ್ದೇವೆ ಎಂದು ತಿಳಿಸಿದರು.
ನಮ್ಮಲ್ಲಿ ಗುಣಮಟ್ಟದ ಗ್ಯಾಲರಿಗಳ ಅಲಭ್ಯತೆ, ವಸ್ತು ಸಂಗ್ರಹಾಲಯಗಳು ಹಾಗೂ ಸಾರ್ವಜನಿಕ ಕಲಾ ಸ್ಥಳಗಳ ಕೊರತೆ ಹಾಗೂ ಸುಲಭವಾಗಿ ಪ್ರವೇಶಿಸಬಹುದಾದ ಕಲಾ ಶಿಕ್ಷಣ ಸಂಸ್ಥೆಗಳ ಅಲಭ್ಯದಿಂದ ಕಲೆ ಜನರಿಂದ ಕಡೆಗಣಿಸಲ್ಪಟ್ಟಿದೆ ಎಂದು ಸಂಸ್ಥೆಯ ಕ್ಯೂರೇಟರ್ ಅಭಿಷೇಕ್ ನಾಯ್ಡು ಬೇಸರ ವ್ಯಕ್ತಪಡಿಸಿದರು.
ಫೆಸ್ಟಿವಲ್ನಲ್ಲಿ ಏನೇನಿವೆ: “ಆರ್ಟ್ ಬೆಂಗಳೂರು-2018’ರ ಆರ್ಟ್ ಫೆಸ್ಟಿವಲ್ನ 8ನೇ ಆವೃತ್ತಿಯಲ್ಲಿ ಛಾಯಾಗ್ರಹಣ, ಫೋಟೋ ಮಾಧ್ಯಮ, ಮಿಶ್ರ ಮಾಧ್ಯಮ ಕಲಾಕೃತಿಗಳು, ತೈಲ ವರ್ಣಗಳು, ಅಕ್ರಿಲಿಕ್ಗಳು, ಪೆನ್ ಮತ್ತು ಇಂಕ್ ರೇಖಾಚಿತ್ರಗಳು, ಶಿಲ್ಪಗಳು (ಮರದ, ಉಕ್ಕು ಮತ್ತು ಕಾಗದ) ಮತ್ತು ವಿಡಿಯೋ ಕಲಾಕೃತಿಗಳನ್ನು ಕಾಣಬಹುದು.
ಟಾಪ್ ನ್ಯೂಸ್
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Crime: ಪಿಜಿಗೆ ನುಗ್ಗಿ ಯುವತಿಯ ಕತ್ತು ಕೊಯ್ದು ಕೊಲೆಗೈದ](https://www.udayavani.com/wp-content/uploads/2024/07/8-20-150x90.jpg)
Crime: ಪಿಜಿಗೆ ನುಗ್ಗಿ ಯುವತಿಯ ಕತ್ತು ಕೊಯ್ದು ಕೊಲೆಗೈದ
![Bengaluru: ಖೋಖೋ ತೀರ್ಪು ವಿವಾದ: ಫೀಲ್ಡ್ನಲ್ಲೇ ಚಾಕು, ಡ್ಯಾಗರ್ ಹಿಡಿದು ಹೊಡೆದಾಟ!](https://www.udayavani.com/wp-content/uploads/2024/07/7-21-150x90.jpg)
Bengaluru: ಖೋಖೋ ತೀರ್ಪು ವಿವಾದ: ಫೀಲ್ಡ್ನಲ್ಲೇ ಚಾಕು, ಡ್ಯಾಗರ್ ಹಿಡಿದು ಹೊಡೆದಾಟ!
![ಸ್ನೇಹಿತನ ಪತ್ನಿಯ ಕ್ಯಾನ್ಸರ್ ಚಿಕಿತ್ಸೆಗಾಗಿ ಬೈಕ್ ಕಳ್ಳತನಕ್ಕಿಳಿದ ಕುಚುಕು ಗೆಳೆಯ!](https://www.udayavani.com/wp-content/uploads/2024/07/5-24-150x90.jpg)
ಸ್ನೇಹಿತನ ಪತ್ನಿಯ ಕ್ಯಾನ್ಸರ್ ಚಿಕಿತ್ಸೆಗಾಗಿ ಬೈಕ್ ಕಳ್ಳತನಕ್ಕಿಳಿದ ಕುಚುಕು ಗೆಳೆಯ!
![Shivakumar](https://www.udayavani.com/wp-content/uploads/2024/07/Shivakumar-150x90.jpg)
Bengaluru: ಅಧಿವೇಶನದ ಬಳಿಕ ಕಾವೇರಿ ನೀರಿನ ದರ ಪರಿಷ್ಕರಣೆ: ಡಿ.ಕೆ.ಶಿವಕುಮಾರ್
![Bengaluru: ಕೋರ್ಟ್ನಲ್ಲೇ ವಕೀಲೆಗೆ ಚಾಕು ಇರಿದ ಆರೋಪಿ ಸೆರೆ](https://www.udayavani.com/wp-content/uploads/2024/07/8-19-150x90.jpg)
Bengaluru: ಕೋರ್ಟ್ನಲ್ಲೇ ವಕೀಲೆಗೆ ಚಾಕು ಇರಿದ ಆರೋಪಿ ಸೆರೆ
MUST WATCH
ಹೊಸ ಸೇರ್ಪಡೆ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
![1-aaasdeqweqw](https://www.udayavani.com/wp-content/uploads/2024/07/1-aaasdeqweqw-150x100.jpg)
India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್ ಯುಗಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.