ಸಬ್ಸಿಡಿ ಕಮಿಟಿ ಮುಂದೆ ಅಧ್ಯಕ್ಷರೇ ಅಭಿನಯಿಸಿದ ಚಿತ್ರ
Team Udayavani, Jun 27, 2019, 3:00 AM IST
ಬೆಂಗಳೂರು: ಕರ್ನಾಟಕ ಚಲನಚಿತ್ರ ಸಹಾಯಧನ ಆಯ್ಕೆ ಸಮಿತಿಯ ಅಧ್ಯಕ್ಷ ಕೆ.ಎಸ್.ಭಗವಾನ್ ಅವರ ಆಯ್ಕೆ ಸಮಿತಿಯ ಮುಂದೆ ಭಗವಾನ್ ಅವರೇ ನಟಿಸಿರುವ ಚಿತ್ರವೊಂದು ಬಂದಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
2017ರಲ್ಲಿ ತೆರೆಗೆ ಬಂದಿದ್ದ ಕೆ.ಎಸ್.ಭಗವಾನ್ ಅಭಿನಯಿಸಿದ್ದ “ಎರಡು ಕನಸು’ ಚಿತ್ರ ಇದೀಗ ಚಲನಚಿತ್ರ ಸಹಾಯಧನ ಆಯ್ಕೆ ಸಮಿತಿಯ ಮುಂದೆ ಬಂದಿದೆ. ಇಲ್ಲಿಯವರೆಗೆ ಸಹಾಯಧನ ಕೋರಿ ಬಂದಿರುವ ಸುಮಾರು 136 ಚಿತ್ರಗಳನ್ನು ಆಯ್ಕೆ ಸಮಿತಿ ವೀಕ್ಷಿಸಿದ್ದು, ಕಳೆದ ವಾರ ಭಗವಾನ್ ಅಭಿನಯದ ಚಿತ್ರ ಕೂಡ ಇದೇ ಸಮಿತಿ ಮುಂದೆ ಬಂದಿತ್ತು.
ಈ ವೇಳೆ ಸಮಿತಿಯ ಅಧ್ಯಕ್ಷ ಭಗವಾನ್ ಅವರನ್ನು ಹೊರತುಪಡಿಸಿ ಇತರರು ಚಿತ್ರವನ್ನು ವೀಕ್ಷಿಸಿದ್ದಾರೆ ಎನ್ನಲಾಗಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಭಗವಾನ್, ಚಿತ್ರದ ಮುಹೂರ್ತದ ವೇಳೆ ಚಿತ್ರೀಕರಿಸಿದ ದೃಶ್ಯವನ್ನು, ಚಿತ್ರದಲ್ಲಿ ಕೇವಲ 14 ಸೆಕೆಂಡ್ ಕಾಲ ಬಳಸಿಕೊಳ್ಳಲಾಗಿದೆ.
ಅದನ್ನು ಹೊರತುಪಡಿಸಿದರೆ ನಾನು ಆ ಚಿತ್ರದಲ್ಲಿ ಅಭಿನಯಿಸಿಲ್ಲ. ಸರಕಾರ ಸೂಚಿಸಿದರೆ, ಮುಂದೆ ಈ ಸಹಾಯಧನ ಆಯ್ಕೆ ಸಮಿತಿಯ ಅಧ್ಯಕ್ಷ ಸ್ಥಾನದಿಂದ ಹೊರಬರಲು ಸಿದ್ಧನಿದ್ದೇನೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress ಪಕ್ಷವನ್ನು ಎರಡನೇ ಬಾರಿ ತೊರೆದ ಲವ್ಲಿ; ಮತ್ತೆ ಬಿಜೆಪಿ ಸೇರ್ಪಡೆ
Davanagere; ಮೋದಿ ಯಾಕೆ ಬಲಾತ್ಕಾರಕ್ಕೊಳಗಾದ ಮಹಿಳೆಯರ ಬಗ್ಗೆ ಮಾತನಾಡಲ್ಲ: ಪ್ರಿಯಾಂಕಾ ಗಾಂಧಿ
AAP ಚುನಾವಣ ಪ್ರಚಾರ ಹಾಡನ್ನು ಅನುಮೋದಿಸಿದ ಆಯೋಗ; ಕೆಲ ಮಾರ್ಪಾಡು
H.D. Revanna ಬಂಧಿಸಿದ ಎಸ್ ಐಟಿ; ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೋರ್ಟ್
Tirunelveli; ನಾಪತ್ತೆಯಾಗಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷನ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆ